Monday, November 15, 2010

ಗೌತಮನ ಕ್ಷಮಾಯಾಚನೆ!

  • ಗೌತಮ್ ಹೆಗಡೆ
ಮೆಲ್ಲಗೆ ಮೊಳಕೆಯೊಡೆದ ಚಿಗುರು ಮೀಸೆ,
ನಿದಿರೆ ಬಾರದ ಇರುಳಿಗೆ
ನಟ್ಟ ನಡುರಾತ್ರಿ ಎಬ್ಬಿಸಿ
ಕಾಡುವ ಹಾಳು ಚೆಂದದ ಕನಸಿಗೆ
ಅರ್ಥವೇನೆಂದು ಪರಧ್ಯಾನದಿ
ಅಲ್ಲಿ, ಮನೆಯೆದುರ ದಾರಿ ತಿರುವಲ್ಲಿ
ಒಂದು ಹಳದಿ ಮಧ್ಯಾಹ್ನದಿ
ಕಣ್ಣ ನೆಟ್ಟು ಕುಳಿತಾಗ ಬಂದವಳು ನೀನು..

ತುಂತುರು ಹನಿ ಸಿಂಚನವಾಗಿ
ಏನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ,
ಅನರ್ಥದರ್ಥ ಹರೆಯಕ್ಕೆ ಅರ್ಥವಾಗಿ..

ಹಾಗೆ ಕಂಡವಳು ಹಾಗೇ ಹೋಗದೆ ಎನ್ನ ಕಂಡು-
ಒರೆನೋಟದಿ ಕಳ್ಳ ಮಂದಹಾಸವಾಗಿಬಿಟ್ಟೆ.
ನಾ ನಿಂತ ನಿಲುವಲ್ಲಿ ಎನ್ನ ಕಳೆದುಕೊಂಡು,
ನಿನ್ನ ಆ ಮಂದಹಾಸ, ಓರೆನೋಟ
ಎನಗೆ ಸಿಕ್ಕ ರಹದಾರಿಯೆಂದುಕೊಂಡು
ಗಡಿ ದಾಟಿಬಿಟ್ಟೆ.

ನಿದಿರೆ ಬಾರದ ರಾತ್ರಿಯೊಳು,
ಹಿಡಿದು ಕನಸಿನ ಜಾಡು,
ತಿರುಗಿ ಬಾರದಷ್ಟು ದೂರ ದೂರ
ಅಡಿಯಿಂದ ಮುಡಿವರೆಗೆ
ಕಡು ಕಷ್ಟ - ಸುಖದ ದಾರಿಯಲಿ
ದಾರಿ ಮುಗಿಯುವನಕ,
ಕನಸು ಕರಗಿ ನೀರಾಗಿ ನನಸಾಗುವನಕ
ಬೆದೆಗೆ ಬಂದ ಹರೆಯಕೆ ಈಡಾಗಿಬಿಟ್ಟೆ.

ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..
ಪರವಾನಿಗೆಯ ಹಂಗಿರದೆ
ಎನ್ನ ಮಾನಸದೊಳು ನಿನ್ನಲಿ ಅಲೆದುಬಿಟ್ಟೆ..
ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..

3 comments:

ಸೀತಾರಾಮ. ಕೆ. / SITARAM.K said...

ಕವನ ತುಂಬಾ ಚೆನ್ನಾಗಿದೆ ಗೌತಮ.

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

motu gode tanna monachu kaledu kolluttide....!!!!!!!

Unknown said...

Good one but am with ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ