Saturday, October 1, 2011

ಹೀಗೊಂದು ಬ್ಲಾಗು

'ದೇಹವೀಣೆ' ಎಂಬೊಂದು ಬ್ಲಾಗು ಶುರುವಾಗಿದೆ. ಇದರ ಪರಿಚಯ-ಬರಹದಲ್ಲಿ ಈ ಬ್ಲಾಗಿನ ನಿರ್ವಾಹಕರು ಹೀಗೆ ಹೇಳಿಕೊಂಡಿದ್ದಾರೆ:
'ದೇಹವೀಣೆ' ಸಂವಾದದ ಮಾದರಿಯಲ್ಲಿರುತ್ತದೆ. ಓದುಗರ ಸಂದೇಹ, ಆತಂಕ, ಚಿಂತೆ, ವ್ಯಾಕುಲತೆ ಇತ್ಯಾದಿ ಮನೋಗ್ಲಾನಿಗಳಿಗೆ ಸಮಾಧಾನವನ್ನು ನೀಡುವ ಪ್ರಯತ್ನವನ್ನು ಇದು ಮಾಡುತ್ತದೆ. ತುಂಬಾ ಜವಾಬ್ದಾರಿಯನ್ನು ಬೇಡುವ ಇಂಥದೊಂದು ಬ್ಲಾಗ್ ನಡೆಸಲು ನಿನಗಿರುವ ಯೋಗ್ಯತೆ ಏನು ಎಂದು ನೀವು ಕೇಳಬಹುದು. ನನಗೆ ಗೊತ್ತಿದೆ; ಇದು ತುಂಬಾ ರಿಸ್ಕ್. ಈ ರಿಸ್ಕ್ ತೆಗೆದುಕೊಳ್ಳಲು ನಾನು ಸಿದ್ಧವಾಗಿದ್ದೇನೆ. ನಾನು ಮೆಂಟಲ್ ಹೆಲ್ತ್ ಆಪ್ತ ಸಮಾಲೋಚನೆಯಲ್ಲಿ ಡಿಪ್ಲೋಮಾ ಮಾಡಿದ್ದೇನೆ. ಇದೀಗ 'ಲೈಂಗಿಕ ಸಮಸ್ಯೆಗಳು' ಎಂಬ ವಿಷಯದಲ್ಲಿ ಆಪ್ತ ಸಮಾಲೋಚನೆ ತರಬೇತಿ ಪಡೆಯುತ್ತಿದ್ದೇನೆ. ಅಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ವೈವಿಧ್ಯತೆಯನ್ನು ಕಂಡು, ಕೇಳಿ ಬೆರಗಾಗಿದ್ದೇನೆ. ಅದರ ಹಿನ್ನೆಲೆಯಲ್ಲಿ ನಾನು ಈ ಬ್ಲಾಗ್ ಆರಂಭಿಸುತ್ತಿದ್ದೇನೆ.

ಇದು ಲೈಂಗಿಕ ಶಿಕ್ಷಣವನ್ನು ತಿಳಿಸುವ, ಹೇಳುವ ಎಲ್.ಕೆ.ಜಿ ಕ್ಲಾಸ್. ಲೈಂಗಿಕ ಶಿಕ್ಷಣ ಎಂದರೆ ಗಂಡು ಹೆಣ್ಣಿನ ಮಿಲನವನ್ನು ಹಸಿ ಹಸಿಯಾಗಿ ಹೇಳುವುದು ಎಂದು ಅನೇಕರು ತಿಳಿದಿದ್ದಾರೆ. ಅದಕ್ಕಾಗಿಯೇ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡುತ್ತೇವೆಂದು ಸರಕಾರ ಅಂದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದು ತಪ್ಪು. ಲೈಂಗಿಕ ಶಿಕ್ಷಣವೆಂದರೆ ಸ್ತೀ ಮತ್ತು ಪುರುಷ ದೇಹ ರಚನೆಗಳನ್ನು ತಿಳಿಸಿಕೊಡುವುದು. ಒಂದು ರೀತಿಯಲ್ಲಿ ಇದು ಬಯಾಲಾಜಿಯ ಕ್ಲಾಸಿದ್ದಂತೆ. ಪರಸ್ಪರ ಆಕರ್ಷಣೆ ಮತ್ತು ಅದರಿಂದಾಗುವ ತೊಂದರೆಗಳು, ಅದಕ್ಕಿರುವ ನಿವಾರಣೋಪಾಯಗಳ ಬಗೆಗೆ ತಿಳಿಸಿಕೊಡುವುದೇ ಲೈಂಗಿಕ ಶಿಕ್ಷಣದ ಉದ್ದೇಶವಾಗಿದೆ.

ಮೇಲಿನ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ಈ ಬ್ಲಾಗನ್ನು ಆರಂಭಿಸಲಾಗಿದೆ. ಇದನ್ನು ಆರೋಗ್ಯಕಾರಿಯಾಗಿ ಮುನ್ನಡೆಸುವ ಜವಾಬ್ದಾರಿಯಲ್ಲಿ ನಿಮ್ಮ ಪಾಲು ಬಹು ದೊಡ್ಡದು. ಬನ್ನಿ, ನಿಮ್ಮ ಸಲಹೆ, ಸಂದೇಹಗಳನ್ನು ನಮ್ಮೊಡನೆ ಹಂಚಿಕೊಳ್ಳಿ; ಸಂವಾದದಲ್ಲಿ ಭಾಗವಹಿಸಿ. ನಿಮ್ಮ ಸಂದೇಹಗಳಿಗೆ ನಮ್ಮ ಪರಿಣಿತ ಪಡೆಯ ಸಹಾಯದಿಂದ ಉತ್ತರಿಸುವ ಪ್ರಯತ್ನ ಮಾಡಲಾಗುವುದು.

ಕನ್ನಡದ ಮಟ್ಟಿಗೆ ಬಹುಶಃ ಇದೊಂದು ಹೊಸ ಪ್ರಯತ್ನ. ಪ್ರಶ್ನೋತ್ತರ ಕಾಲಮ್ಮುಗಳು, ಸಮಾಲೋಚನಾ ಮಾದರಿಯ ಲೇಖನಗಳು ಪತ್ರಿಕೆಗಳಲ್ಲಿ ಇರುವುದು ನೋಡಿದ್ದೀವಿ. ಆದರೆ ಇಂಟರ್ನೆಟ್ ಲೋಕದಲ್ಲಿ, ಕನ್ನಡದಲ್ಲಿ, ಇಂಥದೊಂದು ಪ್ರಯತ್ನ ಬಹುಶಃ ಇನ್ನೂ ಆಗಿರಲಿಲ್ಲ. ಇಂಟರ್ನೆಟ್ಟಿನಂತಹ ಮುಕ್ತ ವೇದಿಕೆ ಇಂತಹ ಪ್ರಯತ್ನಕ್ಕೆ ಅನುಕೂಲವೂ ಹೌದು, ಅನನುಕೂಲವೂ ಅಲ್ಲವೇನಲ್ಲ.

'ದೇಹವೀಣೆ' ಬ್ಲಾಗಿನಲ್ಲಿ ನಿಮ್ಮ ಸಂದೇಹಗಳಿಗೆ ಸ್ಪಂದಿಸಲು ಒಬ್ಬ ಗೈನಕಾಲಾಜಿಸ್ಟ್, ಒಬ್ಬ ಯೂರಲಾಜಿಸ್ಟ್, ಇನ್ನೊಬ್ಬ ನರರೋಗತಜ್ನ ಹಾಗು ಒಬ್ಬ ಸೈಕಾಲಾಜಿಸ್ಟ್ -ಇರುತ್ತಾರಂತೆ. "ಸ್ವಸ್ಥ ಸಮಾಜದ ಸೃಷ್ಟಿಗೆ ಅರೋಗ್ಯವಂತ ಮನಸ್ಸುಗಳ ಅವಶ್ಯಕತೆ ತುಂಬಾ ಇದೆ. ಅದನ್ನು ನಾವೆಲ್ಲಾ ಸೇರಿಯೇ ಕಟ್ಟುವ ಪ್ರಯತ್ನ ಮಾಡೋಣ" -ಎಂಬುದು 'ದೇಹವೀಣೆ'ಯ ಆಶಯ.

'ದೇಹವೀಣೆ'-ಯ ಸ್ವರ ಕೇಳಲು, ಸೋ-ಗೂಡಿಸಲು ಮುಂದಾಗೋಣ.
URL: http://www.dehaveene.blogspot.com/

Wednesday, August 10, 2011

ಫೈನಾನ್ಶಿಯಲ್ ಕ್ರೈಸಿಸ್

A naked & drunken woman boards a cab in London. Driver of the cab, keeps staring at her and does not start the cab.


Woman: Haven't you seen a naked woman before?


Driver: cool down. I am not staring at you. I am just wondering where you have kept the money to pay me?






Moral: This is what most of the American banks failed to do. Assessing the repayment capacity before enjoying exposure. :)




( ಇದು ಯಾಕೋ ಕನ್ನಡಕ್ಕಿಂತ ಇಂಗ್ಲಿಷ್ ನಲ್ಲೆ ಜಾಸ್ತಿ ಪಂಚ್ ಆಗಿದೆ ಅನಸ್ತು , ಹಾಗೆ copy paste ಮಾಡಿದೆ ;) )

Monday, July 11, 2011

ಒಂದು ನೀತಿ ಕಥೆ


ಒಂದಲ್ಲಾ ಒಂದು ಊರಲ್ಲಿ ಒಂದು ಗಂಡ ಹೆಂಡತಿ ಸಂಸಾರ ಮಾಡ್ಕೊಂಡು ಇದ್ರಂತೆ.
ಆ ಹೆಂಡತಿಗೆ ಅನುಮಾನ ಗಂಡನಮೇಲೆ, ಕೆಲಸದವಳ ಜೊತೆ ಗಂಡನಿಗೆ ಅಕ್ರಮ ಸಂಭಂದ ಅಂತ.

ಒಂದು ರಾತ್ರಿ ಗಂಡ ಊಟವಾದ ನಂತರ ಹೊಟ್ಟೆ ಸರಿ ಇಲ್ಲ, ಟಾಯ್ಲೆಟ್ ಗೆ ಹೋಗಿ ಬರ್ತೀನಿ ಅಂತ ಅಂದ.
ಹೆಂತತಿಗೆ ಮನಸ್ಸಲ್ಲೇ ಅನುಮಾನ, ಕೆಲಸದವಳ ಹತ್ರ ಹೋಗಿದಾನೆ ಅಂತ. ಹೆಂಡತಿ ಅಂದ್ಕೊಂಡಳು ಇವ ಕೆಲಸದವಳ ಬಳಿಗೆ ಹೋದ ಅಂದು.

ಪರೀಕ್ಷಿಸಿಯೇ ಬಿಡೋಣ ಅಂತ ಶಾಂತವಾಗಿ ಹೋಗಿ ಕೆಲಸದವಳ ಹಾಸಿಗೆಲಿ ತಾನು ಮಲಗಿ ದೀಪ ಆರಿಸಿದಳು....

ಆತ ಕಳ್ಳ ಹೆಜ್ಜೆಗಳಿಂದ ಮೆಲ್ಲಗೆ ಬಂದ ......

ಹೆಚ್ಚು ಸಮಯ ಹಾಳುಮಾಡಲಿಲ್ಲ .. ಮೆಲ್ಲಗೆ ತಾನು ಬಂದ ಕೆಲಸ ಆರಂಭಿಸಿದ ......

ಕೆಲ ಹೊತ್ತಿಗೆ ಎಲ್ಲವು ಮುಗಿಯಿತು, ಹೆಂಡತಿ ನಿಧಾನವಾಗಿ " ನಾನು ಇಲ್ಲಿ ಮಲಗಿರಬಹುದು ಎಂದು ಅಂದುಕೊಂಡಿರಲಿಲ್ಲ ಅಲ್ಲವಾ?" ಅಂದಳು ಲೈಟ್ ನ ಗುಂಡಿ ಅದುಮುತ್ತಾ ...

"ಅಯ್ಯೋ .. ದೇವರಾಣೆ ಇಲ್ಲ ..... !!!" ಮೇಲೇಳುತ್ತಿದ್ದ ವಾಚ್ಮನ್ ಗಾಬರಿಯಿಂದ ಹೇಳುತ್ತಿದ್ದ.

ಈ ಕಥೆಯ ನೀತಿ ಇಂಗ್ಲೀಷ್ ನಲ್ಲಿ ಹೇಳಬೇಕು ಅಂದ್ರೆ "
Sometimes getting too smart can get you screwed
! "



(ಮೋಟುಗೋಡೆ ಇಂದು ಮೂರು ಲಕ್ಷ ಹಿಟ್ಸು, ಇನ್ನೂರಕ್ಕೂ ಮಿಕ್ಕ ಪ್ಹಾಲೋವರ್ಸ್ ಗಳ ಒಂದು ಸಮೃದ್ದ ಬ್ಲಾಗ್ ಆಗಲು ತಾವು ಓದುಗರೇ ಕಾರಣ. ತಮಗೆಲ್ಲರಿಗೂ ಒಂದು ತುಂಬು ಹೃದಯದ ಧನ್ಯವಾದಗಳು.)

Monday, July 4, 2011

ಶಕುಂತಲಾ

  • ಬನ್ನಂಜೆ ಗೋವಿಂದಾಚಾರ್ಯ

ತಾಯಿ ಇಲ್ಲ; ತಂದೆ ಇಲ್ಲ
ಇದೂ ಒಂದು ತಬ್ಬಲಿ
ಅವಳು ಸೂಳೆ ಇವ ಮಹರ್ಷಿ
ಇವರ ಕೀರ್ತಿ ಹಬ್ಬಲಿ ||೧||

ಕಚ್ಚೆ ಬಿಗಿದು ನಡೆದನವನು
ತಪಕ್ಕೆಂದು ಕಾಡಿಗೆ
ಸೀರೆ ಕೊಡವಿ ನಡೆದಳವಳು
ದೇವತೆಗಳ ನಾಡಿಗೆ ||೨||

ನೇಸರುದಿಸಿ ಬಲೆಯನೆಸೆದ
ಹಕ್ಕಿ ಕೊರಳ ಹಾಡಿಗೆ
ಹಳತಾದರು ಮಾಸಲಿಲ್ಲ
ಅವಳ ಕಣ್ಣ ಕಾಡಿಗೆ ||೩||

ಅವನು ಅವಳು ನಡೆದರಯ್ಯ
ತಮ್ಮ ತಮ್ಮ ಪಾಡಿಗೆ
ಎಂತೋ ಮುಂದೆ ಸಾಗಬೇಕು
ದಾರಿಗಿಲ್ಲ ಬಾಡಿಗೆ ||೪||

* * *
ಎದೆಯ ಎತ್ತರಕ್ಕೆ ನಾಚಿ
ಸೆರಗು ಸ್ವಲ್ಪ ಜಾರಿದೆ
ಗಮನವಿಟ್ಟು ನಡೆಯಬೇಕು
ದಾರಿಯೂ ಇಳಿಜಾರಿದೆ ||೫||

ತಾಯಿಯಂತೆ ಮಗಳು ಕೂಡ
ಆಹ! ಎಂಥ ರೂಪಸಿ
ಕಾಡು ಜನರ ನಡುವೆ ತಾನು
ಆದರೂನು ರೂಪಸಿ ||೬||

ಹಕ್ಕಿ ಹಾಡು ಕಲಿಸಿತೇನು
ಜಿಂಕೆ ಕಣ್ಣ ಕೊಟ್ಟಿತು?
ಕಾಡು ಮರದ ಕಳಿತ ಹಣ್ಣು
ಮೊಲೆಯ ಮೊಟ್ಟೆಯಿಟ್ಟಿತು? ||೭||

ಕಣ್ವ ಕೂಡ ಕಣ್ಣುಬಿಟ್ಟ
ಯಾರು ಇವಳ ನಲ್ಲನು!
ಇವಳ ಎದೆಯ ಬೆದೆಯ ಸೊದೆಯ
ಯಾರು ಗೆದೆಯಬಲ್ಲನು! ||೮||

* * *
ಗಡ್ಡನೆರೆತ ಮುದುಕ ಇನ್ನೂ
ತೋರಿಸಿಲ್ಲ ಜಾತಕ
ಅವನು ಬರುವ ಮುನ್ನ ಇಲ್ಲಿ
ನಡೆಯಿತೊಂದು ನಾಟಕ ||೯||

ಜಿಂಕೆ ಹೊಡೆಯಬಂದ ರಾಜ
ಜಿಂಕೆ ಕಣ್ಣ ಹೆಣ್ಣಿಗೆ
ಕಣ್ಣು ಹೊಡೆದನಂತೆ ಏಕೊ
ನಂಟುಬಿತ್ತು ಕಣ್ಣಿಗೆ ||೧೦||

ಎದೆಯ ಎತ್ತರಕ್ಕೆ ಸೋತು
ಸೀರೆ ಜಾರಿಬಿಟ್ಟಿದೆ
ಗಮನವಿಟ್ಟು ನಡೆದರೂನು
ಹೇಳದಂಥ ಗುಟ್ಟಿದೆ ||೧೧||

ಕೆನ್ನೆ ತುಂಬ ಕೆಂಪುಕೆಂಪು
ಎದೆಯು ಎದೆಯನಪ್ಪಿದೆ
ಒಳಗು ಹೊರಗು ತಂಪುತಂಪು
ತೊಡೆಯ ತಾಳ ತಪ್ಪಿದೆ ||೧೨||   

* * *

ಕಣ್ವ ಕೂಡ ಕಣ್ಣು ಬಿಟ್ಟ
ಏನು ನಡೆದುಹೋಯಿತು
ಮದುವೆಗೆಂದು ತಂದ ದರ್ಭೆ               
ಜಾತಕರ್ಮಕಾಯಿತು ||೧೩||


[“ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ” ಪುಸ್ತಕದಿಂದ]

Friday, June 3, 2011

ಕಾಂತನಿಲ್ಲದ ಮ್ಯಾಲೆ..

  • ಚಂದ್ರಶೇಖರ ಕಂಬಾರ

ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ?
ಗಂಧ ಲೇಪನವ್ಯಾತಕೆ? -ಈ ದೇಹಕೆ..

ಮಂದ ಮಾರುತ ಮೈಗೆ ಬಿಸಿಯಾದವೇ ತಾಯಿ?
ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ?
ಹೂಜಾಜಿ ಸೂಜಿಯ ಹಾಗೆ -ಚುಚ್ಚುತಲಿವೆ..

ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ
ಉಸಿರಿನ ಬಿಸಿ ಅವಗೆ ತಾಗದೇ ಹುಸಿ ಹೋಯ್ತೇ?
ಚೆಲುವ ಬಾರದಿರೇನು ಫಲವೇ? -ಈ ಚೆಲುವಿಗೆ..

ಕಾಮನ ಬಾಣ ಹತ್ಯಾವ ಬೆನ್ನ
ಆತುರ ತೀವ್ರ ಕಾಮಾತುರ ತಾಳೆ ನಾ..
ಆರ್ತಳಿಗೆ ಆಶ್ರಯವಿರದೇ -ಒದ್ದಾಡುವೆ..

ಅನ್ಯ ಪುರುಷನ್ ಮಾರ ಅಂಗನೆಯನೆಳೆದರೆ
ಕೈ ಹಿಡಿದ ಸರಿಪುರುಷ ಸುಮ್ಮನಿರುತಾರೇನೆ?
ಕರುಣೆಯ ತೋರುವರ್ಯಾರೇ? -ಸಣ್ಣವಳಿಗೆ

--
ರತ್ನಮಾಲಾ ಪ್ರಕಾಶ್ ದನಿಯಲ್ಲಿ ಈ ಹಾಡು

Thursday, April 28, 2011

ರಾಗ - ವಿರಾಗ

  • ಪು.ತಿ. ನರಸಿಂಹಾಚಾರ್

ತೊಡೆಗೆ ತೊಡೆ ಮಸೆವಂತೆ ಕುಳ್ಳಿರು
ತೇನ ಬಯಸುವೆ ರಾಗಿಣಿ?
ಎಲೆ ಬೆಡಗಿ, ಚಿಂದುಳ್ಳ ಹೆಣ್ಣೇ
ನನ್ನ ಜೀವ ವಿರಾಗಿಣಿ -

ತಿರುಗಿಸುವೆ ಮೊಲೆಕೋಡ ನನ್ನೆಡೆ
ಕೋರೆ ನೋಟದಿ ಚುಚ್ಚುವೆ
ತುಟಿ ಕೊನೆಗೆ ನಗೆತಂದು ಚಿವುಟುವೆ
ಸೆರಗ ಸೋಕಿಸಿ ಬೆಚ್ಚುವೆ.

ಓರೆ ಕುಳಿತಂಚಿಗೆಯೆ ಸರಿಯುವೆ
ಕುಲುಕೆ ರಥ ಮೈಲಟಿಸುವೆ
ಮನ್ನಿಸೆನ್ನುವ ತೆರದಿ ಸುಲಿಪಲ್
ತೋರಿ ನಾಣನು ನಟಿಸುವೆ

ಆವ ಭಾರಕೊ ಕುಸಿದ ರೆಪ್ಪೆಯ -
ನೆತ್ತಿ ನೀನಾಕಳಿಸುವೆ
ಮೈಯ ಮುರಿಯುವೆ ತೋಳ್ಗಳೆತ್ತುವೆ
ಹೆಡೆ ಜಡೆಗೆ ಬೆರಳೊತ್ತುವೆ.

ಹೊತ್ತು ಕಟ್ಟಿದೆ ವರುಷ ವರುಷವ
ಪೇರಿಸುತಲೀ ಕೋಟೆಯ
ಒಳಗೆ ನೆಮ್ಮದಿ ಜೀವ - ನಗುತಿದೆ
ಕಾಮನೆಸುಗೆ ಭರಾಟೆಯ.

ಇದ್ದಕಿದ್ದವೋಲೇಕೆ ಸರಿವೆಯೆ
ಬೇರೆಡೆಗೆ ಎಲೆ ಕಾಮಿನಿ?
ಇದ್ದರೂ ನೀನೆದ್ದು ಹೋದರು
ಒಂದೆ ಎನಗೆ ವಿಲಾಸಿನಿ.

ಪರನಾರಿ ಸೋದರತೆ ಮನಸಿಗೆ
ತಟ್ಟೆ ಗುರು ನಿರಪೇಕ್ಷೆಯೋ
ಸೋಂಕನೆಲ್ಲವ ಸ್ತಬ್ಧಗೊಳಿಸುವ
ಮುಪ್ಪೊ? ಹೆಣ್ಣಿನುಪೇಕ್ಷೆಯೋ?

Wednesday, April 20, 2011

ಸುಭಾಷಿತ ಸರಣಿ-೧

ಬಿಲ್ಹಣ ಕವಿ ತನ್ನ ವಿದ್ಯಾಭ್ಯಾಸ ಮುಗಿದ ಬಳಿಕ ಪಾಂಡಿತ್ಯ ಪ್ರದರ್ಶನಕ್ಕೆಂದು ರಾಜನ ಬಳಿಗೆ ಹೋದನಂತೆ. ಆದರೆ ಭಟರು ಬಿಲ್ಹಣನನ್ನು ಒಳಗೆ ಬಿಡಲು ಸುತಾರಾಂ ಒಪ್ಪಲಿಲ್ಲ. ಕಾರಣ ಆತ ಎಂದಿಗೂ ಆಸ್ಥಾನಕ್ಕೆ ಬಂದವನಲ್ಲ. ಈ ಹಿಂದೆ ಆಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡವನಲ್ಲ. ಭಟರಿಗೆ ಆತನ ಪರಿಚಯವಿಲ್ಲ. ಹೀಗಾಗಿ ಅರಮನೆಯ ಹೊರಗೆ ನಿಂತುಕೊಂಡೇ ಇದ್ದನಂತೆ.


ಆದರೆ ಆಸ್ಥಾನದ ಕಾಯಂ ಪಂಡಿತರು ಮಾತ್ರ ಸರಾಗವಾಗಿ ಆಸ್ಥಾನಕ್ಕೆ ಹೋಗಿ ತಮ್ಮ ಪಾಂಡಿತ್ಯ ಪ್ರದರ್ಶಿಸಿ ರಾಜನಿಂದ ಬಿರುದು, ಸರ, ಚಿನ್ನದ ನಾಣ್ಯಗಳನ್ನು ಪಡೆದು ವಾಪಸ್ ಆಗುತ್ತಿದ್ದರು. ಬಿಲ್ಹಣ ನೋಡುವಷ್ಟು ನೋಡಿದ. ಆತನಿಗೆ ತಡೆಯಲಾಗಲಿಲ್ಲ. ಆತ ಭಟರಿಗೆ ಹೇಳಿದನಂತೆ. “ನೋಡಿ, ನೀವು ನನಗೆ ರಾಜನ ಬಳಿಗೆ ಹೋಗಲು ಬಿಡುತ್ತಿಲ್ಲ. ನನಗೆ ಬೇಸರವಿಲ್ಲ. ಆದರೆ ನನ್ನ ಚಿಕ್ಕದೊಂದು ಕೆಲಸ ಮಾಡಿ ಕೊಡಬಹುದೆ? ನಾನು ನನ್ನ ರಚನೆಯೊಂದನ್ನು ಬರೆದುಕೊಡುತ್ತೇನೆ. ಅದನ್ನು ರಾಜನಿಗೆ ಒಯ್ದು ತೋರಿಸಿ. ಆಮೇಲೆ ರಾಜ ಕರೆದರೆ ನಾನು ಬರುತ್ತನೆ. ಇಲ್ಲದಿದ್ದರೆ ಹೊರಟು ಹೋಗುತ್ತೇನೆ”. ಭಟರು ಬಿಲ್ಹಣ ಬರೆದುಕೊಟಿದ್ದನ್ನು ರಾಜನಿಗೆ ಒಯ್ದು ತೋರಿಸುತ್ತಲೇ, ರಾಜ ಅದನ್ನು ಓದಿ ಸಿಂಹಾಸನದಿಂದ ಎದ್ದು ಓಡೋಡಿ ಅರಮನೆಯ ಹೊರಗೆ ಬಂದು ಬಿಲ್ಹಣನನ್ನು ಅಪ್ಪಿಕೊಂಡು ಸ್ವತಃ ಆಸ್ಥಾನದ ಒಳಗೆ ಕರದೆಕೊಂಡು ಹೋದನಂತೆ. ಬಿಲ್ಹಣ ಹಾಗಾದರೆ ಏನು ಬರೆದಿದ್ದ? ಅದು ಹೀಗಿದೆ.

ರಾಜದ್ವಾರೆ ಭಗಾಕಾರೆ
ವಿಷಂತಿ ಪ್ರವಿಷಂತಿ ಚ
ಶಿಶ್ನವತ್ ಪಂಡಿತಾಸರ್ವೇ
ಬಿಲ್ಹಣೋ ವೃಷಣಾಯತೇ.


(ಅರ್ಥ – ಭಗ (ಯೋನಿ) ಯಾಕಾರದಲ್ಲಿರುವ ರಾಜದ್ವಾರದಿಂದ ಪಂಡಿತರು ಶಿಶ್ನದ ಹಾಗೆ ಒಳಗೆ ಹೊರಗೆ ಸಂಚರಿಸುತ್ತಿದ್ದಾರೆ. ಆದರೆ ಬಿಲ್ಹಣ ಮಾತ್ರ ವೃಷಣದ ಹಾಗೆ ಹೊರಗೆಯೇ ನಿಂತಿದ್ದಾನೆ)

ಕಳಿಸಿದ್ದು:ಸುಘೋಷ್ ನಿಗಳೆ

Wednesday, March 16, 2011

ಪಾಪ, ಹಾವು!

"ಮಾಡೋಕ್ ಕೆಲಸ ಇಲ್ದೇ ಮೈಮೇಲೆ ಇರುವೆ ಬಿಟ್ಕೊಂಡ್ರು" ಅನ್ನೋ ಒಂದು ಮಾತಿದೆ. ಹಾಗೇ ಈ ಚೆಲುವೆಯದೂ ಕತೆ. ಆದರೆ ಈಕೆ ಮೈಮೇಲೆ ಬಿಟ್ಟುಕೊಂಡದ್ದು ಇರುವೆಯಲ್ಲ, ಜೀವಂತ ಹಾವು!

ಒರಿಟ್ ಫಾಕ್ಸ್ ಎಂಬ ಇಸ್ರೇಲಿ ಮಾಡೆಲ್ ಸ್ಟೇಜ್‌ಶೋ ಒಂದರಲ್ಲಿ ಹಾವಿನೊಂದಿಗೆ ಸರಸವಾಡುತ್ತಾ ಕೆಮೆರಾಗಳಿಗೆ ಪೋಸ್ ಕೊಡುತ್ತಿದ್ದಾಗ ನಡೆದ ಘಟನೆಯಿದು. ಸ್ವಲ್ಪ ಹೊತ್ತು ಎಲ್ಲಾ ಚೆನ್ನಾಗೇ ಇತ್ತು. ಹಾವನ್ನು ಕಾಲಿಗೆ ಸುತ್ತಿಕೊಂಡಳು, ಕೈಗೆ ಸುತ್ತಿಕೊಂಡಳು, ಸೊಂಟಕ್ಕೆ ಸುತ್ತಿಕೊಂಡಳು... ಹಾವೂ ಸುಮ್ಮನೆ ಕೋ‌-ಆಪರೇಟ್ ಮಾಡುತ್ತಿತ್ತು. ಆದರೆ ಯಾವಾಗ ಆಕೆ ಹಾವಿನ ತುಟಿಗೆ ಮುತ್ತಿಡಲು ಹೋದಳೋ, ಹಾವಿಗೆ ಅದೇನಾಯಿತೋ, ಸ್ವಲ್ಪ ಕೊಸರಾಡಿದೆ. ಇವಳ ಕೈಹಿಡಿತ ತಪ್ಪಿದೆ. ಹಾವು ಸೀದಾ ಹೋಗಿ ಏನ್ ಮಾಡಿದ್ಯೋ ನೋಡಿ! (ಚಿತ್ರ / ವೀಡಿಯೋ ನೋಡಿ)

ತಕ್ಷಣ ಫಾಕ್ಸ್‌ಳನ್ನು ಹತ್ತಿರದ ಆಸ್ಪತ್ರೆಗೆ ಒಯ್ದು ಇಂಜೆಕ್ಷನ್ ಕೊಡಿಸಿದ್ದಾರೆ. ಆಕೆ ಚೇತರಿಸಿಕೊಂಡಿದ್ದಾಳೆ.

ಆದರೆ ವಿಷ್ಯ ಅದಲ್ಲ, ಪೀನಕುಂಭ ಪಯೋದದತ್ತ ಬಾಯಿಹಾಕಿದ್ದ ಆ ಹಾವು ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದೆ! ಕಾರಣ ಏನಪ್ಪಾ ಅಂತ ನೋಡಲಾಗಿ, ಹಾವು ಸತ್ತಿದ್ದು 'ಸಿಲಿಕಾನ್ ಪಾಯ್ಸನಿಂಗ್'ನಿಂದ!

ಯಾವುದು ಕೃತಕ, ಯಾವುದು ನೈಸರ್ಗಿಕ ಅಂತ ಹಾವಿಗೆಲ್ಲಿ ತಿಳಿಯಬೇಕು? ಪಾಪ ಹಾವು! ಆದ್ರೆ ಹುಷಾರಾಗಿರಬೇಕು ನೀವೂ!


   




Monday, February 14, 2011

ರೋಮನ್ ಕಾಯಿನ್ ಕಾಮ!

ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು!

ನಮ್ಮ ಹಳಬರು, ಪ್ರೇಮದ ವಿಷಯದಲ್ಲಿ ಪಂಟರುಗಳು ಅಂತ ಗೊತ್ತಿರೋದೆ. ಅದಕ್ಕೆ ಮತ್ತೊಂದಿಷ್ಟು ಪ್ರೂಫುಗಳು, ಈ ಹಳೆಯ ನಾಣ್ಯಗಳು.


Ancient Roman Coins - Spintrii

Spintrii (Latin spintria), also known as brothels brands - Coin counters, used in ancient Rome as a means of internal calculation in lupanariyah. The Russian numismatics in practice the term is sometimes applied to all tokens and ancient coins from the erotic storyline.

Most spintry minted from bronze and have an erotic story. Typically, this image of people in various positions during sex, naked men, a winged phallus, copulating animals. The most common subject is sex, men and women. On the reverse side of the counters are usually different Roman numerals, the meaning of which is not precisely determined. It is assumed that the image corresponds to the position provided for this counter service.

Click Here To Join

There are similar products from other materials. Several of these brands of terracotta and the bones were found during the excavations of Pompeii. The most probable date for registration is spintry I and II century AD. Despite the widely recognized version of the application of these coins in a brothel, are nominated for the version that spintrii used as playing chips, and also may have been issued at the time of Tiberius to discredit the imperial power.

Click Here To Join

Click Here To Join

Click Here To Join

Click Here To Join

Click Here To Join

Click Here To Join

Click Here To Join

Click Here To Join

Click Here To Join

Click Here To Join

Click Here To Join

Click Here To Join



ಮಾಹಿತಿ : ಮಡಿವಾಳಯ್ಯ ಪಾಟೀಲ್.

Tuesday, February 8, 2011

ಸಿದ್ದಪ್ಪನವರ ಕಥೆ

ಸಿದ್ದಪ್ಪ ದೊಡ್ಡ ಬ್ಯುಸಿನೆಸ್ ಮನ್. ದಿನಾ ಸಿಕ್ಕಾಪಟ್ಟೆ ಕೆಲಸ, ಮನೆಗೆ ಬರೋದು ಮಧ್ಯರಾತ್ರಿ ಕಳೆದ ಮೇಲೆಯೇ. ಗಂಡ ದಿನಾ ಹುಚ್ಚಾಪಟ್ಟೆ ಕೆಲಸ ಮಾಡಿ ಸುಸ್ತಾಗಿ ಬರೋದು ನೋಡಿ ಹೆಂಡತಿಗೂ ಬೇಜಾರು. ಆದರೇನು ಮಾಡೋದು?, ದೊಡ್ಡ ಹುದ್ದೆಗೆ ಹೋದ ಮೇಲೆ, ಜವಾಬ್ದಾರಿಗಳೂ ಹೆಚ್ಚುತ್ತವೆಯಲ್ಲ?..

ಸಿದ್ದಪ್ಪನಿಗಿದ್ದ ಏಕೈಕ ಹವ್ಯಾಸ ಅಂದರೆ ಅಪರೂಪಕ್ಕೊಮ್ಮೆ ಗಾಲ್ಫ್ ಆಡೋಕೆ ಹೋಗೋದು. ಅದು ಅವನ ಹೆಂಡತಿಗೂ ಗೊತ್ತು. ಎಲ್ಲಾದರೂ ವೀಕೆಂಡುಗಳಲ್ಲು ಸಿದ್ದಪ್ಪನವರು ಗಾಲ್ಫ್ ಕಿಟ್ ತಗೊಂಡು ಹೊರಬಿದ್ದರೆ ಮತ್ತೆ ಬರೋದು ರಾತ್ರಿಗೇ. ಪಾಪ, ಗಂಡ ಕೆಲ ಬಾರಿ ಶನಿವಾರ ಭಾನುವಾರಗಳಲ್ಲೂ ತನ್ನ ಜೊತೆ ಇರಲ್ಲ ಎಂಬ ಬೇಜಾರು ಇದ್ದರೂ, ವಾರವಿಡೀ ಕೆಲಸ ಮಾಡಿರುತ್ತಾರೆ ಸುತ್ತಾಡಿಕೊಂಡು ಬರಲಿ ಅನ್ನೋದು ಪತಿವೃತಾ ಶಿರೋಮಣಿ ಪತ್ನಿಯ ಅಭಿಪ್ರಾಯ.

ಆದರೆ ಇತ್ತೀಚಿಗೆ ಕೆಲ ದಿನಗಳಿಂದ ಸಿದ್ದಪ್ಪನವರು ಗಾಲ್ಫ್ ಕಡೆಗೂ ತಲೆ ಹಾಕಿರಲಿಲ್ಲ. ದಿನಾ ರಾತ್ರಿ ಎರಡು ಗಂಟೆ ಮೇಲೆಯೇ ಆಗಮನ, ಮತ್ತೆ ಗೊರಕೆ. ಯಾಕೋ ಸಂಸಾರ ಜೀವನದ ಸಾರ ಗಂಡನ ಬೋರಲು ಬಿದ್ದ ಬೆನ್ನು ನೋಡಿಯೇ ಕಳೆದು ಹೋಗುತ್ತಿರುವುದನ್ನ ಅರಿತ ಪತ್ನಿ ಇದಕ್ಕೇನಾದರೂ ಪರಿಹಾರ ಹುಡುಕಬೇಕು ಅಂತ ನಿರ್ಧಾರ ಮಾಡಿದಳು.

ಅವಳ ಲೇಡೀಸು ಕ್ಲಬ್ಬಿನ ಮಿತ್ರೆಯೊಬ್ಬಳು, ನೋಡು ಗಂಡನ ಲೈಫನ್ನ ನೀನೇ ಸರಿ ಮಾಡಬೇಕು.. ಅವರಿಗೆ ಜೀವನದಲ್ಲಿ ಬೇರೇ ಲವಲವಿಕೆಯ ವಿಚಾರಗಳು ಇರುತ್ತವೆ ಅನ್ನೋದನೂ ತೋರಿಸಬೇಕು ಅಂದಳು ಮತ್ತು ಅದಕ್ಕೆ ಸರಿಯಾದ ಸಲಹೆಗಳನ್ನೂ ಕೊಟ್ಟಳು- ಸಿದ್ದಪ್ಪಾವ್ರನ್ನ ಮೊದಲು ಈ ಪಬ್ಬು ಗಿಬ್ಬಿಗೆ ಕರ್ಕೊಂಡು ಹೋಗು, ಅಲ್ಲೆಲ್ಲ ಹುಡುಗ್ರು - ಹುಡ್ಗೀರು ಅವರ ಕುಣಿತ-ಕುಡಿತ ಇದೆಲ್ಲ ನೋಡಿ ಅವರಿಗೊಂದು ಹುಮ್ಮಸ್ಸು ಬರಬೋದು, ಅವರಿಗೂ ಸ್ವಲ್ಪ ತಗೋಳೋ ಹಾಗೆ ಮಾಡು, ಮೊದಲಿಗೆ ಸ್ವಲ್ಪ ಕಷ್ಟ ಅನ್ನಿಸಿದ್ರೂ ಆಮೇಲಾಮೇಲೆ ಅಭ್ಯಾಸ ಆಗತ್ತೆ ಅಂತ.

ಜೈ ತಗಳಪ, ಸಿದ್ದಪ್ಪನವರು ಈ ಶುಕ್ರವಾರ ಮನೆಗೆ ಬರೋದನ್ನೇ ಕಾಯ್ತಿದ್ದ ವೈಫು, ಲಕಲಕ ಡ್ರೆಸ್ಸು ಮಾಡಿಕೊಂಡಿದ್ದಳು. ಸಿದ್ದಪ್ಪಾವರು ಏನಿದು ವಿಚಾರ ಅಂತ ಕೇಳೋಕೆ ಮುನ್ನವೇ, ಅವರ ಟೈ ಕಿತ್ತು ಹಾಕಿ ಎಳಕೊಂಡು ಹೊರಟೇ ಬಿಟ್ಟಳು. ದಾರಿಯಲಿ ಸಿಕ್ಕಿದ ಯಾವುದೋ ಕ್ಯಾಬು ಹತ್ತಿ ಮೊದಲೇ ತಿಳಕೊಂಡಿದ್ದ ನಗರದ ಉತ್ತಮ ಪಬ್ಬೊಂದರ ಹೆಸರನ್ನ ಡ್ರೈವರಿಗೆ ವದರಿದಳು. ಅದನ್ನ ಕೇಳಿದ್ದೇ ಸಿದ್ದಪ್ಪನವರು ಆಘಾತಕ್ಕೊಳಗಾಗಿ ಎಲ್ಲಿಗೆ ಹೊರಟಿದ್ದೇವೆ ಎಂದು ಕೇಳಿದಾಗ , ಹೀಗೀಗೆ, ಸುಮ್ಮನೇ ರಿಲ್ಯಾಕ್ಸ್ ಆಗೋಕೆ.. ಅಂತೆಲ್ಲ ಶಾರ್ಟ್ ಅಂಡ್ ಸ್ವೀಟ್ ಆಗಿ ವಿಚಾರ ತಿಳಿಸಿ ಸುಮ್ಮನಾದಳು. ಪಕ್ಕದಲ್ಲಿ ಕೂತಿದ್ದ ಸಿದ್ದಪ್ಪನವರು ಸಿಕ್ಕಾಪಟ್ಟೆ ಕೊಸರಾಡುತ್ತಿದ್ದರೂ, ಅಸಮಾಧಾನದಲ್ಲಿ ಗೊಣಗಾಡುತ್ತಿದ್ದರೂ ಈಕೆ ಕ್ಯಾರೇ ಅನ್ನಲಿಲ್ಲ.

ಝಗಮಗ ಮಿಂಚುತ್ತಿದ್ದ ಪಬ್ಬಿನ ಹೊರಗೆ ನಿಂತ ಸಿದ್ದಪ್ಪನವರು ಅಲ್ಲಿಂದ ವಾಪಾಸು ಹೋಗೋಕೆ ಹವಣಿಸುತ್ತಿದ್ದಾಗಲೇ ಅವರ ಧರ್ಮಪತ್ನಿ ಅವರನ್ನು ಒಳಗೆಳೆದುಕೊಂಡು ಹೊರಟೇ ಬಿಟ್ಟಳು, ಹೊಸ ಕನಸುಗಳ ಲೋಕ ತೆರೆದೇ ಬಿಟ್ಟಿದೆ ಎಂಬ ಆಸೆಯಲ್ಲಿ. ಅಷ್ಟರಲ್ಲಿ ಒಂದು ಅಚ್ಚರಿ ಸಂಭವಿಸಿತು.ಬಾಗಿಲಲ್ಲೇ ಇದ್ದ ದಪ್ಪ ಮೀಸೆಯ ಟೊಪ್ಪಿವಾಲ ಸಿದ್ದಪ್ಪರನ್ನ ನೋಡಿ, ಟಪ್ ಅಂತ ಕಾಲೆತ್ತಿ ಸೆಲ್ಯೂಟ್ ಹೊಡೆದು, ವೆಲ್ಕಂ ಸಿದ್ದಪ್ಪಾ ಸರ್ ಅಂದುಬಿಡಬೇಕೇ?!

ಹೆಂಡತಿಗೆ ಸಣ್ಣಗೆ ಆಘಾತ! ಸಿದ್ದಪ್ಪನವರು ಕೂಡಲೇ , ಹೆ ಹೆ ಇವನು ಕಣೇ.. ಇವನು ಸೋಮ ಅದೇ ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿ ಕೆಲ್ಸ ಮಾಡೋನು.. ಇಲ್ಲೇನೋ ಟೆಂಪರರಿ ಕೆಲಸ ಮಾಡ್ತಾ ಇರಬೇಕು ಅಂತ ಒಳ ಹೊರಟರು. ವೈಫು ಮೇಡಂಗೆ ಕೊಂಚ ಇರಿಸುಮುರಿಸಾದರೂ, ಅವರೂ ಒಳ ನಡೆದರು.

ಅಲ್ಲಿನ ಆಧುನಿಕ ಅಮರಾವತಿಯನ್ನ ನೋಡಿ ಪಾಪ ಸಿದ್ದಪ್ಪನವರ ಹೆಂಡ್ರು ಒಮ್ಮೆಗೆ ಕಂಗಾಲಾದರು! ಕಿವಿ ಹರಿದು ಹೋಗೋ ಹಾಗಿನ ಸದ್ದು, ತುಂಡು ಲಂಗದ ಲಲನೆಯರು, ಬೀರು ಬಾಟಲಿಗಳ ಠಣಠಣ ಸದ್ದಿಗೆ ದಿಕ್ಕು ತಪ್ಪಿದ ಹರಿಣದಂತೆ ಆಕೆ ತೆಪ್ಪಗಾದರು. ಆದರೆ ಸಿದ್ದಪ್ಪನವರೇನೂ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದಂತೆ ಕಂಡು ಬಂದಿದ್ದು, ಆಕೆಯನ್ನ ಮತ್ತಷ್ಟು ಹೈಲು ಮಾಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ವೈಟರ್ ಭೂಪತಿ, ಸರ್, ನಿಮ್ಮ ಮಾಮೂಲಿ ಬ್ರಾಂಡ್ ತರಲೋ, ಅಥವ ಹೊಸದೇನಾದರೂ ಬೇಕೋ ಸಿದ್ದಪ್ಪನವರೇ ಅಂದುಬಿಡೋದೇ?!

ಈಗ ಸಹಧರ್ಮಿಣಿಯವರ ತಲೆಯೊಳಗಿನ ಟ್ಯೂಬ್ ಲೈಟ್ ಪಕಪಕ ಅನ್ನಲಾರಂಭಿಸಿತ್ತು ನಿಧಾನಕ್ಕೆ . ಆದರೆ ಅವಳೇನೋ ಕೇಳೋ ಮೊದಲೇ "ಇವ್ನು ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿರೋ ಬಾರ್ ನ ಕೆಲಸಗಾರ. ಅಲ್ಲಿ ಅಪರೂಪಕ್ಕೆ ಗೆಳೆಯರಿಗೆ ಕಂಪನಿ ಕೊಡೋಕೆ ಕುಡೀತೀನಿ, ಸೋ. ಇವನಿಗೆ ನಾನು ಕುಡಿಯೋ ಬ್ರಾಂಡು ಗೊತ್ತು ಬಿಡು ಅನ್ನುತ್ತಲೇ ಗೋಬಿ ಮಂಚೂರಿಗೂ ಆರ್ಡರ್ ಮಾಡಿಬಿಟ್ಟರು.

ಟ್ಯೂಬ್ ಲೈಟಿಗೆ ಮತ್ತಷ್ಟು ವೋಲ್ಟೇಜ್ ಹರಿಯೋಕೆ ಶುರುವಾಗಿ ಇನ್ನೆರಡು ಬಾರಿ ಪಕ್ ಪಕ್ ಅಂತು.

ಸಿದ್ದಪ್ಪನವರ ಬಳಿ ಕ್ಲಾರಿಫಿಕೇಷನ್ ಕೇಳೋಕೆ ಮೊದಲೇ, ಅಲ್ಲಿಗೆ ಸಡನ್ನಾಗಿ ಬಂದ ಮಿನಿಲಂಗದ ಚೆಲುವೆಯೊಬ್ಬಳು, ಏನ್ ಸಿದ್ದಪ್ಪಾ ನನ್ ಮರ್ತೇ ಬಿಟ್ಟೆ ಅಂತ ಅಂದ್ಕೊಂಡಿದ್ನಪಾ ಅಂತ ಮಾದಕವಾಗಿ ನಕ್ಕು, ಎದೆಯಲುಗಿಸಿದಳು.

ಟ್ಯೂಬ್ ಲೈಟ್ ಹತ್ತಿಕೊಂಡು, ಝಗ್ಗನೆ ಬೆಳಕಾಯಿತು.

ಸಿಟ್ಟು ನೆತ್ತಿಗೇರಿ ಸಟ್ಟನೆದ್ದು ಹೊರಗೋಡುತ್ತಿದ್ದ ಹೆಂಡತಿಗೆ ಹೇ ಹೇ.. ಅವಳ್ಯಾರೋ ನನಗೆ ಗೊತ್ತಿಲ್ಲ.. ತಪ್ಪಾಗಿ ತಿಳ್ಕೊಂಬಿಟ್ಟಿದಾಳೆ ಅಂತ ಸಿದ್ದಪ್ನೋರು ತೊದಲೋ ಹೊತ್ತಿಗೆ ಆಕೆ, ರಸ್ತೆಗೆ ಬಂದು ನಿಂತಾಗಿತ್ತು..

ಸಿದ್ದಪ್ಪ ಆಕೆಯ ಸೆರಗು ಹಿಡಿದು ಬೇಡಿಕೊಳ್ಳುತ್ತಿದ್ದರೂ ಕೇಳದೇ, ರಸ್ತೆಯಲ್ಲೇ ಅವರ ಜನ್ಮಾ ಜಾಲಾಡೋಕೆ ಶುರು ಮಾಡಿದ ಹೆಂಡತಿ, ಅಲ್ಲೇ ಪಕ್ಕದಲ್ಲಿ ತೂಕಡಿಸುತ್ತ ಮಲಗಿದ್ದ ಆಟೋದವನ್ನ ತಿವಿದು ಒಳಗೆ ಕೂತಾಗಿತ್ತು.

ಸಿದ್ದಪ್ಪನವರು ಅಲ್ಲೇ ಪಕ್ಕಕ್ಕೆ ಹತ್ತಿ ಕೂತು, ಇಲ್ಲ ಕಣೇ .. ಹಾಗಲ್ಲ ಕಣೇ..ಅನ್ನೋದೂ.. ಅವಳು ನಾನು ಬರಲ್ಲ ನಿಮ್ಮ ಜೊತೆಗೆ , ನೀವೂ ನನ್ನ ಹಿಂದೆ ಬರ್ಬೇಡಿ ಇನ್ನು ಅಂತ ಕೂಗೋದೂ ನಡೆದೇ ಇದ್ದಾಗ, ಸರಿಯಾಗಿ ಎಚ್ಚೆತ್ತ ಆಟೋದ ಯಜಮಾನ್ರು,

"ಏನ್ ಸಿದ್ದಪ್ನೋರೇ, ಈ ಸಲ ಮಜಬೂತು ಕಡಕ್ ಹಕ್ಕಿನೇ ಸಿಕ್ಕಿರೋ ಹಾಗಿದೆ" ಅಂದರು.

ಇದೇ ಮುಂದಿನ ಬುಧವಾರ ಸಿದ್ದಪ್ಪನವರ ವೈಕುಂಠ ಸಮಾರಾಧನೆ ಏರ್ಪಡಿಸಲಾಗಿದೆ. ಆಮಂತ್ರಣ ಸಿಗದವರು ಇದನ್ನೇ ವೈಯಕ್ತಿಕ ಕರೆಯೋಲೆ ಎಂದು ಪರಿಗಣಿಸಬೇಕಾಗಿ ಕೋರಿಕೆ.

(ಇಂಗ್ಲೀಷ್ ಬ್ಲಾಗೊಂದರ ಬರಹದಿಂದ ಪ್ರೇರಿತ)

Friday, January 28, 2011

ಸಿಗ್ನಲ್ ಸ್ಟೋರಿ

ಇಲ್ಲಿ ಎಲ್ಲಾ ಸಿಗ್ನಲ್ಲ ಮಾಡ್ಯಾರ್ರಿ. ಹೇಳುದಕ್ಕೆ ಏನು ಇಲ್ಲ... ಬರೆ ನೋಡಿ ಕಲಿ ಮಾಡಿ ತಿಳಿ.


ಚಿತ್ರ ಕೃಪೆ: ರವೀಂದ್ರ
(ಸೂಚನೆ: ಚಿತ್ರ ಸ್ಪಷ್ಟವಾಗಿರದಿದ್ದಲ್ಲಿ ಚಿತ್ರದ ಮೇಲೆ ಕ್ಲಿಕ್ಕಿಸಿ ಮತ್ತು ಹಿಗ್ಗಿಸಿ ನೋಡಿ )

Tuesday, January 11, 2011

ಕುಮಾರವ್ಯಾಸನ ದ್ರೌಪದಿ

ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಕರೆಯಲ್ಪಡುವ ಗದುಗಿನ ನಾರಣಪ್ಪ, ಭಾಮಿನಿ ಷಟ್ಪದಿಯಲ್ಲಿ ಮಹಾಭಾರತವನ್ನು ರಚಿಸಿ ಕುಮಾರವ್ಯಾಸನಾದವನು. ಅವನ ಕರ್ಣಾಟ ಭಾರತ ಕಥಾಮಂಜರಿ ಇವತ್ತಿಗೂ ಓದುಗರಿಗೆ ರೋಮಾಂಚನವನ್ನುಂಟುಮಾಡುವ ಕೃತಿ. ಗಮಕಗಾಯನದಲ್ಲಿ ಅದನ್ನು ಕೇಳುವಾಗ ಶ್ರೋತೃಗಳಿಗೆ ಮೈನವಿರೇಳುತ್ತದೆ. "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿಯುವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು!" ಎಂದು ಕುವೆಂಪು ಅವನನ್ನು ಹೊಗಳಿದ್ದಾರೆ.

ಕುಮಾರವ್ಯಾಸನ ಭಾರತದಲ್ಲಿ ಶೃಂಗಾರ ರಸಗಳೂ ಮೇಳೈಸಿಕೊಂಡಿವೆ. ಇದೀಗ, ಮೋಟುಗೋಡೆಯಲ್ಲಿ ನಿಂತಿರುವ ನಾವು, ಕುಮಾರವ್ಯಾಸನ ಶೃಂಗಾರಮೀಮಾಂಸೆಯ ಪರಿಯನ್ನು ನೋಡುವರಾಗೋಣ!

* *
ಪಾಂಚಾಲ ದೇಶದ ಅರಮನೆಯಲ್ಲಿ ದ್ರೌಪದಿಯ ಸ್ವಯಂವರ ನಡೆಯುತ್ತಿದೆ. ನಾನಾ ದೇಶದ ಅರಸುಗಳು ನೆರೆದಿದ್ದಾರೆ. ಕಿಕ್ಕಿರಿದ ಅರಮನೆಯ ಸಭಾಂಗಣದಲ್ಲಿ ನಡೆದು ಬರುವ ಕೃಷ್ಣೆಯ ರೂಪನ್ನು ಕುಮಾರವ್ಯಾಸ ಬಣ್ಣಿಸುವ ಬಗೆ ಹೀಗಿದೆ:

ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ

ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡಿರೆಂದ

ದ್ರೌಪದಿಯೊಂದಿಗಿರುವ ಸಖಿಯರಾದರೂ ಅಲ್ಪಸುಂದರಿಯರೇ? ಊಹುಂ!

ತೋರ ಮೊಲೆಗಳ ನಲಿವನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ

ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಗಳ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲುವಸನದ
ಸಾರಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ

ಇಂತಹ ಸುಂದರಿಯನ್ನು ಅರ್ಜುನ ಗೆಲ್ಲುತ್ತಾನೆ. ದ್ರೌಪದಿ ವೀರ ಪಾಂಡವರ ಸತಿಯಾಗುತ್ತಾಳಾದರೂ ಜೀವಿತದುದ್ದಕ್ಕೂ ಕೊರಗುಗಳನ್ನನುಭವಿಸುತ್ತಿರುತ್ತಾಳೆ. ಮೊದಲೇ ಐವರು ಪತಿಯರನ್ನು ಸಂಭಾಳಿಸಬೇಕಾದ ಕಷ್ಟ. ಅರ್ಜುನನ ಮೇಲೆ ಅವಳಿಗೆ ಹೆಚ್ಚಿನ ಅನುರಕ್ತಿಯಿದ್ದರೂ ಅರ್ಜುನನ ಪ್ರೀತಿ ಮತ್ತೀರ್ವರು ಸತಿಯರಿಗೆ ಹಂಚಿಹೋಗಿದೆ. ಭೀಮನಿಗೂ ಸಾಲಕಟಂಕಟಿಯೆಂಬ ಮತ್ತೊಬ್ಬ ಹೆಂಡತಿ. ದ್ಯೂತದಲ್ಲಿ ಸೋತ ಗಂಡನಿಂದಾಗಿ ದ್ರೌಪದಿ ಕುರುಸಭಾಮಧ್ಯದಲ್ಲಿ ಬೆತ್ತಲಾಗಬೇಕಾಗುತ್ತದೆ. "ಐವರಿಗೆ ಹೆಂಡತಿಯಾದವಳು ನಮಗೂ ಆಗಲಾರೆಯಾ?" ಎಂಬಂತಹ ಕೌರವರ ಕುಹಕದ ಮಾತುಗಳಿಗೆ ಕಿವಿಯಾಗಬೇಕಾಗುತ್ತದೆ. ನಂತರ ಗಂಡಂದಿರೊಂದಿಗೆ ವನವಾಸ-ಅಜ್ಞಾತವಾಸಗಳನ್ನನುಭವಿಸಬೇಕಾಗಿ ಬರುತ್ತದೆ.

ಈ ಮಧ್ಯೆ ಅರ್ಜುನನಿಗೆ ಇಂದ್ರಪುರಿಗೆ ಹೋಗುವ ಅವಕಾಶ ದೊರೆಯುತ್ತದೆ. ಅಲ್ಲಿ ಊರ್ವಶಿ ಅರ್ಜುನನಿಗೆ ಮನಸೋಲುತ್ತಾಳೆ. ಅರ್ಜುನನ್ನು ಸೇರಬಯಸುತ್ತಾಳೆ. "ಮನಸಿಜನ ಮಾರಾಂಕ ಕಾಮುಕ ಜನದ ಜೀವಾರ್ಥಕೆ ವಿಭುವೆಂದೆನಿಸಿದೂರ್ವಶಿ" ಅಂತಃಪುರದಲ್ಲಿ ನಡೆದು ಬರುವುದನ್ನು ವರ್ಣಿಸುವಾಗ ಕುಮಾರವ್ಯಾಸನಂಥ ಕುಮಾರವ್ಯಾಸನೇ "ಶಬ್ದಬ್ರಹ್ಮ ಸೋತುದು ಸೊರಹಲೇನೆಂದ" ಎನ್ನುತ್ತಾನೆ! ಹಾಗಾದರೆ ಅವಳ ರೂಪು-ಅಲಂಕಾರಗಳಾದರೂ ಹೇಗಿದ್ದಿರಬಹುದು?

ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆಂದ

ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪು ಸುರಸತಿಯ

ಆದರೆ ಪಾಂಡವರೈವರಲ್ಲೇ ಅತಿರಸಿಕನೆಂದು ಚಿತ್ರಿಸಲ್ಪಡುವ ಪಾರ್ಥ ಇಲ್ಲಿ ಊರ್ವಶಿಯ ಎದುರು ಸೋಲುತ್ತಾನೆ. ತನ್ನ ವಂಶವೃಕ್ಷದ ಪ್ರಕಾರ ನೀನು ತಾಯಿಯ ಸಮಾನ ಎಂದು ಗೋಗರೆಯುತ್ತಾನೆ. ಅವಮಾನಿತನಾಗಿ ವಾಪಸಾಗುತ್ತಾನೆ.

ಪಾಂಡವರು ವಿರಾಟನ ಆಸ್ಥಾನದಲ್ಲಿ ಅಜ್ಞಾತವಾಸದಲ್ಲಿದ್ದಾಗ ದ್ರೌಪದಿಯನ್ನು ಕಂಡಾಗ ಕೀಚಕನಿಗೆ ಅವಳ ಮೇಲೆ ಆಸೆಯುಂಟಾಗುತ್ತದೆ.

ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ

ತಿಳಿಯಿವಳು ಮೂಜಗದ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು

ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ

ನಂತರ ವಿರಾಟನನ್ನು ಭೀಮ ಕೊಲ್ಲುವುದು, ಪಾಂಡವರು ಅಜ್ಞಾತವಾಸ ಮುಗಿಸಿ ಬರುವುದು, ದುರ್ಯೋಧನ ರಾಜ್ಯವನ್ನು ಬಿಟ್ಟುಕೊಡದೆ ಯುದ್ಧಕ್ಕೆ ಆಹ್ವಾನಿಸುವುದು, ಕುರುಕ್ಷೇತ್ರದಲ್ಲಿ ಪಾಂಡವರು ವಿಜಯಿಗಳಾಗುವುದು..... ಯುದ್ಧದಲ್ಲಿ ಸೋಲೆಂತು ಗೆಲುವೆಂತು? ಪುತ್ರರು-ಬಂಧು-ಬಾಂಧವ-ಪ್ರಜೆ-ಸೈನ್ಯವನ್ನೆಲ್ಲ ಕಳೆದುಕೊಂಡ ಪಾಂಡವರು ಗೆದ್ದರೂ ಸೋತವರಂತೆ ಕಾಣುತ್ತಾರೆ. ಮಹಾಭಾರತ, ಧರ್ಮರಾಯನ ಪಟ್ಟಾಭಿಷೇಕದೊಂದಿಗೆ ಒಂದು ದುರಂತ ಕತೆಯಂತೆ ಮುಗಿತಾಯವಾಗುತ್ತದೆ.

ಆದರೆ ಕುಮಾರವ್ಯಾಸನ ಬಣ್ಣನೆಯಲ್ಲಿ ಭಾರತ ದೇಶದ ಈ ಮಹಾಕಾವ್ಯ ಮನೋಹರವಾಗಿ ಚಿತ್ರಿಸಲ್ಪಟ್ಟಿದೆ. ಅದನ್ನು ಓದುವ, ಅರ್ಥೈಸಿಕೊಳ್ಳುವ, ಖುಶಿಪಡುವ ಅದೃಷ್ಟ ನಮ್ಮದಾಗಲಿ.