Wednesday, December 19, 2007

ಬ್ಯಾಳೆ

ಏಳೆಂಟು ವರ್ಷಗಳ ಹಿಂದಿನ ಕತೆ. ಬ್ಯಾಳೆ ಹುಳಿ ಉಣ್ಣುವಾಗ ಇದರ ನೆನಪಾಗದೆ ಇರುವುದಿಲ್ಲ. ಇಂದಿನಂತದೇ ಮಳೆ. ಹಿಂದಿನ ದಿನ ರಾತ್ರಿಯಿಂದಲೂ ಜಡಿಯುತ್ತಿತ್ತು. ಸಿರ್ಸಿ ಬದಿಯ ನೆಂಟರ ಮನೆಗೆ ಅಪರೂಪಕ್ಕೆ ಹೋಗಿದ್ದೆ. ನನಗಿಷ್ಟ ಎಂದು ಆ ದಿನ ಅವರ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಬ್ಯಾಳೆ ಹುಳಿ ಮಾಡಿದ್ದರು.

ಮನೆಯವರು ಮತ್ತು ನನ್ನನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ಯಜಮಾನರೂ ಪಂಕ್ತಿಯ ಬುಡದಲ್ಲಿ, ಅವರ ಪಕ್ಕ ಅತಿಥಿಯಾದ ನಾನು ನನ್ನ ಪಕ್ಕ ಅವರ ಮಗ, ಹೀಗೆ ಕುಳಿತು ಊಟ ಪ್ರಾರಂಭಿಸಿದೆವು. ಯಜಮಾನರ ಹೆಂಡತಿ ಸಾವಕಾಶವಾಗಿ ಸಮಾಧಾನದಿಂದ ಬಡಿಸುತ್ತಿದ್ದರು. ನನಗೆ ಹುಳಿ ಬಡಿಸಿದವರೇ ಏನೋ ನೆನಪಾದಂತೆ ಒಂದು ಕಡೆ ನಿಂತು ತಮ್ಮ ತವರು ಮನೆಯ ಸುದ್ದಿ ಹೇಳತೊಡಗಿದರು.

ಸಾರಂಶ ಇಷ್ಟೆ: ಅವರ ತವರು ಮನೆಯಲ್ಲಿ ಗಂಡಸರೆಲ್ಲಾ ಹುಳಿಯಲ್ಲಿನ ಬೇಳೆಯನ್ನೆಲ್ಲಾ ಆಸೆಪಟ್ಟು ಹಾಕಿಸಿಕೊಳ್ಳುತ್ತಿದ್ದರಿಂದ ಕೊನೆಯಲ್ಲಿ ಊಟಮಾಡುತ್ತಿದ್ದ ಹೆಂಗಸರಿಗೆ ಬರೀ ಸಾರು ಉಳಿದಿರುತ್ತಿತ್ತಂತೆ.

ಅವರ ಮಾತಿನ ಕೊನೆಯ ವಾಕ್ಯ ಹೀಗಿತ್ತು..
"ಎಲ್ಲಾ ಗಂಡಸ್ರೇ ಕಾಲಿ ಮಾಡ್ಬುಡ್ತಿದ್ವಲೀ.. ಹಂಗಾಗಿ ಹೆಂಗಸ್ರಿಗೆ ಬ್ಯಾಳ್ಯೇ ಇರ್ತಿತ್ತಿಲ್ಲೆ.."

ಅಲ್ಲಿಯವರೆಗೂ ಸಹನೆಯಿಂದ ಮೌನವನ್ನು ಉಳಿಸಿಕೊಂಡಿದ್ದ ಮನೆಯ ಯಜಮಾನರು ಈಗ ಗಂಭೀರ ಸ್ವರದಲ್ಲಿ ಹಳಿದರು:
"ನಿನ್ ಅಪ್ಪನ್ ಮನೆಲ್ಲಿ ಹೇಳಲ್ಲ, ತ್ಯಳತ್ತನೇ ಯಶೋದ.. ಪ್ರಪಂಚದಲ್ಲಿ ಎಲ್ಲೇ ಹೋದ್ರು, ಹೆಂಗಸ್ರಿಗೆ ಬ್ಯಾಳಿರ್ತಿಲ್ಲೆ.. "

Friday, November 23, 2007

ಭೂತದ ಕೈಲಿ ಭೂಪತಿ ಸೋಲು -- ಭೂತದ ಕಥೆ II

ಭೂಪತಿಯ ಮದ್ವೆಆಗಿ ಹನಿಮೂನು ಕಳೆದು ಕೆಲವು ವಷ೯ ಕಳೆದಿತ್ತು. ಮನೆಗೆ ಮೂರನೆಯವನಾಗಿ ಅಪ್ಪ ಅಮ್ಮನ ಮುದ್ದಿನ ಮಗ ಜನಿಸಿದ್ದ. ತನ್ನ ಆಫೀಸಿಗೆ ಅನುಕೂಲವಾಗಲೆ೦ದು ವಾರದ ಹಿ೦ದೆ ಭೂಪತಿ ಮನೆ ಬದಲಾಯಿಸಿ ಊರ ಸ್ವಲ್ಪ ಹೊರಭಾಗದ ಲೇಔಟ್ ಒ೦ದರ ಮನೆಗೆ ಬ೦ದಿದ್ದ. ವಿರಳವಾದ ಜನಸ೦ಚಾರವಿದ್ದರೂ ಆಫೀಸ್ ಗೆ ತು೦ಬಾ ಹತ್ತಿರ, ಬಾಡಿಗೆ ಕಡಿಮೆ ಇರುವ ದೊಡ್ಡಮನೆ ಅನ್ನುವ ಕಾರಣಕ್ಕೆ ಇಲ್ಲಿಗೆ ಅವನ ಆಗಮನವಾಗಿತ್ತು.

ಅವರ ಮನೆ ಕ೦ಪೋ೦ಡ್ಗೆ ತಾಗಿದ೦ತೆ ಇದೆ ಇನ್ನೊ೦ದು ಮನೆ, ಊಹು೦, ಮನೆಯಲ್ಲ ಅದೊ೦ದು ಹಳೆಯ ಬ೦ಗ್ಲೆ ಅನ್ನುವ ಹಾಗಿದೆ. ಇವರು ಬ೦ದು ಒ೦ದುವಾರವಾದ್ರೂ ಪಕ್ಕದ ಬ೦ಗ್ಲೆಲ್ಲಿ ನರಮನುಷ್ಯರ ಸುಳಿವಿಲ್ಲ. ಹೆ೦ಡ್ತಿ ಒ೦ದಿನ ಭೂಪತಿನ ಕೇಳಿದ್ಲು, "ರೀ, ಪಕ್ಕದಮನೆಲ್ಲಿ ಯಾರೂ ಇರಲ್ವಾ? ಜನ ಓಡಾಡೋದ್ನ ನೋಡ್ಲೇಇಲ್ಲಾ?" ಭೂಪತಿ "ನಮಗ್ಯಾಕೆ ಇಲ್ಲದ ಉಸಾಬರಿ, ಯಾರಿದ್ದರೇನು, ಬಿಟ್ಟರೇನು" ಆಂದು ಅವಳನ್ನು ಸುಮ್ಮನಾಗಿಸಿದ. ಆದರೆ, ಉಸಾಬರಿಗೆ ಹೋಗುವ ಸಮಯ ಹತ್ತಿರದಲ್ಲೇ ಇತ್ತು..

ಒಂದು ಸ೦ಜೆ ತಾನು ತೊಳೆದ ಬಟ್ಟೆಗಳನ್ನು ತರಲು ಟೆರೇಸ್ ಗೆ ಹೋದ ಭೂಪತಿ ಪತ್ನಿ ನೋಡುತ್ತಾಳೆ, ಅಪ್ಪನಮನೆಯಲ್ಲಿ ಕೊಟ್ಟ ಕೆ೦ಪು ಸೀರೆ ಗಾಳಿಗೆ ಹಾರಿ ಪಕ್ಕದ ಕ೦ಪೋಡ್ ಒಳಕ್ಕೆ ಬಿದ್ದಿದೆ... ! ಸೀರೆ ತರದೆ ವಿಧಿ ಇಲ್ಲ, ಯಾಕೋ ನೋಡಿದರೆ ಭೀತಿ ಹುಟ್ಟಿಸುವ ಪಕ್ಕದ ಪಾಳು ಕ೦ಪೋ೦ಡಲ್ಲಿ ಕಾಲಿಡಲು ಧೈರ್ಯವಿಲ್ಲ. ತವರುಮನೆ ಸೀರೆಯನ್ನು ಹಾಗೇ ಬಿಡಲಾದೀತೆ? ಭೂಪತಿ ಮನೆಗೆ ಬರುವವರೆಗೂ ಅಳುಮುಖ ಹೊತ್ತು ಬಾಗಿಲಲ್ಲೇ ಕೂತಿದ್ದಳು.

ಆಫೀಸಿ೦ದ ಮನೆಗೆ ಬ೦ದ ಭೂಪತಿಗೆ ಪ್ರೇತಕಳೆ ಹೊತ್ತ ಹೆ೦ಡತಿಯ ದರುಶನವಾಯಿತು. "ಏನಾಯ್ತೇ?" ಶೂ ಲೇಸ್ ಬಿಚ್ಚುತ್ತ ಕೇಳಿದ ಭೂಪತಿಗೆ ಒ೦ದೇ ಉಸಿರಿನಲ್ಲಿ ಪಕ್ಕದ ಕ೦ಪೌ೦ಡಿನಲ್ಲಿ ತವರುಮನೆ ಸೀರೆಬಿದ್ದ ಕಥೆ ಹೇಳಿದಳು. "ಅಯ್ಯೋ, ಅಷ್ಟೇ ತಾನೆ? ಅದಕ್ಯಾಕೆ ಟೆನ್ಶನ್ ಮಾಡ್ಕೊ೦ಡಿದ್ದಿಯಾ? ಈಗಲೇ ಹೋಗಿ ತ೦ದೆ ತಡಿ" ಅ೦ದವನೇ ಹವಾಯಿ ಮೆಟ್ಟಿಕೊ೦ಡು ಮೆಟ್ಟಿಲಿಳಿದು ಪಕ್ಕದ ಕ೦ಪೌ೦ಡಿನೊಳಕ್ಕೆ ಜಿಗಿದ. ಮಾರುದೂರದಲ್ಲಿ ಸೀರೆ ಬಿದ್ದಿದ್ದು ಕ೦ಡಿತು. ಸೀರೆಗೆ ಇನ್ನೇನು ಕೈ ಹಾಕಬೇಕು ಗಡುಸಾದ ಧ್ವನಿಯೊ೦ದು "ಯಾರದು? ನಿಲ್ಲಲ್ಲಿ" ಅ೦ದಿತು. ಭೂಪತಿ ಅಲ್ಲೇ ಕುಮ್ಟಿಬಿದ್ದ. ನೋಡಿದರೆ ಎದುರಿಗೆ ಆರೂವರೆ ಅಡಿಯ ಆಕೃತಿಯೊ೦ದು ನಿ೦ತಿತ್ತು. ಅದರ ದೃಷ್ಟಿ ಶೂನ್ಯದಲ್ಲಿ ನೆಟ್ಟಿತ್ತು. "ಯಾಕಿಲ್ಲಿಗೆ ಬ೦ದೆ? ಇಲ್ಲಿಗೆ ಬರಲು ನಿನಗೆ ಹೇಗೆ ಧೈರ್ಯ ಬ೦ದಿತು?" ಆ ಅಕೃತಿ ಹೂ೦ಕರಿಸಿತು. ಭೂಪತಿ ಬಾಯಿ ಬಿಟ್ಟು ಬೆ ಬ್ಬೆ.. ..ಬ್ಬೆ ಹೆ೦ ... ಹೆ೦ಡ್ ... ಹೆ೦ಡತಿಯ ಸೀರೆ ಬಿ .. ಬಿದ್ದಿತ್ತು ಅ೦ದ. "ಯಾಕೆ ನನ್ನ ಕ೦ಪೌ೦ಡಿಗೆ ಬ೦ದು ತೊ೦ದರೆ ಕೊಟ್ಟೆ? ಇಲ್ಲಿಯವರೆಗೆ ಯಾರೂ ಒಳಕ್ಕೆ ಬರುವ ಧೈರ್ಯ ಮಾಡಿಲ್ಲ. ನಾನು ಮನಸು ಮಾಡಿಡರೆ ಏನು ಬೇಕಾದರೂ ಮಾಡಿಯೇನು" ಅ೦ದಿತು ಆ ದೈತ್ಯ ದೇಹಿ. ಭೂಪತಿ ಸ೦ಪೂಣ೯ ಬೆವತುಹೋದ. ಸಾರಿ, ಸಾರಿ ತಗ೦ಡು ಹೋಗಿಬಿಡ್ತೀನಿ, ನನ್ನ ಕ್ಷಮಿಸಿ ... ತೊದಲಿದ. "ಬರುವದು ನಿನ್ನ ಇಷ್ಟ, ತಿರುಗಿ ಕಳಿಸೋದು ನನ್ನ ಇಷ್ಟ." ಅ೦ದಿತು ಆ ಮನುಷ್ಯಾಕೃತಿ. ಹಾಗೆ೦ದರೆ? ಪೆಕರನ೦ತೆ ಕೇಳಿದ ಭೂಪತಿ. "ಪ್ರಶ್ನೆ ಕೇಳಿ ನನ್ನನ್ನು ಇನ್ನಷ್ಟು ಸಿಟ್ಟುಗೊಳಿಸಬೇಡ" ಭೂಪತಿಗೆ ಏನೆನ್ನಬೇಕೆ೦ಬದೇ ಸೂಚಿಸದಾಯಿತು. ಆಕೃತಿಯಲ್ಲಿ ನಾನು ಅವನ ಅರ್ಧದಷ್ಟಿದ್ದೇನೆ. ಅದಲ್ಲದೆ ಇ೦ಥ ಆಕೃತಿಯನ್ನು ಈ ಕ೦ಪೌಡಿನಲ್ಲಿ ನೋಡಿಯೇಇಲ್ಲ. ಮೊದಲೇ ಭೂತಬ೦ಗಲೆ ಎ೦ಬ ಪ್ರತೀತಿ ಇರುವ ಬ೦ಗಲೆ ಇದು. ಇದೇನಾದರೂ ಒ೦ದು ಭೂ... ಭೂ....ಭೂತವಿರಬಹುದೇ? ಅನ್ನುವ ವಿಚಾರ ಮನದಲ್ಲಿ ಬರುತ್ತಲೇ ಭೂಪತಿಯ ದೇಹದಲ್ಲಿಇದ್ದ ತೃಣಮಾತ್ರ ತ್ರಾಣವೂ ಉಡುಗಿ ಹೋಯಿತು. ಅದು ಭೂತವೆನ್ನುವದು ಅವನಿಗೆ ಖಾತ್ರಿಯಾಗಿಹೋಯಿತು. ನೀನೇನು ಭೂತವಾ? ಅ೦ತ ಅನುಮಾನಿಸಿಕೊಂಡೆ ಕೇಳಿದ. ಕ್ಷಣಕಾಲ ಸುಮ್ಮನಿದ್ದು"ಹಾ೦" ಅ೦ದಿತು ಅದು ಒ೦ದು ಗ೦ಭೀರ ಸ್ವರದಲ್ಲಿ. ನಂತರ ನಡುಗುವ ಕೈಯಲ್ಲಿ ಸೀರೆ ಹಿಡಿದಿದ್ದ ಭೂಪತಿಯಿ೦ದ ಆ ಭೂತ ಸೀರೆ ಕಸಿದುಕೊ೦ಡಿತು. ಸೀರೆಯ ಸ್ಪಷ೯ವಾಗುತ್ತಲೇ ಆ ರಾಕ್ಷಸಾಕೃತಿಯ ಮುಖದಲ್ಲೂ ಒ೦ದು ನವಿರು ಭಾವ ಮೂಡಿತು. ನ೦ತರ ಹೊರಟಿದ್ದು ಎರಡೇ ಮಾತು. "ಈ ಸೀರೆಯ ಒಡತಿಯನ್ನು ನನ್ನ ಬ೦ಗಲೆಗೆ ಕಳಿಸಿಕೊಡು. ಮತ್ತು ನಿನಗೆ ಅದರ ಬದಲಿಗೆ ಕೇಳಿದ್ದನ್ನುದನ್ನು ಕೊಡುತ್ತೇನೆ. ಭೂಪತಿ ಕ್ಷಣಮಟ್ಟಿಗೆ ಕ೦ಗಾಲಾಗಿಹೋದ. . ಆದರೆ ತನ್ನ ಎದುರಿಗಿರುವದು ಒ೦ದು ಭೂತ ಎನ್ನುವ ಕಾರಣಕ್ಕೆ ಸುಮ್ಮನಾದ. ಅಲ್ಲದೆ ಹಿ೦ದೊಮ್ಮೆ ಹೆ೦ಡತಿ ಭೂತವೊ೦ದಕ್ಕೆ ಚಳ್ಳೆಹಣ್ಣು ತಿನ್ನಿಸಿದ್ದು ನೆನಪಾಯಿತು. ಒಳಗೊಳಗೇ ನಗುತ್ತ ಆಯ್ತು ಅ೦ದವನೇ ಕ೦ಪೌ೦ಡ್ ನೆಗೆದು ಮನೆಯೊಳಕ್ಕೆ ದಾಪುಗಾಲಿಕ್ಕಿದ.

ಒ೦ದೇ ಉಸಿರಿಗೆ ನಡೆದ ಘಟನೆಯನ್ನೆಲ್ಲ ನಡೆದ೦ತೆ ಹೆ೦ಡತಿಗೆ ಉಸಿರಿದ. ಭೂಪತಿಯ ಹೆ೦ಡತಿಯೋ ಬಹು ಚಾಲಾಕಿ. ಇ೦ಥ ಅವಕಾಶವನ್ನು ಬಿಟ್ಟಾಳೆಯೇ? ಏನೇನೆಲ್ಲ ಬೇಕೆ೦ದು ನೋಟ್ ಪ್ಯಾಡ್ ತೆಗೆದುಕೊ೦ಡು ಪಟ್ಟಿ ಮಾಡಿದಳು. ಒ೦ದು ಕಾರು, ಒ೦ದು ಬ೦ಗಲೆ , ನೂರು ರೇಷ್ಮೆ ಸೀರೆ, ಹೀಗೆ ಹತ್ತು ಹಲವು. ಭೂಪತಿ ಆ ಚೀಟಿ ಸಮೇತ ಹೆ೦ಡತಿ ಒಡಗೂಡಿ ಕ೦ಪೌ೦ಡ್ ಮತ್ತೆ ಹಾರಿದ. ಭೂತ ಹೊರಗೇ ಕಾಯುತ್ತಿತ್ತು. ಅದೆದುರಿಗೆ ನಿ೦ತ ಭೂಪತಿ ಪಟಪಟನೆ ಚೀಟಿ ಓದಿ, ನನಗೆ ನಾಳೆ ಬೆಳಗಾಗುವದರೊಳಗೆ ಇದೆಲ್ಲ ಬೇಕು ಅ೦ದ. ಭೂತ ಮರು ಮಾತಾಡದೆ "ಹೂ೦" ಅ೦ದು ಅವನ ಹೆ೦ಡತಿಯ ಹೆಲಗ ಮೇಲೆ ಕೈ ಇಟ್ಟುಕೊ೦ಡು ಬ೦ಗಲೆ ಒಳಕ್ಕೆ ನಡೆದು ಹೋಯಿತು. ಭೂಪತಿ ಮತ್ತೆ ಮನೆಕಡೆಗೆ ಜಿಗಿಯುವದಕ್ಕೂ ಅತ್ತ ಬ೦ಗಲೆಯ ದೊಡ್ಡ ಬಾಗಿಲು ಮುಚ್ಚಿಕೊಳ್ಳುವದಕ್ಕೂ ಸರಿ ಹೋಯಿತು.

ಅಧ೯ರಾತ್ರಿ ಕಳೆದರೂ ಭೂಪತಿಗೆ ನಿದ್ರೆ ಇಲ್ಲ, ಏನೇನೋ ಕನಸುಗಳು, ಮಸಿ೯ಡೀಸ್ ಕಾರ್ ನಲ್ಲಿ ಓಡಾಡಿದ೦ತೆ ತನ್ನ ಬ೦ಗಲೆ ಹಿ೦ದಿನ ಈಜುಕೊಳದಲ್ಲಿ ಈಜಾಡಿದ೦ತೆ, ಹೀಗೇ ಏನೇನೋ..... ಬೆಳಿಗ್ಗೆ ಬೇಗನೇ ಏಳಬೇಕೆ೦ದು ಇಟ್ಟಿಕೊ೦ಡಿದ್ದ ಅಲಾರಾ೦ "ಟ್ರಿಣ್" ಅ೦ದಿದ್ದೇ ಧಡಕ್ಕನೆ ಎಚ್ಚರವಾಯಿತು. ಬಡ ಬಡನೆ ಎದ್ದು ನೋಡಿದರೆ ಕ೦ಡಿದ್ದೇನು? ತಾವು ಮಲಗುತ್ತಿದ್ದ ಅತಿಸಾಮಾನ್ಯ ಬೆಡ್ ರೂ೦ ಅತಿ ಸಾಮಾನ್ಯವಾಗೇ ಉಳಿದಿತ್ತು. ಗಡಬಡಿಸಿ ಎದ್ದು ರಾತ್ರಿ ಮಲಗಿದ್ದ ಪಟಾಪಟಿ ಚಡ್ಡಿಯಲ್ಲಿ ಎದ್ದು ಪಕ್ಕದ ಪಾಳು ಬ೦ಗಲೆಗೆ ಓಡಿದ.

ಧಡ ಧಡನೆ ದೊಡ್ಡ ಬಾಗಿಲು ಬಡಿಯತೊಡಗಿದ. ಐದು ನಿಮಿಷದ ನ೦ತರ ಬಾಗಿಲು ತೆರೆದು ಕೊ೦ಡಿತು. ಒಳಗಡೆ ಭೂತ ಪ್ಯಾ೦ಟ್ ಏರಿಸುತ್ತ ನಿ೦ತಿತ್ತು. ಹಿದೆಯೇ ಅಸ್ತವ್ಯಸ್ತ ಉಡಿಗೆಯಲ್ಲಿದ್ದ ಹೆ೦ಡತಿ ಹೊರಕ್ಕೆ ಬ೦ದಳು. "ಏಲ್ಲಿ ನಿನ್ನೆ ನಾನು ಕೇಳಿದ ಯಾವುದೂ ಆಗೇ ಇಲ್ಲ? ಏನಾಯ್ತು ನೀನು ಕೊಟ್ಟ ಮಾತು?" ಹೆಚ್ಚೂಕಮ್ಮಿ ಕಿರುಚಿದ ಭೂಪತಿ. ಅವನ ಹೆ೦ಡತಿಯನ್ನು ಎಳೆದು ಪಕ್ಕಕ್ಕೆ ಬಿಡುತ್ತಾ ಆ ಆಕೃತಿ ಬಾಗಿಲು ಹಾಕಿಕೊಳ್ಳುತ್ತಾ ಒ೦ದೇ ಮಾತನ್ನು ಕೇಳಿತು:

"ಈ ಕಲಿಯುಗದಲ್ಲೂ ನೀವು ಭೂತ ಪ್ರೇತಗಳನ್ನು ನ೦ಬುತ್ತೀರಾ?". ಮುಚ್ಚಿದ ಬಾಗಿಲು ನೋಡುತ್ತಾ ಗ೦ಡ ಹೆ೦ಡತಿ ಇಬ್ಬರೂ ಬಹಳ ಕಾಲ ಹಾಗೆ ನಿ೦ತೇ ಇದ್ದರು.

Wednesday, November 14, 2007

ಚಳಿಗಾಲಕ್ಕೊಂದು ಬೆಚ್ಚನೆ ಕವಿತೆ

ವಿರಹಿಗಳಿಗಿದು ಕಷ್ಟಕಾಲ. ಚಳಿಗಾಲ ಶುರುವಾಗಿಬಿಟ್ಟಿದೆ. ಎಷ್ಟು ಕಂಬಳಿ ಹೊದ್ದುಕೊಂಡರೂ ಕೊನೆಗೂ ಸಂದಿಯಿಂದೆಲ್ಲೋ ತೂರಿ ಬರುವ ಚಳಿಯ ಸುಳಿಗಾಳಿ. ಚಡಪಡಿಸುವಂತೆ ಮಾಡುವ, ಮತ್ತಷ್ಟು ಮತ್ತಷ್ಟು ಮುರುಟಿ ಮಲಗುವಂತೆ ಮಾಡುವ ಪಾಪಿ. ಹೆಂಡತಿಯನ್ನು ತವರಿಗೆ ಕಳುಹಿಸಿಕೊಡಲು ಒಲ್ಲದ ಮನಸಿನ ಗಂಡ. ತವರಿಗೆ ಬಂದವಳಿಗೂ ರಾತ್ರಿ ನಿದ್ರೆಯಿಲ್ಲ. ಸುಮ್ಮನೆ ನಿಡುಸುಯ್ಯುವಿಕೆ, ನಿಟ್ಟುಸಿರು. ಈ ವರ್ಷ ಭಾರೀ ಮಳೆಯಾಗಿರುವುದರಿಂದ ಚಳಿಯೂ ಜಾಸ್ತಿಯೇ ಇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಹವಾಮಾನ ತಜ್ಞರು. ಮದುವೆಗೆ ಒಪ್ಪದ ಗರ್ಲ್‍ಫ್ರೆಂಡ್, ಡೈವೋರ್ಸ್ ಕೊಟ್ಟು ಮತ್ತೊಬ್ಬನೊಂದಿಗೆ ಓಡಿ ಹೋದ ಹುಡುಗಿಯ ಸಂಗಾತಿ, ಅವಳೆಲ್ಲೋ ಇವನೆಲ್ಲೋ ಆಗಿರುವ ವಿರಹಿಗಳ ಪಾಡು, ವ್ಯರ್ಥ ಕನಸುಗಳನ್ನು ಹೊದ್ದು ಕಣ್ತೆರೆದೇ ಮಲಗಿರುವ ಹುಡುಗಿಯ ಹೊರಳಾಟ.... ಹೇಳತೀರದ್ದು.

ಈ ಚಳಿಗಾಲದ ಶುರುವಿಗೆ, ನಿಮಗಾಗಿ, ಗಂಗಾಧರ ಚಿತ್ತಾಲರ ಮತ್ತೊಂದು ಕವಿತೆಯನ್ನು ಇಲ್ಲಿ ಕೊಡುತ್ತಿದ್ದೇವೆ. ನೃತ್ಯವೊಂದರಿಂದ ಪ್ರೇರಿತವಾದ ಹಾಡು ಇದು. ಬೇಗ ಚಳಿಗಾಲ ಮುಗಿಯಲಿ; ತಲ್ಲಣಿಸುವ ಎದೆಗಳ ಮುದುರಿದ ಜೀವಸೆಲೆಗೆ ಬಿಸಿಲ ಚುರುಕು ತಾಕಿ ಮತ್ತೆ ಚಿಗುರಿಕೊಳ್ಳಲಿ.

ಕಾಮಸೂತ್ರ (೨)

ಯೌವನಮತ್ತೆಯರು ನಾವು
ಕಾಮಮದೋನ್ಮತ್ತೆಯರು

ಬಾ ಪುರುಷನೆ ಬಾ ಗೆಲ್ಲು
ವೀರ್ಯ ಸೂಸು ವಶಗೊಳ್ಳು

ದೂಡಿ ಹೊಮ್ಮುತಿದೆಯೋ ಹರೆಯು
ದುಂಡುಮೊಲೆಯ ಮೊಗ್ಗಿನಲ್ಲಿ
ತೊಡೆಕಣಿವೆಯ ತಗ್ಗಿನಲ್ಲಿ

ಮೆಲ್ಲನೆ ತಿರುಗಲು ತಿರೆಯೂ
ಹೊಸ ಋತುವಿನ ಉಗ್ಗಿನಲ್ಲಿ
ತಡೆಯಲಾರದಂಥ ತ್ವರೆಯು
ನೆತ್ತರ ಈ ಹಿಗ್ಗಿನಲ್ಲಿ.

ಬಾ ಹೆದೆಗೇರಿದ ಬಾಣ
ನಿಮಿರುತ ನಿಗುರುತ ಚೆಲ್ಲುತ
ಬರುವಂತೆಯೆ, ಈ ಪ್ರಾಣ
ತೊನೆಯಿಸಿ ನೆನೆಯಿಸಿ ಬಾ ಬಾ

ಸುಖಸುಖಸುಖದೀ ಮಿಂಚು
ಸಂಚರಿಸಲಿ ಒಡಲಿನ ಒಳ ಒಳ ಅಂಚು

ದ್ರವಿಸುವೆವು ಸ್ರವಿಸುವೆವು
ನಿನ್ನಾಘಾತದ ಸುಖಕೆ
ಸಂತೃಪ್ತಿಯ ಸವಿಸುವೆವು
ಎತ್ತುತ ಮುಖವನು ಮುಖಕೆ.

ಉದರದಲ್ಲಿ
ಜೀವದ ಒಳಪದರದಲ್ಲಿ
ಒಂದೇ ಒಂದೇ ಬಯಕೆ
ಫಲಿಸೋ ಫಲಿಸೋ ಫಲಿಸು
ಜೀವರಸವನುಚ್ಚಳಿಸು
ಗುಹ್ಯವನೊಡೆ ಭೇದಿಸಿ ನಡೆ
ಆಂತರ್ಯದ ಸವಿಗೆ

ಹೊಸ ಪ್ರಾಣಾಂಕುರ ಮಿಳ್ಳಿಸಿ
ಒಡೆಯಲಿ ಈ ಭುವಿಗೆ.

Sunday, October 21, 2007

ರಾಸಲೀಲೆ ಮತ್ತು ವಯಾಗ್ರಜ್ಜ


ಇದು ವಿಜಯಕನಾ೯ಟಕದಲ್ಲಿ ಬ೦ದ ಹಳೆಯ ಸುದ್ದಿ. ಆದರೆ ವಿಷಯ ಹೊಸದಾದ್ದರಿ೦ದ ಇದು ಇಣುಕುವವರ ಗಮನಕ್ಕೆ. ಅ೦ದಹಾಗೆ ಭಾರತೀಯರಿಗೆ ರಾಸಲೀಲೆ ಲೀಲಾಜಾಲವಾದದ್ದಕ್ಕೂ ಮಾಯಾ ನಿರಾಳವಾಗಿದ್ದಕ್ಕೂ ಯವುದೇ ಸ೦ಭ೦ದವಿಲ್ಲ. ಇವೆರಡೂ ಬೇರೆಬೇರೆ ಸುದ್ದಿ. ಹೆಡ್ಡಿ೦ಗ್ ಕೂಡಿಸಿ ಓದಬಾರದಾಗಿ ವಿನ೦ತಿ. (ವಿ.ಸೂ: ಮಾಯಾವತಿ ಇನ್ನೂ ಕುಮಾರಿ...!)






ಈತ "ವಯಾಗ್ರಜ್ಜ"

Tuesday, September 25, 2007

ಕಾಂಡೋಮ್ ವಿಶೇಷ!

ಭಾರತೀಯ ಮೂಲದ Hindustan Latex Ltd. ಎನ್ನುವ ಕಂಪೆನಿ 'ತಾಂಬೂಲ ಸುವಾಸಿತ ನಿರೋಧ್' (paan-flavoured condom) ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನ ಉಂಟುಮಾಡಿದೆ. ಈ ಕಂಪನಿ ನಡೆಸಿದ ಒಂದು ಸಮೀಕ್ಷೆಯಿಂದ ತಿಳಿದು ಬಂದುದೇನೆಂದರೆ, ಭಾರತೀಯ ವೇಶ್ಯೆಯರು (sex workers) ಚಾಕ್ಲೇಟೋ, ಬಿಸ್ಕೇಟೋ, ಬಾಳೆಹಣ್ಣನ್ನೋ ತಿನ್ನುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಲೆ-ಅಡಿಕೆ ಜಗಿಯುತ್ತಾರಂತೆ! ಇದರ ಬಿಡುಗಡೆಯಿಂದಾಗಿ ಕಾಂಡೋಮ್ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ ಎಂಬುದು ಕಂಪನಿಯ ಆಶಯ. ವಿಶ್ವ ಕುಟುಂಬ ಆರೋಗ್ಯ ಇಲಾಖೆಯ (Family Health International) ಸಂಜಯ್ ಗಾಯಕವಾಡ್ ಸಹ ಲೈಂಗಿಕ ಕಾರ್ಯಕರ್ತರು ಈ ಉತ್ಪನ್ನವನ್ನು ತುಂಬಾ ಖುಷಿಯಿಂದ ಸ್ವೀಕರಿಸಿದ್ದಾರೆಂದು ಸ್ಥಿರಪಡಿಸಿದ್ದಾರೆ.

ಆದರೆ ಕಾಂಡೋಮಿಗೆ ಪರಿಮಳ ಯಾಕಿರಬೇಕು, ಅದು ಯಾವ ಕಾರಣಕ್ಕೆ ಜನಕ್ಕೆ ಇಷ್ಟವಾಗಬೇಕು ಎಂಬುದು ನನ್ನ ವೈಯಕ್ತಿಕ ಕುತೂಹಲ ಮತ್ತು ಆಶ್ಚರ್ಯ; ಅದಿರಲಿ. ;)

* * *

ಚೀನಾದ ಬೀಜಿಂಗ್‍ನಲ್ಲಿ ಕಳೆದ ಜುಲೈ ಹನ್ನೊಂದರಂದು 'ಕಾಂಡೋಮ್ ಫ್ಯಾಶನ್ ಶೋ' ನಡೆಯಿತು. ಚೀನಾದ ಅತಿ ದೊಡ್ಡ ಕಾಂಡೋಮ್ ತಯಾರಿಕಾ ಸಂಸ್ಥೆ Guilin Latex Factory, ಏಡ್ಸ್ ವಿರುದ್ಧ ಕಾಂಡೋಮ್ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಫ್ಯಾಶನ್ ಶೋನಲ್ಲಿ ಲಲನೆಯರು ವಿವಿಧ ವಿನ್ಯಾಸದ, ವಿವಿಧ ಅಳತೆಗಳ ಕಾಂಡೋಮಿನಿಂದ ಹೆಣೆಯಲ್ಪಟ್ಟಿದ್ದ ಸ್ಕರ್ಟು, ಗೌನು, ನೈಟ್ ಡ್ರೆಸ್‍ಗಳು, ಬಿಕಿನಿಗಳನ್ನು ತೊಟ್ಟು ಪ್ರದರ್ಶನ ನಡೆಸಿದರು. ಅದರ ಕೆಲವು ಫೋಟೋಗಳು, ನಿಮಗಾಗಿ:




ಈ ಜಗತ್ತಿನಲ್ಲಿ ಏನೇನೆಲ್ಲಾ ನಡೆಯೊತ್ತಪ್ಪಾ ಅನ್ನೋದು ನನ್ನ ಎರಡನೇ ಆಶ್ಚರ್ಯ; ಅದಿರಲಿ. ;)

* * *

ಪಶ್ಚಿಮ ನೆದರ್‌ಲ್ಯಾಂಡ್ಸ್‍ನಲ್ಲಿ ಇತ್ತೀಚಿಗೆ ಹಾಟ್ ಏರ್ ಬಲೂನ್ ಒಂದು ಆಗಸದಲ್ಲಿ ತೇಲುತ್ತಿತ್ತು. ವಿಶೇಷವೇನೆಂದರೆ, ಇದು ಜಗತ್ತಿನ ಅತಿ ದೊಡ್ಡ ಕಾಂಡೋಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗಿನ್ನಿಸ್ ಬುಕ್‍ನ ಪುಟಗಳೊಳಗೆ ಸೇರಲಿದೆಯಂತೆ. ಜನರಲ್ಲಿ ಸೇಫ್ ಸೆಕ್ಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾಂಡೋಮ್-ಬಲೂನ್ ಹಾರಿಬಿಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತಂತೆ.


ಕಾಂಡೋಮುಗಳು ಯಾವ್ಯಾವ ಉದ್ದೇಶಗಳಿಗೆಲ್ಲ ತಯಾರಿಸಲ್ಪಡುತ್ತವೆಯಪ್ಪಾ ಎಂಬುದು ನನ್ನ ಮೂರನೇ ಆಶ್ಚರ್ಯ; ಅದೂ ಇರಲಿ. ;)


* * *

ಜಗತ್ತಿನ ಅತಿ ಹಳೆಯ ಕಾಂಡೋಮ್ ಯಾವುದು? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ:



ಲಂಡನ್‍ನ ಸ್ವೀಡನ್‍ನಲ್ಲಿ ದೊರೆತಿರುವ ಸುಮಾರು ೧೬೪೦ರಷ್ಟು ವರ್ಷ ಹಳೆಯದಾದ ಇದು ಇನ್ನೂ ಹಾಳಾಗದೆ ಉಳಿದಿದೆ. ಇದೊಂದು ಮರುಬಳಕೆ ಮಾಡಬಹುದಾದ (reusable) ಕಾಂಡೋಮ್. 'ಬಳಸುವ ಮುನ್ನ ಬಿಸಿ ಹಾಲಿನಲ್ಲಿ ಅದ್ದಿ ತೆಗೆಯುವುದು ಖಾಯಿಲೆಗಳಿಂದ ದೂರವಿರುವ ಉದ್ದೇಶದಿಂದ ಉತ್ತಮ' ಎಂದು ಇದರ ಮ್ಯಾನ್ಯುಯಲ್ ಮೇಲೆ ಲ್ಯಾಟಿನ್ ಭಾಷೆಯಲ್ಲಿ ಬರೆದಿದ್ದಾರೆ. ಹಂದಿಯ ಕರುಳಿನಿಂದ ತಯಾರಿಸಲ್ಪಟ್ಟಿರುವ ಇದು, ೨೫೦ ಅತಿ ಹಳೆಯ ಲೈಂಗಿಕ ಸಾಮಗ್ರಿಗಳಲ್ಲಿ ಒಂದಾಗಿದೆ. ಆಸ್ಟ್ರಿಯಾದ Tirolean County Museum ನಲ್ಲಿ ಇತ್ತೀಚೆಗೆ ಇದು ಪ್ರದರ್ಶಿಸಲ್ಪಟ್ಟಿತು.


* * *

ಆಶ್ಚರ್ಯ ಪಟ್ಟಿದ್ದು ಸಾಕು, ಈಗ ಜಗತ್ತಿನ ಪ್ರಸಿದ್ಧ ಕಾಂಡೋಮ್ ತಯಾರಿಕಾ ಕಂಪನಿ 'ಡ್ಯೂರೆಕ್ಸ್'ನ ಕೆಲವು ಜಾಣ ಜಾಹಿರಾತುಗಳನ್ನು ನೋಡಿ, ನಗಿ:









[ಮಾಹಿತಿ ಮತ್ತು ಚಿತ್ರಗಳ ಲಿಂಕ್ ಕಳುಹಿಸಿಕೊಟ್ಟವರು: ರೋಹಿತ್ ಕೆ.ಜಿ.]

Tuesday, September 11, 2007

ಕುಟ್ಟು ಭಟ್ರು

ಹೊರಬೈಲು ನಮ್ಮೂರಿನ ಪಕ್ಕದೂರು. ಅಲ್ಲಿ ಕುಟ್ಟು ಭಟ್ರು ಅಂತ ಒಬ್ರಿದಾರೆ. ಅದು ಅವರ ಅಡ್ಡ ಹೆಸರೋ ಅಥವಾ ಅದೇ ಅವರ ಅಂಕಿತನಾಮವೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲರೂ ಅವರನ್ನು 'ಕುಟ್ಟು ಭಟ್ರು' ಅಂತಲೇ ಕರಿಯೋದು. ಸುಮಾರು ಎಪ್ಪತ್ತು-ಎಪ್ಪತ್ತೈದು ವರ್ಷ ವಯಸ್ಸಿನ 'ಯುವಕ' ಅವರು. ಯುವಕ ಎನ್ನಲು ಕಾರಣ ಅವರ ಚುರುಕುತನ. ತಮ್ಮ ಕೆಂಪು ಟಿವಿಎಸ್ ಚಾಂಪ್‍ನಲ್ಲಿ ಇವತ್ತಿಗೂ ಅವರು 'ಕುಟುರ್ರ್..' ಎಂದು ಹೋಗುವುದನ್ನು ನೀವು ನಮ್ಮೂರ್ ಕಡೆ ಬಂದರೆ ನೋಡಬಹುದು.

ಕುಟ್ಟು ಭಟ್ರು ಒಮ್ಮೆ ಸಾಗರಕ್ಕೆ ಹೋಗಿದ್ರಂತೆ. ಪ್ಯಾಟೆ ಎಲ್ಲಾ ತಿರುಗಿ, ಸಾಮಾನೆಲ್ಲಾ ಖರೀದಿ ಮಾಡಿದ್ದಾಯ್ತು. ರಾಘವೇಂದ್ರ ಬಸ್ ಬರ್ಲಿಕ್ಕೆ ಇನ್ನೂ ಅರ್ಧ ಗಂಟೆ ತಡ ಇತ್ತು. ಸರಿ ಇನ್ನೇನು ಮಾಡುವುದು? ಸಾಗರದ ಮಾರ್ಕೆಟ್ ರೋಡಿನಿಂದ ಸ್ವಲ್ಪ ಒಳಕ್ಕೆ ಹೋದರೆ ಅಲ್ಲಿ 'ಬೆಲ್ಲದ ಕ್ರ್‍ಇಷ್ಣಪ್ಪನ ಅಂಗಡಿ' ಅಂತ ಒಂದು ಇದೆ. ಬಹಳ ಹಳೆಯ ಕಾಲದಿಂದಲೂ ಇರುವ ಇದು 'ಸಾಗರೀಕ'ರಿಗೆಲ್ಲ ಚಿರಪರಿಚಿತ. ಪ್ಯಾಟೆಗೆ ಹೋದವರೆಲ್ಲ ಬಸ್ ಬರಲಿಕ್ಕೆ ಸಮಯವಿದೆ ಎಂದಾದರೆ ಸುಸ್ತಾರಿಸಿಕೊಳ್ಳಲಿಕ್ಕೆ ಬೆಲ್ಲದ ಕ್ರ್‍ಇಷ್ಣಪ್ಪನ ಅಂಗಡಿ ಹೊಕ್ಕುತ್ತಾರೆ. ನಮ್ಮ ಕುಟ್ಟು ಭಟ್ರೂ ಅಲ್ಲಿಗೇ ಹೋದ್ರು.

ಅಲ್ಲಿ ಅದಾಗಲೇ ನಮ್ಮೂರಿನವರೊಬ್ಬರು ಕುಳಿತಿದ್ದರು. ಕುಟ್ಟು ಭಟ್ರು ಅವರ ಪಕ್ಕ ಹೋಗಿ ಕೂತ್ರು. ಆಗ ಬೆಲ್ಲದ ಕ್ರಿಷ್ಣಪ್ಪ ಹಿಂದಿನ ದಿನ ನಡೆದ ಕತೆಯೊಂದನ್ನು ಹೇಳ್ತಿದ್ನಂತೆ:

ಬೆಲ್ಲದ ಕ್ರಿಷ್ಣಪ್ಪನ ಅಂಗಡಿ ಎದುರು ಒಂದು ಪಾತ್ರೆ ಅಂಗಡಿಯಿದೆ. ಅಲ್ಲಿಗೆ ನಿನ್ನೆ ಒಬ್ಬ ಭಜಾರಿ ಹೆಂಗಸು ಹೊಕ್ಕಳಂತೆ. ಭಜಾರಿ ಹೆಂಗಸು ಯಾಕೆಂದರೆ ಅವಳು ತುಂಬಾ ತುಂಬಾ ದಪ್ಪಗಿದ್ದಳಂತೆ. ಎಷ್ಟು ದಪ್ಪಗಿದ್ದಳು ಅಂದ್ರೆ ಅಷ್ಟು ದಪ್ಪಗಿದ್ದಳು. ಅವಳು ಪಾತ್ರೆ ಅಂಗಡಿ ಹೊಕ್ಕಾಗ ಅದರ ಮಾಲೀಕ ಚಾ ಕುಡಿಯಲಿಕ್ಕೋ ಏನಕ್ಕೋ ಹೊರಗಡೆ ಹೋಗಿದ್ದ. ಈ ಹೆಂಗಸು ಯಾರೂ ಇಲ್ಲದ್ದು ನೋಡಿ ಒಂದು ದೊಡ್ಡ ದಬರಿಯನ್ನ ಎತ್ತಿ ತನ್ನ ಲಂಗದೊಳಗೆ ಸೇರಿಸಿಬಿಟ್ಟಳಂತೆ!! ಅಷ್ಟರಲ್ಲಿ ಅಂಗಡಿಯವನು ಬಂದ. ಇವಳು ಏನೂ ಆಗದವಳಂತೆ ಅವನ ಬಳಿ ಯಾವುದೋ ಪಾತ್ರೆಯನ್ನು ಕೇಳಿ, ಅದು ಅವಳ ಚೌಕಾಶಿಯ ಮಿತಿಯೊಳಗೆ ಬಾರದೇ, 'ಸರಿ ಹಾಗಾದ್ರೆ' ಎಂದು ಹೊರಟಳಂತೆ.

ಕ್ರಿಷ್ಣಪ್ಪ ತನ್ನ ಅಂಗಡಿಯಲ್ಲೇ ಕುಳಿತು ಇದನ್ನೆಲ್ಲಾ ನೋಡುತ್ತಿದ್ದನಲ್ಲ, ಅವಳು ಹೊರಡುತ್ತಿದ್ದಂತೆ ಇವನು ಹೋಗಿ ತಡೆದು ನಿಲ್ಲಿಸಿ, ಪಾತ್ರೆ ಅಂಗಡಿಯವನಿಗೆ ವಿಷಯವನ್ನು ಹೇಳಿದನಂತೆ. ಇಬ್ಬರೂ ಸೇರಿ ಸರಿಯಾಗಿ ಗದರಿಸಿದ ಮೇಲೆ (ಅಷ್ಟರಲ್ಲಿ ಒಂದಷ್ಟು ಜನರೂ ಸೇರಿದ್ದರು) ಅವಳು ಕದ್ದುದನ್ನು ಒಪ್ಪಿ ತನ್ನ ಲಂಗದೊಳಗಿಂದ ದಬರಿಯನ್ನು ತೆಗೆದು ಕೊಟ್ಟು ಹೋದಳಂತೆ.

-ಕತೆ ಕೇಳುತ್ತಿದ್ದ ನಮ್ಮ ಕುಟ್ಟು ಭಟ್ರು ಒಂದು ದೀರ್ಘ ನಿಟ್ಟುಸಿರು ಬಿಟ್ಟು ಏನಂದ್ರಂತೆ ಗೊತ್ತಾ? "ಅಲ್ಲ ಮಾರಾಯಾ.. ದಬರಿ ಆಗಿದ್ರಿಂದ ಬಚಾವು.. ಇನ್ನೇನಾದ್ರೂ ಸಣ್ಣ-ಪುಟ್ಟ ಲೋಟವೋ ಚಮಚವೋ ಆಗಿದ್ದಿದ್ರೆ ಸಿಗ್ತಾನೇ ಇರ್ಲಿಲ್ವಲ್ಲೋ ಮಾರಾಯಾ..!!"

['ದಟ್ಸ್‍ಕನ್ನಡ'ದಲ್ಲಿ ಮೋಟುಗೋಡೆಯ ಒಳಗೆ ಸೇರಿಸಬಹುದಾದಂತಹ ಲೇಖನವೊಂದು ಪ್ರಕಟವಾಗಿದೆ. ಆಸಕ್ತರಿಗಾಗಿ :ಕೊಂಡಿ.]

Tuesday, September 4, 2007

ಟೋಪಿ

ಮಾಸ್ ಕಮ್ಯೂನಿಕೇಶನ್ ಓದುವಾಗ ನನ್ನ ಫ್ರೆಂಡ್ 'ಶೋಭಿ' ಎನ್ನುವವನೊಬ್ಬನಿಗೆ ತುಂಬಾ ಗುಂಗುರು ಕೂದಲಿತ್ತು. ಅದು ಎಷ್ಟು ಚೆನ್ನಾಗಿತ್ತು ಎಂದರೆ, ಎಲ್ಲಾ ಹುಡುಗಿಯರು ಕಣ್ಣಲ್ಲಿ ಮೆಚ್ಚುಗೆ ಸೂಸುತ್ತಿದ್ದರು. ಸಾಧ್ಯವಾದಾಗಲೆಲ್ಲ ಅವನ ಹಿಂದೆ ಬೀಳುತ್ತಿದ್ದರು.

ನಮಗೋ ಹೊಟ್ಟೆಕಿಚ್ಚು. ಒಮ್ಮೆ ಕಾರಿಡಾರಿನಲ್ಲಿ ಹುಡುಗ ಹುಡುಗಿಯರೆಲ್ಲ ಸೇರಿ ಹರಟೆ ಕೊಚ್ಚುತ್ತಿದ್ದಾಗ ಶೋಭಿಯ ತಲೆ ಕೂದಲಿನ ಪ್ರಸ್ತಾಪ ಬಂತು. ಹುಡುಗಿಯರೆಲ್ಲ "ಶೋಭಿ ಅದು ಹೇಗೆ ಅಷ್ಟು ಗುಂಗುರಾಗಿ ಇಟ್ಟಿದಾನೆ ಕೂದ್ಲು.. ಅದರ ಗುಟ್ಟೇನಾದ್ರೂ ನಿಂಗೆ ಗೊತ್ತಾ? ಗೊತ್ತಿದ್ರೆ ನಮಗೂ ಹೇಳಿಕೊಡೋ" ಎಂದು ನನಗೆ ಗಂಟು ಬಿದ್ದರು.

ಪಕ್ಕದಲ್ಲಿದ್ದ ನನ್ನ ಗೆಳೆಯನಿಗೆ ಉರಿದುಹೋಯ್ತು ಅನ್ಸುತ್ತೆ, "ಶೋಭಿ ತಲೆಗೆ ಟೋಪಿ ಹಾಕ್ಕೊಳ್ಳೋ ಬದಲು ಅಂಡರ್‌ವೇರ್ ಹಾಕ್ಕೋಳ್ತಾನೆ ಅಷ್ಟೇ" ಎಂದ. ಆಮೇಲೆ ಹುಡುಗಿಯರು ತುಟಿ ಪಿಟಿಕ್ ಎನ್ನಲಿಲ್ಲ!

[ಮೋಟುಗೋಡೆಗೆ ಹಾಕಲಿಕ್ಕೆ ಈ ಟೋಪಿಯನ್ನು ಕಳುಹಿಸಿಕೊಟ್ಟವರು ಶ್ರೀ ಜಿ.ಎನ್. ಮೋಹನ್]

Saturday, August 18, 2007

ಭೂತದ ಕಥೆ -೧ "ಭೂಪತಿ ಹೆ೦ಡ್ತಿ ಕೈಲಿ ಭೂತದ ಸೋಲು"

ಕುಲ ಗೋತ್ರ- ಕಾಲ ಘಳಿಗೆ ಎಲ್ಲಾ ಕೂಡಿ ಬ೦ತು, ಸಕಾಲದಲ್ಲಿ ವಯ್ಯಾರದ ಬೆಡಗಿ ಭೂಮಿಕಾಳನ್ನು ಮದುವೆಯಾದ ನಮ್ಮ ಭೂಪತಿ. ಕೈತು೦ಬಿ ತುಳುಕುವಷ್ಟು ಸ೦ಬಳ, ಅದೃಷ್ಟವೇ ನಾಚುವ೦ತೆ ಕೇಳಿದಕೂಡಲೆ ಸಿಕ್ಕಿದ್ದ ರಜೆ, ಅನುರೂಪದ ಹೆ೦ಡತಿ ಜೊತೆಗಿರಲು ಸ್ವಗ೯ಕ್ಕೆ ಕಿಚ್ಚು ಹಚ್ಚಲೋ ಎ೦ಬ೦ತೆ ಸ್ವಿಜರ್ ಲ್ಯಾ೦ಡಿಗೆ ಹನಿಮೂನ್ ಗೆ ಹೋದ. ಆಲ್ಲಿ ಉಳ್ಕೊ೦ಡಿದ್ದು ಸ್ಟಾರ್ ಹೋಟೆಲಿನ ಹನಿಮೂನ್ ಸೂಟ್ನಲ್ಲಿ.

ಹೊಸ ಬಿಸಿ ತಾನೇ... ರೂಮಿನೊಳಗೆ ಬ೦ದವನೆ ಆತುರದಲ್ಲಿ ಬಾಗಿಲನ್ನು ಮುಚ್ಚಿ ಪತ್ನಿಯನ್ನು ಬರಸೆಳೆದು ಬಿಗಿದಪ್ಪಿ ಅದರುವ ಅಧರದ ಮಧುವ ಹೀರಲು ಕೊ೦ಚ ಬಾಗಿದ ಆಷ್ಟೇ... ಆಲ್ಲಿ ಪ್ರತ್ಯಕ್ಷವಾಯಿತು ಒ೦ದು ಭೂತ. ಕೀರಲು, ಕೀಚಲು ನಗು ನಕ್ಕು, "ಅಯ್ಯಾ ಗುರುವೇ, ನಾನೊಬ್ಬ ಭಗ್ನ ಪ್ರೇಮಿ, ಮೋಸಮಾಡಿದಳು ನನ್ನ ಪ್ರೇಯಸಿ. ನೋವು ಭರಿಸಲಾಗದೆ ನಾನು ಆತ್ಮಹತ್ಯೆ ಮಾಡಿಕೊ೦ಡೆ. ಯಾರೇಆಗಲಿ, ಪ್ರೀತಿಸುವದನ್ನು ನಾನು ನೋಡಲಾರೆ. ಹಾಗಾಗಿ ನನಗೊ೦ದು ಕೆಲಸಕೊಡು. ನಾನು ಕೆಲಸ ಮುಗಿಸಿ ಬರುವವರೆಗೆ ನೀವಿಬ್ಬರೂ ಆನ೦ದದಿ೦ದ ಇರಬಹುದು, ಇಲ್ಲವಾದರೆ ನಿಮಗೆ ತೊ೦ದರೆ ಕೊಡಬೇಕಾದೀತು" ಎ೦ದು ನಯವಾಗಿಯೇ ಬೆದರಿಕೆ ಹಾಕಿತು.

ಭೂಪತಿ ಕಂಗಾಲಾಗಿ ಹೋದ. ಏರಿದ್ದ ಉತ್ಸಾಹ ಜರ್ರನೆ ಇಳಿದೇ ಹೋಯಿತು!. ಸ್ವಲ್ಪ ಯೋಚನೆ ಮಾಡಿದವನಿಗೆ ಏನೋ ಹೊಳೆಯಿತು. ಮೊದಲ ಕೆಲಸವನ್ನೇ ಅಸಾಧ್ಯವಾದುದನ್ನ ನೀಡಿಬಿಟ್ಟರೆ ಮುಗೀತಲ್ಲಾ, ಎ೦ದಿಗೂ ಈ ಭೂತ ಮರಳಿಬ೦ದು ಕಾಟ ಕೊಡುವದಿಲ್ಲ ಎ೦ದು ಯೋಚಿಸಿದ.

"ಹೋಗು ಸಮುದ್ರದಲ್ಲಿ ಏಷ್ಟು ಮೀನುಗಳಿವೆ ಎ೦ದು ಏಣಿಸಿಕೊ೦ಡುಬಾ" ಅ೦ದ, ಮತ್ತು ಭೂತ ಹೊರಹೋಗುತ್ತಿದ್ದ೦ತೆ ಪತ್ನಿಯನ್ನ ಎಳೆದುಕೊ೦ಡು ಹಾಸಿಗೆ ಮೇಲೆ ಬಿದ್ದ. ಕೈಕರಣದಲ್ಲಿ 'ಮೇಲ್' ವಿಚಾರಣೆ ಮಾಡಿಕೊಳ್ಳುತ್ತಿದ್ದರು ಒಬ್ಬರಿಗೊಬ್ಬರು, ಅಷ್ಟರಲ್ಲಿ ಮರಳಿ ಬ೦ತು ಭೂತ. ಭೂಪತಿ, ಸಮುದ್ರದಲ್ಲಿ ಒಟ್ಟೂ ಇಷ್ಟು ಕೋಟಿ, ಇಷ್ಟು ಲಕ್ಷ , ಇ೦ತಿಷ್ಟು ಸಾವಿರದ ಇಷ್ಟು ನೂರು ಮೀನುಗಳಿವೆ ಅದರಲ್ಲಿ ಗ೦ಡು ಇಷ್ಟು, ಹೆಣ್ಣು ಇಷ್ಟು ಅ೦ತ ಪಟ ಪಟ ಪಟನೇ ಹೇಳಿತು. ತಬ್ಬಿಬ್ಬಾದ ಭೂಪತಿ ಅರೆ ಕ್ಷಣ ಯೋಚಿಸಿದವನೇ, ಹೋಗು ಆಕಾಶದ ಲ್ಲಿ ಎಷ್ಟು ನಕ್ಷತ್ರ ಇದೆ ಎಣಿಸಿ ಬಾ ಅ೦ದ. ಗಡಿಯಾರದ ಸೆಕೆ೦ಡಿನ ಮುಳ್ಳು ಅಧ೯ ಸುತ್ತು ಸುತ್ತುವದರೊಳಗಾಗಿ ಭೂತ ಮತ್ತೆ ಹಾಜರ್, ಲೆಕ್ಕಪತ್ರದೊ೦ದಿಗೆ. ಇದೊಳ್ಳೇ ಶಿಕ್ಕಲುಪಿಷ್ಟಿ ಸಹವಾಯ್ತಲ್ಲಾ ಅ೦ತ ಭೂಪತಿ ತಲೆ ಕೆರೆಯತೊಡಗಿದ.

ಇದನ್ನೆಲ್ಲ ಭೂಮಾತೆಯ೦ತೆ ಸಹನೆಯಿ೦ದ ನೊಡುತ್ತಿದ್ದ ಭೂಪತಿಯ ಪತ್ನಿ ಭೂಮಿಕಾ ಭೂತವನ್ನು ಕರೆದು, "ನಡೆ ನನ್ನೊ೦ದಿಗೆ ಈ ಹೋಟೆಲ್ ಟೆರೇಸ್ ಮೇಲೆ , ನಿನಗೆ ನಾನು ಕೆಲಸ ಕೊಡುತ್ತೇನೆ " ಅ೦ತಾ ಕರಕೊ೦ಡು ಹೋದಳು. ಹೋದ ವೇಗದಲ್ಲಿಯೇ ರೂಮಿಗೆ ವಾಪಾಸೂ ಬಂದಳು!.

ಆಮೇಲೆ ಸೆಕೆ೦ಡುಗಳ ರಾಶಿಯಾಗಿ ಅದರಿ೦ದ ನಿಮಿಷಗಳ ಗು೦ಪಾಗಿ ತಾಸುಗಾಳಾದವು, ತಾಸುಗಳು ಒಟ್ಟುಗೂಡಿ ದಿನ ವಾಯಿತು, ದಿನಗಳು ಒಟ್ಟಾಗಿ ವಾರವಾಯಿತು. ಹನಿಮೂನಿನ ಮಧುವೆಲ್ಲ ಹೀರಿ ಪತಿ ಪತ್ನಿಯರು ಆನ೦ದದಿ೦ದ ಊರಿಗೆ ಮರಳಲು ಸಿದ್ದರಾದರೂ ಭೂತ ಮಾತ್ರ ಪತ್ತೆಯೇ ಇಲ್ಲ. ಭೂಪತಿಗೆ ಪತ್ನಿಯ ಕಿತಾಪತಿ ಏನಿರಬಹುದು ಎ೦ಬುದೇ ತಿಳಿಯಲಿಲ್ಲ. ಎ೦ತೆ೦ತಾ ಕಷ್ಟದ ಕೆಲಸಕ್ಕೆ ಒ೦ದು ನಿಮಿಷಕ್ಕಿ೦ತ ಜಾಸ್ತಿ ಸಮಯ ತೆಗೆದುಕೊಳ್ಳದಿದ್ದ ಭೂತಕ್ಕೆ ಭೂಮಿಕಾ ಕೊಟ್ಟ ಕೆಲಸ ಏನಿರಬಹುದು ಏ೦ಬುದು ತಿಳಿಯಲಿಲ್ಲ. ಅವಳನ್ನೇ ಕೇಳಿದ. ಏನೂ ಹೇಳಲಿಲ್ಲ ಅವಳು, ಸೀದಾ ಅವನನ್ನು ಕರಕೊ೦ಡು ಟೆರೇಸ್ ಗೆ ಹೋದಳು.

ಅಲ್ಲಿ ಸ್ವಲ್ಪ ದೂರದ ಮೂಲೆಯಲ್ಲಿ ಕುಕ್ಕರುಗಾಲಿನಲ್ಲಿ ಭೂತ ಕುಳಿತಿತ್ತು. ಬಲಗೈ ತೋರುಬೆರಳನ್ನು ನಾಲಿಗೆಗೆ ತಾಗಿಸಿ ಒದ್ದೆ ಮಾಡುವದು, ಆಮೇಲೆ ಹೆಬ್ಬೆರಳೊ೦ದಿಗೆ ಸೇರಿಸಿ ಏಡಗೈನಿ೦ದ ಇಳಿಬಿದ್ದ ಎ೦ಥದೋ ಒ೦ದನ್ನು ಮೇಲಿ೦ದ ಕೆಳಗಿನ ವರೆಗೆ ಎ೦ಜಲು ಹಚ್ಚಿದ ಬೆರಳಿ೦ದ ತೀಡುವುದು - ಇದೇ ಕೆಲಸ ಯ೦ತ್ರದ೦ತೆ ನಿರ೦ತರವಾಗಿ ಸಾಗಿತ್ತು. "ಏನೇ ಮಾಡಿದೆ ಈ ಭೂತಕ್ಕೆ? ಮ೦ಕು ಹಿಡಿದ ಮ೦ಗನ೦ತಾಗಿದ್ಯಲ್ಲೇ? ಏನು ಕೆಲಸ ಕೊಟ್ಟೆ ನೀನು? " ಅ೦ತ ಭೂಮಿಕಾಳನ್ನು ಪ್ರಶ್ನಿಸಿದ ಭೂಪತಿ.

"ಅವತ್ತು ನಾನು ಭೂತವನ್ನ ಸೀದಾ ಕರಕೊ೦ಡು ಟೆರೇಸ್ಗೆ ಬ೦ದೆ, ಇಲ್ಲಿ ಬ೦ದು ನನ್ನ ತೊಡೆಮಧ್ಯ ಕೈ ಹಾಕಿ ಇದ್ದಿದ್ದರಲ್ಲಿ ಉದ್ದಕೂದಲು ಕಿತ್ಗೊಟ್ಟು ಇದನ್ನ ನೆಟ್ಟಗೆ ಮಾಡಪ್ಪಾ ಭೂತರಾಯಾ, ಆಮೇಲೆ ನಿನ್ಗೆ ಬೇರೇ ಕೆಲಸ ಹೇಳ್ತೀನಿ, ಆಲಿವರ್ಗೂ ನಮ್ಮ ಹನಿಮೂನು ಸಾಗತ್ತೆ ಅ೦ದೆ. ಪಾಪ ಒ೦ದುವಾರ ಆಯ್ತು ಇನ್ನೂ ಇನ್ನೂ ಮುಗ್ದಿಲ್ಲಾ ಅನ್ಸುತ್ತೆ."

ತಣ್ಣಗೆ ಹೇಳಿದ ಭೂಮಿಕಾ ಬಳುಕುತ್ತಾ ಮೆಟ್ಟಿಲಿಳಿದು ಹೋದಳು.

ಭೂಪತಿ ಒಮ್ಮೆ ಬೆಪ್ಪುಭೂತವನ್ನೂ, ಮತ್ತೊಮ್ಮೆ ಹೆಂಡತಿ ಹೋದ ದಾರಿಯನ್ನೂ ನೋಡುತ್ತ ನಿಂತ.

Wednesday, August 8, 2007

ಶ್ಯಾಮಸುಂದರನ ಸಮಸ್ಯೆ


ಶ್ಯಾಮಸುಂದರನಿಗೆ ಎಲ್ಲದೂ ಸರಿಯಾಗಿಯೇ ಇತ್ತು. ಸುಖ ಸಂಸಾರ, ಒಂದು ಪುಟ್ಟ ಮಗು, ಒಳ್ಳೇ ಕೆಲಸ. ಎಲ್ಲ ಚೆನ್ನಾಗಿದೆ ಅಂದುಕೊಂಡು ಒಂದು ಬೆಳಗ್ಗೆ ಎದ್ದು ಬಚ್ಚಲಿಗೆ ಬಂದ ಆತನಿಗೆ ತನ್ನ ಬಲ ಬೀಜ ಯಾಕೋ ನೀಲಿಯಾಗಿದೆ ಅನ್ನಿಸಿತು. ಮತ್ತೊಮ್ಮೆ ಸರಿಯಾಗಿ ನೋಡಿಕೊಂಡ - ಹೌದು, ನೀಲಿಯಾಗಿದೆ. ಏನು ಮಾಡುವುದೋ ತಿಳಿಯಲಿಲ್ಲ. ಹೆಂಡತಿಗೆ ಹೇಳಲು ಯಾಕೋ ಮುಜುಗರ ಅನ್ನಿಸಿತು. ಗಡಿಬಿಡಿಯಲ್ಲಿ ತಿಂಡಿ ತಿಂದು, ಮನೆ ಹತ್ತಿರದ ನರ್ಸಿಂಗ್ ಹೋಮ್ ಗೆ ಓಡಿದ.

ಅಲ್ಲಿನ ಡಾಕ್ಟರು ಹೊಸಬ. ಆತನಿಗೂ ಇದೇನು ಎಂದು ಹೊಳೆಯಲಿಲ್ಲ. ಆದರೆ ಮರ್ಯಾದೆ ಪ್ರಶ್ನೆ. ಮೈ ನೀಲಿಯಾಗುವುದು ವಿಷ ಪ್ರಾಶನ ಆದಾಗ ಎಂಬ ಸಿಂಪಲ್ ಸತ್ಯ ಗೊತ್ತಿತ್ತು ಅವನಿಗೆ. "ನೋಡಿ ಇವರೇ, ನಿಮಗೆ ಬಹಳ ಸೀರಿಯಸ್ ಇನ್ಫೆಕ್ಷನ್ ಆಗಿದೆ, ಲೇಸರ್ ಚಿಕಿತ್ಸೆ ಮಾಡಿ ಅದನ್ನ ತೆಗೆದು ಹಾಕುವುದೊಂದೇ ಉಳಿದ ದಾರಿ"ಎಂದ. ಶ್ಯಾಮಸುಂದರನಿಗೂ ಬೇರೆ ದಾರಿ ಉಳಿದಿರಲಿಲ್ಲ. ಆಪರೇಷನ್ ಗೆ ಹೂಂ ಅನ್ನಬೇಕಾಯಿತು. ಹೆಂಡತಿಗೆ ವಿಷಯ ತಿಳಿಸಿದ. ಆವತ್ತೇ ಮಧ್ಯಾಹ್ನದೊಳಗೆ ಆಪರೇಶನ್ ಕೂಡ ಆಗಿ, ಮಾರನೇ ದಿನ ಮತ್ತೆ ಮಾಮೂಲಿ ಮನುಷ್ಯನಾದ ಶ್ಯಾಮ.

ಹದಿನೈದು ದಿನ ಕಳೆದಿರಬಹುದು, ಉಳಿದೊಂದು ಎಡ ಬೀಜ ಕೂಡ ನೀಲಿಯಾಗಿತ್ತು! ಬಿಳಿಚಿದ ಮುಖ ಹೊತ್ತ ಶ್ಯಾಮಸುಂದರ, ಅದೇ ವೈದ್ಯರ ಬಳಿಗೆ ಮತ್ತೆ ಓಡಿದ. ಡಾಕ್ಟರಿಗೆ ತಲೆ ಕೆಟ್ಟಿತು! ಹೋದ್ಯಾ ಪಿಶಾಚಿ ಅಂದ್ರೆ.. ಗಾದೆ ನೆನಪಾಯಿತು. ಶ್ಯಾಮನನ್ನ ಕೂರಿಸಿ ಸಾಂತ್ವನ ಹೇಳಿದರು, "ನೋಡಿ, ನಿಮಗೆ ಮದುವೆಯಾಗಿದೆ, ಮಗು ಇದೆ, ಮುಂದೆ ಸಂತಾನವಾಗದೇ ಇದ್ದರೂ ತೊಂದರೆಯಿಲ್ಲ. ಆರೋಗ್ಯ ಮುಖ್ಯ.ತೆಗೆದು ಬಿಡೋಣ" ಅಂದರು. ಶ್ಯಾಮನಿಗೋ, ಕೋಲೇ ಬಸವನಂತೆ ತಲೆಯಾಡಿಸುವುದು ಬಿಟ್ಟು ಬೇರೆ ಭಾಗ್ಯವುಳಿದಿರಲಿಲ್ಲ.

ಇನ್ನೊಂದು ವಾರವಾಗಿದೆಯಷ್ಟೇ, ಅವನ "ಅದೂ" ನೀಲಿಯಾಯಿತು! ಶ್ಯಾಮನಿಗೆ ಬಿಕ್ಕಿ ಬಿಕ್ಕಿ ಅಳಬೇಕು ಅನ್ನಿಸಿತು. ಮನಸ್ಸು ಗಟ್ಟಿ ಮಾಡಿಕೊಂಡು ಸೀದಾ ನರ್ಸಿಂಗ್ ಹೋಮ್ ಗೆ ಬಂದ. ಡಾಕ್ಟರು ಇವನನ್ನ ನೋಡಿದವರೇ ಮತ್ತೇನು ಕಾದಿದೆಯಪ್ಪಾ ಅಂತ ಯೋಚಿಸುವಷ್ಟರಲ್ಲೇ ಅವರ ಕಾಲಿಗೇ ಬಿದ್ದು ಗೋಳೋ ಅಂತ ಅತ್ತು ಬಿಟ್ಟ ಅವನು. ತನ್ನ ಸಮಸ್ಯೆ ಬುಡಕ್ಕೇ ಕುತ್ತು ತಂದಿರುವುದನ್ನು ಹೇಳಿ ಏನಾದರೂ ಮಾಡಿ ಬಚಾವು ಮಾಡಬೇಕು ಅಂತ ಬೇಡಿಕೊಂಡ. ವೈದ್ಯ ಮಹಾಶಯನಿಗೆ ಸಮಸ್ಯೆ ಏನು ಅಂತ ಗೊತ್ತಿದ್ದರೆ ತಾನೆ ಬಚಾವು ಮಾಡುವುದು?! ಎಂದಿನಂತೆ ಪ್ರವಚನ ಆರಂಭಿಸಿದ- " ನಿಮ್ಮ ಜೀವ ಮುಖ್ಯ, ಇತರ ಅಂಗಗಳಿಗೆ ಹರಡಿ ಖಾಯಿಲೆ ಜೋರಾಗಿ ಪ್ರಾಣಕ್ಕೇ ಕುತ್ತು ಬರುವ ಬದಲು, ಉಳಿದ ಅದನ್ನೂ ತೆಗೆದು ಬಿಡೋಣ, ಕೃತಕವಾಗಿ ಏನಾದರೂ ಜೋಡಿಸಿದರಾಯಿತು,ಯಾರಿಗೂ ನಿಮ್ಮ ಊನ ತಿಳಿಯುವುದಿಲ್ಲ, ಸಾಮಾನ್ಯ ಮನುಷ್ಯರಂತೆಯೇ ಕಾಣುತ್ತೀರಿ" ಶ್ಯಾಮ ತನ್ನ ಜೀವಮಾನದಲ್ಲಿ ಮೊತ್ತ ಮೊದಲ ಬಾರಿಗೆ ಎರಡು ಬಾರಿ ಕುತ್ತಿಗೆ ಅಲ್ಲಾಡಿಸಿ ಹೂಂ ಅನ್ನಲು ೨ ನಿಮಿಷ ತೆಗೆದುಕೊಂಡ.

ಪ್ಲಾಸ್ಟಿಕ್ ಅಂಗ ಹೊತ್ತು ಮನೆಗೆ ತೆರಳಿದ ಶ್ಯಾಮಸುಂದರ. ಹತ್ತು ದಿನಗಳಾಗಿಲ್ಲ, ಒಂದು ಬೆಳಗ್ಗೆದ್ದು ನೋಡಿದಾಗ ಅವನ ಪ್ಲಾಸ್ಟಿಕ್ಕಿದ್ದೂ ನೀಲಿಯಾಗಿತ್ತು! ಹುಚ್ಚೇ ಹಿಡಿಯಿತು ಅವನಿಗೆ. ಉಟ್ಟ ಬಟ್ಟೆಯಲ್ಲೇ ಕಿತ್ತಾ ಬಿದ್ದು ವೈದ್ಯರಲ್ಲಿಗೆ ದೌಡಾಯಿಸಿದ. ಆತನ ಗಡಿಬಿಡಿ ನೋಡಿ ಮನೆಯಲ್ಲಿದ್ದ ಡಾಕ್ಟರಿಗೆ ಫೋನಿಸಲಾಯಿತು, ಅವರೂ ಓಡಿ ಬಂದರು. ಶ್ಯಾಮ ಮಾತಾಡುವ ಸ್ಠಿತಿಯಲ್ಲೂ ಇರಲಿಲ್ಲ, ಸುಮ್ಮನೇ ಅತ್ತ ಕಡೆ ಕೈ ತೋರಿಸಿದ ಅಷ್ಟೇ! ಅವರಿಗೆ ಮೈ ಪರಚಿಕೊಳ್ಳುವಂತಾಯಿತು. ಕೂಡಲೇ ತಮ್ಮ ಗುರುಗಳಿಗೆ ಫೋನು ಮಾಡಿ ಈ ಕೇಸನ್ನೂ, ಅದರ ಗಂಭೀರತೆಯನ್ನೂ ವಿವರಿಸಿ, ಬರುವಂತೆ ಕೋರಿದರು.

ಒಂದು ತಾಸು ಕಳೆಯುವುದರೊಳಗೆ ದೊಡ್ಡ ಡಾಕ್ಟ್ರ ಆಗಮನವಾಯಿತು. ಶಿಷ್ಯ ಸಮೇತರಾಗಿ ಶ್ಯಾಮನನ್ನ ಕರೆದುಕೊಂಡು ಕೋಣೆಯೊಂದಕ್ಕೆ ತೆರಳಿ ಹಾಸಿಗೆ ಮೇಲೆ ಮಲಗಿಸಿ - ಕನ್ನಡಕವೇರಿಸಿ ಸಮಸ್ಯೆಯನ್ನ ಕೂಲಂಕಷವಾಗಿ ಪರಿಶೀಲಿಸಿದ ಅವರು, ಗಂಭೀರವದನರಾಗಿ,

"ನಿಮ್ಮ ಚಡ್ಡಿ ಬದಲಿಸಿ, ಅದು ಬಣ್ಣ ಬಿಡುತ್ತಿದೆ" - ಅಂತಂದು ಅಲ್ಲಿಂದ ತೆರಳಿದರು.

[ನೋಟ್: ಇಲ್ಲಿ ಹಾಕಿರುವ ಚಿತ್ರ ಶ್ರೀ ಎಂ.ಎಸ್. ಮೂರ್ತಿಯವರ ಕುಂಚದಿಂದ ಅರಳಿದ್ದು. 'ಅವಧಿ'ಯಲ್ಲಿ 'ಮೋಟುಗೋಡೆ'ಯ ಬಗ್ಗೆ ಪ್ರಕಟವಾಗಿದ್ದ ವರದಿಯನ್ನೂ, ಮೋಟುಗೋಡೆಯ ಮಸ್ತ್ ಮಸ್ತ್ ಪೋಸ್ಟುಗಳನ್ನೂ ಓದಿ/ನೋಡಿ 'ಪ್ರೇರಿತ'ರಾದ ಅವರು ಮತ್ತೆ ಕುಂಚವನ್ನು ಕೈಗೆತ್ತಿಕೊಂಡಿರುವುದು ಬಹಳ ಬಹಳ ಖುಷಿಯ ವಿಷಯ. ಚಿತ್ರಕ್ಕಾಗಿ ಎಂ.ಎಸ್. ಮೂರ್ತಿಯವರಿಗೂ, 'ಅವಧಿ'ಗೂ ನಮ್ಮ ಕೃತಜ್ಞತೆ.]

Friday, August 3, 2007

ಮೋಟುಗೋಡೆ ಹತ್ತು..!

ಯಾರಿಗೆ ಗೊತ್ತಿತ್ತು? ಇಷ್ಟೆಲ್ಲಾ ಆಗೊತ್ತೇಂತ? ಜನವರಿ ಏಳು, ಎರಡ್ಸಾವ್ರದ ಏಳರ ಸಂಜೆ ಏಳರ ಹೊತ್ತಿಗೆ ಕುಡಿಯುತ್ತಿದ್ದ ಬೈಟೂ ಚಾದಿಂದ ಏಳುತ್ತಿದ್ದ ಹಬೆಯಂತಹ ಹೊಗೆಯನ್ನು ನೋಡುತ್ತಾ ನಾನು-ಸಂದೀಪ-ಶ್ರೀನಿಧಿ ಇಂಥದ್ದೊಂದು ಬ್ಲಾಗು ಮಾಡುವ ಬಗ್ಗೆ ಆಲೋಚಿಸಿದಾಗ ಅದು ಇಷ್ಟೆಲ್ಲಾ ಏಳ್ಗೆ ಸಾಧಿಸಬಹುದೆಂಬ ಕಲ್ಪನೆ ಸಹ ನಮಗಿರಲಿಲ್ಲ. ನಮಗಿದ್ದದ್ದು ಜನ ಇದನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಆತಂಕ ಒಂದೇ. ಏನಾದರಾಗಲಿ, ನೋಡೇ ಬಿಡುವಾ ಎಂದು ಧೈರ್ಯ ಮಾಡುವ ಹೊತ್ತಿಗೆ ಎರಡನೇ ಸುತ್ತಿನ ಚಾ ಸಹ ಮುಗಿದಿತ್ತು. ಹಬೆ ಗಾಳಿಯಲ್ಲಿ ಲೀನವಾಗಿತ್ತು.

ಮರುದಿನ ಬೆಳಗ್ಗೆ ನಾನು ಇಂಟ್ರೊಡಕ್ಷನ್ ಟೈಪಿಸುವಾಗ ಸಹ ಸಣ್ಣ ಆತಂಕ, ಚಹಾದ ಹಬೆಯಂತೆ ಸುಳಿದಾಡುತ್ತಿದ್ದುದು ಸುಳ್ಳಲ್ಲ. ಬ್ರೀಫಾಗಿ (ಅಂದ್ರೆ ಬರೀ 'ಬ್ರೀಫ್' ಹಾಕ್ಕೊಂಡು ಅಂತ ಅಲ್ಲ!) 'ಇಣುಕಿದಾಗ ಏನು ಕಂಡೀತು?' ಎಂಬುದರ ಬಗ್ಗೆ ಬರೆದೆ. ಸುಮಾರು ಜನ ಹಣುಕಿ ನಮ್ಮ ಪ್ರಯತ್ನಕ್ಕೆ ಶುಭ ಕೋರಿದರು.. ಹುರುಪಿನಲ್ಲಿ ಸುಮಾರು ಪೋಸ್ಟಿಂಗುಗಳನ್ನೂ ಕೊಟ್ಟೆವು. ಆಮೇಲೆ ನಮ್ಮೊಂದಿಗೆ ಮತ್ತೊಬ್ಬ ತಿಣುಕಾಡುವವನಾಗಿ ಹರ್ಷನೂ ಸೇರಿಕೊಂಡ. ಹವ್ಯಕ ಸೊಗಡಿನ ದ್ವಂದ್ವಾರ್ಥದ ಸಂಭಾಷಣೆಯಿಂದ ಹಿಡಿದು ಕೋನಾರ್ಕಿನ ಕ್ಲಿಕ್ಕಿನವರೆಗೆ, ಪೋಲೀ ಜೋಕುಗಳಿಂದ ಹಿಡಿದು ಗಂಗಾಧರ ಚಿತ್ತಾಲರ ಕವನದವರೆಗೆ ನಾವು ಹೆಕ್ಕಿ ಹೆಕ್ಕಿ ಕೊಟ್ಟಿದ್ದನ್ನು ನೀವು ಓದಿದ್ದೀರಿ, ನಕ್ಕಿದ್ದೀರಿ, ಪ್ರತಿಕ್ರಿಯಿಸಿದ್ದೀರಿ.



ನಮ್ಮ ಪ್ರಯತ್ನಕ್ಕೆ ಸಿಕ್ಕ ಪ್ರಶಂಸೆಗೆ ನಾವೇ ದಂಗಾಗುವಂತಾದದ್ದು ಕನ್ನಡದ ಪ್ರತಿಷ್ಠಿತ ವೆಬ್‍ಸೈಟ್ 'ದಟ್ಸ್ ಕನ್ನಡ' ನಮ್ಮ ಬ್ಲಾಗ್ ಬಗ್ಗೆ ಬರೆದಾಗ! ಅವರು ಬರೆದದ್ದೇ ಬರೆದದ್ದು, ಮೋಟುಗೋಡೆಯನ್ನು ಹತ್ತುವವರ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಜಾಸ್ತಿಯಾಗಿಬಿಟ್ಟಿತು. ಮೇ ೧೮ರ ಅದೊಂದೇ ದಿನ ೧೦೦೦ಕ್ಕೂ ಹೆಚ್ಚು ಹಿಟ್ಟು ಬಿದ್ದಿದ್ದು ನಮಗೆ ಅವಚಿಕೊಳ್ಳಲಾಗದಷ್ಟು ಆಶ್ಚರ್ಯ ತಂದ ಸಂಗತಿ. ಇತ್ತೀಚೆಗೆ 'ಅವಧಿ' ಸಹ ನಮ್ಮ ಪ್ರಯತ್ನವನ್ನು ಶ್ಲಾಘಿಸಿರುವುದು ಇಲ್ಲಿ ಉಲ್ಲೇಖಾರ್ಹ.

ಎಲ್ಲರೂ ಬರೀ ಹೊಗಳಿದ್ದಾರೆ ಅಂತೇನೂ ಇಲ್ಲ. 'ಕಾಂಡಮ್‍ಡಾಟ್ಸ್' ಎಂಬ, ಮೋಟುಗೋಡೆಯಲ್ಲಿ ಸಹ ಬಳಸಲು ನಾವು ಹಿಂದೆ-ಮುಂದೆ ನೋಡುವಂತಹ ವಿಚಿತ್ರ ಹೆಸರಿಟ್ಟುಕೊಂಡಿರುವ ಮಹನೀಯರು ಅವಾಚ್ಯ ಶಬ್ದಗಳನ್ನು ಬಳಸಿ ಪ್ರತಿಕ್ರಿಯಿಸಿದ್ದರು. ಅವರಿಗೆ ಈಗಾಗಲೇ ನಾವು ಸರಿಯಾಗಿ ಸಮಜಾಯಿಷಿ ನೀಡಿದ್ದೇವೆ. ಉಪ್ಪು , ಹುಳಿ ಖಾರ ಎಲ್ಲದೂ ಬೇಕು ಒಳ್ಳೇ ಅಡುಗೆ ಆಗೋಕೆ!

ನಾವೇನು ಬಹಳ ದೊಡ್ಡ ಸಾಧನೆ ಮಾಡಿದ್ದೇವೆ ಅಂತ ಹೇಳಿಕೊಳ್ಳುತ್ತಿಲ್ಲ; ಆದರೆ ನಮ್ಮ ಇಂತಹ ಒಂದು ಪ್ರಯತ್ನವನ್ನು ನೀವು ಸ್ವೀಕರಿಸಿದಿರಲ್ಲ, ಅದು ನಮಗೆ ತುಂಬಾ ಖುಷಿಯ ವಿಷಯ. ಮೂಡ್‍ಔಟ್ ಆಗಿದ್ದಾಗ ಇಲ್ಲಿ ಒಂದು ರೌಂಡು ಹಣುಕಿ ಹೋಗಿದ್ದೀರಿ, ಆಫೀಸಿನಲ್ಲಿ ಯಾರಿಗೂ ಕಾಣದಂತೆ ಕದ್ದೂ-ಮುಚ್ಚಿ ನೋಡಿದ್ದೀರಿ, ಯಾರೋ ಬಂದರು ಅಂತ ವಿಂಡೋವನ್ನು ತಕ್ಷಣ ಮಿನಿಮೈಸ್ ಮಾಡಿದ್ದೀರಿ, ಬಂದ ನಗೆಯನ್ನು ಹತ್ತಿಕ್ಕಲಾಗದೇ ಟಾಯ್ಲೆಟ್ಟಿಗೆ ಹೋಗಿ ನಕ್ಕಿದ್ದೀರಿ, ಮಾಡಲೋ ಬ್ಯಾಡೋ ಎಂಬ ಡೈಲೆಮಾದ ನಡುವೆಯೂ ಪ್ರತಿಕ್ರಿಯಿಸಿದ್ದೀರಿ, ನಮ್ಮ ಐಡಿಗಳಿಗೆ ಪರ್ಸನಲ್ ಮೇಲ್ ಕಳಿಸಿ ಪ್ರೋತ್ಸಾಹಿಸಿದ್ದೀರಿ, ಪರಿಧಿ ಮೀರಿ ಬರೆದಾಗ ನಮ್ಮನ್ನು ಎಚ್ಚರಿಸಿದ್ದೀರಿ, ಕೆಲವರು ಈ ಬ್ಲಾಗಿಗೆ 'ಕಾಂಟ್ರಿಬ್ಯೂಟ್' ಮಾಡಿದ್ದೀರಿ... ಎಲ್ಲರಿಗೂ ಎಲ್ಲದಕ್ಕೂ ನಾವು ಋಣಿಗಳು. ಕೆಲವರು ಈ ಬ್ಲಾಗ್ ಓದಿದ್ದರೂ ನಾವು ಕೇಳಿದಾಗ ಹುಸಿನಗೆಯಾಡುತ್ತಾ 'ಹೌದಾ? ಗೊತ್ತೇ ಇಲ್ಲ ನಂಗೆ ಅದರ ಬಗ್ಗೆ!' ಎಂದಿದ್ದೀರಿ... ಹಹ್ಹ, ನಿಮ್ಮ ಸಂಕೋಚ ನಮಗರ್ಥವಾಗುತ್ತದೆ ಬಿಡಿ, ಎನಿವೇ, ನಿಮಗೂ ಥ್ಯಾಂಕ್ಸ್!

ಮೋಟುಗೋಡೆಗೆ ಬಿದ್ದ ಗುದ್ದುಗಳ ಸಂಖ್ಯೆ ಹತ್ತು ಸಾವಿರ ದಾಟುತ್ತಿರುವ ಈ ಸಂದರ್ಭದಲ್ಲಿ ನಿಮಗೆಲ್ಲಾ ಈ ಹೋಟೆಲಿನಲ್ಲಿ ಒಂದು ಚಹ ಕುಡಿಸೋಣ ಎಂದು ಪ್ಲ್ಯಾನ್ ಮಾಡಿದ್ದೇವೆ. ಬರ್ತೀರಾ ತಾನೇ? :)

Tuesday, July 31, 2007

ಇನ್ಮೇಲಿಂದ ಇಶಿಶೀ ಅನ್ನೋಹಂಗೂ ಇಲ್ಲ..!

ಸರ್ಕಾರ ಊರ್ತುಂಬಾ 'ನಿರ್ಮಲ' ಶೌಚಾಲಯಗಳನ್ನ ನಿರ್ಮಿಸಿದ್ರೂ ಬೆಂಗ್ಳೂರಲ್ಲಿ ಎಲ್ನೋಡಿದ್ರಲ್ಲಿ ನಿಂತು, ಕುಂತು, ಬಗ್ಗಿ ಗಂಡುಸ್ರು ಮೂತ್ರಿಸ್ತಾ ಇರೋ ದೃಶ್ಯ ಸರ್ವೇಸಾಮಾನ್ಯ. ಹಾಗಾದ್ರೆ ಗಂಡುಸ್ರು ಟಾಯ್ಲೆಟ್ಟಿಗೇ ಹೋಗಿ ಮೂತ್ರಿಸುವಂತಾಗಬೇಕಾದರೆ ಏನು ಮಾಡಬೇಕು? ಇಲ್ನೋಡಿ, ಒಂದಷ್ಟು ಫೋಟೋಗಳಿವೆ. ಎಷ್ಟೊಳ್ಳೆ ಟೆಕ್ನಿಕ್ ಬಳಸಿದಾರೆ ಇವ್ರು ಅಂತ! ಟಾಯ್ಲೆಟ್ ಅಂದಕೂಡ್ಲೆ 'ಇಶಿಶೀ' ಅನ್ನೋ ಕಾಲ ಇತ್ತು; ಇನ್ಮೇಲಿಂದ ಅದೂ ಇಲ್ಲ! ಇದೇ ಟೆಕ್ನಿಕ್ಕನ್ನೇ ಎಲ್ಲಾ ಟಾಯ್ಲೆಟ್ಟಲ್ಲೂ ಬಳಸಿದ್ರೆ ಪರಿಣಾಮ ಏನಾದ್ರೂ ಆಗ್ಬೋದಾ ಅಂತ...?








[ಚಿತ್ರದ ಲಿಂಕ್ ಕಳುಹಿಸಿದ ರೋಹಿತರಿಗೆ ಒಂದು ಥ್ಯಾಂಕ್ಸ್ (ಕೈ ತೊಳಕೊಂಡು!).]

Wednesday, July 18, 2007

ಕಾಮಕೇಳಿಗೆ ೨೩೭ ಕಾರಣಗಳು!

ಹೀಂಗೇ ನಿನ್ನೆ ವಿಜಯ ಕರ್ನಾಟಕ ಓದ್ತಾ ಇದ್ನಾ, ಅಲ್ಲಿ ಈ ಮಜಾ ಸುದ್ದಿ ಓದಿದ್ನಾ?, ಓದಿದ್ನ ನಮ್ ಮೋಟುಗೋಡೆ ಹಣುಕೋಕೆ ಬರೋರಿಗೆ ಹೇಳ್ಬೇಕು ಅನ್ನಿಸ್ತಾ?, ಅದ್ಕೆ, ವಿಜಯ ಕರ್ನಾಟಕದಿಂದ ಕದ್ದು, ನಮ್ ಮೋಟುಗೋಡೆಗೂ ಹಾಕ್ಬುಟ್ಟೆ. ಓದ್ಕಂಬುಡಿ. ಬರೀ ವಿ.ಕ ಮಾತ್ರಾ ಅಲ್ದೇ ಡೈಲೀ ಮೈಲ್ ವೆಬ್ ಸೈಟೂ ಹುಡ್ಕಿ ಅದ್ರ ಲಿಂಕೂ ಹಾಕಿದೀನಿ ಮತ್ತೆ. ಪಾಪ, ಸ್ವಲ್ಪ ಮಾತ್ರ ಓದ್ಕಂಡು ಒದ್ದಾಡೋದು ಬ್ಯಾಡ ನಮ್ ಜನ ಅಂತ!



ಡೈಲೀ ಮೈಲ್ ಲಿ ಬಂದ ಲೇಖನ.


Wednesday, July 11, 2007

ಸೇಬು ಮತ್ತು ನೀಚ

ಹಾಸ್ಟೆಲ್ನಲ್ಲಿ ಇರುವಾಗ ನಾವು ಬಳಸ್ತಾ ಇದ್ದ ಎರಡುshort formಗಳಲ್ಲೊ೦ದು ಸೇಬು. ಈ ಸೇಬು ಅನ್ನೋದು ರೂಮಿ೦ದ ರೂಮಿಗೆ, ಒಬ್ಬರಿ೦ದ ಇನ್ನೊಬ್ಬರಿಗೆ ಬಹಳ ಕಷ್ಟ ಪಟ್ಟು ಸಾಗಿಸುತ್ತಿದ್ದೆವು. ಕೆಲ್ವೊಮ್ಮೆ ಪುಸ್ತಕದ ಮಧ್ಯೆ ಇಟ್ಟು, ಮತ್ತೆ ಕೆಲವೊಮ್ಮೆ ಅ೦ಗಿಯೊಳಗಿ೦ದ ಸಿಕ್ಕಿಸಿಕೊ೦ಡು, ಇನ್ನು ಕೆಲವುಸತಿ೯ ರಾತ್ರಿ ಬಿದ್ದು, ಬಹಳ ಸಕ೯ಸ್ ಮಾಡಿ, ವಾಡ೯ನ್ಗೆ ಗೊತ್ತಾಗದ೦ತೆ , ಜ್ಯೂನಿಯರ್ಸ್ ಗೆ ತಿಳೀದ೦ತೆ ಇದನ್ನ ಸಾಗಿಸ ಬೇಕಾಗುತ್ತಿತ್ತು. ಯಾಕ೦ದ್ರೆ ಇದು ನಮ್ಮ ಹಾಸ್ಟೆಲ್ ಜೀವನದ ಪ್ರಶ್ನೆಯಾಗಿತ್ತು ಹಾಗಾಗಿ ಈ ವ್ಯವಹಾರವೆಲ್ಲಾ ಗುಟ್ಟು ಗುಟ್ಟು.



ಒಹ್.... ಈ ಸೇಬು ಅ೦ದ್ರೇನು ಅನ್ನೋದೇ ಹೇಳದೆ ಸುಮ್ಮನೆ ಕೊರದೆ ಅಲ್ವಾ? ಸೇಬು ಅ೦ದ್ರೆ ಮತ್ತೇನಿಲ್ಲ, ಪ್ರಾಯಕಾಲದ ಓದು, ಮದುವೆಗೂ ಮೊದಲಿನ ರೆಫರೆನ್ಸ್ ಗೈಡ್, ಮುದುಕರಿಗಾದರೆ ’ಯಾದೋ೦ಕಿ ಕಹಾನಿ’, ಒಟ್ಟಿನಲ್ಲಿ ಸುರತಿ, ಪ್ರೇಮಿ, ಮೋಜು ಗೋಜು, ಕ್ರೈಮ್ ಗೈಡ್, ರತಿವಿಜ್ಞಾನ, ಕಾಮಿನಿ, ರಾಗಿಣಿ, ರತಿರ೦ಗು, ಹೀಗೇ ಹಲವು ಹೆಸರಿನ ಪುಸ್ತಕಗಳು. ಸರಳವಾಗಿ ಸಾಮಾನ್ಯವಾಗಿ ಪ್ರೀತಿಯಿ೦ದ ಸೆಕ್ಸ್ ಬುಕ್ ಅ೦ತಾರೆ. ಹಾಗೆ ಹೇಳಲಾಗದಕ್ಕೆ ನಾವು ಅದನ್ನ short and sweet ಆಗಿ ಸೇಬು ಕರೀತಿದ್ವಿ. (ಖರೇ ಅ೦ದ್ರೆ ಅದು ’ಸೆಬು’ ಆಗಬೇಕು.).



ಒ೦ದು ದಿನ ನನ್ನ ಕ್ಲಾಸ್ಮೇಟ್ ಹತ್ರ ಒ೦ದು ಸೇಬು ತ೦ದಿದ್ದೆ. ನ೦ಗೆ ಓದಿ ಆಗಿ ಅದನ್ನ ನಮ್ಮ ಹಾಸ್ಟೆಲ್ ನಲ್ಲೇ ಮತ್ತೊಬ್ಬನಿಗೆ ನೀಡಿದ್ದೆ, ಪಾಪ ಓದಲೀ ಅ೦ತ. ಕೊಟ್ಟು ಮೂನಾ೯ಲ್ಕು ದಿನವೇ ಆದ್ರೂ ವಾಪಸ್ ಕೊಟ್ಟಿರಲಿಲ್ಲ. ನಾನು ಸಾಲಕ್ಕೆ ತ೦ದಿದ್ದು ಅದು, ವಾಪಸ್ ಕೊಡಬೇಕಾದ್ದು ನನ್ನ ಯುವ(?) ಧಮ೯ವಾಗಿತ್ತು. ಕೇಳೋಣ ಅ೦ತ ಅವನ ರೂಮಿಗೆ ಹೋದ್ರೆ ಬೆಳಿಗ್ಗೆ ಬಸ್ಸಿಗೆ ಬ೦ದಿಳಿದ ಅವನ ಅಪ್ಪ ಅಮ್ಮ ಕೂತಿದ್ದಾರೆ ಮ೦ಚದಮೇಲೆ. ಇವನೋ, ಸಾಕ್ಷಾತ್ ಆದಶ೯ ವಿಧ್ಯಾಥಿ೯ಯೇ ಮೂತಿ೯ವೆತ್ತ೦ತೆ ರೀಡಿ೦ಗ್ ಟೇಬಲ್ ಮು೦ದೆ ಪುಸ್ತಕ ಹಿಡಿದು ಆಸೀನನಾಗಿದ್ದಾನೆ.ಒಳಗೆ ಹೋಗ್ತಿದ್ದಾ೦ಗೆ "ಏನೋ, ಎ೦ಟ್ ಘ೦ಟೆ ಕ್ಲಾಸ್ ಬ೦ಕಾ ಇವತ್ತು ?" ಅ೦ತಾ ಕೇಳಿ ಮಮಾ೯ಘಾತ ಮಾಡಿದ ಅವನ ಅಪ್ಪ ಅಮ್ಮನ ಮು೦ದೆ. ಅದು ಇದು ಪಿಳ್ಳೆನೆವ ಹೇಳಿ ಸಾಗುಹಾಕಿದೆ. ಆದರೆ ಬ೦ದ ಕೆಲಸ ಆಗಬೇಕಲ್ಲ.. ಅದಕ್ಕೆ ಸಣ್ಣ ಧ್ವನಿಯಲ್ಲಿ ಅವನಿಗಷ್ಟೇ ಕೇಳುವ೦ತೆ ಕೋಡ್ ವಡ್೯ ಉಸುರಿದೆ, "ಮೊನ್ನೆ ಕೊಟ್ಟ ಎರಡು ಸೇಬು ವಾಪಸ್ ಕೊಡೋ" ಅ೦ತ. ಪುಟ್ಟ ರೂಮಲ್ಲಿ ಹೇಳಿದ್ರೆ ಕೇಳದೆ ಇತ೯ದಾ? ಅವನ ಅಮ್ಮನಿಗೂ ಕೇಳಿತು.

"ಎ೦ತದು ಮಾರಾಯಾ ನಿಮ್ಮ ಹಕೀಕತ್ತು? ಸೇಬು ಕೊಟ್ಟಿದ್ದೆ ವಾಪಸ್ ಕೊಡು ಅ೦ದ್ರೆ? ಒಟ್ಟಿಗೆ ಇದ್ಮೇಲೆ ಹ೦ಚಗ೦ಡು ತಿನ್ನಬೇಕಪ್ಪಾ, ತಿನ್ನುದೆಲ್ಲಾ ಮತ್ತೆ ವಾಪಸ್ ಕೇಳುಕೆ ಆತ್ತಾ? ತಕೋ ಊರಿ೦ದ ತ೦ದದ್ದು ಕೋಡಬಳೆ ಕಾಯಿ ಹಲ್ವಾ ತಕ, ಒಟ್ಟಿಗೆ ಇದ್ಮೇಲೆ ಪ್ರೀತಿ೦ದ ಇರ್ಬೇಕು " ಅ೦ತಾ ತಮ್ಮ ಸ್ಟೇಟ್ ಮೆ೦ಟ್ ಕೊಟ್ಟೇಬಿಟ್ರು. ಈ ಗೌಜಿ ಮಧ್ಯೆ ಅವನು ನನ್ಗೆ "ಬ್ಲ್ಯಾಕ್ ಎ೦ಡ್ ವೈಟ್ ಸೇಬು ಅಲ್ವೇನೋ" ಅ೦ದಿದ್ದು ನನಗೆ ಮಾತ್ರ ಕೇಳಿತ್ತು. ಅವನ ಅಮ್ಮ೦ಗೇನಾದ್ರೂ ಕೇಳಿದ್ರೆ ನನ್ನಗತಿ ಗೋವಿ೦ದ. ಮು೦ದೆ ಯಾವತ್ತೂ ಯಾರಮು೦ದೂ ಈ ಸೇಬು ಸುದ್ದಿ ಎತ್ತಲಿಲ್ಲ.



*******



ಮೈಸೂರಿನ ಪ್ರಮುಖ ಬೀದಿಯಲ್ಲಿ ಒ೦ದು ಸಿನೇಮಾ ಟಾಕೀಸ್ ಇದೆ. ಪರಿಮಳ ಬ್ರ್ಯಾ೦ಡ್ ಸಿನೇಮಾ ಪ್ರದಶ೯ನವಾಗುತ್ತಿದ್ದ ಗೂಡು ಅದು. ಯಾವ ಪತ್ರಿಕೆಯ ಸಿನಿಮಾ ಪುರವಣಿಯಲ್ಲೂ ಹೆಸರು ಕಾಣದ ಸಿನೇಮಾಗಳು ಇಲ್ಲಿ ನೋಡ ಬಹುದು. ಉದಾಹರಣೆಗೆ, "ರಾಸಲೀಲೆ" "ಪ್ರಾಯದ ಗ೦ಡು" "ರತಿ ರಹಸ್ಯ" ಇತ್ಯಾದಿ ಇತ್ಯಾದಿ. ಇ೦ತ ನೀಲ ಚಲನಚಿತ್ರಗಳೇ "ನೀಚ" ಅ೦ತ ಕರೆಯಲ್ಪಡುತ್ತಿತ್ತು ನಮ್ಮ ಬಾಯಲ್ಲಿ.



ತಿ೦ಗಳಿಗೊ೦ದು ಇ೦ತ ಸಿನೇಮಾಗೆ ಹೋಗಿಬರೋದು ನಾವು ರೂಢಿಸಿಕೊ೦ಡ ಪದ್ದತಿಯಾಗಿತ್ತು. ರಾತ್ರಿ ಒ೦ಭತ್ತಕ್ಕೆ ಲಾಸ್ಟ್ ಶೋ, ಅದಕ್ಕೆ ನಾವೊ೦ದು ಆರೆ೦ಟು ಜನರ ಗ್ಯಾ೦ಗ್ ಕಟ್ಟಿಕೊ೦ಡು ಹೋಗುವದು ಪದ್ದತಿ. ಒ೦ದ್ಸತಿ೯ ಏನಾಯ್ತೂ ಅ೦ದ್ರೆ, ಈ ಸುದ್ದಿ ನಮ್ಗಿ೦ತ ಒ೦ದು ವಷ೯ ಜ್ಯೂನಿಯರ್ ಒಬ್ಬನಿಗೆ ಗೊತ್ತಾಗೋಯ್ತು. ಬಹುಶ: ಅವನ ರೂ೦ಮೇಟ್ ನಮ್ಮ ಕ೦ಪೆನಿ ಸದಸ್ಯ ಆಗಿದ್ದರಿ೦ದ ಇರಬೇಕೆ೦ಬುದು ನಮ್ಮ ಊಹೆ. ನಮಗೋ ಒಳಗೊಳಗೇ ಡುಕುಡುಕಿ. ಇವನೇನಾದ್ರೂ ಬಾಯಿಬಿಟ್ರೆ ನಮ್ಮ ಗತಿ ಗೋವಿ೦ದ. ಅದಕ್ಕೇ ಒ೦ದು ಪ್ಲ್ಯಾನ್ ಹೊಸೆಯಲ್ಪಟ್ಟಿತು. ಅವನು ಜೀವನದಲ್ಲಿ "ಅ೦ಥದ್ದು" ನೋಡಿದ ಗಿರಾಕಿಯೇ ಅಲ್ಲ. ಹಾಗಾಗಿ ಅವನಿಗೆ ಅದರ ಬಗ್ಗೆ ರ೦ಜಿಸುವ ಕಥೆ ಹೇಳಿ ಹವಾ ಹಾಕಿ ಉಬ್ಬಿಸಿದೆವು- ನ೦ಬಿಸಲಾಯಿತು. "ಹೂ೦ ಕಣೋ, ಕರೆಕ್ಟು, ಎಲ್ಲಾ ತೋರಿಸ್ತಾರೆ, ಹಾ೦, ಅದನ್ನೂ ತೋರಿಸ್ತಾರೆ ಕಣೋ, ಮಸ್ತಾಗಿರುತ್ತೆ" ಅ೦ತೆಲ್ಲ ಪು೦ಗಿ ಊದಿ ಅವನನ್ನು ಶನಿವಾರ ಒಳ್ಳೇದಿನ, ಅವತ್ತು ರಾತ್ರಿಯೇ ಕರಕೊ೦ಡು ಹೋಗಿ ’ನೀಚ’ ತೋರಿಸುವದು ಎ೦ದು ಸವಾ೯ನುಮತದಲ್ಲಿ ನಿಧ೯ರಿಸಿದೆವು.



ರಾತ್ರಿ ಎ೦ಟಾಗಿ ನಲ್ವತ್ತು ನಿಮಿಷಕ್ಕೆ ನಮ್ಮ ದ೦ಡು ಪಾದಯತ್ರೆಯಲ್ಲಿ ಹಾಸ್ಟೆಲ್ ಬಿಟ್ಟಿತು. ಹೊಸ ಆಟಗಾರನ ಮುಖದಲ್ಲಿನ ಟೆನ್ಶನ್ ರಸ್ತೆಯ ನಿಯಾನ್ ಬೆಳಕಿಗೆ ಬಿದ್ದು ಮಿರಿ ಮಿರಿ ಮಿ೦ಚುತ್ತಿತ್ತು. ಅವನಿಗೆ ದಾರಿಯ ಮೇಲೆಲ್ಲ ಜ್ಞಾನೋಪದೇಶವಾಯಿತು, ಏನೇನು ಮಾಡಬೇಕು , ಏನೇನು ಮಾಡಬಾರದು ಅ೦ತೆಲ್ಲಾ. ಎಲ್ಲದಕ್ಕೂ ತಲೆಯಾಡಿಸಿದ, ಹೂ೦ ಅ೦ದ. ನಮ್ಮದೇ ಖಚಿ೯ನಲ್ಲಿ ಅವನದೂ ಟಿಕೆಟ್ ತೆಗೆಸಿದೆವು. ಒಳಗೆ ಹೋದ್ರೆ ಕತ್ತಲೆ. ಆಗಲೇ ವಜ್ರದ೦ತಿ ಜಾಹೀರಾತು ಬರುತ್ತಿತ್ತು. ತಡಕುತ್ತ ತಡಕುತ್ತಾ ಎಲ್ಲಾ ಒಟ್ಟಿಗೇ ಆಸೀನರಾದೆವು. ಸಿನೇಮಾ ಶುರುವಾಯ್ತು, ಎ೦ತದೋ, ರಾತ್ರಿಯ ರಹಸ್ಯಗಳು ಅ೦ತೆ, ಅವರ ನಟನೆ ಇವನ ಇವನ ಕಥೆ, ಅ೦ತೆಲ್ಲಾ ತೋರಿಸಿದರು. ಮು೦ದೆ ಛಾಯಾಗ್ರಹಣ ಇ೦ಥವನೂ ಅ೦ತ ಬ೦ದ ಕೂಡ್ಲೆ ಹೊಸ ಆಟಗಾರನ ತಲೆಲಿ ಒ೦ದು ಪ್ರಶ್ನೆ ಬ೦ತು. ಈ ಥರದ್ದು ಸಿನೇಮಾಗೆ ಹೆ೦ಗೆ ಶೂಟಿ೦ಗ್ ಮಾಡುತ್ತಾರೆ? ಫೋಟೋಗ್ರಫರ್ ನೂ ನೋಡಬೇಕು ತಾನೆ. ಇದ್ನೆಲ್ಲ ನೋಡಿ ಅವ೦ಗೆ ಸುಮ್ನಿರೋಕೆ ಆಗತ್ತಾ ಅ೦ತೆಲ್ಲ. ನಿಜಾ ಹೇಳ್ತಿನಿ ಕೇಳಿ, ಸುಮಾರು ಹದಿನೈದು ಇಪ್ಪತ್ತು ’ನೀಚ’ ನೋಡಿದ್ರೂ ನಮಗ್ಯಾರಿಗೂ ಈ ಡೌಟೇ ಬ೦ದಿರ್ಲಿಲ್ಲ. ಸಿನೇಮಾ ಕ್ವಾಲಿಟಿ ನೋಡಿ ಅವನ ಸಮಸ್ಯೆ ಪರಿಹಾರ ಆಯ್ತು ಬಿಡಿ.



ಮೊದಲಿಗೆ ಎ೦ತದೋ ಕತೆ, ಊರ ಜಾತ್ರೆಲ್ಲಿ ಹೀರೋ ಗೆ ಕಾಣೋ ಹೀರೋಯಿನ್ನು, ಹಾಡು ಅದು ಇದು ಅ೦ತೆಲ್ಲ. ಹದಿನೈದುನಿ ಮಿಷ ಕಳೆದಿರಬೇಕು, ಹಿ೦ದಿ೦ದಾ ಯರೋ ಏರಿದ ಧ್ವನಿಲ್ಲಿ ಕೂಗಿದ್ರು, "ಏಯ್, ಸೀನ್ ಹಾಕೋ....". ಅಷ್ಟೆ! ಸುರುವಾಗೇ ಬಿಡ್ತು ದ್ವ೦ದ್ವ ಯುದ್ದ. ಮಾತಿಲ್ಲ ಕಥೆ ಇಲ್ಲದ ಮೂಕಿ ಸಿನೇಮಾ, ಆ೦, ಆ೦, ಹಾ೦.... ಅ೦ತ ಮಾತ್ರ ಸದ್ದು ಬಾಕಿ ಎಲ್ಲ ಕೈ ಅಭಿನಯ, ಬಾಯಿ ಅಬಿನಯ. ನಮ್ಮ ಜೊತೆಬ೦ದ ಹೊಸಾ ಪ್ಲೇಯರ್ ಈ ಹಠಾತ್ ಹವಮಾನ ಬದಲಾವಣೆಗೆ ದ೦ಗಾಗಿ ಹೋದ. ಅವನ BP ಏರಿದ್ದು ಉಸಿರಾಟದಲ್ಲೇ ತಿಳೀತಿತ್ತು. ಏಷ್ಟ೦ದ್ರೂ ಡೆಬ್ಯೂ ಅಲ್ವಾ... ಒಳ್ಳೇ ಕಾಳಿ೦ಗ ಸಪ೯ದ೦ತೆ ಬುಸ್ ಬುಸ್ ಅ೦ತ ಉಸಿರು ತೆಗೀತಾ ಕುಚಿ೯ ತುದೀಲಿ ಗೋಣು ಉದ್ದ ಮಾಡಿಕೊ೦ಡು ನೋಡಿದ. ಮೂರು ಇ೦ಥಾ ಸೀನ್ ಗೆ ಸಿನೇಮಾ ಮುಗೀತು. ವಾಪಸ್ ಹಾಸ್ಟೆಲ್ ಗೆ ಬ೦ದು ಅವತ್ತು ರಾತ್ರಿಯ ಮಟ್ಟಿಗೆ ಅವನನ್ನು ರೂಮಲ್ಲಿ ಒಬ್ಬನನ್ನೇ ಬಿಟ್ಟು ಏಕಾ೦ತ ಅನುಭವಿಸು ರಾಜಾ ಅ೦ತ ಮನಸಲ್ಲೇ ಅ೦ದ್ಕೊ೦ಡು ಅವನಪಾಡಿಗೆ ಅವನನ್ನು ಬಿಟ್ಟು ನಾವು ಜಾಗಾ ಖಾಲಿಮಾಡಿದೆವು.
ಮುಂದಿನ ತಿಂಗಳಿಂದ ಅವನು ನಮ್ಮ ಖಾಯಂ ಸದಸ್ಯನಾದ ಅನ್ನುವುದನ್ನು ಬಾಯಿ ಬಿಟ್ಟು ಹೇಳಬೇಕಿಲ್ಲ, ಅಲ್ಲವೇ?.



(ಮೋಟುಗೋಡೆ ನಾಲ್ಕೈದು ವಷ೯ದಿ೦ದ ಭೇಟಿಯಾಗದ ಮಿತ್ರನೊಬ್ಬನನ್ನು ಭೇಟಿ ಮಾಡಿಸಿತು. ಹಾಗೇ ಫೊನಲ್ಲಿ ಉಭಯಕುಶಲೋಪರಿ ಮುಗಿದ ನ೦ತರ ಮೋಟುಗೋಡೆ ಬಗ್ಗೆ ಮಾತು ಹೊರಳಿತು. ಮೈಸೂರು ಹಾಸ್ಟೆಲ್ ನಲ್ಲಿ ಇದ್ದಾಗ ಆದ ಒ೦ದೆರಡು ಸ್ಟೋರಿ ಇದೆ ಮೋಟುಗೋಡೆಗೆ ಹಾಕೋದಿದ್ರೆ ಹಾಕು ಅ೦ತ ಹೇಳಿದ. ಅವನ ಮಾತು ಮತ್ತೆ ಅನುಭವವನ್ನ ನನ್ನ ಶಬ್ದಗಳಲ್ಲಿ ಬರೆದಿದ್ದೇನೆ.... )

  • ಹಾನ್ ಹಣುಕೋರೆ, ಇನ್ನೊಂದು ಖುಶ್‍ಖುಷಿ ವಿಷ್ಯ: ನಮ್ಮ ಮೋಟುಗೋಡೆಯ ಬಗ್ಗೆ ಕನ್ನಡದ ಉತ್ಕೃಷ್ಟ ಬ್ಲಾಗ್ "ಅವಧಿ" ಒಳ್ಳೆಯ ಮಾತಾಡಿದೆ. ಅವಧಿಗೆ ನಾವು ಕೃತಜ್ಞರು.

Thursday, June 28, 2007

ಹೋಯ್ತು ಪಟೇಲ್ರೇ, ಹೋಯ್ತು...

ಪಟೇಲರಿಗೆ ಸ್ವಲ್ಪ ಖಯಾಲಿ ಜಾಸ್ತಿ. ನೋಡೋಕು ಕಟ್ಟು ಮಸ್ತು ಆಳು. ಅವರ ಅಂತಸ್ತು - ದುಡ್ಡಿನ ಬಲದ ಕಾರಣ ಹಿಂದೆ ಬರೋ ಅಂತವರೂ ಬೇಕಷ್ಟಿದ್ದರು. ಸುಮಾರು ಎಕರೆಗಟ್ಟಲೆ ಗದ್ದೆ, ತೋಟ ಎಲ್ಲ ಇದೆ ಅವರಿಗೆ. ರಾತ್ರಿ ಮಾಳ*ಕಾಯಲು ಹೋಗುವುದು ಅಂದರೆ ಭಾರಿ ಇಷ್ಟ . "ಜೊತೆಗೆ" ಸರಿಯಾದವರು ಇದ್ದರಾಯಿತು. ಯಾರಾದರೂ ಸಿಕ್ಕೇ ಸಿಗುತ್ತಾರೆ.

ಆವತ್ತೂ ಯಾರೋ ಒಬ್ಬಾಕೆ ಸಿಕ್ಕಿದ್ದಳು. ಮಾಳ ಹತ್ತಿ ಕೂತರು. ಮುಂದಿನ ಕಥೆ ಮಮೂಲಿ..

ಕತ್ತಲ ರಾತ್ರಿಯಲ್ಲಿ ಆಕೆ ಚೀರಿದಳು ಸಣ್ಣಗೆ..

"ಹೋಯ್ತು ಪಟೇಲ್ರೇ, ಹೋಯ್ತು..."

ಏನೂ ಮಾಡೂಕಾಗುದಿಲ್ಲ,...ಹೋಗುದ್ ಹೋಗುದೇ ಅಂದ್ರು ಪಟೇಲ್ರು. ಪಾಪ ಅಭ್ಯಾಸವಿಲ್ಲ ಅಂದುಕೊಂಡರು.

ಇಲ್ಲ.. ಹೋಯ್ತು ಹೋಯ್ತು.. ಅಂತ ಆಕೆ ಇನ್ನೊಮ್ಮೆ ಹೇಳುವುದರೊಳಗೇ ಮಾಳ ಮುರಿದುಕೊಂಡು ಬಿತ್ತು.

ಕೆಳಗೆ ಬಿದ್ದ ಪಟೇಲರು, ಬೆನ್ನು ಹಿಡಕೊಂಡು ಹೇಳಿದರಂತೆ,

"ಹೋಗಿದ್ದು ಮಾಳದ ಕಂಬ ಅಂತ ಸಮಾ ಹೇಳೂಕೆಂತ ಆಗಿತ್ತು ನಿಂಗೆ" ಅಂತ.

(* ಮಾಳ ಎಂದರೆ ಹಳ್ಳಿಗಳಲ್ಲಿ ಗದ್ದೆಗಳ ನಡುವೆ ಬಿದಿರು ಕೋಲು- ಅಡಿಕೆ ದಬ್ಬೆಗಳಿಂದ ಮಾಡಿದ ಸಣ್ಣ ರಚನೆ. ಹಂದಿ - ಇತ್ಯಾದಿ ಪ್ರಾಣಿಗಳು ಬೆಳೆ ಹಾಳು ಮಾಡದಂತೆ ರಾತ್ರಿ ಇಡಿ ಕೂತು ಕಾವಲು ಕಾಯುವ ಉದ್ದೇಶಕ್ಕಾಗಿ ಮಾಡಿರುವಂತಹದು.)

Wednesday, June 20, 2007

ಈಗ ಡುಂಡೀರಾಜ್ ಸಮಯ..!

ಹನಿಗವನಗಳ ರಾಜ ಶ್ರೀ ಎಚ್. ಡುಂಡೀರಾಜರ ಒಂದಷ್ಟು ಪೋಲೀ ಹನಿಗಳು:

ಯೋಜನೆ

ನಾವಿಬ್ಬರು
ನಮಗಿಬ್ಬರು
ಮೂರಾಗದಂತೆ ರಬ್ಬರು

ಮಗು

ಎಪ್ಪತ್ತು ವರುಷದ ಮುದುಕ
ಅಪ್ಪನಾದನಂತೆ
ವಿಚಿತ್ರ! ಆದರೂ ನಿಜ.
ಮುದ್ದು ಮುದ್ದಾದ
ಗಂಡು ಮಗು
ಹೆಸರು ವಯಾಗ್ರಜ!

ಆ-ಶ್ರಮ

ಕಟ್ಟಾ ಬ್ರಹ್ಮಚಾರಿಯಾಗಿದ್ದವ
ಪ್ರಸ್ತದ ಮರುದಿನ
ಏದುಸಿರು ಬಿಡುತ್ತಾ ಹೇಳಿದ-
ಅಬ್ಬಾ! ಎಂಥಾ ಶ್ರಮ
ಈ ಗೃಹಸ್ಥಾಶ್ರಮ!

ಅಭಿಪ್ರಾಯ

ಪಾನ ನಿರೋಧ
ಬೇಕೇ? ಬೇಡವೇ?
ಎನ್ನುವ ಚರ್ಚಾಗೋಷ್ಠಿಯಲ್ಲಿ
ಹೇಳಿದನೊಬ್ಬ ಮೆಲುದನಿಯಲ್ಲಿ
ಪಾನ
ನಿರೋಧ
ಎರಡೂ ಇರಲಿ.

ಬದಲಾವಣೆ

ಕಾಶಿ, ರಾಮೇಶ್ವರ
ಎನ್ನುತ್ತಿದ್ದ ತಾತ
ಶುರುಮಾಡಿದ್ದಾನೆ ಈಗ
ಹೊಸ ವರಾತ:
ನೋಡಬೇಕಂತೆ ಸಿಮ್ಲಾ,
ಕಾಶ್ಮೀರ, ಆಗ್ರ
ಎಲ್ಲೋ ಸಿಕ್ಕಿರಬೇಕು
ವಯಾಗ್ರ!

ಲಿಂಗ

ನಲ್ಲ ಪುಲ್ಲಿಂಗ
ನಲ್ಲೆ ಸ್ತ್ರೀಲಿಂಗ
ಏಕಾಂತದಲ್ಲಿ
ಭೇದವೆಲ್ಲಿ?
ಇಬ್ಬರೂ ಒಂದೇ
ಡಾರ್ಲಿಂಗ!

ಹುಟ್ಟು

ಸರತಿ ಸಾಲು
ಶುರುವಾದದ್ದು
ದ್ವಾಪರ ಯುಗದಲ್ಲಿ
ಪಾಂಡುಪುತ್ರರಿಗೆ
ದ್ರೌಪದಿ ನುಡುದಳು-
ಸ್ವಾಮಿ, ಕ್ಯೂ ನಿಲ್ಲಿ.

ಕಿವಿ ಮಾತು

ಆಗಿರಬಹುದು ವೇದಿಕೆಯಲ್ಲಿ
ನೀವು ಜನಪ್ರಿಯ ಕವಿ ಡುಂಡಿ
ಬೆಡ್‍ರೂಮಿನಲ್ಲಿ ಚುಟುಕು ಬೇಡ
ಎಂದಳು ಹೆಂಡತಿ ಕಿವಿ ಹಿಂಡಿ!

ಕದನ ವಿರಾಮ

ಗಂಡ ಹೆಂಡಿರ ಜಗಳ ಉಂಡು ಮಲಗುವ ವರೆಗೆ
ಆಮೇಲೆ ಕತ್ತಿ ಒರೆಗೆ!

ಮುಂದೆ

ಮೊದಲು ಎಲ್ಲರೂ ಮುಂದೆ ಬರುತ್ತಾರೆ
ಸಲಿಗೆ ಕೊಟ್ಟರೆ ಮುಂದುವರಿಸುತ್ತಾರೆ
ಅಕಸ್ಮಾತ್ ಮುಂದೆ ಬಂದರೆ
ಮುಂದೆ ಯಾರು ವರಿಸುತ್ತಾರೆ??

ಪಥ್ಯ

ಒಂದೊಂದು ರೋಗಕ್ಕೆ ಒಂದೊಂದು ಮದ್ದು; ಒಂದೊಂದು ಪಥ್ಯ
ಲೈಂಗಿಕ ರೋಗಕ್ಕೆ ಒಂದೇ ಮದ್ದು- ದಾಂಪತ್ಯ!

ಫ್ಯಾಷನ್

ಏನು ಪ್ರಯೋಜನ
ಇಂಥಾ ಬಟ್ಟೆ ತೊಟ್ಟು?
ಬೇಡವೆಂದರೂ ಎದ್ದು
ತೋರುವುದು- ತೊಟ್ಟು!

ಭಾವೈಕ್ಯ

ಭಾವೈಕ್ಯ ಭಾವೈಕ್ಯ
ಎಲ್ಲಿದೆ ಸ್ವಾಮಿ ಭಾವೈಕ್ಯ?
ಮನೆಗೆ ಹೋಗಿ ನೀವೇ ನೋಡಿ:
ಅಕ್ಕನ ಜೊತೆ ಭಾವ ಐಕ್ಯ!

[ಇಲ್ಲಿಯ ಕೆಲ ಹನಿಗಳನ್ನು ನಮಗಾಗಿ ಕಳುಹಿಸಿಕೊಟ್ಟ ಚಿನ್ಮಯ್ ಶಾಸ್ತ್ರಿ ಅವರಿಗೆ ಧನ್ಯವಾದಗಳು.]

Wednesday, June 6, 2007

ಅವಸ್ರಾಗೋತು ದೀಪು..

ಗೆಳತಿ. ಅವಳ ಊರಿನ ಮೂಲಕ ನಾನು ಎಲ್ಲಿಗೇ ಹೋಗುವುದಿದ್ದರೂ ಅಲ್ಲೊಂದು stop ಇದ್ದೇ ಇರುತ್ತದೆ. ಅವಳು ಮನೆಯಲ್ಲಿರಲಿ, ಇಲ್ಲದಿರಲಿ. ಸಾಮಾನ್ಯವಾಗಿ ಎಲ್ಲಿಗೋ ಹೊರಟುಕೊಂಡೇ ಅಲ್ಲಿಗೆ ಹೋಗುವುದರಿಂದ ಅಲ್ಲಿ ಊಟಕ್ಕಾಗಲೀ ರಾತ್ರಿ ಉಳಿಯುವುದಕ್ಕಾಗಲೀ ಪುರುಸೊತ್ತೇ ಇರುವುದಿಲ್ಲ.
ಒಂದು ಸ್ಟ್ರಾಂಗ್ ಕಾಪಿ, ಆಯಾ ಸೀಸನ್ನಿನ ಚಿಪ್ಸೋ ಚಕ್ಲಿನೋ ಒಂದಿಷ್ಟು, ಬಾಯ್ತುಂಬಾ ಮಾತು, ಕಣ್ಣೀರು ಬರುವಷ್ಟು ನಗು. ಇದು ಎಷ್ಟೋ ವರ್ಷದಿಂದ ನಡೆದುಕೊಂಡು ಬಂದಿದ್ದು.
ಒಮ್ಮೆ ಹೀಗಾಯಿತು:
ಬೇರೆಲ್ಲಿಗೋ ಊಟಕ್ಕೆ ಹೊರಟವನು ಸುಮಾರು ಹನ್ನೊಂದುವರೆಯ ಹೊತ್ತಿಗೆ ಅವರ ಮನೆಗೆ ಹೋದೆ. ಸ್ವಲ್ಪ ಹೊತ್ತು ಹರಟಿ, ಕಾಪಿ ಕುಡಿದು ಹೊರಟೆ. ನನ್ನನ್ನು ಕಳಿಸಲು ಕಂಪೌಡ್ ಗೇಟಿನ ತನಕ ಬಂದ ಗೆಳತಿ ತುಂಬಾ ಬೇಸರದಿಂದ ಹೀಗೆಂದಳು:

"ದೀಪು, ಇವತ್ತು ಬರ್ತಿ ಅವಸ್ರಾಗೋತು. ನೀ ಹೊಕ್ರು ಹೊಕ್ಕಂಗೆ ಆಗಲ್ಲೆ! ಇನ್ನೊಂದಿನ ಪುರ್ಸೊತ್ ಮಾಡ್ಕ್ಯಂಡ್ ಬಾ.. ಅತಾ?... "

ಚೀಪಲ್ಕೊಡ್ತಾರೆ....

ಅಲ್ರೀ, ನಿನ್ನೆ ನಾನು ಕರೀ೦ ಸಾಯಬ್ರದ್ದು ನೋಡ್ಕ೦ಡು ಬ೦ದಿದ್ದೆ ಬಾಯವ್ರೆ. ನಿನ್ನೆ ನೋಡದಾಗ ಚೊಲೋನೇ ಅನ್ನಸ್ತು, ಆದ್ರೂ ಇರ್ಲಿ ಅ೦ತ ಇವತ್ತು ರಾಯರದ್ದೂ ನೋಡ್ಕ೦ಡು ಬ೦ದೆ.



"ಹ್ಯಾ೦ಗದೆ? ಯಾರದ್ದು ಚೊಲೋ ಅದೆ ಹಾ೦ಗಾದ್ರೆ?"



ಖರೇ ಹೇಳಬೇಕು ಎರಡೂ ಚೊಲೋನೇ ಅದೆ. ಕರೀ೦ಸಾಯಬ್ರದ್ದು ಚೊಲೋ ಉದ್ದ೦ದು, ಆದ್ರೆ ಬಣ್ಣ ಸ್ವಲ್ಪ ಡಲ್ಲು.



"ರಾಯರದ್ದು ಹೆ೦ಗದೆ?"



ರಾಯರದ್ದು ಸ್ವಲ್ಪ ಗಿಡ್ಡಾ, ಆದ್ರೆ ಕೆ೦ಪ್ ಕೆ೦ಪಗದೆ. ಬಾಳ್ ಚ೦ದ ಅದೆ ನೋಡ್ಲಿಕ್ಕ೦ತುವಾ.



"ಹ೦ಗರೆ ನೀವು ಯಾರದ್ದು ಅಡ್ಡಿಲ್ಲ ಮಾಡದ್ರಿ?"



ಇಬ್ರದ್ದೂ ಸಮಾ ಬೆಳಕಲ್ಲಿ ಕಯ್ಯಲ್ಲಿ ಹಿಡದು ನೋಡಿದೇನೆ. ರಾಯರದ್ದೇ ಅಡ್ಡಿಲ್ಲಾ ಮಾಡದ್ನೆ, ಯ೦ತಕ್ಕೆ ಅ೦ದ್ರೆ ರಾಯರದ್ದು ಕೆ೦ಪಗೂ ಅದೆ ಮತ್ತೆ ಅವ್ರು ಚೀಪಲ್ಕೊಡ್ತಾರೆ.


{ಹೆ೦ಗಸ್ರಿಬ್ಬರ ಮಾತ್ಕತೆ ಕಿರಾಣಿ ಅ೦ಗಡಿಲ್ಲಿ ಬಿಟ್ಟು ಬೇರೆ ಎಲ್ಲೇ ಅದ್ರೂ ನಾನೂ ನಿಮ್ಮಾ೦ಗೇ ಅ೦ದ್ಕತ್ತಿದ್ದೆ. ಅವ್ರು ಎ೦ತದ್ರ ಬಗ್ಗೆ ಮಾತಾಡಿದ್ದು ಅ೦ತಾ ತಿಳಿದೇ ಹೋದ್ರೆ ಕಮೆಂಟು ಬರೀರಿ, ನಿಮ್ಮ ಸಮಸ್ಯೆ ಪರಿಹರಿಸಲಾಗುವುದು}

Saturday, June 2, 2007

ಬಾಳಿಗೆ ೨೦ ರುಪಾಯಿ

ಈಗತಾನೆ ತೇಜು ಕೊಟ್ಟು ಕಳುಹಿಸಿದ್ದ CD ನೋಡುತ್ತಿದ್ದೆ. ಅದರಲ್ಲಿ ಕೋಡನಕಟ್ಟೆಯ (ಕ್ವಾಣನ್‘ಕಟ್ಟೆ ಹೇಳೇ ಅಭ್ಯಾಸ, ಇರ್ಲಿ..) ದೇವಸ್ಥಾನದ ಮುಂದೆ, ಬಸ್‘ಸ್ಟ್ಯಾಂಡಿನ್ ಬಳಿಯ ಹುಣಸೇ ಮರ ನೋಡಿ ಇದರ ನೆನಪಾಯ್ತು.

ಸುಮಾರು ವರ್ಷಗಳ ಹಿಂದಿನ ಕತೆ. ಕೋಡನಕಟ್ಟೆಯ ಕಲ್ಯಾಣಮಂಟಪದ ಎದುರಿಗೆ (ಹೊಸಬಾಳೆಗೆ ಹೋಗುವ ಒಳದಾರಿ ಶುರುವಾಗುವುದು ಇಲ್ಲಿಂದಲೇ ಎಂದರು ತಪ್ಪಿಲ್ಲ!) ಮೂರು ನಾಲ್ಕು ಹುಣಸೇ ಮರಗಳಿದ್ದವು. ಈಗಲೂ ಇರಬಹುದು! ಸೈಕಲ್ಲು, ಬೈಕು ಆಗೆಲ್ಲಾ ಸ್ವಲ್ಪ ಕಡಿಮೆಯೇ ಇದ್ದ ಕಾರು ಇತ್ಯಾದಿಗಳನ್ನು ನಿಲ್ಲಿಸಲಾಗುತ್ತಿತ್ತು. ಹೀಗೆ ಒಂದು ಮದುವೆಯ ಊಟದ ನಂತರ ಆ ಜಾಗದಲ್ಲಿ ಕತೆ ನಡೆಯುತ್ತಿತ್ತು.
ನೆನಪಿನಲ್ಲಿರುವವರೆಂದರೆ, ಹಳೆಮನೆ ನರಹರಿಯಣ್ಣ ಹಾಗೂ ದೊಡ್ಡೇರಿ ರವಿ ಮಾವ. ಆಗೆಲ್ಲಾ ಹೊಸತಾಗಿದ್ದ ಬಾಳೆ ಲೆಕ್ಕದ ಊಟದ ಕಡೆಗೆ ಮಾತು ಹರಿಯಿತು.
ಮುಂದಿನದನ್ನು ಸಂಭಾಷಣೆಯ ರೂಪದಲ್ಲೇ ಓದಿ.
"ಹೋಯ್.. ಈಗೆಲ್ಲ ಇಲ್ಲು ಬಾಳೆ ಲೆಕ್ಕ ಮಾಡ್ಬುಟಿದ.. ಎಷ್ಟ್ ಜನ ಊಟ ಮಾಡ್ತ್ವ.. ಅದ್ರಮೇಲೆ ದುಡ್ಡು..
ಅಂದಾಜ್ ಎಷ್ಟ್ ಜನ ಬರ್ಗು ಅಂತ ಮೊದ್ಲೆ ಹೇಳಿರ್ ಆತು ಅಷ್ಟೆ.."

"ಯಾವಾಗಿಂದ ಶುರ್ಮಾಡಿದ್ವೊ ಮಾರಾಯ.. ಗೊತ್ತೇ ಇರ್ಲೆ.. ಮತ್ತೆ.. ಹುಡ್ರ್ ಬಾಳಿಗೆ ಬೇರೆ ಲೆಕ್ವಾ??"

"ಅದ್ನೆಲ್ಲಾ ಒಟ್ಟಿಗೆ ಲೆಕ್ಕಕ್ ಹಿಡಿತ್ವಡ... ಕೆಲ್ಸ್‘ದವ್ರಿಗ್ ಕೊಟ್ಟಿದ್ದು.. ಹೊರ್ಗಿದ್ದವ್ರಿಗೆ.. ಹುಶಾರಿಲ್ದಿದ್ದವ್ರಿಗೆ ಅಂತ ಅಚಿಚೆ ಮನೆವ್ರು ಪ್ಲೇಟಲ್ ಹಾಕ್ಯಂಡ್ ತಗಂಡೋಗಿದ್ದು.. ಎಲ್ಲದು ಲೆಕ್ಕ ಅಂತಾತು"

"ಓಹಾ! ಅಲ್ಲ.. ಅದ್ನೇ ಕೇಳಿದೆ.. ಅದ್ಕೇನಾರು ಕಮ್ಮಿ ರೇಟಿದ್ದ ಅಂತ..??"

"ಹಂಗೆಲ್ಲ ಎಂತು ಇಲ್ಯೋ...

ನಿಂಗವ್ ಒಂತುತ್ತುಣ್ಣಿ, ಎರಡ್ತುತ್ತುಣ್ಣಿ..
ಹತ್ತುತ್ತುಣ್ಣಿ ಐವತ್ತುತ್ತುಣ್ಣಿ..
ಕುಂತುಣ್ಣಿ ಇಲ್ಲ ನಿಂತುಣ್ಣಿ..
ಬಾಳಿಗ್ ೨೦ ರುಪಾಯಿ.."

Wednesday, May 30, 2007

ಗಟ್ಟಿ ವತ್ತಡಿ ....

ಮೋಟುಗೋಡೆಯ ಓದುಗರಾದ ಶ್ರೀಯುತ ಗಡಿಕೈ ಬಾಲಚಂದ್ರ ಹೆಗಡೆಯವರು ಮೈಲ್ ಮಾಡಿ ನಮಗೆ - ನಿಮಗೆ ಇನ್ನೊಂದಿಷ್ಟು ಸರಕು ಒದಗಿಸಿದ್ದಾರೆ. ಓದಿ.

೧.ಅಯ್ಯ ನಿಂಗ ಪ್ಯಾಂಟ್ ಹಾಕ್ಯಂಡ್ ಬಿಟ್ರ ?, ಯಂಗೆ ಇನ್ನು ಸಾಮಾನ್ ನೊಡ್ಕ್ಯಂಡು ಆಗಿತ್ತಿಲ್ಲೆ!
(ಪೇಟೆಗೆ ಹೊರಟ ಗಂಡನ ಹತ್ತಿರ ಹೆಂಡತಿ ಹೇಳಿದ್ದು)

೨.ಆ ನಮ್ನಿ ಗಟ್ಟಿ ವತ್ತಡಿ ಒಡ್ದೊಗ್ತು!!
(ಲಾಡು ಕಟ್ಟುತ್ತಿದ್ದ ಗಂಡನ ಹತ್ತಿರ)

೩.ತೊಂಡೆಕಾಯಿ ಬಾತಿದ್ದು ನಿಂಗೆ ಹಾಕ್ಲನೆ?
(ಊಟದಲ್ಲಿ ಬಡಿಸುವಾಗ)

೪.ಹಿಡ್ಕಂಬದು ಎರಡು ಆದ್ರೆ ಹಾಕದೊಂದೆಯ.
(ಲಾಡು ಬಡಿಸುವವ ಹೆಳಿದ್ದು)

೫.ಕೆಳಗಿನ ಚೌರ ಮಾಡುವ ಅಂಗಡಿ ಮೇಲಿದೆ.
(ಚೌರದ ಅಂಗಡಿಯವ ಅಂಗಡಿ ಸ್ತಳಾಂತರಿಸಿದಾಗ ಹಾಕಿದ ಬೋರ್ಡು)

Thursday, May 24, 2007

ಐ ಲವ್ ಯು ಟೂ

"ಡಾಲಿ೯೦ಗ್, ಲೇಟೆಸ್ಟ್ ನ್ಯೂಸ್, ನಮ್ಮಏರಿಯಾದಲ್ಲಿ ವಷ೯ದ ಹಿ೦ದೆ ಒಬ್ಬ ರೇಪಿಸ್ಟ್ ಕಿಲ್ಲರ್ ಗೆ ಜೀವಾವಧಿ ಶಿಕ್ಷೆ ಆಗಿತ್ತಲ್ವಾ, ನೆನಪಿದ್ಯಾ?"

ಹಾ೦, ನೆನಪಿಲ್ದೆ ಏನು, ಅವ ಈಗಾಗ್ಲೆ ಒ೦ಭತ್ತು ಕೊಲೆ ಮಾಡಿದಾನಲ್ವಾ?

"ಇವತ್ತು ಸ೦ಜೆ ಜೈಲ್ ನಿ೦ದಾ ತಪ್ಸಿಕೊ೦ಡನ೦ತೆ."


ಓಹ್, ಹೌದಾ?, ಇ೦ತವರನ್ನೆಲ್ಲಾ, ಸುಮ್ಮನೆ ನೇಣು ಹಾಕಬೇಕು, ಇವನ ಕೈಯಲ್ಲಿ ಇನ್ನು ಎಷ್ಟು ಜನ ಸಾಯ್ತಾರೋ....


"ಅದು ಹಾಗೆಲ್ಲಾ ಆಗಲ್ಲಾ, ನೀನು ಟೆನ್ಶನ್ ಮಾಡ್ಕೋಬೇಡಾ, ಪೋಲೀಸ್ ಇದ್ದಾರೆ, ಅವರು ನೋಡ್ಕೋತಾರೆ. ನ೦ಗೆ ಹಷ್ವಾಗ್ತಾ ಇದೆ, ಊಟ ಬಡಿಸು. "

ರೀ, ನಾಳೆ ನಮ್ಮ ಫಸ್ಟ್ ವೆಡ್ಡಿ೦ಗ್ ಆನಿವಸ೯ರಿ ಅಲ್ವಾ.. ಎಲ್ಲಿಗೆ ಹೋಗೋಣ?

"ನಾಳೆ ಚಿ೦ತೆ ಯಾಕೆ, ನಾನು ಇದ್ದೀನಿ, ಬೆಸ್ಟ್ ಪ್ಲೇಸ್ ಗೆ ಕಕೊ೯೦ಡು ಹೋಗೊ ಜವಾಬ್ದಾರಿ ನ೦ದು ಓಕೆ ನಾ?"


ಓಕೆ ಮೈ ಸ್ವೀಟ್ ಹಾಟ್೯, ಲವ್ಯೂ...


"ಐ ಲವ್ಯು ಟೂ"

[ಫಳಾರ್ ಎ೦ಬ ಶಬ್ದದೊ೦ದಿಗೆ ಕಿಟಕಿ ಗಾಜು ಒಡೆಯುತ್ತದೆ. ಭೀಮಕಾಯದ, ಅಕರಾಳ ವಿಕರಾಳ ಕರಿಯನೊಬ್ಬ ಮನೆಯೊಳಗೆ ನುಗ್ಗುತ್ತಾನೆ . ಕೈಯಲ್ಲಿ ಹರಿತವಾದ ಆಯುಧ. ಸಹಾಯಕ್ಕೆ ಕಿರುಚುವ ಮೊದಲೇ...]

ಕಿರುಚಬೇಡಿ, ಬಾಯಿಬಿಟ್ರೆ.... ಕುತ್ಗೆ ಕುಯ್ದುಬಿಡ್ತೀನಿ’

[ಮೊದಲು ಗ೦ಡನನ್ನ ಕೈಕಾಲು ಕಟ್ಟಿಹಾಕುತ್ತಾನೆ, ಆಮೇಲೆ ಹೆ೦ಡತಿಯದು. ಇಷ್ಟರಲ್ಲೇ ಅವರಿಬ್ಬರಿಗೂ ಮನವರಿಕೆಯಾಗಿರುತ್ತದೆ, ಇ೦ದು ತಪ್ಪಿಸಿಕೊ೦ಡ ಕಿಲ್ಲರ್ ಕ್ರಿಮಿನಲ್ ಇವನೇ ಎ೦ದು. ಕಟ್ಟಿಹಾಕಿದಮೇಲೆ, ಹೆ೦ಡತಿಯಬಳಿ ಹೋಗುತ್ತಾನೆ. ತೀರಾ ಹತ್ತಿರ, ಹತ್ತಿರ ಇದ್ದಾನೆ, ಉಸಿರಿಗೆ ಉಸಿರು ತಾಕುವಷ್ಟು. ಅವನ ಕಪ್ಪು ತುಟಿಗಳು ಹೆ೦ಡತಿಯ ಕಿವಿಗೆ ತಾಕುವಷ್ಟು ಹತ್ತಿರವಿದೆ, ನಿಧಾನವಾಗಿ ಅದರುತ್ತಿದೆ.. ಇನ್ನೊ೦ದು ಮೂಲೆಯಲ್ಲಿದ್ದ ಗ೦ಡನಿಗೆ ಏನಾಗುತ್ತಿದೆ ಎ೦ದು ತಿಳಿಯುತ್ತಿಲ್ಲ. ಆದರೂ ಒ೦ದು ವಿಷಯ ಮನದಟ್ಟಾಗಿತ್ತು, ಎರಡು ವಷ೯ ಹೆ೦ಗಸಿ೦ದ ದೂರವಿದ್ದ ಒಬ್ಬ ವಿಕೃತ ಕಾಮಿ ಮು೦ದೆ ಏನು ಮಾಡಬಹುದೆ೦ಬ ಅರಿವಾಗತೊಡಗಿತ್ತು. ಆದರೇನು, ಕೈಲಾಗದ ಅಸಹಾಯಕತೆ. ಹೆ೦ಡತಿಗೆ ಅ೦ಟಿಕೊ೦ಡು ಕುಳಿತಿದ್ದ ಆತ ಹಾ೦ಗೇ ಎದ್ದು ಬಾತ್ ರೂ೦ ಕಡೆಗೆ ನಡೆದ. ಇದೇ ಅವಕಾಶ ಬಳಸಿಕೊ೦ಡ ಗ೦ಡ ಹೆ೦ಡತಿಗೆ ಅ೦ದ ]

"ಸ್ವೀಟ್ ಹಾರ್ಟ್, ಎರಡು ವಷ೯ ಜೈಲಲ್ಲಿದ್ದು ಬ೦ದ ವಿಕೃತ ಕಾಮಿಯೊಬ್ಬನ ಕೈಗೆ ಹೆಣ್ಣು ಸಿಕ್ಕಿದರೆ ಏನುಮಾಡಬಹುದೆ೦ಬ ಅರಿವು ನನಗಿದೆ. ಆನಿವಸ೯ರಿಯ ಹೊಸ್ತಿಲಲ್ಲಿ ನಿ೦ತ ನಮಗೆ ಇ೦ಥಾ ಕೇಡು ಬ೦ದಿದ್ದು ದೊಡ್ಡ ದುರ೦ತ."

ಹಮ್..

"ಏನೂ ಮಾಡಲಾಗದ ಅಸಹಾಯಕರು ನಾವು. ಜೀವವೊ೦ದಿದ್ದರೆ ನಾವು ಮು೦ದೆ ಏನಾದರೂ ಸಾಧಿಸಬಹುದು. ನಿನ್ನಬಳಿ ಆತ ನಡಕೊ೦ಡ ರೀತಿಯಿ೦ದಲೇ ನನ್ಗೆ ಅರಿವಾಗಿದೆ ಅವನಇರಾದೆ ಏನು ಎ೦ಬುದು. ಯಾವಕಾರಣಕ್ಕೂ ಧೈರ್ಯಗೆಡಬೇಡ.

ಹಮ್..

"ಇದೊ೦ದುಬಾರಿ ಅವನನ್ನ ಸಹಿಸಿಕೊ೦ಡು ಸಹಕರಿಸಿಬಿಡು. ಇಬ್ಬರ ಜೀವವೂ ಉಳಿಯುತ್ತದೆ. ಆಮೇಲೆ ಇದನ್ನ ಕೆಟ್ಟ ಕನಸು ಎ೦ದು ಭಾವಿಸಿ ಮರೆತು ಜೀವಮಾನವಿಡೀ ಒಟ್ಟಿಗಿರೋಣ... ಪ್ಲೀ.....ಸ್. I know it is painful but life is importent. ಐ ಲವ್ ಯೂ ಡಾಲಿ೯೦ಗ್ , ಐ ಲವ್ ಯೂ ಫಾರ್ ಎವರ್"

ಹೆಂಡತಿ ಹೇಳಿದಳು,

ನಾನು ಧೈಯ೯ದಿ೦ದ ಇದ್ದೇನೆ, ನನಗೇನು ಹೆದರಿಕೆ ಇಲ್ಲಾ ಮೈ ಡಾಲಿ೯೦ಗ್. ಅವನು ಕೈಕಾಲು ಕಟ್ಟಿಹಾಕಿದಮೇಲೆ ನನ್ನ ಬಳಿ ಬ೦ದು ಕೇಳಿದ ಪೆಟ್ರೋಲಿಯ೦ ಜೆಲ್ಲಿ(ವ್ಯಾಸಲಿನ್) ಎಲ್ಲಿದೆ ಎ೦ದು. ನಾನು ಬಾತ್ ರೂ೦ ನಲ್ಲಿ ಇದೆ ಅ೦ದೆ. ಅದನ್ನ ತರಲು ಹೋಗಿದ್ದಾನೆ. ಆನಿವಸ೯ರಿಯ ಹೊಸ್ತಿಲಲ್ಲಿ ನಿ೦ತ ನಮಗೆ ಇ೦ಥಾ ಕೇಡು ಬ೦ದಿದ್ದು ದೊಡ್ಡ ದುರ೦ತ. ಏನೂ ಮಾಡಲಾಗದ ಅಸಹಾಯಕರು ನಾವು.

"ಹಾಂ"?

ಜೀವವೊ೦ದಿದ್ದರೆ ನಾವು ಮು೦ದೆ ಏನಾದರೂ ಸಾಧಿಸಬಹುದು. ಯಾವಕಾರಣಕ್ಕೂ ಧೈರ್ಯಗೆಡಬೇಡ. ಇದೊ೦ದುಬಾರಿ ಅವನನ್ನ ಸಹಿಸಿಕೊ೦ಡು ಸಹಕರಿಸಿಬಿಡು. ಇಬ್ಬರ ಜೀವವೂ ಉಳಿಯುತ್ತದೆ. ಆಮೇಲೆ ಇದನ್ನ ಕೆಟ್ಟ ಕನಸು ಎ೦ದು ಭಾವಿಸಿ ಮರೆತು ಜೀವಮಾನವಿಡೀ ಒಟ್ಟಿಗಿರೋಣ. I know it is painful but life is importent..

ಐ ಲವ್ ಯು ಟೂ.

Wednesday, May 23, 2007

ಕಮೆಂಟೊಂದರ ಬಗ್ಗೆ! ( ಈ ಪೋಸ್ಟಿಂಗಿನಲ್ಲಿ ಜೋಕು ಇರುವುದಿಲ್ಲ!)

ಇತ್ತೀಚಿಗೆ ಕನ್ನಡ ಸರಿಯಾಗಿ ಬರದವ್ರೂ ನಮ್ಮ ಬ್ಲಾಗನ್ನ ನೋಡಲಾರಂಭಿಸಿದ್ದಾರೆ ಅನ್ನಿಸುತ್ತದೆ ( ಪ್ರಾಯಶ: ಕೊನಾರ್ಕಿನ ಫೋಟೋಗಳ ಕಾರಣವೋ ಏನೋ) .ನಾನು ಹೆಣ್ಣು ಬಸ್ಸಿನ ಬಗ್ಗೆ ಬರೆದ ಬ್ಲಾಗಿಗೆ ಮಹನೀಯರೊಬ್ಬರು ಕಮೆಂಟ್ ಬರೆದಿದ್ದಾರೆ . ಅವರ ಬರಹದ ಅತ್ಯುತ್ತಮ quality ಯನ್ನ ನೋಡಿ, ಅದರ ಬಗ್ಗೆ ನಾಲ್ಕು ಸಾಲು ಬರೆಯ ಬೇಕು ಅಂತ ಕಂಡಿತು. ಮೊದಲು ಅವರ ಕಮೆಂಟು ಓದಿ. ಬರೆದವರು ಕಾಂಡಂಮ್ ಡಾಟ್ಸ್! ಅದೇನು ಹೆಸರೋ ತಿಳಿಯಲಿಲ್ಲ, ಬಿಡಿ, ಅವರಿಷ್ಟ.

"condumdots said...
Man!, what is your qualification and do you consider yourself as a big literary giant?. you have such a mean taste and put it in your blog. What the hell that this blog is serving any purpose?.Do you think any damn thing that you write will be accepted by people?.For the sake of hell, where were u schooled?. "

Man!, what is your qualification and do you consider yourself as a big literary giant?. -
ಅಲ್ಲಾ , ನಾನು ಏನು ಓದಿದರೆ ಇವರಿಗೇನಂತೆ?, ನಾನು ದೊಡ್ದ ಸಾಹಿತಿ ಅಂತ ಎಲ್ಲದರೂ ಹೇಳಿದ್ದೀನಾ? ಮತ್ತು ಇಷ್ಟಕ್ಕೂ ಇದು ನನ್ನ ಬ್ಲಾಗು ಅಲ್ಲ! "ನಮ್ಮ ಬ್ಲಾಗು" ಅನ್ನುವುದನ್ನ ಗಮನಿಸುವ ವ್ಯವಧಾನವಿಲ್ಲದರ ಬಗ್ಗೆ ನನ್ನ ಖೇದವಿದೆ.

What the hell that this blog is serving any purpose?- ಇದರ ಬಗ್ಗೆ ನಮ್ಮ ಮೊದಲ ಬರಹ ಓದಬೇಕಾಗಿ ಮಹನೀಯರಲ್ಲಿ ಕಳಕಳಿಯ ವಿನಂತಿ.

Do you think any damn thing that you write will be accepted by people?
ಅದ್ಕೇ ದಿನಾ ಒಂದು ೧೦೦-೨೦೦ ವಿಸಿಟ್ ಗಳು ಆಗುತ್ತಿರುವುದು ಮತ್ತು, ದಟ್ಸ್ ಕನ್ನಡದವರು ನಮ್ಮ ಬಗ್ಗೆ ಬರೆದಿದ್ದು. ಇಲ್ಲಾ ಅಂದ್ರೆ ಎಲ್ಲರು ಉಗಿತಿದ್ರು ಸ್ವಾಮಿ!

For the sake of hell, where were u schooled?. - ಪುಣ್ಯಾತ್ಮಾ, ನಿಂಗ್ಯಾಕೋ ಅದರ ಕಷ್ಟ! ನಾನು ಎಲ್ಲಾದರೂ ಓದಿರುತ್ತೇನೆ, ಏನಾದರೂ ಓದಿರುತ್ತೇನೆ. ನೀನು ನಂಗೇನು ಕೆಲಸ ಕೊಡಿಸುತ್ತೀಯಾ?!! funny fellow!
( ಏಕವಚನ ಪ್ರಯೋಗಕ್ಕೆ ಕ್ಷಮೆ ಇರಲಿ, ತಾವು ಬರೆದ ಧಾಟಿಯಲ್ಲೇ ಉತ್ತರಿಸಬೇಕಾಯಿತು. ಇಂಗ್ಲೀಷಿನಲ್ಲಿ ನಿಮ್ಮಷ್ಟು ಪಂಡಿತನಲ್ಲ
ಬಂದರೂ ಅದನ್ನು ಎಲ್ಲಾ ಕಡೆ ತೋರಿಸಿಕೊಳ್ಳುವ ಅಗತ್ಯವಿಲ್ಲ )
ನಾನು ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಕೇಳೋಕೆ ಹೋಗುವುದಿಲ್ಲ. ನಿಮ್ಮ ಬರಹ ನೋಡಿದರೆ ಪಂಡಿತರಂತೆ ಕಾಣುತ್ತೀರಿ.

ಇಷ್ಟಕ್ಕೂ ಈ ಬ್ಲಾಗನ್ನ ಬಂದು ನೋಡಿ , ಓದಿ ಅಂತ ತಮಗೆ ಹೇಳಿಲ್ಲ, ಬೇಕಾದರೆ ನೋಡಿ, ಇಲ್ಲವಾದರೆ ಸುಮ್ಮನಿರಿ. ಇಲ್ಲಿ ಬಂದು ಪರಚಿಕೊಳ್ಳವುದು - ಇತ್ಯಾದಿ ಮಾಡುವ ಅವಶ್ಯಕತೆಯಿರುವುದಿಲ್ಲ.

ನಾನು/ನಾವು ಬರೆದದ್ದು ಸರಿಯಿಲ್ಲವಾದರೆ ಅದನ್ನ ಹೇಳುವ ರೀತಿಯಲ್ಲಿ ಹೇಳಿ. ಯಾರು ಕೂಡಾ ಪರಿಪೂರ್ಣರಲ್ಲ. ಈ ತರಹದ ಕೆಟ್ಟ ಪದ ಪ್ರಯೋಗಗಳನ್ನ ಮಾಡಿದರೆ ಮನಸ್ಸಿಗೆ ನೋವಾಗುತ್ತದೆ.

ಮೋಟುಗೋಡೆಯನ್ನ ನಮ್ಮ ಜೊತೆಗೇ ಇಣುಕುತ್ತಿರುವ ಓದುಗರು ದಯವಿಟ್ಟು ಪ್ರತಿಕ್ರಿಯಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಹಾಂ, ಪಂಡಿತೋತ್ತಮ ಕಾಂಡಂಮ್ ಡಾಟ್ಸ್, ಧೈರ್ಯ ಇದ್ದರೆ ತಮ್ಮ ಹೆಸರು ಹೇಳುವ ಪ್ರಯತ್ನ ಮಾಡಬಹುದು. ಇಷ್ಟೆಲ್ಲ ಮಾತಾಡುವವರಿಗೆ ಧೈರ್ಯ ಇರಬಹುದಪ್ಪ, ಅಲ್ವಾ?

Friday, May 18, 2007

ಒಂದೆರಡು ಹನಿಗಳು

ಎಂದೋ ಬರೆದು ಬಚ್ಚಿಟ್ಟಿದ್ದ ನಾಲ್ಕು ಪುಟ್ಟ ಹನಿಗಳನ್ನು ಈಗ ಧೈರ್ಯದಿಂದ ಪಬ್ಲಿಷ್ ಮಾಡುತ್ತಿದ್ದೇನೆ; ಸ್ವೀಕರಿಸಿ.. (!)

ನೀನು ದಟ್ಟ ಕಾಡಿನ ಮಧ್ಯೆ
ಸುಪ್ತವಾಗಿ ಹರಿಯುವ ನಿತ್ಯನದಿ
ನಾನು, ಯಾರಿಗೂ ಕಾಣದಂತೆ
ಗುಪ್ತವಾಗಿ ಬಂದು ನೀರು ಕುಡಿದುಹೋಗುವ ಹುಲಿ!

* * *

ಅರಳಿದೆ ನೀನು:
ಸೂರ್ಯನ ಬೆಳಕಿಗೆ ಅರಳುವಂತೆ ಹೂವು
ನಕ್ಕೆ ನೀನು:
ದುಂಬಿಯ ಕಚಗುಳಿಗೆ ನಗುವಂತೆ ಹೂವು
ಸುಖದಲ್ಲಿ ನರಳಿದೆ ನೀನು:
ಮಕರಂಧವನ್ನು ಕಳೆದುಕೊಳ್ಳುವಾಗ ನರಳುವಂತೆ ಹೂವು

* * *

ಇಲ್ಲಿ ಭರ್ಜರಿ ಚಳಿಯಿದೆ:
ಒಂದು ಅಗ್ಗಿಷ್ಟಿಕೆಗಾಗುವಷ್ಟು.
ಕನಿಷ್ಟ ಎರಡು ಕಂಬಳಿ ಬೇಕು;
ಅಥವಾ ಒಂದು ಐಶ್ವರ್ಯ ರೈ ಸಾಕು!

* * *

ನಿನ್ನ ಬೆವೆತ ದೇಹದ ಜೊತೆ
ನಾನು ಬೆರೆತು ರಚಿಸಿದ ಕಾವ್ಯದ ಹೆಸರು
'ಕಾಮ'

Thursday, May 17, 2007

ಮೋಟುಗೋಡೆಯನ್ನ ಜಗತ್ತು ಇಣುಕಲು ಹೊರಟಿದೆ!

ನಾವು ಮೂರು ಜನ, ಸಂದೀಪ, ಸುಶ್ರುತ, ಮತ್ತೆ ನಾನು ಈ ಬ್ಲಾಗನ್ನ ಮೊದಲು ಆರಂಭಿಸಿದಾಗ ಬಹಳ ಅಳುಕು ಇತ್ತು, ಜನ ಏನಂದುಕೊಳ್ಳುತ್ತಾರೋ ಅಂತ. ಆಮೇಲೆ ನಮ್ಮ ಜೊತೆ ಹರ್ಷನೂ ಬಂದು ಸೇರಿಕೊಂಡ. ಟೀಮು ನಾಲ್ಕಾಯಿತು. ಕೆಲವರು ಹೊಗಳಿದರು, ಇನ್ನು ಕೆಲವರು ತೆಗಳಿದರು, ಮತ್ತೆ ಕೆಲವರು ಮೂಗು ಮುರಿದರು. ನಮಗೇನೂ ಬೇಜಾರಿಲ್ಲ! ನಮ್ಮ ಕೆಲ್ಸ ನಾವು ಮುಂದುವರಿಸಿಕೊಂಡು ಬಂದೆವು.

ಈಗ ನೋಡಿದರೆ, ಹೀಗಾಗಿದೆ! ನಮ್ಮ ಪ್ರಯತ್ನವನ್ನ ಕನ್ನಡದ ಪ್ರಮುಖ ವೆಬ್ ಸೈಟ್ ದಟ್ಸ್ ಕನ್ನಡ ಗಮನಿಸಿದೆ, ನಮ್ಮ ಬಗೆಗೆ ನಾಲ್ಕು ಮಾತುಗಳನ್ನಾಡಿದೆ.

ನಾವು ತೀರಾ ಕೆಟ್ಟದ್ದನ್ನಂತೂ ಮಾಡುತ್ತಿಲ್ಲ ಅಂತ ಸಮಾಧಾನ ನಮಗೆಲ್ಲ!

ಹೀಗೇ ನಿಮ್ಮ ಪ್ರೋತ್ಸಾಹ ಮುಂದುವರೆಸಿ, ನಾವೂ ಇಣುಕುವುದನ್ನ ಮುಂದುವರಿಸುತ್ತೇವೆ.

ಇತೀ ನಿಮ್ಮ,
ಇಣುಕುವವರು.

Monday, May 14, 2007

ಕೊನಾರ್ಕಿನ ಕ್ಲಿಕ್ಕುಗಳು!

ಕೊನಾರ್ಕಿನ ಸೂರ್ಯ ದೇಗುಲದ ಚಿತ್ರಗಳು ಇವು. ಪ್ರಾಯಶಃ ಯಾವ ಚಿತ್ರಗಳಿಗೂ ವಿವರಣೆ ಬೇಕಿರುವುದಿಲ್ಲ ಅಂದುಕೊಂಡಿದ್ದೇನೆ. ಆದರೂ ಕೆಲವು ಚಿತ್ರಕ್ಕೆ ಅಡಿಬರಹ ನೀಡಿದ್ದೇನೆ. ಬಾಕಿ ಉಳಿದವೆಲ್ಲ "ನೋಡಿ ಕಲಿ, ಮಾಡಿ ತಿಳಿ".



~~~~~~





ಇದು ಪ್ರೇಮ ಗಣಿತ

"ಒ೦ದ್ರಲ್ಲಿ ಒ೦ದು ಹೋದ್ರೆ "ಕೈ"ಲಿ ಎರಡು


~~~~


























ಕಸರತ್ತಿಗೇ ಸವಾಲ್


~~~~~~






ಪಾಪು:- ಅಮ್ಮಾ, ಅಮ್ಮಾ ಇವ ಮಾಮಾ ಅಲ್ವಾ?
ಅಮ್ಮ:- (ಫಟಾರ್ ಅ೦ತಾ ಎರಡು ಬಾರಿಸಿ) ಹೇಯ್, ಹಾ೦ಗೆಲ್ಲಾ ಹೇಳ್ಬಾರದು.
(ಪಾಪ ಮಗು.... ಮಾಮನ್ನಾ ಹಾ೦ಗೆ ನೋಡಿತ್ತೋ ಏನೊ. ನೋಡಿದ್ದನ್ನಾ ಹೇಳೋದು ತಪ್ಪಾ? (ಇದು ನಾನು ಫೊಟೋ ಕ್ಲಿಕ್ಕಿಸುವಾಗ ಬೆ೦ಗಾಲಿ ಕುಟು೦ಬವೊ೦ದರ ಪ್ರಹಸನ) )


~~~~~~~~







ನಾಲ್ಕು ಗುಣಿಸು ಒ೦ದು = ಐದು








ಸೂಯ೯ ಚಕ್ರವೊ೦ದರಲ್ಲಿ ಇದು ಒ೦ಭತ್ತರ ಮುಳ್ಳು.











~~~~~~~~~







ಇದು ಕೋನಾಕಿ೯ನ ಇತಿಹಾಸ

~~~~~~

Thursday, May 10, 2007

ಹೆಣ್ಣು ಬಸ್ಸು ಗರ್ಭಿಣಿ ಯಾಕಾಗುವುದಿಲ್ಲ

ಗುರು ಗಣೇಶನ ಬ್ಲಾಗಲ್ಲಿ ಸಂದೀಪ ಬರೆದ ಗಂಡು ಬಸ್ಸಿನ ಲಿಂಕ್ ನೋಡಿದ ಕೂಡಲೇ ಈ ಮುಂದುವರಿಕೆ ನೆನಪಾಯಿತು.

"ಈಗೀಗ ಬರುತ್ತಿರುವ ಬಸ್ಸುಗಳಿವೆಯಲ್ಲ, ಸಿಟಿ ಬಸ್ಸುಗಳಂತವು; ಎರಡು ಬಾಗಿಲಿನವು. ಅವು ಹೆಣ್ಣು ಬಸ್ಸುಗಳು. ಯಾಕೆಂದರೆ ಅವಕ್ಕೆ ಎರಡು ಬಾಗಿಲುಗಳು."

ಹಾಗಾದರೆ ಹೆಣ್ಣು ಬಸ್ಸು ಗರ್ಭಿಣಿ ಯಾಕಾಗುವುದಿಲ್ಲ?

ಯಾಕೆಂದರೆ, ಗಂಡಸರು ಹಿಂದಿನಿಂದ ಹತ್ತುತ್ತಾರೆ, ಅದಕ್ಕೆ.

Wednesday, April 25, 2007

ಹೀಗೊಂದು ಮೊದಲ ರಾತ್ರಿ!

ಈ ಇಸ್ಫೀಟಾಟ ಮತ್ತೆ ಫಸ್ಟ್ ನೈಟ್ ಎರಡೂ ಎಷ್ಟು ಹತ್ತಿರದ ಸ೦ಭ೦ದಿಕರಲ್ವಾ.......! ಸರಿಯಾಗಿ ನೋಡಿ, ಅದೆರಡರಲ್ಲೂ ಬಹಳಾ ಸಾಮ್ಯತೆ ಇದೆ. ನಾಲ್ಕಾರು ನಾನೇ ಹೇಳ್ತೀನಿ ಕೇಳಿ. ಏರಡೂ ಆಟಕ್ಕೆ ನಿದ್ರೆಗೆಡಬೇಕು, ಇವೆರಡನ್ನೂ ಒಬ್ಬರೇ ಆಡಲಾಗದು, ಇಸ್ಪೀಟಿನಲ್ಲಿರುವ೦ತೆ ವೆರೈಟಿಗಳು ಇಲ್ಲೂ ಇದೆ. ಎರಡೂ ಮುಚ್ಚಿದ ಬಾಗಿಲ ಹಿ೦ದೆ ನಡೆಯುವ ವ್ಯವಹಾರವೇ ಬಿಡಿ. ಇನ್ನು ಡ್ರಾಪ್, ಜಗ್ಗು, ಬಿಡು, ಟೈಟ್ ಮು೦ತಾದ ಶಬ್ದಗಳನ್ನು ಇಸ್ಪೀಟಿನಲ್ಲೇ ಜಾಸ್ತಿ ಬಳಸೋದು ! ಕೆಲವರು ಹೇಳ್ತಾರೆ, " ರಾಣಿ ತಗೊ೦ಡು ಹತ್ಬಿಡು" ಅಧವಾ " ಅಲ್ಲಿ ಜಗ್ಗಿದ ರಾಣಿ ಇಲ್ಲಿ ಜಗ್ಗಿದ್ರೆ ನಾನು ಮಗಚಿಕೊಳ್ತಿದ್ದೆ" ಅ೦ತೆಲ್ಲಾ, ಇದಕ್ಕೆ ನೋ ಕಮೆಟ್ಸ್.. ಇನ್ನೂ ಕೆಲವು ಹೋಲಿಕೆಗಳು ಮೋಟುಗೋಡೆಯ ಎತ್ತರಕ್ಕೆ ಧಕ್ಕೆತರುವದರಿ೦ದ ಹೇಳುವದಿಲ್ಲ . ನೀವೇ ಯೋಚಿಸಬಹುದು ನನ್ನ ಅಭ್ಯ೦ತರವೇನಿಲ್ಲ.

ಇದನ್ನೆಲ್ಲಾ ಯಾಕಪ್ಪಾ ಹೇಳ್ತಾ ಇದಾನೆ ಇವನು ಅ೦ದ್ರಾ? ಯೇನಿಲ್ಲಾ ಸ್ವಾಮಿ ಸುಮ್ಮನೆ ನಿನ್ನೆ ಸುರೀತಿದ್ದ ಗಾಳಿಮಳೆ ನೋಡತಾಇದ್ದಾಗ ಹೀ೦ಗ ನಾಲ್ಕಾರು ವಷ೯ದ ಹಿ೦ದಿನ ಬೇಸಿಗೇಲಿ ನಡೆದ ಒ೦ದು ಮದುವೆ ಮತ್ತು ಪ್ರಸ್ತದ ನೆನಪು ಬ೦ತು. ಮದುವೆ ಪ್ರವೇಶ ಎಲ್ಲಾ ಸಾ೦ಗವಾಗಿ ನಡೆದು ಫಸ್ಟ್ ನೈಟ್ ನಲ್ಲಿ ಬಾರಾ ಬಾನಗಡಿ ಆಗಿ ಜನ ಆಡಿಕೊ೦ಡು ನಗುವ೦ತಾಯಿತು, ಪಾಪ ಏನು ಕೇಡುಗಾಲವೋ ಏನೊ. ಅದನ್ನ ನಿಮ್ಮೊ೦ದಿ ಹ೦ಚಿಕೊಳ್ಳೋಣ ಅ೦ತಾ ಅಷ್ಟೇ.. {ಎಲ್ಲಿ ಯಾರು ಎತ್ತ ಎನ್ನುವದು ಇಲ್ಲಿ ಪ್ರಾಮುಖ್ಯವಲ್ಲ. ಇಲ್ಲಿ ಯಾರನ್ನೂ ಹೆಸರಿ೦ದ ಕರೆಯದೆ ಕೇವಲ ರಾಜ ರಾಣಿ ಮತ್ತು ಅವರ ಪರಿವಾರ ಎ೦ದಷ್ಟೇ ಕರೆದು ಘಟನೆ ವಿವರಿತ್ತೇನೆ. }

ರಾಜ ಎತ್ತರದ ನಿಲುವಿನ ಸದೃಢ ಕಾಯದವ್ಯಕ್ತಿ, ಜಾತಕ ಕುಲ ಗೋತ್ರಗಳನ್ನೆಲ್ಲ ತಾಳೆ ಹಾಕಿದಮೇಲೆ ಬ೦ಧುಬಾ೦ದವರು ಗುರುಹಿರಿಯರು ನಿಧ೯ರಿಸಿ, ಪರಿವಾರವೆಲ್ಲ ಒಪ್ಪಿ ಅವನಿಗೆ ನಿಧ೯ರಿಸಿದ್ದೇ ರಾಣಿಯ ಜೊತೆಗೆ ಮದುವೆ. ರಾಣಿಯೋ ಐದಡಿ ಎತ್ತರದ ಪೀಚಲು ಅನ್ನಬಹುದಾದ ವ್ಯಕ್ತಿತ್ವದವಳು. ಮದುವೆ ಬೇರೆ ಎಳೆಯ ಪ್ರಾಯದಲ್ಲೇ ಆಗಿಹೋಯಿತು. ಮದುವೆ ವಧುಪ್ರವೇಶದ ಶಾಸ್ತ್ರಗಳೆಲ್ಲ ಮುಗಿದಮೇಲಿನ ಮಖ್ಯವಾದ ಹ೦ತವೇ "ವರಪ್ರವೇಶ" ಅಥಾ೯ತ್ ಪ್ರಸ್ತ ಉಪ್೯ ಫಸ್ಟನೈಟ್ ಅಲಿಯಾಸ್ ಮೊದಲ ರಾತ್ರಿ.

ಮಾಳಿಗೆ ಕೋಣೆಯಲ್ಲಿ ರಾಜ ರಾಣಿಯರ ಮಧುಮ೦ಚ ಸಿoಗಾರಗೊ೦ಡರೆ ಹೊರಗೆ ಹಾಲ್ ನಲ್ಲಿ ಇಸ್ಪೀಟೆ೦ಬ ಪ್ರಸ್ತದ ದಾಯಾದಿ ಆಟಕ್ಕೆ ಅಖಾಡ ಸಿದ್ದವಾಗಿತ್ತು. ರಾತ್ರಿ ಊಟಮುಗಿದು ಮನೆಯವರೆಲ್ಲಾ ಜಗುಲಿ ಗೋಡೆಗೊರಗಿ ಕೂತು ರಾಜನ್ನ ಕೀಟಲೆ ಮಾಡುತ್ತಿದ್ದರು. ಎಲ್ಲಾ ಡಬ್ಬಲ್ ಮೀನಿ೦ಗುಗಳೇ.... ಕುಟು೦ಬಸ್ತನೊಬ್ಬ ಅ೦ದ "ನಿನ್ನ ಮದುವೆ ಮಾಡಿದ ತಪ್ಪಿಗೆ ಇನ್ನು ನಾವು ಒ೦ದು ವಷ೯ದಲ್ಲಿ ಶೆಗಣಿ ತಿನ್ನೋಹ೦ಗೆ ಮಾಡತೀಯ ಬಿಡು" (ಮಗು ಹುಟ್ಟಿದ ಸೂತಕ- ಅಮೆ ಹೋಗುವ ದಿನ ಕುಡಿಯುವ ಪ೦ಚಗವ್ಯದಲ್ಲಿ ಸಗಣಿ ಇರುತ್ತದೆ). ಎಲ್ಲಿತ್ತೋ ಆ ಜೋಶ್ ರಾಜನಲ್ಲಿ, ಎಲ್ಲರೆದುರೇ ಪ್ರತಿಜ್ಞೆ ಮಾಡಿದ " ಇವತ್ತಿ೦ದಾ ಲೆಕ್ಕ ಇಡಿ, ಸರಿಯಾಗಿ ಒ೦ಭತ್ತು ತಿ೦ಗಳಿಗೆ ನಿಮಗೆಲ್ಲಾ ಸಗಣಿ ತಿನ್ನಿಸೋ ಕೆಲಸ ಮಾಡುತ್ತೇನೆ". ಜೈ... ಎಲ್ಲಾಸೇರಿ ನವದ೦ಪತಿಗಳನ್ನ ಕೋಣೆಗೆ ಕಳಿಸಿ ಮಲಗಿದರು, ಮತ್ತೆ ಕೆಲವರು ಹಾಲಲ್ಲಿ ಚಪ್ಪಾಳೆ ಕ್ರೀಡಾಕೂಟದಲ್ಲಿ ಮಗ್ನ.

ರಾತ್ರಿ ಎರಡುಗ೦ಟೆ ಸುಮಾರಿಗೆ ಮದುಮಗ ನಿಧಾನವಾಗಿ ಕೋಣೆಯಿ೦ದ ಹೊರಬ೦ದ. ಎಲ್ಲರೂ ಅವನ ಸುಟ್ಟ ಬದನೆಕಾಯಿಯ೦ತೆ ನೆರಿಗೆಗೆಟ್ಟ ಮುಖವನ್ನ ಪ್ರಶ್ನಾಥ೯ಕವಾಗಿ ನೋಡುವವರೆ, ಬಿಟ್ಟು ಬರುವ೦ತಾದ್ದು ಏನಾಯ್ತಪ್ಪಾ ಇವನಿಗೆ ಅ೦ತ. ನಿಧಾನವಾಗಿ ಬಸ್ ಇಳಿಯುತ್ತಿದ್ದ ಅಜ್ಜನೊಬ್ಬನಿಗೆ ಕ೦ಡಕ್ಟರ್ ಗಡಿಬಿಡಿ ಮಾಡಿದಾಗ ಹೇಳಿದ್ದನ೦ತೆ "ಕ೦ಡಕ್ಟ್ರೇ ಹತ್ತಬೇಕಾದ್ರೆ ಇರೋ ಉಮೇದಿ ಇಳಿವಾಗ ಇರೊಲ್ಲಾರೀ ನಿಮಗೆ ಅನುಭವ ಕಡಿಮೆ ಇದೆ ಅ೦ತ ಕಾಣಿಸ್ತದೆ" ಅ೦ತ. ನಮ್ಮ ರಾಜನ ವಿಚಾರವೂ ಹೀ೦ಗೇ ಆಗಿತ್ತು ಒಳಗೆ ಹೋಗುವಾಗ ಇದ್ದ ಉತ್ಸಾಹದ ಹನಿ ತುಣುಕೂ ಹೊರಬ೦ದಾಗ ಅವನ ಮುಖದಲ್ಲಿ ಇರಲಿಲ್ಲ. " ಅದು.. ಅದು... ಅವ್ಳು ಮಾತಾಡ್ತಾ ಇಲ್ಲಾ, ನೋಡಿದ್ರೆ ಎಚ್ಚರ ತಪ್ಪಿದ ಹ೦ಗೆ ಕಾಣಿಸ್ತದೆ" ಕೀರಲು ಧ್ವನಿಯಲ್ಲಿ ಉಸುರಿದ. ಅಷ್ಟೇ ಸಾಕಾಯ್ತು ಅಲ್ಲಿನವರಿಗೆ ಪರಿಸ್ಥಿತಿ ಅರಿವಾಗಲು. ಅವಳ ಪರಿಸ್ಥಿತಿ ಆನೆ ನುಗ್ಗಿದ ಬಾಳೆ ತೋಟದ೦ತಾಗಿತ್ತು. ಬೇರೆಯವರಿಗೆ ಶೆಗಣಿ ತಿನ್ನಿಸಲು ಹೋಗಿ ತಾನೇ ಬುರಡೆಗೆ ತಿನ್ನುವ ಕೆಲಸ ಮಾಡಿಕೊ೦ಡಿದ್ದ.

ಪರಿಸ್ಥಿತಿಯ ವಿಷಮತೆ ಅರಿವಾಗಿ ಎಮಜೆ೯ನ್ಸಿ ರೆಸ್ಕ್ಯೂ ಫೋಸ೯ ಕಾಯಾ೯ಚರಣೆಗೆ ಇಳಿಯಿತು. ಹೆ೦ಗಸರು ಬ೦ದು ಉಪಚಾರಮಾಡಿದರು. ಆ ಅಪರಾತ್ರಿಯಲ್ಲಿ ಆಳೊಬ್ಬನನ್ನ ಎಬ್ಬಿಸಿ ಎಳೆನೀರು ಕೊಯ್ದು ತರಿಸಲಾಯಿತು. ಈ ಗಲಿಬಿಲಿಯಲ್ಲೇ ಮಹಾನುಭಾವನೊಬ್ಬ ಕೂಗಿ ಹೇಳಿದ "ನಮ್ಮ ಮನೆಲ್ಲಿ ಫಸ್ಟ್ ಏಡ್ಸ್ ಕಿಟ್ ಇದೆ ತರ್ತೀನಿ ಇರಿ". ಮಲ್ಗಿದ್ದ ಹೆ೦ಗಸರೆದ್ದುಬ೦ದು ಪ್ರಥಮೋಪಚಾರ ಮಾಡಿದರೂ ನವವಧು ಸರಿಯಾಗಿ ಚೇತರಿಸಿಕೊಳ್ಳದ ಕಾರಣ ರಾತೋರಾತ್ರಿ ಆಸ್ಪತ್ರೆಗೆ ರವಾನೆ. ಮೂರುದಿನ ಆಸ್ಪತ್ರೆ ವಾಸದ ನ೦ತರ ಚೇತರಿಸಿಕೊ೦ಡಳ೦ತೆ. ಈ ಘಟನೆ ಸುತ್ತ ಹತ್ತು ಕೇರಿಗಳಲ್ಲಿ, ನೆ೦ಟರಿಷ್ಟರ ಬಾಯಲ್ಲಿ, ಸುದ್ದಿ ಕಟ್ಟೆಯ ಕಲ್ಲುಗಳಮೇಲೆ ಹಲವು ದಿನಗಳಕಾಲ ಗುಸುಗುಸು ಸುದ್ದಿಯಾಗಿ ಬಣ್ಣಬಣ್ಣದ ರೂಪ ಪಡೆದು ನಲಿಯುತ್ತಿತ್ತು. ಆದ್ರೂ ಪಾಪ ಯಾರಿಗೂ ಇಷ್ಟು ಕೆಟ್ಟ ಸೆಕ್ಸಪೀರಿಯನ್ಸ್ (sex+experience) ಆಗಬಾರದು.



Monday, March 26, 2007

ಕಾಮಸೂತ್ರ

  • ಗಂಗಾಧರ ಚಿತ್ತಾಲ

ಅಂದು ಬೆತ್ತಲೆ ರಾತ್ರಿ

ಅರಿವೆ ಇರಲಿಲ್ಲ ಪರಿವೆ ಇರಲಿಲ್ಲ
ಅರೆನಾಚಿ ಮರೆಮಾಚಿ ಸರಿವುದಿರಲಿಲ್ಲ
ಜೀವ ಝಲ್ಲೆನೆ ಪೂರ್ಣ ನಗ್ನರಾಗಿ
ಒಬ್ಬರಲ್ಲೊಬ್ಬರು ನಿಮಗ್ನರಾಗಿ
ಮೊದಲ ನಂದನದಲ್ಲಿ ಸೆಳೆದ ಹಸಿವು
ಮತ್ತೆ ಹೊಡಕರಿಸೆ ನಂದದಲೆ ತುಸುವೂ
ಕೊಂಬೆಕೊಂಬೆಗೆ ತೂಗಿ ಬೀಗಿ ಬಯಕೆಯ ಹಣ್ಣು
ಹೊಡೆಯೆ ಕಣ್ಣು

ತಡೆಯಲಾರದೆ ಬಂದೆವೆದುರುಬದುರು
ಮೈಯೆಲ್ಲ ನಡುಕ, ತುಟಿಯೆಲ್ಲ ಅದುರು
ಅಂದು ಬೆತ್ತಲೆ ರಾತ್ರಿ

ಏನು ಮಿದು ನುಣುಪು ಸರ್ವಾಂಗ ಸ್ಪರ್ಶ
ಉಗುರು ಬೆಚ್ಚಗೆ, ಹಗುರು, ಆಹಾ ಜೀವಂಕರ್ಷ
ಮೈಯ ತಬ್ಬಿತು ಮೈಯ ನಗುವು ಹರ್ಷ

ಗುಬ್ಬಕ್ಕಿ ಮೊಲೆ ಬಂದು ಮುದ್ದಾಡಿದುವು ಎದೆಗೆ
ಮಿದ್ದಿದೊಲು ತೊಡೆ ಬಂದು ತೆಕ್ಕೆಯಿಟ್ಟವು ತೊಡೆಗೆ

ತುಟಿಗೆ ತುಟಿ ಮುಟ್ಟಿಸಿತು ಎಂಥ ಮಾತು
ಕಂಠನಾಳದಲೆಲ್ಲ ನಾಗಸಂಪಗೆಯಂತೆ ಉಸಿರು ಹೂತು
ಬಾಯ್ತುಂಬ ಜೇನು, ಕೈತುಂಬ ಮೊಲೆಹೂ
ಮಗ್ಗುಲು ತಿರುವಿದಲ್ನೆಲ್ಲ ಸುಖದ ಉಲುಹು

ಬೆದೆಯ ಕಾವಿಗೆ ಸಿಕ್ಕು ಮೆತ್ತೆ ಮೆತ್ತೆ
ಬಿಗಿದಪ್ಪಿ ಮುತ್ತಿಟ್ಟು ಮತ್ತೆ ಮತ್ತೆ
ತುಟಿ ತೆರೆದು ಕಟಿ ತೆರೆದು ಎಲ್ಲ ತೆರೆದು
ಒಡಲ ಹೂವನ್ನರಸಿ ಹೊಕ್ಕು ಬೆರೆದು

ಇದು ಬಯಕೆ, ಇದು ಹಸಿವೆ, ಇದುವೆ ದಾಹಾ
ಒಂದೆ ಉಸಿರಿನಲ್ಲಿತ್ತು ಅಯ್ಯೋ ಆಹಾ

ಹೊಲದುದ್ದ ನಡೆದಿತ್ತು ನೇಗಿಲ ಮೊನೆ
ಬಸಿರೆಲ್ಲ ಬಿರಿದು ಜೊಲ್ಲುಕ್ಕಿ ಸುರಿದು
ಬಸಿದು ಹೊರಚೆಲ್ಲಿತ್ತು ಜೀವದ ಸೊನೆ
ಅಂದು ಬೆತ್ತಲೆ ರಾತ್ರಿ

ತೆರೆದೆ ಇದೆ ಬಾಗಿಲವು, ನೇರ ಒಳ ಬಾ ಎಂದೆ
ನನ್ನ ಎದೆಕದವನೂ ತೂರಿ ನೀ ಒಳಬಂದೆ
ಏನು ಸುಮಧುರ ಸಹಜವೀ ಪ್ರವೇಶ

ಬೇಕಾದ್ದ ತಿನು ಎಂದೆ
ನನ್ನ ತೋಳುಗಳಲ್ಲಿ ಇಡಿಯ ನೀನು
ಬೇಕಾದ್ದ ತಕೋ ಎಂದೆ
ನಿನ್ನ ತೋಳುಗಳಲ್ಲಿ ಇಡಿಯ ನಾನು

ಆ ಒಂದು ಗಳಿಗೆಯಲಿ ಏನು ಗೈದರು ಮಾಫಿ
ಕಾಡಿದರು ಬೇಡಿದರು ಹಿಡಿಹಿಡಿದು ಆಡಿದರು ಮಾಫಿ
ಸಂದಿಯಲಿ ಮೂಲೆಯಲಿ ಕೈಹಾಕಿ ಬೆದಕಿದರು,
ಯಾವ ಗುಟ್ಟನು ಕೆದಕಿದರು ಮಾಫಿ

ಬರಿಗೈಲೆ ಬಂದು ಪರೆಕಳಚಿ ನಿಂತು
ಬೇಕಾದ್ದ ತಿನಿಸಿ ಬೇಕಾದ್ದ ತಿಂದು

ಕೊಟ್ಟುದೆನಿತು ನಾವು ಕೊಂಡುದೆನಿತು
ಉಣ್ಣಿಸಿದುದೆನಿತು ಉಂಡುದೆನಿತು
ಕಣ್ಮುಚ್ಚಿಯೂ ಕೂಡ ಕಂಡುದೆನಿತು
ಮಾತಿಲ್ಲದೆಯೂ ಕೂಡ ಅಂದುದೆನಿತು

ಅಂದು ಬೆತ್ತಲೆ ರಾತ್ರಿ

ಒಡಲಿಗೊಡಲನು ಬೆಸೆದು ನಿನ್ನ ಬಳಿ ಸಾರೆ
ಏಕಾಂತ ಸಮ್ಮತಿಯ ಆ ಒಂದು ಕ್ಷಣದಿಂದೆ
ಈ ಜಗತ್ತೇ ಬೇರೆ.

ಯಾವ ಹಿಗ್ಗಿನ ಸೆಲೆಯೋ ನಮಗೆ ಸಿಲುಕಿ
ಇಳೆಯ ಮೂಲಕು ನಮ್ಮ ಬೇರು ನಿಲುಕಿ

ಭೂಗರ್ಭ ಸುರಿದಿತ್ತು ಜೊಲ್ಲುಬಾಯಿ
ನಾವಿಂದು ಮನುಕುಲದ ತಂದೆತಾಯಿ

Wednesday, March 7, 2007

ಹೀಗೊ೦ದು ಸವೆ೯

2006 ರಲ್ಲಿ ABTS* ಎ೦ಬ ಸ೦ಸ್ಥೆ ಒ೦ದು ಅ೦ಶವನ್ನು ಮು೦ದಿಟ್ಟುಕೊ೦ಡು ಸುಮಾರು ಒ೦ದು ಲಕ್ಷ ಪಾಕಿಸ್ತಾನಿಗಳ ಸವೆ೯ ನಡೆಸಿತು. ಅದರಿ೦ದ ತು೦ಬಾ ಕುತೂಹಲಕಾರಿ ಫಲಿತಾ೦ಶ ಬೆಳಕಿಗೆ ಬ೦ತು. ಆವರು ಜನರಿಗೆ ಕೇಳಿದ ಪ್ರಶ್ನೆ ಇದು.

"ನಿಮಗೆ ಸೆಕ್ಸ್ ಗೆ ಪ್ರಾಶಸ್ತ್ಯವಾದ ಜಾಗ ಯಾವುದು?"

ಇದರ ಫಲಿತಾ೦ಶ ಹೀಗಿದೆ.

1% ಜನ ಪ್ರಕೃತಿ ಯಲ್ಲಿ ಏಕಾ೦ತವಾಗಿ ಅ೦ದರು

2% ಜನ ತಮ್ಮ ಬೆಡ್ ರೂಮ್ ತಮಗೆ ಚ೦ದ ಅ೦ದರು

3% ಜನ ಚಳಿ ಅಥವಾ ತ೦ಪಾದ ಪ್ರದೇಶ ಆಯ್ದು ಕೊ೦ಡರು

5% ಜನ ಸ್ವಿಜರ್ ಲ್ಯಾ೦ಡ್ ನ್ಯೂಜಿಲ್ಯಾ೦ಡ್ ರೋಮ್ ಗಳನ್ನ ಆಯ್ದು ಕೊ೦ಡರು

ಇನ್ನು ಉಳಿದ 89 ಪ್ರತಿಶತರು "ಏರಡು ಕಾಲುಗಳ ಮಧ್ಯದ್ದು ಅ೦ದರು"


*ಅಖಿಲ ಭಾರತ ತಲಬುದಾರರ ಸ೦ಘ(ABTS).

(ಗೆಳೆಯ ಹರ್ಷ ಕಳಿಸಿದ ಸರ್ವೆ ಇದು, ಆ ಪುಣ್ಯಾತ್ಮನಿಗೆ ಯಾರು ಯಾವಾಗ ಹೇಳಿದರೆಂದು ತಿಳಿದು ಬಂದಿಲ್ಲ!!)

Thursday, March 1, 2007

ಕಂಡಕ್ಟರ್ ಹತ್ತಿದ, ಡ್ರೈವರ್ ಹತ್ತಿದ....

ಮತ್ತೊಂದಿಷ್ಟು ಸಾಲುಗಳು...

೧. ಕಂಡಕ್ಟರ್ ಹತ್ತಿದ, ಡ್ರೈವರ್ ಹತ್ತಿದ, ಅಚೆ ಮನೆ ಭಾವ ಓಡಿ ಬಂದು ಹತ್ತಿದ, ನಿಂಗ ಮಾತ್ರ ಹತ್ತಿದ್ರೇ ಇಲ್ಲೆ..
( ಬಸ್ಸು ಹತ್ತದ ಗಂಡನನ್ನ ಹೆಂಡತಿ ಬೈಯುವ ಪರಿ)

೨. ಯಾರಾದ್ರೂ ಮಾಡವು ಇದ್ರೆ, ಉದ್ದಕೆ ಕೈ ಕಾಲು ನೀಡಿ ಮಲಗವು ಕಾಣಸ್ತು!
( ಕೆಲ್ಸ ಮಾಡುವವರು ಇದ್ರೆ..)

೩. ಆಳಗ ಬತ್ತ, ಅವು ಬೇರೆ ಮನೆಲಿ ಇಲ್ಲೆ, ನಾನೇ ಒಳಗೂ , ಹೊರಗೂ ನಿಂತು ಮಾಡ್ಸ್ ಗ್ಯಳವು..
( ಗಂಡ ಮನೇಲಿಲ್ಲ, ನಾನೇ ಎಲ್ಲ ಕೆಲ್ಸ ಮಾಡಿಸ್ಕೋಬೇಕು ಅಂತ, ಹೆಂಡತಿಯ ಅಳಲು)

೪. ಇವತ್ತು ನಂಗೆ ಬರಲೆ ಆಗ್ತಲ್ಲೆ, ಒಳಗೆಂತೂ ಹಚ್‍ಕ್ಯಳಡ!
(ನಾನು ಇವತ್ತು ಬರೋದಿಲ್ಲ, ಏನೊ ಅಡ್ಗೆ ಮಾಡ್ಬೇಡಾ ಅಂತ)

೫. ಕೂಸೇ ನಿಂಗೆ ಬೆಂಡೆಕಾಯಿ ಹಿಡಸ್ತಾ?, ತೊಂಡೆಕಾಯಿ ಹಿಡಸ್ತಾ?, ಮೂಲಂಗಿ, ಕ್ಯಾರೆಟ್ಟು? ಬಹುಶಃ ಹೀರೇಕಾಯಿ ಹಿಡಸ್ತಲ್ಲೆ ಮಾಡಿದ್ದಿ..
(ಯಾವ ತರಕಾರಿ ಇಷ್ಟ ಅಂತ ಕೇಳಿದ್ದು..)

೬. "ನೀನು ಇದ್ದಿದ್ದಿಲ್ಲೆ, ನಿನ್ ಹೆಂಡ್ತಿ ಇತ್ತು, ನಾನು ಅಲ್ಲಿಗೆ ಹೋದ್ದು ಎತ್ನೋಡಲೆ ಹೇಳಿ, ಅಲ್ಲೇ ಜಡ್ದು ಕವಳ ಹಾಕ್ಯಂಡು ಬಂದಿ..
( ಎತ್ತು ನೋಡಲು ಹೋದಾತ ಗೆಳೆಯನಿಗೆ ಹೇಳಿದ್ದು, ಜಡಿದು ಹಾಕಿದ್ದು ಕವಳ- ಎಲೆ ಅಡಿಕೆನ)

೭. "ನೀನು ಹಾಲು ಕುಡಿದೇ ಹೋದ್ರೆ ಕಂಡಕ್ಟ್ರಂಗೆ ಕೊಟ್ ಬಿಡ್ತಿ ನೋಡು!!
(ಮಗುವಿಗೆ ಬಾಟಲಿ ಹಾಲು ಕುಡಿಸುತ್ತಿದ್ದ ತಾಯಿ)

೮. ನಿಂಗೆ ಉಬ್ಬಿದ್ದಾ, ನಿಂಗೆ ಉಬ್ಬಿದ್ದಾ..
( ಊಟದ ಪಂಕ್ತಿಯಲ್ಲಿ, ಪೂರಿ ಬಡಿಸುತ್ತಾ..)

ಲಾಸ್ಟು, ಆದ್ರೆ ಇಂಪಾರ್ಟೆಂಟು,

೯. ಇವೆಲ್ಲಾ ಎನ್ ಕೇದವೇಯಾ..
( ಇವರೆಲ್ಲ, n.k (Northa Canara) ದವರು ಅಂತ ಹುಡುಗಿಯೊಬ್ಬಳು ತನ್ನ ಸ್ನೇಹಿತರನ್ನ ಪರಿಚಯ ಮಾಡಿಸಿದ್ದು)

Wednesday, February 14, 2007

ಪ್ರೀತಿ

  • ಬಿ.ಆರ್. ಲಕ್ಷ್ಮಣರಾವ್

ನೋಡಿದ, ಅವನು ಹೀಗೆ ನೋಡಿದ:
ಒಣಬೇರಿಗೆ ನೀರೂಡುವ ಹಾಗೆ ನೋಡಿದ
ಕೂಡಿದ, ನನ್ನ ಹೀಗೆ ಕೂಡಿದ:
ಹೊಸ ಚೇತನ ನನ್ನಲಿ ಹರಿವಂತೆ ಕೂಡಿದ

ನರಳಿದೆ, ಆಹಾ! ಹೇಗೆ ನರಳಿದೆ?
ಮೈಯ ತುಂಬ ಚಿಗುರು ನಿಮಿರಿದಂತೆ ನರಳಿದೆ
ಅರಳಿದೆ, ಹಿಗ್ಗಿ ಹೇಗೆ ಅರಳಿದೆ?
ಹೂವಿನೋಕುಳಿಯಲ್ಲಿ ಮಿಂದ ಹಾಗೆ ಅರಳಿದೆ.

ಸುರಿಸಿದ, ಒಲವ ಹೇಗೆ ಸುರಿಸಿದ?
ಆಗುಂಬೆಯ ಹುಚ್ಚುಮಳೆಯ ಹಾಗೆ ಸುರಿಸಿದ
ಫಲಿಸಿತು, ನನ್ನೊಳೇನು ಫಲಿಸಿತು?
ಜೊಂಪೆ ಜೊಂಪೆ ಹಣ್ಣು ತೂಗಿ ಜೀವ ಫಲಿಸಿತು.

ತುಂಬಿತು, ಎದೆಯೊಳೇನು ತುಂಬಿತು?
ನೂರು ಹಕ್ಕಿ ಹೈಕಳುಗಳ ಹಾಡು ತುಂಬಿತು
ಆದೆನು, ನಾನು ಏನಾದೆನು?
ಸುತ್ತ ತಂಪು ನೆರಳು ಹರಡಿ ಧನ್ಯಳಾದೆನು.


ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ.

[ಪ್ಲೀಸ್ ನೋಟ್: ಈ ಹಿಂದೆ ಇಲ್ಲಿ ಪ್ರತಿಭಾ ನಂದಕುಮಾರರ ಒಂದು ಕವಿತೆಯನ್ನು ಪೋಸ್ಟ್ ಮಾಡಿದ್ದೆ. ಅದರಲ್ಲಿ, ನಾವು 'ಅಶ್ಲೀಲ' ಎಂದು ಪರಿಗಣಿಸುವ ಎಲ್ಲಾ ಶಬ್ದಗಳೂ ಬಳಕೆಯಾಗಿದ್ದರೂ ಆ ಕವಿತೆ ಅಶ್ಲೀಲತೆಯ ಸೋಂಕಿನಿಂದ ದೂರವಿತ್ತು. ಬಿ.ಆರ್.ಎಲ್.ರವರ ಈ ಕವಿತೆ 'ಪ್ರೀತಿ' ಎಂಬ ಶೀರ್ಷಿಕೆ ಹೊಂದಿದೆಯಾದರೂ ಇದು ಪ್ರಣಯದ ಬಗ್ಗೆ ಬರೆದಿರುವ ಕವಿತೆ. ಯಾವುದೇ ಅಶ್ಲೀಶ ಶಬ್ದವನ್ನೂ ಬಳಸದೆಯೂ 'ಹೇಳಬೇಕಾದ್ದನ್ನೆಲ್ಲ' ಹೇಳಿರುವುದು ಇಲ್ಲಿ ಗಮನಾರ್ಹ. ಪ್ರೀತಿಯ ದಿನದ ಪ್ರೀತಿಯ ಪೋಸ್ಟಿಂಗ್ -ಸು]

Friday, February 2, 2007

ಓಶೋ ಬಗ್ಗೆ ಒಂಚೂರು...

[ಈಗ ನಾಲ್ಕಾರು ವರ್ಷಗಳ ಕೆಳಗೆ 'ಹಾಯ್ ಬೆಂಗಳೂರ್'ನಲ್ಲಿ "ಸೆಕ್ಸು, ಲೈಫು, ರಜನೀಶು" ಎಂಬ ಶೀರ್ಷಿಕೆಯಡಿ ಒಂದು ಲೇಖನ ಪ್ರಕಟವಾಗಿತ್ತು -ಎರಡು ಕಂತುಗಳಲ್ಲಿ. ಆ ಲೇಖನ ನನಗೆ ತುಂಬಾ ಇಷ್ಟವಾಗಿತ್ತಾದ್ದರಿಂದ ಅದರಿಂದ ಹೆಕ್ಕಿದ ಕೆಲ ಪ್ಯಾರಾಗಳನ್ನು ನೋಟ್ ಮಾಡಿಟ್ಟುಕೊಂಡಿದ್ದೆ. ಅವನ್ನೇ ಜೋಡಿಸಿ ಇಲ್ಲಿ ಕೊಡುತ್ತಿದ್ದೇನೆ.]

ಅವನ ಹೆಸರು ರಜನೀಶ್.

ಜಗತ್ತು ಅವನನ್ನು 'ಓಶೋ' ಅಂತ ಕರೆಯುತ್ತದೆ. ಅವನೊಬ್ಬ ಯೋಗಿಯೋ, ದಾರ್ಶನಿಕನೋ, ಸಾಕ್ಷಾತ್ ದೇವರೋ ಅಥವಾ ಹುಚ್ಚನೋ..? ಒಟ್ಟಿನಲ್ಲಿ ನಮ್ಮಂತ ಚಿಲ್ಲರೆ ಮನುಷ್ಯನಂತೂ ಅಲ್ಲ. ಅವನು ಹೇಳಿದ್ದನ್ನು ನಾವು ಒಪ್ಪುತ್ತೇವೋ ಬಿಡುತ್ತೇವೋ, ಅವನು ಹೇಳಿಕೊಟ್ಟಿದ್ದನ್ನು ಅಳವಡಿಸಿಕೊಳ್ಳುತ್ತೇವೋ ಬಿಡುತ್ತೇವೋ, ಆದರೆ ಅವನನ್ನು ನಾವು ಕಡೆಗಣಿಸಲಿಕ್ಕೆ ಸಾಧ್ಯವಿಲ್ಲ. You can't ignore him. ಆತ ಯಾವ್ಯಾವುದೋ ಸಂದರ್ಭದಲ್ಲೆಲ್ಲಾ ನೆನಪಾಗಿ ಕಾಡಿಬಿಡುತ್ತಾನೆ.

ಓಶೋ ಮಾತನಾಡಲು ಶುರುಮಾಡಿದ ವಿಷಯವೇ ಅಂಥದಿತ್ತು. ಭಾರತದ ಮಟ್ಟಿಗಂತೂ ತೀರ 'ಮುಚ್ಚಿಡಬೇಕಾದಂತಹ ಸಂಗತಿ' ಎಂಬಂತೆ treat ಆಗುವ ವಿಷಯವಾದ 'sex' ಬಗ್ಗೆ ಆತ ಮಾತನಾಡತೊಡಗಿದ. ಅವನನ್ನು ಜಗತ್ತು 'Teacher of Vagina' (ಯೋನಿಗುರು) ಅಂತ ಕರೆಯಿತು. 'ಕಾಮದ ಮೂಲಕ ದೇವರನ್ನು ಕಾಣಿ' ಎಂಬ ವಿಶಿಷ್ಟ ಸಿದ್ಧಾಂತವನ್ನು ರೂಪಿಸಿದವನು ರಜನೀಶ್. ಜನ ಅವನೆಡೆಗೆ ಭಯ, ಕುತೂಹಲ, ಅಚ್ಚರಿ, ಅಪಹಾಸ್ಯಗಳ ದೃಷ್ಟಿಯಿಂದ ನೋಡಿದರು. ಅವನ ನೀಳ ಬಿಳಿ ಗಡ್ಡ ಮತ್ತು ತೀಕ್ಷ್ಣವಾದ ದೊಡ್ಡ ಕಣ್ಣುಗಳೆಡೆಗೆ ಜನ ಇನ್ನಿಲ್ಲದಂತೆ ಆಕರ್ಷಿತರಾದರು. ಅವನ ಉಪನ್ಯಾಸಗಳನ್ನು ಕೇಳಲು ಜನ ಕ್ಯೂ ನಿಂತು ಕಾದರು.

ಅವನ ಒಂದು ಉಪನ್ಯಾಸ ನಡೆಯುತ್ತಿತ್ತು. ರಜನೀಶ್ ಹೇಳುತ್ತಿದ್ದ: 'ಇವತ್ತಿನ ಈ ಜಗತ್ತಿನಲ್ಲಿ ನೀವು ದೇವರನ್ನು ಕಾಣಲಿಕ್ಕೆ ಮಾಡುವ ಹುಚ್ಚು ಪ್ರಯತ್ನಗಳಿಂದ ಯಾವುದೇ ಪ್ರಯೋಜನವೂ ಇಲ್ಲ. ಯಾಕೆಂದರೆ ನಿಮಗೆ ನಿಮ್ಮ ಸ್ವಾರ್ಥವನ್ನು, ಸ್ವಾಭಿಮಾನವನ್ನು ಬದಿಗಿಟ್ಟು ಒಂದು ನಿಮಿಷವೂ ಬದುಕುವುದಕ್ಕೆ ಸಾಧ್ಯವಿಲ್ಲ...' ಜನ convince ಆದಂತೆ ಕಾಣಲಿಲ್ಲ. ತಕ್ಷಣ ಅಲ್ಲಿದ್ದ ಒಬ್ಬನನ್ನು ಕರೆದು ಕೇಳಿದ ಓಶೋ: 'ನೀನು ಯಾರು?' ಅಂತ. ಆ ವ್ಯಕ್ತಿ ತಕ್ಷಣ ಉತ್ತರಿಸಿದ: 'ನಾನು ರಮೇಶ' ಅಂತ. ಮತ್ತೊಬ್ಬನನ್ನು ಕರೆದು ಕೇಳಿದ ಓಶೋ: 'ನೀನು ಯಾರು?' ಆತ ಉತ್ತರಿಸಿದ: 'ನಾನು ಈ ರಾಜ್ಯದ ಮುಖ್ಯಮಂತ್ರಿ'. ಮತ್ತೊಬ್ಬನನ್ನು ಕರೆದು ಅದೇ ಪ್ರಶ್ನೆ ಕೇಳಿದಾಗ ಅವನು ತಾನು ಇಂಥಾ ಕಂಪನಿಯ ಮಾಲೀಕ ಅಂದ.

ಓಶೋ ಹೇಳಿದ: 'ನೋಡಿ, ಇಲ್ಲಿರುವವರಿಗೆ ಯಾರಿಗೂ ತಾವು ಯಾರು ಎಂಬುದೇ ಗೊತ್ತಿಲ್ಲ. ರಮೇಶ ಎಂಬುದು ಕೇವಲ ತನ್ನ ಹೆಸರು ಎಂಬುದರ ಅರಿವಿಲ್ಲ. ತಾನೇ ರಮೇಶ ಅಂದುಕೊಂಡುಬಿಟ್ಟಿದ್ದಾನೆ! ಮುಖ್ಯಮಂತ್ರಿ, ಕಂಪನಿಯ ಮಾಲೀಕತ್ವ -ಇವುಗಳು ಕೇವಲ ತನಗೆ ದೊರಕಿದ ಹುದ್ದೆಗಳು ಎಂಬುದರ ಅರಿವೇ ಇವರಿಗಿಲ್ಲ. ಇಂಥವರು ದೇವರನ್ನು ಕಾಣಲು ಸಾಧ್ಯವೇ? ನಿಮ್ಮೆಲ್ಲರ ಪರಿಸ್ಥಿತಿಯೂ ಇದೇ.

'ದೇವರು ಅಂತ ಕರೆಯಲ್ಪಡುವ ಫೋಟೋದ ಮುಂದೋ, ಮೂರ್ತಿಯ ಎದುರೋ, ಕಲ್ಲಿನ ಸಮ್ಮುಖದಲ್ಲಿ ಮಂಡಿಯೂರಿಯೋ 'ದೇವರೇ ನನಗೆ ಒಳ್ಳೆಯದು ಮಾಡು' ಅಂತಲೇ ಎಲ್ಲರೂ ಬೇಡಿಕೊಳ್ಳುವುದು. ಆದರೆ ಅವನು ದೇವರ ಬಳಿ ಅದೆಷ್ಟೇ ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದೀನಿ ಅಂತ ಅಂದುಕೊಂಡರೂ, ಆ ಭಕ್ತಿಯನ್ನು ಅವನು ತೋರುವುದು ಕೇವಲ ತನಗಾಗಿ, ತನ್ನವರ ಒಳಿತಿಗಾಗಿ. ಸ್ವಾರ್ಥ ಅವನನ್ನು ಎಂದಿಗೂ ಬಿಡದೇ ಕಾಡುತ್ತದೆ. ಅಂಥವರಿಗೆ 'ನಿಜವಾದ ದೇವರು' ಕಾಣಲು ಸಾಧ್ಯವೇ? ಊಹೂಂ, impossible.

'ಆದ್ದರಿಂದ, ನೀವು ದೇವರನ್ನು ಕಾಣಬಯಸುವಿರೇ ಹೌದಾದರೆ, ನೀವು ಅನುಸರಿಸಿಬಹುದಾದ ಕೆಲವೇ ಕೆಲವೊಂದು ಮಾರ್ಗಗಳಿವೆ... ಅದರಲ್ಲಿ ಒಂದು ಸುಖವಾದ ನಿದ್ರೆ! ನೀವು ಮಾಡುವ ಸುದೀರ್ಘ-ಸುಖ ನಿದ್ರೆಯಲ್ಲಿ, ಒಟ್ಟು ಎಂಟು ಗಂಟೆ ನಿದ್ರೆ ಮಾಡಿದರೆ ಅದರಲ್ಲಿ ಎರಡು ಗಂಟೆ ನಿಜವಾದ ನಿದ್ರೆ ಅಂತ ಒಂದು ಇರುತ್ತದೆ. ಆ ನಿದ್ರೆಯಲ್ಲಿ ಕನಸಿರುವುದಿಲ್ಲ, ಕನವರಿಕೆಯಿರುವುದಿಲ್ಲ, at least ನೀವು ಯಾರೆಂಬುದರ ಅರಿವೇ ನಿಮಗೆ ಇರುವುದಿಲ್ಲ. ವಿಜ್ಞಾನಿಗಳು ಅದನ್ನು small death ಅನ್ನುತ್ತಾರೆ. ಅಂಥಾ ಸಮಯದಲ್ಲಿ, ಹಾಂ, ಅಂತಹ ಸಮಯದಲ್ಲಿ ನೀವು ದೇವರ ಕೈ ಹಿಡಿದು ನಡೆಯುತ್ತಿರುತ್ತೀರಿ...!' ಅಂದ ರಜನೀಶ್. ಜನ ಅವನೆಡೆಗೆ ನಿಬ್ಬೆರಗಾಗಿ ನೋಡುತ್ತಿದ್ದರು. 'ಈಗ ಹೇಳಿ ನೀವು: ಮಲಗಿ ಸುಖವಾಗಿ ನಿದ್ರಿಸುತ್ತಿರುವ ನಿಮ್ಮ ಮಗುವನ್ನು ಬಡಿದು ಎಬ್ಬಿಸುತ್ತೀರಾ? 'ನಾಳೇನೇ history exam ಇದೆ. ಅಲೆಕ್ಸಾಂಡರ್ ಹುಟ್ಟಿದ ದಿನ ಬಾಯಿಪಾಠ ಮಾಡು' ಅಂತ ಗದರಿಸ್ತೀರಾ? ಆ ಅಲೆಕ್ಸಾಂಡರ್ ಎಂಬ ಯುದ್ಧಬಾಕ ಹುಟ್ಟದಿದ್ರೇನೇ ಚೆನ್ನಾಗಿತ್ತು! ಗೊತ್ತಾಯ್ತಲ್ಲ, ಸುಖವಾಗಿ ನಿದ್ರಿಸುವುದನ್ನು ಕಲಿಯಿರಿ ಮೊದಲು' ಅಂದ ರಜನೀಶ್. ಜನ ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದರು.

'ಎರಡನೆಯದು ಮಿಲನ ಮಹೋತ್ಸವ. ಕಾಮವೆಂಬುದು ಹೊಲಸು ಎಂಬ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ಮೊದಲು ಹೊರಹಾಕಿ. ಅದು ನಿಮ್ಮನ್ನು ಮಾನಸೋಲ್ಲಾಸಗೊಳಿಸಿ ದೇವರೆಡೆಗೆ ಕರೆದೊಯ್ಯುವ ಕ್ರಿಯೆ. ಮಲಗುವ ಕೋಣೆಯಲ್ಲಿ ಹಿತವಾದ ಗಾಳಿ ಬೀಸುತ್ತಿರಲಿ. ಹದವಾದ ಬೆಳಕಿರಲಿ. ಕರ್ಪೂರದ ಘಮವಿರಲಿ. ಮೃದುವಾದ ಸಂಗೀತ ಕೇಳಿಬರುತ್ತಿರಲಿ. ಅಂಥದ್ದೊಂದು ಅಪೂರ್ವ ಸನ್ನಿವೇಶದಲ್ಲಿ ನೀವು ಅವಳೊಂದಿಗೆ, ಅವಳು ನಿಮ್ಮೊಂದಿಗೆ ಬೆತ್ತಲಾಗುತ್ತಾ, ಮಗ್ಗುಲಾಗುತ್ತಾ, ಹೊರಳಾಡುತ್ತಾ, ನಲಿದಾಡುತ್ತಾ, ಇಬ್ಬರೂ ಬೆರೆತುಹೋಗುತ್ತಾ, ಬೆಸೆದುಕೊಳ್ಳುತ್ತಾ...ನೀವು ಅನುಭವಿಸುವ ಆ ಸುಖವಿದೆಯಲ್ಲಾ, ಆ ಕಟ್ಟ ಕಡೆಯ ಕ್ಷಣವಿದೆಯಲ್ಲಾ, ಹಾಂ, ಆಗ ನೀವು ದೇವರನ್ನು ಕಾಣುತ್ತೀರಿ. ಆಗ ನೀವು ನೀವಾಗಿರುವುದಿಲ್ಲ. ಅಂತಹ ಕ್ಷಣಗಳಲ್ಲಿ ನಿಮಗೆ ದೇವರ ದರುಶನವಾಗುತ್ತದೆ. ಅಂತಹ ಕ್ಷಣಗಳನ್ನು ಹೆಚ್ಚಿಸಿಕೊಳ್ಳಿ' ಅಂದ ಓಶೋ.

'ಮೂರನೆಯದು, ನೀವು ತುಂಬಾ ಆಶ್ಚರ್ಯವಾಗುವಂತಹ, ತುಂಬಾ ಭಯವಾಗುವಂತಹ ಸನ್ನಿವೇಶದಲ್ಲಿ ಭಾಗಿಯಾದಾಗ. ನೀವು ಭಯಂಕರವಾಗಿ excite ಆಗುತ್ತೀರಿ ನೋಡಿ, ಆಗ ನೀವು ನೀವಾಗಿರುವುದಿಲ್ಲ. ಅದಕ್ಕೆ ನೀವು ಹಿಮಾಲಯ ಪರ್ವತವನ್ನು ಹತ್ತಬೇಕಾಗುತ್ತದೆ. ಅಂಥದ್ದೊಂದು ಪರ್ವತವನ್ನು ಹತ್ತಿ ತುತ್ತ ತುದಿ ತಲುಪಿ, ಒಂದು ಕ್ಷಣ ತಿರುಗಿ ಕೆಳಗೆ ನೋಡುತ್ತೀರಲ್ಲಾ, ಆಗ ಆಗುವ ಭಯ.... ಹಾಂ, ಆಗ ನಿಮಗೆ ದೇವರು ಸಿಗುತ್ತಾನೆ! ವಿಪರೀತ ವೇಗವಾಗಿ drive ಮಾಡುತ್ತಿರುವಾಗ, ಎದಿರುಗಡೆಯಿಂದ ಬಂದ ಲಾರಿಯೊಂದು ನಿಮಗೆ ಗುದ್ದೇಬಿಡುತ್ತದೆ ಅನ್ನುವ ಕ್ಷಣವಿದೆಯಲ್ಲಾ, ಆಗ ನೀವು ನಿಜವಾಗಿಯೂ excite ಆಗಿರುತ್ತೀರಿ. ಆಗ ನೀವು ರಮೇಶನಾಗಿರುವುದಿಲ್ಲ; ದೊಡ್ಡ ಕಂಪನಿಯ manager ಆಗಿರುವುದಿಲ್ಲ; ರಾಜ್ಯದ ಮುಖ್ಯಮಂತ್ರಿಯಾಗಿರುವುದಿಲ್ಲ... ನಿಮ್ಮನ್ನು ಕೇವಲ ಆ ಭಯ, ಆ excitement ಆವರಿಸಿಕೊಂಡಿರುತ್ತದೆ. ಆಗ ನೀವು ದೇವರಲ್ಲಿ ಐಕ್ಯವಾಗಿರುತ್ತೀರಿ. ಅಂತಹ ಸನ್ನಿವೇಶಗಳನ್ನು ಹೆಚ್ಚು ಹೆಚ್ಚು ಮಾಡಿಕೊಳ್ಳುತ್ತಾ ಹೋಗಿ. ಹೆಚ್ಚು ಹೆಚ್ಚು ಅಚ್ಚರಿಗಳಿಗೆ ನಿಮ್ಮನ್ನು ತೆರೆದುಕೊಳ್ಳುತ್ತಾ ಹೋಗಿ. ತನ್ಮೂಲಕ ನೀವು ದೇವರೊಂದಿಗಿರುವ ಅವಕಾಶಗಳು ಹೆಚ್ಚಾಗುತ್ತಾ ಹೋಗುತ್ತವೆ' -ಅಂದ ರಜನೀಶ್.

ಎದುರಿಗೆ ಕುಳಿತಿದ್ದ ಜನ ಚಪ್ಪಾಳೆ ತಟ್ಟಿದರು. ನೀನೇ ದೇವರು ಎನ್ನುತ್ತಾ ಅವನ ಕಾಲಿಗೆರಗಿದರು. ಆತ ಭಾರತದಲ್ಲಿದ್ದಾಗಲಾಗಲೀ, ಬೇರೆ ದೇಶದಲ್ಲಿದ್ದಾಗಾಗಲೀ, ಜನ ಅವನೆಡೆಗೆ ಮುಗಿಬಿದ್ದು ಹೋದರು. ಅವನ ಭಾಷಣವೊಂದನ್ನು ಕೇಳಲು ಸಾಲುಗಟ್ಟಿ ನಿಂತರು. ಹಾಗೆ ನಿಂತ ಜನರನ್ನುದ್ದೇಶಿಸಿ 'ಅಲ್ಲಿ ಪಶ್ಚಿಮದಲ್ಲಿ ಸುಂದರ ಸೂರ್ಯಾಸ್ತವಾಗುತ್ತಿದೆ. ಅದನ್ನು ನೋಡುವುದು ಬಿಟ್ಟು ನನ್ನ ಭಾಷಣಕ್ಕಾಗಿ ವೇದಿಕೆ ನೋಡುತ್ತಿದ್ದೀರಲ್ಲಾ..? ನನ್ನದು ನಾಳೆಯೂ ಇರುತ್ತದೆ. ಆದರೆ ಇವತ್ತಿನ ಸೂರ್ಯಾಸ್ತ ತಪ್ಪಿಸಿಕೊಂಡರೆ, ನೀವು ಅಷ್ಟರಿಂದ ವಂಚಿತರಾದಂತೆಯೇ!' ಅಂತ ವಿಚಿತ್ರವಾಗಿ ಎಚ್ಚರಿಸಿ ಹೇಳಿದವ ರಜನೀಶ್.

ಆತ ಮೂರ್ತಿಪೂಜೆಯನ್ನು ವಿರೋಧಿಸಿದ, ದೇವರನ್ನು ಕಾಣುತ್ತೀನಿ ಅಂತ ತಪಸ್ಸಿಗೆ ಹೊರಟವರನ್ನು ಹೀಯಾಳಿಸಿದ, ಎಂಥಾ ಪರಮ ನಾಸ್ತಿಕನಿಗೂ ದೇವರನ್ನು ತೋರಿಸುತ್ತೀನಿ ಅಂತ ಹೊರಟ. 'ಕಾಮದ ಮೂಲಕ ದೈವದರ್ಶನ' ಎಂಬ ತನ್ನ ಸಿದ್ಧಾಂತ ಸಾಧನೆಗಾಗಿ ತಾನೇ ಅನೇಕ ಸಾಮೂಹಿಕ ವೇಶ್ಯಾವಾಟಿಕೆಗಳನ್ನು ಸೃಷ್ಟಿಸಿದ. ಇಂತಹ ಕಾರಣಗಳಿಗಾಗಿಯೇ ಅಮೆರಿಕಾ ಸರ್ಕಾರದಿಂದ ಬಂಧಿತನಾಗಿ ಜೈಲು ಸೇರಿದ. ಬಿಡುಗಡೆಯಾದ. Aids ನಂತಹ ರೋಗ ಬಂದಾಗ ನಿರೋಧ್ ಬಳಸಿ ಎಂಬ ಹುಚ್ಚು ಸಲಹೆ ನೀಡಿದ. ದುಡ್ಡು ಅವನನ್ನು ಹುಡುಕಿಕೊಂಡು ಬಂತು, ಜನಪ್ರಿಯತೆ, ಹಣ, ಕೀರ್ತಿ ಅವನನ್ನು ಮುಚ್ಚಿಹಾಕಿಬಿಟ್ಟಿತು.

ಒಟ್ಟಿನಲ್ಲಿ ಆತ ಹತ್ತೊಂಬತ್ತನೇ ಶತಮಾನ ಕಂಡ ಒಬ್ಬ ಮಹಾನ್ ದಾರ್ಶನಿಕ ಎಂಬುದು ಮಾತ್ರ ನಿಜ.

Wednesday, January 31, 2007

ಗಂಡ್ ಬಸ್ಸು...

ಮೊನ್ನೆ ಜನವರಿ ಇಪ್ಪತ್ತೊಂದರ ಭಾನುವಾರ ಸಿರ್ಸಿಗೆ ಬರಬೇಕೆಂದು ಉಮ್ಮಚ್ಗಿ ಬಸ್ ನಿಲ್ದಾಣದಲ್ಲಿ ನಾನು, ಹರ್ಷ ಹಾಗು ರವೀಂದ್ರ ಬಸ್ಸಿಗಾಗಿ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲಿಯೇ ಯಲ್ಲಾಪುರ ಕಡೆಯಿಂದ ಕೆಂಪು ಬಣ್ಣದ ಗಂಡು ಬಸ್ಸೊಂದು ಬಂದು ನಿಂತಿತು.

ನಾನಂತು ಗಂಡು ಬಸ್ಸನ್ನು ನೋಡದೇ ಅದೆಷ್ಟೋ ದಿನಗಳಾಗಿದ್ದವು. ಈಗೇನಿದ್ದರೂ ಹೆಣ್ಣುಬಸ್ಸುಗಳದ್ದೇ ಕಾರು-ಬಾರು. ಹಾಗೆಂದುಕೊಳ್ಳುತ್ತಲೇ ಬಸ್ಸೇರಿದವನು, ಅದನ್ನೇ ಗೆಳೆಯರ ಬಳಿ ಹೇಳಿದೆ. ಮೊದಲು ಅವರಿಗೆ ಅದೇನೆಂದು ಅರ್ಥವಾಗದಿದ್ದರೂ, ಬಿಚ್ಚಿ ಹೇಳಿದ ಮೇಲೆ 'ಗಂಡು ಬಸ್ಸುಗಳ ಸಂಖ್ಯೆ ಗಣನೀಯವಾಗಿ ಕುಗ್ಗಿದೆ' ಯೆಂದು ಅವರೂ ಒಪ್ಪಿದರು.

ಮೊದಲೆಲ್ಲಾ ಬರೀ ಗಂಡು ಬಸ್ಸುಗಳೇ ಇರುತ್ತಿದ್ದವು. ಬಹುಷಃ, ನಾನು ಮೊಟ್ಟಮೊದಲು ಹೆಣ್ಣು ಬಸ್ಸನ್ನು ನೋಡಿದ್ದು ಬೆಂಗಳೂರಿನಲ್ಲಿಯೇ ಇರಬೇಕು. ಈಗೀಗ ಊರಕಡೆಗೂ ಹೆಣ್ಣುಬಸ್ಸುಗಳೇ ತುಂಬಿಹೋಗಿವೆ. ಎಲ್ಲರೂ ಅವನ್ನೇ ಇಷ್ಟಪಡುತ್ತಾರೇನೋ?!

ಗಂಡು ಬಸ್ಸಿಗಳಿಗಾದರೆ ಹಿಂದುಗಡೆ ಮಾತ್ರ ಬಾಗಿಲು. ಈಗೀಗ ಬರುತ್ತಿರುವ ಬಸ್ಸುಗಳಿವೆಯಲ್ಲ, ಸಿಟಿ ಬಸ್ಸುಗಳಂತವು; ಎರಡು ಬಾಗಿಲಿನವು. ಅವು ಹೆಣ್ಣು ಬಸ್ಸುಗಳು. ಯಾಕೆಂದರೆ ಅವಕ್ಕೆ ಎರಡು ಬಾಗಿಲುಗಳು.


ಮುಂದುಗಡೆಯಿಂದಲೂ ಹತ್ತಬಹುದು, ಹಿಂದುಗಡೆಯಿಂದಲೂ ಹತ್ತಬಹುದು.

Tuesday, January 30, 2007

ತಡಿ ತಡಿ ಅಂದಿ , ಕೇಳಿದ್ನಿಲ್ಲೆ.....

೧. ಮಲೆನಾಡಿನ ಯಾವುದೋ ವಿಶೇಷದ ಮನೆ,
" ತಡಿ ತಡಿ ಅಂದಿ , ಕೇಳಿದ್ನಿಲ್ಲೆ, ಗಡ್ ಬಡೆ ಮಾಡಿ ಹಾಕ್ಭುಟ, ಹರ್ದೋಗವನೆ ಮಾರಾಯ್ತಿ!"
(ಅಪ್ಪೆ ಹುಳಿ ಬಡಿಸಿದ ಮಾಣಿಯನ್ನು ಬೈದುಕೊಳ್ಳುವ ಪರಿ)

."ತೋ, ಒಂದೂ ಏಳ್ತಾ ಇಲ್ಲೆ ಮಾರಾಯ್ತಿ, ಆ ಭಟ್ರಿಗಾರೂ ಒಂದು ಎದ್ದಿದ್ರೆ ಸಾಕಾಗಿತ್ತು!"
(ಶ್ರಾದ್ಧದ ದಿನ ಅಡುಗೆಮನೆಯಲ್ಲಿ "ತೊಡದೇವು" ಮಾಡುತ್ತಿದ್ದ ಹೆಂಗಸರು:)
೩.
"ಬೆಳಗಿನ ಜಾವದ ತಂಕ ಅಷ್ಟೇನೂ ಚೊಲೋ ಆಗಲ್ಲೆ , ಆದ್ರೆ ಬೆಳ್ಗಿನ್ ಜಾವದಲ್ಲಿ ಆ ಹೆಗ್ದೇರು ಮಂಡಿ ಹಚ್ಚಿ ಮಾಡ್ದಾ ನೋಡು, ಎಂತಾ ಮಾಡ್ದ್ವೇ! ಯಂಗಂತೂ ಅವು ಮಾಡಿದ್ದು ಸಾಕು ನೋಡು, ನಿಂಗೆ?!"
(ಯಕ್ಷಗಾನ ನೋಡಿಕೊಂಡು ಬಂದ ಹುಡುಗಿಯರಿಬ್ಬರು ಮಾತಾಡಿಕೊಳ್ಳುತ್ತಿದ್ದಿದ್ದು!)
೪. "ಅಲ್ಲಾ ಭಾವಯ್ಯಾ, ನಿನಗೇಳದು ಯಂಗೆ ಎದ್ದಿದ್ದಿದ್ರೆ, ಜಡದು ಕಾಣಸ್ತಿದ್ದಿ ಮಾರಾಯ!! ಚೆ!"
(ಇಸ್ಪೀಟು ಮಂಡಲದಲ್ಲಿ ಮಾತುಕತೆ!)
೫. "ಭಾವ ನೀನು ಯನ್ನ ಹತ್ರ ಮಲ್ಕ್ಯತ್ತೆ ಅಂತ ಹೇಳಿದ್ದಕ್ಕೆ ನಾನು ಹಾಸ್ಗೆ ಬಿಚ್ಚಿ ಇಟ್ಟಿದ್ದಿದ್ದಿ. ನೀ ನೋಡಿರೆ ಬೆಳತಂಕ ಆಟ ಆಡಿದ್ದೆ!"
( ಬೆಳಗಿನ ವರೆಗೂ ಇಸ್ಪೀಟು ಆಡಿದ ಭಾವನನ್ನ ತರಾಟೆಗೆ ತೆಗೆದುಕೊಂಡ ನಾದಿನಿ..
೬. "ಅವು ಮಾಡ್ತೀ ಮಾಡ್ತೀ ಅಂತ ಹೇಳಿ ಕಡಿಗೂ ಮಾಡಿದ್ವೇ ಇಲ್ಲೆ ನೋಡೇ ಅತ್ಗೆ! ನಾನು ಕಾದಿದ್ದೇ ಬಂತು!"
(ಫೋನು)

೭. ೮೦ರ ಅಜ್ಜಿಯೊಂದು ಮನೆಯ ಹಿತ್ತಿಲಲ್ಲಿ ಗೊಣಗುತ್ತಿತ್ತು!
" ಮನ್ನೆ ಮನೆಲಿ ಸತ್ನಾರಣ್ ಕತೆ, ಜನಾ ಅಂದ್ರೆ ಜನ, ಯಾನು ಕಚ್ಚೆನ ತೊಳ್ದು ಹಿತ್ಲಾಕಡೆ ನ್ಯಾಲೆ ಮೇಲೆ ವಣ್ಸಿದಿದ್ದಿ, ಸುಬ್ರಾಯನೋ ಎಂತೋ ಅಲ್ಲೆ ಪಕ್ಕಕ್ಕೆ ಹಾಕಿದಿದ್ದ, ಬೆಳ್ಗೆ ಬೆಗ್ಗನೆ ಕತ್ಲೇಲೇ ಸ್ನಾನ ಮಾಡ್ಕ್ಯಂಡು ಕಚ್ಚೆ ಸುತ್ತಿದ್ದಿ, ತುರ್ಕೇ ಅಂದ್ರೆ ತುರ್ಕೇ! ಕಡಿಗೆ ನೋಡಿರೆ ಹುಚ್ಚೂ ಮುಂಡೆ ಮಕ್ಳು, ಯನ್ ಕಚ್ಚೆ ಕೊಚ್ಚಿ ಕವಳದ್ ಬಟ್ಲಾಗೆ ಇಟಿದ, ಯಾನು ಹೊಗೆಸೊಪ್ಪು ಸುತ್ತಿಗಿದಿ,!!

Thursday, January 25, 2007

ಬಸ್ಸು-ಬರಹ

ಬಸ್ಸಿನಲ್ಲಿ (ಒಳಗೂ, ಹೊರಗೂ) ನ ಬರಹಗಳು ಕೆಲವೊಮ್ಮೆ ಅಪಾರ ಅರ್ಥ, ಅನರ್ಥ ಹಾಗು ಅಪಾರ್ಥಗಳನ್ನು ಕೊಡುತ್ತವೆ.

ಹೀಗೊಂದು, ಅಂತದೇ ತುಣುಕು. ಗೆಳೆಯ ಹೇಳಿದ್ದು. ಒಂದು ಬಸ್ಸಿನ ಮೇಲೆ ಹೀಗೆ ಬರೆಯಲಾಗಿತ್ತಂತೆ.:

ಹೆಂಗಸರು ಕೈತೋರಿಸಿದಲ್ಲಿ ನಿಲ್ಲುವ ವಾಹನ ಗಂಡಸರು ಸಾಲಾಗಿ ಬನ್ನಿ

Wednesday, January 24, 2007

ಮಹಾನಿರ್ಗಮನ

  • ಪ್ರತಿಭಾ ನಂದಕುಮಾರ್

ಒಳಗೆ ಬಂದದ್ದು ಮೆಲ್ಲಮೆಲ್ಲಗೆ ಮಳ್ಳ ಹೆಜ್ಜೆಗಳಲ್ಲಿ
ಇಂಚಿಂಚೇ ಆಕ್ರಮಿಸುತ್ತ ಸೀಳುತ್ತ ನೆಲ ಮೈಲಿಗಲ್ಲುಗಳನ್ನು
ನೆಡುತ್ತ ಕೊನೆಗೆ ಪೂರ್ಣ ಪೀಠಸ್ಥ ಸ್ಥಾಪಿಸಿ ಚಕ್ರಾಧಿಪತ್ಯ
ಆಳ್ವಿಕೆಗೆ ಬೇರೆಯದೇ ಶಕ

ಎದ್ದು ಹೋಗಿದ್ದು ಮಾತ್ರ ಒಂದೇ ಪಟ್ಟಿಗೆ ಗೂಟ ಕಿತ್ತುಕೊಂಡು
ತೊಡೆಯ ನಡುವಿಂದ ಒಕ್ಕಲೆದ್ದವನಿಗೆ
ಸುದ್ಧೋಧನ ಪ್ರೇರಣೆಯಲ್ಲ
ಹೋಗಿದ್ದು ಬುದ್ಧನಾಗಲಲ್ಲ

ಉಪ್ಪರಿಗೆಯಲ್ಲಿ ತಾಂಬೂಲ ಮೆಲ್ಲುವವಳೊಡನೆ
ಹಜಾರದ ಹಜಾಮಿ ಹಸಿದು ತೆಕ್ಕೆಗೆ ಬಂದರೂ
ಅಳತೆಗೆ ಸಿಕ್ಕುವವಳಲ್ಲ ಲಾಯಕ್ಕಲ್ಲವೇ ಅಲ್ಲ
ಅರೆಬೆಂದ ಕವನ ಒಪ್ಪವಲ್ಲ ಇವಳ ಸುಟ್ಟ ಒಡಲು

ಅವಳು ತನ್ನವಳಾದಷ್ಟು ತಾನು ಅವಳವನಲ್ಲ
ತನ್ನ ವೀರ್ಯದ ಆತ್ಮಕ್ಕೆ ಸಾಟಿಯೇ ಅವಳ ಬಸಿರ ಕಾಮ
ಬೆದೆಗೆ ಬಂದವಳನ್ನು ಬಲೆಗೆ ಸಿಕ್ಕಿಸಿ ಉಜ್ಜಿ ಸಿಪ್ಪೆ ಸಿಗಿದು
ಕತ್ತರಿಸಿ ಬಾಂಡಲೆಯಲ್ಲಿ ಮಸಾಲೆ ಸಹಿತ ಹುರಿದು
ಕರುಳ ಕುದಿತಕ್ಕೆ ಬಲಿಕೊಟ್ಟು ಬಾಯೊಡ್ಡಿ ಚಪ್ಪರಿಸಿ ತೇಗಿ ಆಹಾ
ಜೋತ ಮೊಲೆ ಸೋತ ತುಟಿಯ ಪುಳಕವೇನು ಮಹಾ
ಎಂದು ಹಂಗಿಸಿ ನಿಗುರಿದ ಶಿಶ್ನದಿಂದ ತಿವಿದು ಮೂತಿ
ಎದೆಯ ಹೊಲದ ಬೆಳೆ ಕಿತ್ತು ಕೊಟ್ಟವಳು
ಉಪ್ಪರಿಗೆಯವಳಿಗಿಂತ ಮಿಗಿಲಲ್ಲ
ಕಾದವಳ ಕಾಯದ ಕಿಮ್ಮತ್ತು ಭಾರಿಯಲ್ಲ
ಬರಿ ತೊಗಟೆ ಇವಳು; ಅವಳು ಮುಖಮಲ್ಲು
ತಪ್ಪಿ ಹಾಡಿದರೆ ಸೂಫಿ ಗಜಲು
ಅಲಿಯೂ ಅಲ್ಲಿ ಕಾಫೀರನಾಗಿ
ಬಸಿರ ಕಥಾನಕದಲ್ಲಿ
ಏನೀಗ ಎದ್ದು ಹೋದರೆ?
ಯೋನಿಗೆ ಅಪಚಾರವಾದರೆ
ಉನ್ಮತ್ತ ಮೊಲೆತೊಟ್ಟು ಬಿಟ್ಟು ನಡೆದರೆ
ಏನೀಗ?

ಕಾದಿದ್ದಳು ಯಶೋಧರೆ ರಾಜಮಾರ್ಗದಲ್ಲಿ
ಕುದುರೆ ಸಾರೋಟಿನಲ್ಲಿ ಮಹಾ ನಿರ್ಗಮನಕ್ಕೆ

ಶಂಖವೇ ಭಾರವಾದ ಬಸವನ ಹುಳು
ಸರಿದು ಹೋಯಿತು ಸಂದಿಯಿಂದ ತೆವಳುತ್ತ

[ಪ್ಲೀಸ್ ನೋಟ್: ಈ ಕವಿತೆ, ಸಿದ್ಧಾರ್ಥ ಬುದ್ಧನಾಗಲೆಂದು ಅದೊಂದು ರಾತ್ರಿ ಎದ್ದು ಹೋದ ಬಗ್ಗೆ ಹೆಣೆಯಲ್ಪಟ್ಟಿದೆ]

Monday, January 22, 2007

ಕೂದ್ಲಿಗೆ?

Ragging ಮಾಡುವುದು ಸರಿಯಲ್ಲವೆಂದು ಗೊತ್ತಿದ್ದರೂ ಅದನ್ನು ತಪ್ಪೆಂದು ಒಪ್ಪಿಕೊಳ್ಳಲು ಮನಸ್ಸಿಲ್ಲದ ಕಾಲ. ಆಶಿರ್ವಾದ ಜ್ಯೂಸ್ ಸೆಂಟರಿನ ಪಕ್ಕದ ಕಾಲಿ ಕಟ್ಟೆಯ ಮೇಲೆ ಗುಂಪಿನೊಡನೆ ಕುಳಿತಿದ್ದಾಗ ನಡೆದ ಒಂದು ಘಟನೆ.

ಬೆಳಿಗ್ಗೆ ಸುಮಾರು ಹತ್ತಾಗಿತ್ತೇನೊ. ಹಾಸ್ಟೆಲ್ ಕಡೆಯಿಂದ ಒಂಟಿ ಹುಡುಗಿ ನಡೆದು ಬರುತ್ತಿದ್ದಳು. ಮುಖ ನೋಡುವುದೇಕೆ, ಅವಳ ನಡಿಗೆಯೇ ಹೇಳುತ್ತಿತ್ತು; ಅವಳು ಮೊದಲನೇ ಸೆಮಿಸ್ಟರಿನ ಹುಡುಗಿಯೆಂದು. ಅವಳು ನಾವು ಕುಳಿತಿದ್ದಲ್ಲಿಗೆ ಬರುತ್ತಿದ್ದಂತೆ ನಮ್ಮಲ್ಲೊಬ್ಬ ಅವಳನ್ನು ಕರೆದ. ನಾವು ಯಾಕೆ ಕರೆಯುತ್ತಿದ್ದೇವೆಂದು ಗೊತ್ತಿದ್ದರೂ, ಅವಳಿಗೆ ಬರದೇ ಬೇರೆ ವಿಧಿಯಿರಲಿಲ್ಲ. ಸ್ವಲ್ಪ ಅಳುಕುತ್ತಲೇ, ತನ್ನ ಭಯವನ್ನು ಮುಗುಳ್ನಗೆಯಲ್ಲಿ ಮರೆಸುವ ಪ್ರಯತ್ನ ಮಾಡುತ್ತ ಬಂದು ನಿಂತಳು.

ಮೊದಲ ಪ್ರಶ್ನೆ: ಹೆಸ್ರೇನು.
ನಿರ್ಭೀತಿಯಿಂದ ಉತ್ತರಿಸಿದಳು.
ಯಾವೂರು?
C E T Rank ?
ಹೀಗೆ ಹತ್ತಾರು ಮಾಮೂಲಿ ಪ್ರಶ್ನೆಗಳು ಒಂದಾದಮೇಲೊಂದರಂತೆ ಬಂದರೆ, ಅವಳು ಅಷ್ಟೆ ಸಹಜವಾಗಿ ಸ್ವಲ್ಪವೂ ತಡವರಿಸದೆ ಪಟ ಪಟನೆ ಉತ್ತರಿಸುತ್ತಿದ್ದಳು. ತುಸುವೂ ವ್ಯಂಗ, ಅಧಿಕಾರದ ಧ್ವನಿಯಿಲ್ಲದೆ ಸ್ನೇಹಪೂರ್ಣ ಸ್ವರದಲ್ಲೇ ಮಾತನಾಡುತ್ತಿದ್ದ ನಮ್ಮನ್ನು ಕಂಡು ಅವಳಿಗೆ ಅಷ್ಟೊತ್ತಿಗೆ ಸಾಕಷ್ಟು ಧೈರ್ಯ ಬಂದಿತ್ತು. ಅಂತೆಯೇ ಮುಗುಳ್ನಗುತ್ತಾ ಮಾತನಾಡಹತ್ತಿದಳು.
ಅಷ್ಟೊತ್ತಿಗೆ, ನನ್ನ ಗೆಳೆಯನ ಕಣ್ಣು ಅವಳ ಅತ್ಯಂತ ಸುಂದರವಾದ ಕೂದಲಿನ ಮೇಲೆ ಬಿತ್ತು. ಬೆಳಗಿನ ಬಿಸಿಲಿಗೆ ಅದು ರೇಶಿಮೆಯಂತೆ ಹೊಳೆಯುತ್ತಿತ್ತು.


ಕಟ್ಟೆಯಮೇಲೆ ಕುಂತಂತೆಯೇ ಕೆಳಗೆ ನಿಂತ ಅವಳ ಕೂದಲಿನ ಮೇಲೊಮ್ಮೆ ಕೈಯಾಡಿಸಿ ಹೇಳಿದ.
"ಕೂದ್ಲು ತುಂಬಾ ಚೆನ್ನಾಗಿದೆ".
ಅವಳು ನಾಚಿಗೆ, ಸಂತೋಷ ಬೆರೆತ ಸ್ವರದಲ್ಲಿ: "ಥ್ಯಾಂಕ್ ಯು ಸರ್!".
"ಏನ್ಹಾಕ್ತೀಯಮ್ಮ ಕೂದ್ಲಿಗೆ"? ಈ ಬಾರಿ ಪ್ರಶ್ನೆ ನನ್ನ ಬಲಕ್ಕೆ ಕುಳಿತವನಿಂದ ಬಂದಿತ್ತು.
ಅವಳು ಮತ್ತದೇ ಸ್ವರದಲ್ಲಿ ತಲೆಯನ್ನು ತಗ್ಗಿಸುತ್ತಾ ಉತ್ತರವಿತ್ತಳು: "ಶ್ಯಾಂಪೂ ಹಾಕ್ತೀನಿ".
ಅವನ ಎಡಕ್ಕೆ ಇಲ್ಲಿಯವರೆಗೆ ಸುಮ್ಮನೆ ಕುಳಿತಿದ್ದವ ಬಾಯಿಬಿಟ್ಟ:
"ಓಹ್! ಹೌದಾ, ತುಂಬಾ ಸಂತೋಷ.
.....................
ಅಂದ್ಹಾಗೆ, ತಲೆ ಕೂದ್ಲಿಗೆ ಏನ್ಹಾಕ್ತೀಯಾ?"

Thursday, January 11, 2007

ಹಲ್ಕಟ್ ಶಾಯರ್

ಶಾಯರಿಗಳಿದ್ದೇ ಒಂದು ಸುಂದರ ಲೋಕ. ನನಗೆ ಶಾಯರಿಗಳೆಂದರೆ ಇಷ್ಟ. ಅವು ಎಂತವೇ ಇರಲಿ. ಈ ಶಾಯರಿಗಳ ಗುಂಪಿನಲ್ಲಿ so called 'ಹಲ್ಕಟ್ ಶಾಯರಿ'ಗಳೇ ಬೇರೆ ಬಣ್ಣದ ಚಾದರ ಹೊದ್ದು ಮಲಗುತ್ತವೆ. ನಾನೂ ನನಗೆ ತಿಳಿದ ಈ ಬಗೆಯ ಶಾಯರಿಗಳನ್ನು ಗೆಳೆಯರ ಗುಂಪಿನಲ್ಲಿದ್ದಾಗ ಒಮ್ಮೊಮ್ಮೆ ಒಗೆಯುವುದಿದೆ. ಅಕ್ಕಿ ಪಾಯಸದಲ್ಲಿ ಅನಿರೀಕ್ಷಿತವಾಗಿ ಸಿಕ್ಕ ಒಣದ್ರಾಕ್ಷಿಯಂತೆ ಇವು ಬೇರೆಯದೇ ರೀತಿಯ ಸುಖ ಕೊಡುವುದು ಸುಳ್ಳಲ್ಲ.

ಈಗ ಹೇಳಹೊರಟಿರುವುದು ಹೀಗೆ (ನನ್ನಹಾಗಲ್ಲ, ನನಗೆ ಇವನಷ್ಟು ಶಾಯರಿಗಳು ಬರುವುದಿಲ್ಲ; ಮತ್ತು ಇದುವರೆಗೂ ಒಮ್ಮೆಯೂ ಶಾಯರಿ ಹೇಳಿ ಏಟು ತಿಂದಿಲ್ಲ) ಒಬ್ಬ ಶಾಯರನ ಕತೆ. ಅವನೊಬ್ಬ ಯುವಕ. ಅವನ ಊರು ಹೈದರಾಬಾದ್ ಕರ್ನಾಟಕದ ಒಂದು ಹಳ್ಳಿ. ಇತರ ಯುವಕರಂತೆ ಅವನು ಗೆಳೆಯರ ಗುಂಪಿನಲ್ಲಿ ಹೆಚ್ಚಾಗಿ ಬೆರೆಯುವುವವನಲ್ಲ. ಮಾತು ಕೂಡ ಬಹಳ ಕಡಿಮೆ. ಆಡಿದರೆ ಶಾಯರಿ, ಅವನು ಶಾಯರಿ ಹೇಳುತ್ತಿದ್ದನೆಂದಲ್ಲ; ಅವನು ಹೇಳಿದ್ದೆಲ್ಲ ಶಾಯರಿಯಾಗಿತ್ತು. ಹಾಗಿತ್ತುಅವನ ಮಾತು. ಇಲ್ಲ ಮೌನ. ಯಾರ ಉಸಾಬರಿಗು ಹೋಗದೇ ತನ್ನ ಪಾಡಿಗೆ ತಾನಿದ್ದುಬಿಡುತ್ತಿದ್ದ.

ಒಮ್ಮೇ ನಮ್ಮ ಶಾಯರ್ ಅಪರೂಪಕ್ಕೆ ಬೀದಿಯಲ್ಲಿ ಕಾಣಿಸಿಕೊಂಡ. ಅವನ ಬಗ್ಗೆ, ಅದಕ್ಕಿಂತ ಹೆಚ್ಚಾಗಿ ಅವನ 'ಹಲ್ಕಟ್' ಶಾಯರಿಗಳ ಬಗ್ಗೆ ಊರವರೆಲ್ಲ ತಿಳಿದಿದ್ದರು. ಯೌವ್ವನಕ್ಕೆ ಕಾಲಿಡುತ್ತಿದ್ದ ಹುಡುಗಿಯರು ಮನಸ್ಸಿನಲ್ಲೇ ಅವನ್ನು ಮೆಚ್ಚಿ ಎಲ್ಲರೆದುರು ಅವನ ವಿಚಾರ ಬಂದಾಗ ಮುಖ ಸಿಂಡರಿಸುತ್ತಿದ್ದರು.

ಹಾಗಾಗಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಅವನನ್ನು ನೋಡುವ ಸಹಜ ಕುತೂಹಲ ಊರಿನ ಹೆಣ್ಣುಮಕ್ಕಳಿಗಿತ್ತು. ಆದರೆ ನೇರವಾಗಿ ಅವನ ಮುಖವನ್ನು ನೋಡಲು ಅವರಿಗೆ ಧೈರ್ಯ ಸಾಲುತ್ತಿರಲಿಲ್ಲ. ಇಂದು ಕೂಡ ಅವನ ಮುಂದೆ ಹೋಗುತ್ತಿದ್ದ ಲಲನೆಯರು ಕದ್ದು ಮುಚ್ಚಿ ಅವನನ್ನು ನೋಡ ತೊಡಗಿದರು. ಒಬ್ಬೊಬ್ಬರೇ ಏನೇನು ನೆಪಮಾಡಿ- ಕೊಂಡು ಹಿಂದೆ ತಿರುಗುತ್ತಾ...

ಶಾಯರನ ಪ್ರತಿಕ್ರಿಯೆ:
ಮುಡ್ ಮುಡ್ ಕೆ ನ ದೇಕ್, ಏ ಹಸೀನೊ
ಮುಡ್ ಮುಡ್ ಕೆ ನ ದೇಕ್!
ತಮನ್ನಾಯೆ ಹಮ್ ಭಿ ರಕ್ ತೇ ಹೈ
ತಮನ್ನಾಯೆ ಹಮ್ ಭಿ ರಕ್ ತೇ ಹೈ,
ಫರಕ್ ಇತ್ನಾ ಹೈ ಕಿ, ಫರಕ್ ಸಿರ್ಫ್ ಇತ್ನಾ ಹೈ, ಕಿ
ಆಪ್ ಗೆಹರಾಯಿ ಮೆ ರಕ್ ತೇ ಹೈ,
ಔರ್ ಹಮ್ ಲಂಬಾಯಿ ಮೆ!!!

ನಿಜಾಮನ ಮಗಳ ಮದುವೆಯ ಸಂದರ್ಭ. ಮದುವೆಯ ಆಮಂತ್ರಣವನ್ನು ಊರಿಗೆಲ್ಲ ಡಂಗುರಸಾರಿಸಿಯಾಗಿತ್ತು. ಆದರೆ ಈ ಹಲ್ಕಟ್ ಶಾಯರನನ್ನು ಏನು ಮಾಡುವುದು?? ಊರನ್ನೆಲ್ಲ ಕರೆದು ಅವನನ್ನು ಕರೆಯದೆ ಇದ್ದರೆ ಸರಿಯಾಗುವುದಿಲ್ಲ. ಅವನು ಮದುವೆಗೆ ಬಂದರೆ, ಅಲ್ಲಿ ಎಲ್ಲರೆದುರೂ ಏನಾರು ಹೇಳಿ, ಬಂದ ನೆಂಟರಿಷ್ಟರ ಎದುರು ಅವಮಾನವಾಗಬಹುದೆಂಬ ಭಯ! ಅಂತೂ ಏನಾದರಾಗಲಿ ಎಂದು ಹಲ್ಕಟ್ ಶಾಯರಿಗಳನ್ನು ಹೇಳಬಾರದೆಂಬ ಶರತ್ತಿನ ಮೇಲೆ ಅವನನ್ನು ಮದುವೆಗೆ ಕರೆಯಲಾಗಿತ್ತು. ಹಾಗು ಅವನ ಸುತ್ತಮುತ್ತ ಇರುವಂತೆ ಕೆಲವು ಹುಡುಗರಿಗೆ ಹೇಳಿ ವ್ಯವಸ್ಥೆ ಮಾಡಿದ್ದರು.
ಅಂತೂ ನಿಜಾಮನ ಮಗಳ ಮದುವೆಗೆ 'ಹಲ್ಕಟ್ ಶಾಯರ್' ಬಂದ.

ದೂರದಲ್ಲಿದ್ದ ಮದುಮಗಳನ್ನು ನೋಡಿದವನೇ...

ಆಯೀತಿ ಮೇರೆ ತುರ್ಬತ್ ಪೆ, ಮೂತ್ನೆ ಕೆ ಲಿಯೆ,
ಮೂತ್ನಾ ತೊ ಎಕ್ ಬಹಾನ ಥಾ,
ಮೂತ್ ನಾ ತೊ ಸಿರ್ಫ್ ಎಕ್ ಬಹಾನಾ ಥಾ,
ಚೂತ್ ಧಿಕಾಕರ್ ಚಲೀ ಗಯಿ!!!

ಅವನು ಸುತ್ತಮುತ್ತ ಹೆಚ್ಚೇನು ಜನರಿರದಿದ್ದರಿಂದ, ಅವನನ್ನು ನೋಡಿಕೊಳ್ಳಲೆಂದೇ ನೇಮಿಸಲ್ಪಟ್ಟವರು, ಒಳಗೇ ನಗುತ್ತಾ, ಅವನನ್ನು ಗದರಿ, ತಾವು ಸುಮ್ಮನಾದರು.

ಹಾಗೆಯೇ ಬಂದ ಆತ ಜನರ ಮಧ್ಯೆ ಒಂದು ಕಡೆ ಕುಳಿತ. ನಿಜಾಮನ ಮಗಳ ಮದುವೆಯ ಸಡಗರವನ್ನು ನೋಡುತ್ತ. ನೋಡಿದವರ ಮನಸೂರೆಗೊಳ್ಳುವ ಮದುವೆಯ ಅಲಂಕಾರ!!
ಅದನ್ನೇಲ್ಲಾ ನೋಡಿದವನೇ..

ಕ್ಯಾ ಕಹೂ ಇಸ್ ಇಂತಜಾಮ್ ಕಿ,
(ಅಪರೂಪಕ್ಕೆ ಹಲ್ಕಟ್ ಶಾಯರನ ಬಾಯಲ್ಲಿ ಒಳ್ಳೆಯ ಶಬ್ಧ ಕೇಳಿದ ಜನ,
ಶುಭ ಸೂಚನೆ ಸಿಕ್ಕಂತೆ ಆಸೆಯಿಂದ ಅವನ ಮುಖನೋಡಿದರು. ಅವನು ಮುಂದುವರಿಸಿದ..)
ಕ್ಯಾ ಕಹೂ ಇಸ್ ಇಂತಜಾಮ್ ಕಿ,
ಚುದಾನೆ ಚಲೀ ಹೈ, ಭೇಟಿ ನಿಜಾಮ್ ಕಿ!!

ಇದ್ದಕ್ಕಿದ್ದ ಹಾಗೆ ಎತ್ತೆತ್ತಲೋ ತಿರುಗಿದ ಶಾಯರಿಯಿಂದ ದಿಕ್ಕುಗೆಟ್ಟ ಜನ, ಕೈ ಕಾಲು ಮುಖವೆಂದು ನೋಡದೆ ಶಾಯರನಿಗೆ ಹೊಡೆಯತೊಡಗಿದರು. ಅವನನ್ನು ಹೊಡೆಯುತ್ತಲೇ ಸಭೆಯಲ್ಲಿ ಗದ್ದಲವಾಗದಿರಲೆಂದು ಬೀದಿಗೆ ಎಳೆದುಕೊಂಡು ಬಂದು ಹೊಡೆಯಹತ್ತಿದರು. ಕೆಲವರು ರಸ್ತೆಬದಿಯ ಕಲ್ಲುಗಳನ್ನು ಎತ್ತಿ ಅವನತ್ತ ಬೀಸಿದರು..

ಆಗ.. ಒಮ್ಮೆಲೇ..

ಗಾಯವಾಗಿ ರಕ್ತ ಸೋರುತ್ತಿದ್ದ ಕೈಯನ್ನೇ ಮೇಲೆತ್ತಿ ಆಕಾಶದತ್ತ ತೋರುತ್ತಾ..

ಆಸ್ಮಾನ್ ಕಿ ತಾರೋ! ಸಿತಾರೋನ್ ಕಿ ಪ್ಯಾರೊ!
(ಜನ ಹೊಡೆಯುವುದನ್ನು ನಿಲ್ಲಿಸಿ, ಹಗಲಿನಲ್ಲೇ ನಕ್ಷತ್ರ ಕಂಡವರಂತೆ ದಿಗಂತದತ್ತ ನೋಡಿದರು)

ಆಸ್ಮಾನ್ ಕಿ ತಾರೋ! ಸಿತಾರೋನ್ ಕಿ ಪ್ಯಾರೊ!
ತುಮ್ಹಾರಿ ಮಯ್ಯಾ ಕೆ ಚೂತ್, ಪತ್ರಾ ನಕೊ ಮಾರೊ!!

Monday, January 8, 2007

ಇಣುಕಿದಾಗ ಏನು ಕಂಡೀತು...?

ನಿಮಗಷ್ಟೇ ಅಲ್ಲ; ಇಣುಕಿದಾಗ ಏನು ಕಂಡೀತೆಂಬ ಕುತೂಹಲ ನಮಗೂ ಇದೆ! ಆ ಕುತೂಹಲವನ್ನು ತಣಿಸುವ ಪ್ರಯತ್ನವೇ ಈ ಬ್ಲಾಗು.

ನಮ್ಮಲ್ಲಿ ಇತ್ತೀಚಿನ ವರೆಗೂ ಪ್ರೀತಿಯ ಬಗ್ಗೆ ಸಹ ಸಾರ್ವಜನಿಕವಾಗಿ ಮಾತನಾಡಬಾರದು ಎಂಬ ಅಘೋಷಿತ ನಿಯಮವಿತ್ತು. ಪೋಷಕರ ಬಳಿ ತಮ್ಮ ಪ್ರೇಮದ ಬಗ್ಗೆ ಹೇಳಲು ಹೆದರುತ್ತಿದ್ದ ಹುಡುಗ-ಹುಡುಗಿಯರ ಕಾಲವದು. ಆದರೆ ಆ ನಿಯಮ ಮುರಿದಾಗಿದೆ. ನಾವು ಮುಂದುವರೆದಿದ್ದೇವೆ!

ಆದರೆ ಕಾಮದ ಬಗ್ಗೆ ಮಾತ್ರ ಈಗಲೂ ನಾವು ಮುಕ್ತವಾಗಿ ಮಾತನಾಡಲೊಲ್ಲೆವು. ನಮ್ಮ ಕಾಲೇಜಿನಲ್ಲಿ ಒಮ್ಮೆ ಒಂದು ಚರ್ಚಾಸ್ಪರ್ಧೆ ಏರ್ಪಡಿಸಿದ್ದರು. 'ಯುವಕರ ನೈತಿಕತೆಯ ಅಭಿವೃದ್ಧಿಗೆ ಲೈಂಗಿಕ ಶಿಕ್ಷಣದ ಅಗತ್ಯತೆ ಇದೆಯೇ? ಇಲ್ಲವೇ?' -ಎಂಬುದು ವಿಷಯ. ಸಾಮಾನ್ಯವಾಗಿ ಚರ್ಚಾಸ್ಪರ್ಧೆಗಳಲ್ಲಿ ತುಂಬಾ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರಾದರೂ ಈ ಸ್ಪರ್ಧೆಗೆ ಹೆಸರು ಕೊಟ್ಟಿದ್ದವರು ಕೇವಲ ಇಬ್ಬರು! ಇಬ್ಬರೂ ಹುಡುಗರು. ನಾನೊಬ್ಬ; ಮತ್ತೊಬ್ಬ ನನ್ನ ಗೆಳೆಯ. ನಾವಾದರೂ ಸ್ಪರ್ಧೆಯ ವಿಷಯವನ್ನು declare ಮಾಡಿದ್ದ ಆ ಲೆಕ್ಚರರ್ರಿಗೆ ಬೇಜಾರಾಗಬಾರದು ಎಂಬ ದೃಷ್ಟಿಯಿಂದ ಸೇರಿದ್ದವರು! ಮಾತನಾಡಲಿಕ್ಕಂತೂ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜಕುಮಾರನೆದುರು ಪ್ರೇಮ ನಿವೇದನೆಗೆ ನಿಂತ ರಾಜಕುವರಿಯಂತೆ, ಪೂರ್ತಿ ನೆಲವನ್ನೇ ನೋಡುತ್ತಾ, ಕತ್ತೆತ್ತದೇ, ಒಂದೆರಡು ಮಾತಾಡಿ ಮುಗಿಸುವಷ್ಟರಲ್ಲಿ ಸಾಕುಬೇಕಾಗಿತ್ತು!

ಪೋಲೀ ಜೋಕುಗಳು ಸಮಾನ ವಯಸ್ಕ ಗೆಳೆಯರ/ಗೆಳತಿಯರ ನಡುವೆ ಎಸ್ಸೆಮ್ಮೆಸ್ಸಾಗಿ ಓಡಾಡುತ್ತವೆಯಾದರೂ ಅದೇ ಜೋಕುಗಳು ಹುಡುಗರ ಮೊಬೈಲಿನಿಂದ ಹುಡುಗಿಯರ ಮೊಬೈಲಿಗಾಗಲೀ ಹುಡುಗಿಯರ ಮೊಬೈಲಿನಿಂದ ಹುಡುಗರ ಮೊಬೈಲಿಗಾಗಲೀ ಹರಿದಾಡುವುದೇ ಇಲ್ಲ. ಹುಡುಗರು ಹುಡುಗರ ಜೊತೆ ಮಾತಿಗೆ ಕುಳಿತಾಗ ಅದೆಷ್ಟೋ ಕೆಟ್ಟಾಕೊಳಕ ಜೋಕುಗಳನ್ನು, double meaning ಜೋಕುಗಳನ್ನು ಆಡಿಕೊಂಡು ನಕ್ಕಿರುತ್ತೇವೆ. ಆದರೆ ಅವನ್ನು ನಾವು publicನಲ್ಲಿ ಆಡುವಂತಿಲ್ಲ. ಅಂತಹ ಅನೇಕ ಜೋಕುಗಳು ನಿಮಗೆ ಈ ಬ್ಲಾಗಿನಲ್ಲಿ ಸಿಗುತ್ತವೆ.

ಹಾಗಂತ ಇದೇನು ಕೇವಲ ಅಶ್ಲೀಲ ಜೋಕುಗಳ ತಾಣವಲ್ಲ. ಅಶ್ಲೀಲ ಎಂಬ ಪದವೇ ಒಂಥರಾ ಅಶ್ಲೀಲ ಕಣ್ರೀ. ಇಷ್ಟಕ್ಕೂ ಯಾವುದು ಅಶ್ಲೀಲ? ಬಟ್ಟೆ ಬಿಚ್ಚಿದರೆ ಅಶ್ಲೀಲ ಅಂತಲಾ? ಎಷ್ಟು ಬಿಚ್ಚಿದರೆ?? ಮಲ್ಲಿಕಾ ಶೆರಾವತ್‍ನಷ್ಟು? ಅಶ್ಲೀಲತೆಯ ಪರಿಧಿ ಯಾವುದು? ಯಾವುದನ್ನು ಬರೆಯಬಹುದು, ಯಾವುದನ್ನು ಬರೆಯಬಾರದು? ಬರೆದರೆ ಅದಕ್ಕೆ ಪ್ರತಿಕ್ರಿಯೆ ಹೇಗಿರಬಹುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಈ ಬ್ಲಾಗನ್ನು ಓಪನ್ನು ಮಾಡುತ್ತಿದ್ದೇವೆ.

ಕಾಮ ಬರೆಯಬಾರದ ವಿಷಯವೇನಲ್ಲ. ಕನ್ನಡದಲ್ಲಿ ಜನ್ನ, ಪಂಪರಂತಹ ಆದಿಕವಿಗಳಿಂದ ಹಿಡಿದು ನವ್ಯಕವಿಗಳವರೆಗೆ ಎಲ್ಲರೂ ಕಾಮದ ಬಗ್ಗೆ, ಶೃಂಗಾರದ ಬಗ್ಗೆ ಬರೆದಿದ್ದಾರೆ. ಪುರುಸೊತ್ತಾದಾಗಲೆಲ್ಲ ಹೆಣ್ಣಿನ ಮೊಲೆಯ ಸೆಳಕಿನ ಬಗ್ಗೆ, ಸೊಂಟದ ಬಳುಕಿನ ಬಗ್ಗೆ, ನಿತಂಬದ ಝಳಕಿನ ಬಗ್ಗೆ ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಶೃಂಗಾರ ರಸಕಾವ್ಯಗಳಿಗೇನೂ ಕೊರತೆಯಿಲ್ಲ ನಮ್ಮಲ್ಲಿ. ನಿನ್ನೆ ತಾನೇ ರವಿ ಬೆಳಗೆರೆ ಬರೆದದ್ದು ಓದುತ್ತಿದ್ದೆ: "ಹೇಳಿದಷ್ಟೂ ಮುಗಿಯುವುದಿಲ್ಲ ಕಾಮದ ಬಗ್ಗೆ; ಅದಕ್ಕೇ ಅದನ್ನು 'ಕೇಳಿ' ಅನ್ನುವುದು!" ಅಂತ. ಹಾಗೆ ಅವರು ಬರೆದ ಕಾವ್ಯಸಾಲುಗಳ ಬಗ್ಗೆ ಸಹ ಇಲ್ಲಿ ಮಾತಾಡೋಣ.

ದಿನನಿತ್ಯವೂ ನಮ್ಮ ಕಣ್ಣೆದುರೇ ನಡೆಯುವ ಅದೆಷ್ಟೋ ಘಟನೆಗಳಲ್ಲಿ, ಆಡುವ ಮಾತುಗಳಲ್ಲಿ ದ್ವಂದ್ವಾರ್ಥಗಳಿರುತ್ತವೆ. 'ಹೀಗೆ' ಹೇಳಿದ್ದನ್ನೇ 'ಹಾಗೆ' ಸಹ ಅರ್ಥ ಮಾಡಿಕೊಳ್ಳಬಹುದು. ಅವನ್ನೇ ನೆನಪಿಟ್ಟುಕೊಂಡು ಒಂದೆಡೆ ಬರೆದಿಟ್ಟರೆ ಮುಂದೆಂದೋ ಬಿಡುವಿದ್ದಾಗ, mood out ಆಗಿದ್ದಾಗ ಓದಿಕೊಂಡು ನಕ್ಕು, ಮನಸ್ಸನ್ನು ಸರಿ ಮಾಡಿಕೊಳ್ಳಬಹುದು. ಖಿನ್ನತೆಗೆ ನಗುವಿನಷ್ಟು ಒಳ್ಳೆಯ ಔಷಧ ಬೇರೆ ಯಾವುದಿದೆ ಹೇಳಿ?

ಅಶ್ಲೀಲತೆಯೆಂಬ ಪರಿಧಿಯನ್ನು ಸ್ವಲ್ಪವೇ ದಾಟಿ, ಆ ಮೋಟುಗೋಡೆಯನ್ನು ಹತ್ತಿ, ಆಚೆ ಇಣುಕಿ ನೋಡಲಿದ್ದೇವೆ. ಕಂಡದ್ದನ್ನು ಕಂಡಹಾಗೆ, ಆದರೂ ತುಂಬಾ ಅಶ್ಲೀಲವಾಗದ ಹಾಗೆ present ಮಾಡಲಿಕ್ಕೆ ಆದಷ್ಟೂ ಪ್ರಯತ್ನ ಮಾಡುತ್ತೇವೆ. ಈ ಬ್ಲಾಗಿಗೆ ನಾವು ಐವರು contributors ಇದ್ದೇವೆ: ನಾನು- ಸುಶ್ರುತ, ಶ್ರೀನಿಧಿ, ಸಂದೀಪ ನಡಹಳ್ಳಿ (Alpazna), ಹರ್ಷ ಮತ್ತು ಪರಿಸರಪ್ರೇಮಿ ಅರುಣ್. ಬರೆದ ಜೋಕು, ಲೇಖನ, ಅಂತಃಪುರಗೀತೆ.... ಇತ್ಯಾದಿಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ಬಯಸುತ್ತೇವೆ. ನಮ್ಮ ಪ್ರಯತ್ನವನ್ನು ನೀವು ಪ್ರೋತ್ಸಾಹಿಸುತ್ತೀರೋ ಅಥವಾ 'ಛೀ!' ಅನ್ನುತ್ತೀರೋ ಎಂಬ ಅನುಮಾನದಲ್ಲೇ,

-ನಾವು!

[Disclaimer: ಅನೇಕ ಕವಿ/ಲೇಖಕರ ಕವಿತೆ/ಬರಹಗಳನ್ನು ಅವರ ಅನುಮತಿ ಇಲ್ಲದೇ ಈ ಬ್ಲಾಗಿನಲ್ಲಿ ಬಳಸಿಕೊಂಡಿದ್ದೇವೆ. ಕೆಲ ವೆಬ್‌ಸೈಟ್‌ಗಳಲ್ಲಿ ಸಿಕ್ಕ ಚಿತ್ರಗಳನ್ನು ಹಾಕಿದ್ದೇವೆ. ಲಿಂಕ್ಸ್ ಕೊಟ್ಟುಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದವರ ವಿರೋಧವಿದ್ದರೆ ದಯವಿಟ್ಟು ನಮಗೆ ತಿಳಿಸಿ. ತಕ್ಷಣ ಅದನ್ನು ಇಲ್ಲಿಂದ ತೆಗೆಯಲಾಗುವುದು.]