ಸಿದ್ದಪ್ಪ ದೊಡ್ಡ ಬ್ಯುಸಿನೆಸ್ ಮನ್. ದಿನಾ ಸಿಕ್ಕಾಪಟ್ಟೆ ಕೆಲಸ, ಮನೆಗೆ ಬರೋದು ಮಧ್ಯರಾತ್ರಿ ಕಳೆದ ಮೇಲೆಯೇ. ಗಂಡ ದಿನಾ ಹುಚ್ಚಾಪಟ್ಟೆ ಕೆಲಸ ಮಾಡಿ ಸುಸ್ತಾಗಿ ಬರೋದು ನೋಡಿ ಹೆಂಡತಿಗೂ ಬೇಜಾರು. ಆದರೇನು ಮಾಡೋದು?, ದೊಡ್ಡ ಹುದ್ದೆಗೆ ಹೋದ ಮೇಲೆ, ಜವಾಬ್ದಾರಿಗಳೂ ಹೆಚ್ಚುತ್ತವೆಯಲ್ಲ?..
ಸಿದ್ದಪ್ಪನಿಗಿದ್ದ ಏಕೈಕ ಹವ್ಯಾಸ ಅಂದರೆ ಅಪರೂಪಕ್ಕೊಮ್ಮೆ ಗಾಲ್ಫ್ ಆಡೋಕೆ ಹೋಗೋದು. ಅದು ಅವನ ಹೆಂಡತಿಗೂ ಗೊತ್ತು. ಎಲ್ಲಾದರೂ ವೀಕೆಂಡುಗಳಲ್ಲು ಸಿದ್ದಪ್ಪನವರು ಗಾಲ್ಫ್ ಕಿಟ್ ತಗೊಂಡು ಹೊರಬಿದ್ದರೆ ಮತ್ತೆ ಬರೋದು ರಾತ್ರಿಗೇ. ಪಾಪ, ಗಂಡ ಕೆಲ ಬಾರಿ ಶನಿವಾರ ಭಾನುವಾರಗಳಲ್ಲೂ ತನ್ನ ಜೊತೆ ಇರಲ್ಲ ಎಂಬ ಬೇಜಾರು ಇದ್ದರೂ, ವಾರವಿಡೀ ಕೆಲಸ ಮಾಡಿರುತ್ತಾರೆ ಸುತ್ತಾಡಿಕೊಂಡು ಬರಲಿ ಅನ್ನೋದು ಪತಿವೃತಾ ಶಿರೋಮಣಿ ಪತ್ನಿಯ ಅಭಿಪ್ರಾಯ.
ಆದರೆ ಇತ್ತೀಚಿಗೆ ಕೆಲ ದಿನಗಳಿಂದ ಸಿದ್ದಪ್ಪನವರು ಗಾಲ್ಫ್ ಕಡೆಗೂ ತಲೆ ಹಾಕಿರಲಿಲ್ಲ. ದಿನಾ ರಾತ್ರಿ ಎರಡು ಗಂಟೆ ಮೇಲೆಯೇ ಆಗಮನ, ಮತ್ತೆ ಗೊರಕೆ. ಯಾಕೋ ಸಂಸಾರ ಜೀವನದ ಸಾರ ಗಂಡನ ಬೋರಲು ಬಿದ್ದ ಬೆನ್ನು ನೋಡಿಯೇ ಕಳೆದು ಹೋಗುತ್ತಿರುವುದನ್ನ ಅರಿತ ಪತ್ನಿ ಇದಕ್ಕೇನಾದರೂ ಪರಿಹಾರ ಹುಡುಕಬೇಕು ಅಂತ ನಿರ್ಧಾರ ಮಾಡಿದಳು.
ಅವಳ ಲೇಡೀಸು ಕ್ಲಬ್ಬಿನ ಮಿತ್ರೆಯೊಬ್ಬಳು, ನೋಡು ಗಂಡನ ಲೈಫನ್ನ ನೀನೇ ಸರಿ ಮಾಡಬೇಕು.. ಅವರಿಗೆ ಜೀವನದಲ್ಲಿ ಬೇರೇ ಲವಲವಿಕೆಯ ವಿಚಾರಗಳು ಇರುತ್ತವೆ ಅನ್ನೋದನೂ ತೋರಿಸಬೇಕು ಅಂದಳು ಮತ್ತು ಅದಕ್ಕೆ ಸರಿಯಾದ ಸಲಹೆಗಳನ್ನೂ ಕೊಟ್ಟಳು- ಸಿದ್ದಪ್ಪಾವ್ರನ್ನ ಮೊದಲು ಈ ಪಬ್ಬು ಗಿಬ್ಬಿಗೆ ಕರ್ಕೊಂಡು ಹೋಗು, ಅಲ್ಲೆಲ್ಲ ಹುಡುಗ್ರು - ಹುಡ್ಗೀರು ಅವರ ಕುಣಿತ-ಕುಡಿತ ಇದೆಲ್ಲ ನೋಡಿ ಅವರಿಗೊಂದು ಹುಮ್ಮಸ್ಸು ಬರಬೋದು, ಅವರಿಗೂ ಸ್ವಲ್ಪ ತಗೋಳೋ ಹಾಗೆ ಮಾಡು, ಮೊದಲಿಗೆ ಸ್ವಲ್ಪ ಕಷ್ಟ ಅನ್ನಿಸಿದ್ರೂ ಆಮೇಲಾಮೇಲೆ ಅಭ್ಯಾಸ ಆಗತ್ತೆ ಅಂತ.
ಜೈ ತಗಳಪ, ಸಿದ್ದಪ್ಪನವರು ಈ ಶುಕ್ರವಾರ ಮನೆಗೆ ಬರೋದನ್ನೇ ಕಾಯ್ತಿದ್ದ ವೈಫು, ಲಕಲಕ ಡ್ರೆಸ್ಸು ಮಾಡಿಕೊಂಡಿದ್ದಳು. ಸಿದ್ದಪ್ಪಾವರು ಏನಿದು ವಿಚಾರ ಅಂತ ಕೇಳೋಕೆ ಮುನ್ನವೇ, ಅವರ ಟೈ ಕಿತ್ತು ಹಾಕಿ ಎಳಕೊಂಡು ಹೊರಟೇ ಬಿಟ್ಟಳು. ದಾರಿಯಲಿ ಸಿಕ್ಕಿದ ಯಾವುದೋ ಕ್ಯಾಬು ಹತ್ತಿ ಮೊದಲೇ ತಿಳಕೊಂಡಿದ್ದ ನಗರದ ಉತ್ತಮ ಪಬ್ಬೊಂದರ ಹೆಸರನ್ನ ಡ್ರೈವರಿಗೆ ವದರಿದಳು. ಅದನ್ನ ಕೇಳಿದ್ದೇ ಸಿದ್ದಪ್ಪನವರು ಆಘಾತಕ್ಕೊಳಗಾಗಿ ಎಲ್ಲಿಗೆ ಹೊರಟಿದ್ದೇವೆ ಎಂದು ಕೇಳಿದಾಗ , ಹೀಗೀಗೆ, ಸುಮ್ಮನೇ ರಿಲ್ಯಾಕ್ಸ್ ಆಗೋಕೆ.. ಅಂತೆಲ್ಲ ಶಾರ್ಟ್ ಅಂಡ್ ಸ್ವೀಟ್ ಆಗಿ ವಿಚಾರ ತಿಳಿಸಿ ಸುಮ್ಮನಾದಳು. ಪಕ್ಕದಲ್ಲಿ ಕೂತಿದ್ದ ಸಿದ್ದಪ್ಪನವರು ಸಿಕ್ಕಾಪಟ್ಟೆ ಕೊಸರಾಡುತ್ತಿದ್ದರೂ, ಅಸಮಾಧಾನದಲ್ಲಿ ಗೊಣಗಾಡುತ್ತಿದ್ದರೂ ಈಕೆ ಕ್ಯಾರೇ ಅನ್ನಲಿಲ್ಲ.
ಝಗಮಗ ಮಿಂಚುತ್ತಿದ್ದ ಪಬ್ಬಿನ ಹೊರಗೆ ನಿಂತ ಸಿದ್ದಪ್ಪನವರು ಅಲ್ಲಿಂದ ವಾಪಾಸು ಹೋಗೋಕೆ ಹವಣಿಸುತ್ತಿದ್ದಾಗಲೇ ಅವರ ಧರ್ಮಪತ್ನಿ ಅವರನ್ನು ಒಳಗೆಳೆದುಕೊಂಡು ಹೊರಟೇ ಬಿಟ್ಟಳು, ಹೊಸ ಕನಸುಗಳ ಲೋಕ ತೆರೆದೇ ಬಿಟ್ಟಿದೆ ಎಂಬ ಆಸೆಯಲ್ಲಿ. ಅಷ್ಟರಲ್ಲಿ ಒಂದು ಅಚ್ಚರಿ ಸಂಭವಿಸಿತು.ಬಾಗಿಲಲ್ಲೇ ಇದ್ದ ದಪ್ಪ ಮೀಸೆಯ ಟೊಪ್ಪಿವಾಲ ಸಿದ್ದಪ್ಪರನ್ನ ನೋಡಿ, ಟಪ್ ಅಂತ ಕಾಲೆತ್ತಿ ಸೆಲ್ಯೂಟ್ ಹೊಡೆದು, ವೆಲ್ಕಂ ಸಿದ್ದಪ್ಪಾ ಸರ್ ಅಂದುಬಿಡಬೇಕೇ?!
ಹೆಂಡತಿಗೆ ಸಣ್ಣಗೆ ಆಘಾತ! ಸಿದ್ದಪ್ಪನವರು ಕೂಡಲೇ , ಹೆ ಹೆ ಇವನು ಕಣೇ.. ಇವನು ಸೋಮ ಅದೇ ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿ ಕೆಲ್ಸ ಮಾಡೋನು.. ಇಲ್ಲೇನೋ ಟೆಂಪರರಿ ಕೆಲಸ ಮಾಡ್ತಾ ಇರಬೇಕು ಅಂತ ಒಳ ಹೊರಟರು. ವೈಫು ಮೇಡಂಗೆ ಕೊಂಚ ಇರಿಸುಮುರಿಸಾದರೂ, ಅವರೂ ಒಳ ನಡೆದರು.
ಅಲ್ಲಿನ ಆಧುನಿಕ ಅಮರಾವತಿಯನ್ನ ನೋಡಿ ಪಾಪ ಸಿದ್ದಪ್ಪನವರ ಹೆಂಡ್ರು ಒಮ್ಮೆಗೆ ಕಂಗಾಲಾದರು! ಕಿವಿ ಹರಿದು ಹೋಗೋ ಹಾಗಿನ ಸದ್ದು, ತುಂಡು ಲಂಗದ ಲಲನೆಯರು, ಬೀರು ಬಾಟಲಿಗಳ ಠಣಠಣ ಸದ್ದಿಗೆ ದಿಕ್ಕು ತಪ್ಪಿದ ಹರಿಣದಂತೆ ಆಕೆ ತೆಪ್ಪಗಾದರು. ಆದರೆ ಸಿದ್ದಪ್ಪನವರೇನೂ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದಂತೆ ಕಂಡು ಬಂದಿದ್ದು, ಆಕೆಯನ್ನ ಮತ್ತಷ್ಟು ಹೈಲು ಮಾಡಿತು.
ಅಷ್ಟರಲ್ಲಿ ಅಲ್ಲಿಗೆ ಬಂದ ವೈಟರ್ ಭೂಪತಿ, ಸರ್, ನಿಮ್ಮ ಮಾಮೂಲಿ ಬ್ರಾಂಡ್ ತರಲೋ, ಅಥವ ಹೊಸದೇನಾದರೂ ಬೇಕೋ ಸಿದ್ದಪ್ಪನವರೇ ಅಂದುಬಿಡೋದೇ?!
ಈಗ ಸಹಧರ್ಮಿಣಿಯವರ ತಲೆಯೊಳಗಿನ ಟ್ಯೂಬ್ ಲೈಟ್ ಪಕಪಕ ಅನ್ನಲಾರಂಭಿಸಿತ್ತು ನಿಧಾನಕ್ಕೆ . ಆದರೆ ಅವಳೇನೋ ಕೇಳೋ ಮೊದಲೇ "ಇವ್ನು ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿರೋ ಬಾರ್ ನ ಕೆಲಸಗಾರ. ಅಲ್ಲಿ ಅಪರೂಪಕ್ಕೆ ಗೆಳೆಯರಿಗೆ ಕಂಪನಿ ಕೊಡೋಕೆ ಕುಡೀತೀನಿ, ಸೋ. ಇವನಿಗೆ ನಾನು ಕುಡಿಯೋ ಬ್ರಾಂಡು ಗೊತ್ತು ಬಿಡು ಅನ್ನುತ್ತಲೇ ಗೋಬಿ ಮಂಚೂರಿಗೂ ಆರ್ಡರ್ ಮಾಡಿಬಿಟ್ಟರು.
ಟ್ಯೂಬ್ ಲೈಟಿಗೆ ಮತ್ತಷ್ಟು ವೋಲ್ಟೇಜ್ ಹರಿಯೋಕೆ ಶುರುವಾಗಿ ಇನ್ನೆರಡು ಬಾರಿ ಪಕ್ ಪಕ್ ಅಂತು.
ಸಿದ್ದಪ್ಪನವರ ಬಳಿ ಕ್ಲಾರಿಫಿಕೇಷನ್ ಕೇಳೋಕೆ ಮೊದಲೇ, ಅಲ್ಲಿಗೆ ಸಡನ್ನಾಗಿ ಬಂದ ಮಿನಿಲಂಗದ ಚೆಲುವೆಯೊಬ್ಬಳು, ಏನ್ ಸಿದ್ದಪ್ಪಾ ನನ್ ಮರ್ತೇ ಬಿಟ್ಟೆ ಅಂತ ಅಂದ್ಕೊಂಡಿದ್ನಪಾ ಅಂತ ಮಾದಕವಾಗಿ ನಕ್ಕು, ಎದೆಯಲುಗಿಸಿದಳು.
ಟ್ಯೂಬ್ ಲೈಟ್ ಹತ್ತಿಕೊಂಡು, ಝಗ್ಗನೆ ಬೆಳಕಾಯಿತು.
ಸಿಟ್ಟು ನೆತ್ತಿಗೇರಿ ಸಟ್ಟನೆದ್ದು ಹೊರಗೋಡುತ್ತಿದ್ದ ಹೆಂಡತಿಗೆ ಹೇ ಹೇ.. ಅವಳ್ಯಾರೋ ನನಗೆ ಗೊತ್ತಿಲ್ಲ.. ತಪ್ಪಾಗಿ ತಿಳ್ಕೊಂಬಿಟ್ಟಿದಾಳೆ ಅಂತ ಸಿದ್ದಪ್ನೋರು ತೊದಲೋ ಹೊತ್ತಿಗೆ ಆಕೆ, ರಸ್ತೆಗೆ ಬಂದು ನಿಂತಾಗಿತ್ತು..
ಸಿದ್ದಪ್ಪ ಆಕೆಯ ಸೆರಗು ಹಿಡಿದು ಬೇಡಿಕೊಳ್ಳುತ್ತಿದ್ದರೂ ಕೇಳದೇ, ರಸ್ತೆಯಲ್ಲೇ ಅವರ ಜನ್ಮಾ ಜಾಲಾಡೋಕೆ ಶುರು ಮಾಡಿದ ಹೆಂಡತಿ, ಅಲ್ಲೇ ಪಕ್ಕದಲ್ಲಿ ತೂಕಡಿಸುತ್ತ ಮಲಗಿದ್ದ ಆಟೋದವನ್ನ ತಿವಿದು ಒಳಗೆ ಕೂತಾಗಿತ್ತು.
ಸಿದ್ದಪ್ಪನವರು ಅಲ್ಲೇ ಪಕ್ಕಕ್ಕೆ ಹತ್ತಿ ಕೂತು, ಇಲ್ಲ ಕಣೇ .. ಹಾಗಲ್ಲ ಕಣೇ..ಅನ್ನೋದೂ.. ಅವಳು ನಾನು ಬರಲ್ಲ ನಿಮ್ಮ ಜೊತೆಗೆ , ನೀವೂ ನನ್ನ ಹಿಂದೆ ಬರ್ಬೇಡಿ ಇನ್ನು ಅಂತ ಕೂಗೋದೂ ನಡೆದೇ ಇದ್ದಾಗ, ಸರಿಯಾಗಿ ಎಚ್ಚೆತ್ತ ಆಟೋದ ಯಜಮಾನ್ರು,
"ಏನ್ ಸಿದ್ದಪ್ನೋರೇ, ಈ ಸಲ ಮಜಬೂತು ಕಡಕ್ ಹಕ್ಕಿನೇ ಸಿಕ್ಕಿರೋ ಹಾಗಿದೆ" ಅಂದರು.
ಇದೇ ಮುಂದಿನ ಬುಧವಾರ ಸಿದ್ದಪ್ಪನವರ ವೈಕುಂಠ ಸಮಾರಾಧನೆ ಏರ್ಪಡಿಸಲಾಗಿದೆ. ಆಮಂತ್ರಣ ಸಿಗದವರು ಇದನ್ನೇ ವೈಯಕ್ತಿಕ ಕರೆಯೋಲೆ ಎಂದು ಪರಿಗಣಿಸಬೇಕಾಗಿ ಕೋರಿಕೆ.
(ಇಂಗ್ಲೀಷ್ ಬ್ಲಾಗೊಂದರ ಬರಹದಿಂದ ಪ್ರೇರಿತ)
Tuesday, February 8, 2011
Friday, January 28, 2011
ಸಿಗ್ನಲ್ ಸ್ಟೋರಿ
Tuesday, January 11, 2011
ಕುಮಾರವ್ಯಾಸನ ದ್ರೌಪದಿ
ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಕರೆಯಲ್ಪಡುವ ಗದುಗಿನ ನಾರಣಪ್ಪ, ಭಾಮಿನಿ ಷಟ್ಪದಿಯಲ್ಲಿ ಮಹಾಭಾರತವನ್ನು ರಚಿಸಿ ಕುಮಾರವ್ಯಾಸನಾದವನು. ಅವನ ಕರ್ಣಾಟ ಭಾರತ ಕಥಾಮಂಜರಿ ಇವತ್ತಿಗೂ ಓದುಗರಿಗೆ ರೋಮಾಂಚನವನ್ನುಂಟುಮಾಡುವ ಕೃತಿ. ಗಮಕಗಾಯನದಲ್ಲಿ ಅದನ್ನು ಕೇಳುವಾಗ ಶ್ರೋತೃಗಳಿಗೆ ಮೈನವಿರೇಳುತ್ತದೆ. "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿಯುವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು!" ಎಂದು ಕುವೆಂಪು ಅವನನ್ನು ಹೊಗಳಿದ್ದಾರೆ.
ಕುಮಾರವ್ಯಾಸನ ಭಾರತದಲ್ಲಿ ಶೃಂಗಾರ ರಸಗಳೂ ಮೇಳೈಸಿಕೊಂಡಿವೆ. ಇದೀಗ, ಮೋಟುಗೋಡೆಯಲ್ಲಿ ನಿಂತಿರುವ ನಾವು, ಕುಮಾರವ್ಯಾಸನ ಶೃಂಗಾರಮೀಮಾಂಸೆಯ ಪರಿಯನ್ನು ನೋಡುವರಾಗೋಣ!
* *
ಪಾಂಚಾಲ ದೇಶದ ಅರಮನೆಯಲ್ಲಿ ದ್ರೌಪದಿಯ ಸ್ವಯಂವರ ನಡೆಯುತ್ತಿದೆ. ನಾನಾ ದೇಶದ ಅರಸುಗಳು ನೆರೆದಿದ್ದಾರೆ. ಕಿಕ್ಕಿರಿದ ಅರಮನೆಯ ಸಭಾಂಗಣದಲ್ಲಿ ನಡೆದು ಬರುವ ಕೃಷ್ಣೆಯ ರೂಪನ್ನು ಕುಮಾರವ್ಯಾಸ ಬಣ್ಣಿಸುವ ಬಗೆ ಹೀಗಿದೆ:
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ
ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡಿರೆಂದ
ದ್ರೌಪದಿಯೊಂದಿಗಿರುವ ಸಖಿಯರಾದರೂ ಅಲ್ಪಸುಂದರಿಯರೇ? ಊಹುಂ!
ತೋರ ಮೊಲೆಗಳ ನಲಿವನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ
ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಗಳ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲುವಸನದ
ಸಾರಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ
ಇಂತಹ ಸುಂದರಿಯನ್ನು ಅರ್ಜುನ ಗೆಲ್ಲುತ್ತಾನೆ. ದ್ರೌಪದಿ ವೀರ ಪಾಂಡವರ ಸತಿಯಾಗುತ್ತಾಳಾದರೂ ಜೀವಿತದುದ್ದಕ್ಕೂ ಕೊರಗುಗಳನ್ನನುಭವಿಸುತ್ತಿರುತ್ತಾಳೆ. ಮೊದಲೇ ಐವರು ಪತಿಯರನ್ನು ಸಂಭಾಳಿಸಬೇಕಾದ ಕಷ್ಟ. ಅರ್ಜುನನ ಮೇಲೆ ಅವಳಿಗೆ ಹೆಚ್ಚಿನ ಅನುರಕ್ತಿಯಿದ್ದರೂ ಅರ್ಜುನನ ಪ್ರೀತಿ ಮತ್ತೀರ್ವರು ಸತಿಯರಿಗೆ ಹಂಚಿಹೋಗಿದೆ. ಭೀಮನಿಗೂ ಸಾಲಕಟಂಕಟಿಯೆಂಬ ಮತ್ತೊಬ್ಬ ಹೆಂಡತಿ. ದ್ಯೂತದಲ್ಲಿ ಸೋತ ಗಂಡನಿಂದಾಗಿ ದ್ರೌಪದಿ ಕುರುಸಭಾಮಧ್ಯದಲ್ಲಿ ಬೆತ್ತಲಾಗಬೇಕಾಗುತ್ತದೆ. "ಐವರಿಗೆ ಹೆಂಡತಿಯಾದವಳು ನಮಗೂ ಆಗಲಾರೆಯಾ?" ಎಂಬಂತಹ ಕೌರವರ ಕುಹಕದ ಮಾತುಗಳಿಗೆ ಕಿವಿಯಾಗಬೇಕಾಗುತ್ತದೆ. ನಂತರ ಗಂಡಂದಿರೊಂದಿಗೆ ವನವಾಸ-ಅಜ್ಞಾತವಾಸಗಳನ್ನನುಭವಿಸಬೇಕಾಗಿ ಬರುತ್ತದೆ.
ಈ ಮಧ್ಯೆ ಅರ್ಜುನನಿಗೆ ಇಂದ್ರಪುರಿಗೆ ಹೋಗುವ ಅವಕಾಶ ದೊರೆಯುತ್ತದೆ. ಅಲ್ಲಿ ಊರ್ವಶಿ ಅರ್ಜುನನಿಗೆ ಮನಸೋಲುತ್ತಾಳೆ. ಅರ್ಜುನನ್ನು ಸೇರಬಯಸುತ್ತಾಳೆ. "ಮನಸಿಜನ ಮಾರಾಂಕ ಕಾಮುಕ ಜನದ ಜೀವಾರ್ಥಕೆ ವಿಭುವೆಂದೆನಿಸಿದೂರ್ವಶಿ" ಅಂತಃಪುರದಲ್ಲಿ ನಡೆದು ಬರುವುದನ್ನು ವರ್ಣಿಸುವಾಗ ಕುಮಾರವ್ಯಾಸನಂಥ ಕುಮಾರವ್ಯಾಸನೇ "ಶಬ್ದಬ್ರಹ್ಮ ಸೋತುದು ಸೊರಹಲೇನೆಂದ" ಎನ್ನುತ್ತಾನೆ! ಹಾಗಾದರೆ ಅವಳ ರೂಪು-ಅಲಂಕಾರಗಳಾದರೂ ಹೇಗಿದ್ದಿರಬಹುದು?
ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆಂದ
ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪು ಸುರಸತಿಯ
ಆದರೆ ಪಾಂಡವರೈವರಲ್ಲೇ ಅತಿರಸಿಕನೆಂದು ಚಿತ್ರಿಸಲ್ಪಡುವ ಪಾರ್ಥ ಇಲ್ಲಿ ಊರ್ವಶಿಯ ಎದುರು ಸೋಲುತ್ತಾನೆ. ತನ್ನ ವಂಶವೃಕ್ಷದ ಪ್ರಕಾರ ನೀನು ತಾಯಿಯ ಸಮಾನ ಎಂದು ಗೋಗರೆಯುತ್ತಾನೆ. ಅವಮಾನಿತನಾಗಿ ವಾಪಸಾಗುತ್ತಾನೆ.
ಪಾಂಡವರು ವಿರಾಟನ ಆಸ್ಥಾನದಲ್ಲಿ ಅಜ್ಞಾತವಾಸದಲ್ಲಿದ್ದಾಗ ದ್ರೌಪದಿಯನ್ನು ಕಂಡಾಗ ಕೀಚಕನಿಗೆ ಅವಳ ಮೇಲೆ ಆಸೆಯುಂಟಾಗುತ್ತದೆ.
ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ
ತಿಳಿಯಿವಳು ಮೂಜಗದ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು
ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ
ನಂತರ ವಿರಾಟನನ್ನು ಭೀಮ ಕೊಲ್ಲುವುದು, ಪಾಂಡವರು ಅಜ್ಞಾತವಾಸ ಮುಗಿಸಿ ಬರುವುದು, ದುರ್ಯೋಧನ ರಾಜ್ಯವನ್ನು ಬಿಟ್ಟುಕೊಡದೆ ಯುದ್ಧಕ್ಕೆ ಆಹ್ವಾನಿಸುವುದು, ಕುರುಕ್ಷೇತ್ರದಲ್ಲಿ ಪಾಂಡವರು ವಿಜಯಿಗಳಾಗುವುದು..... ಯುದ್ಧದಲ್ಲಿ ಸೋಲೆಂತು ಗೆಲುವೆಂತು? ಪುತ್ರರು-ಬಂಧು-ಬಾಂಧವ-ಪ್ರಜೆ-ಸೈನ್ಯವನ್ನೆಲ್ಲ ಕಳೆದುಕೊಂಡ ಪಾಂಡವರು ಗೆದ್ದರೂ ಸೋತವರಂತೆ ಕಾಣುತ್ತಾರೆ. ಮಹಾಭಾರತ, ಧರ್ಮರಾಯನ ಪಟ್ಟಾಭಿಷೇಕದೊಂದಿಗೆ ಒಂದು ದುರಂತ ಕತೆಯಂತೆ ಮುಗಿತಾಯವಾಗುತ್ತದೆ.
ಆದರೆ ಕುಮಾರವ್ಯಾಸನ ಬಣ್ಣನೆಯಲ್ಲಿ ಭಾರತ ದೇಶದ ಈ ಮಹಾಕಾವ್ಯ ಮನೋಹರವಾಗಿ ಚಿತ್ರಿಸಲ್ಪಟ್ಟಿದೆ. ಅದನ್ನು ಓದುವ, ಅರ್ಥೈಸಿಕೊಳ್ಳುವ, ಖುಶಿಪಡುವ ಅದೃಷ್ಟ ನಮ್ಮದಾಗಲಿ.
ಕುಮಾರವ್ಯಾಸನ ಭಾರತದಲ್ಲಿ ಶೃಂಗಾರ ರಸಗಳೂ ಮೇಳೈಸಿಕೊಂಡಿವೆ. ಇದೀಗ, ಮೋಟುಗೋಡೆಯಲ್ಲಿ ನಿಂತಿರುವ ನಾವು, ಕುಮಾರವ್ಯಾಸನ ಶೃಂಗಾರಮೀಮಾಂಸೆಯ ಪರಿಯನ್ನು ನೋಡುವರಾಗೋಣ!
* *
ಪಾಂಚಾಲ ದೇಶದ ಅರಮನೆಯಲ್ಲಿ ದ್ರೌಪದಿಯ ಸ್ವಯಂವರ ನಡೆಯುತ್ತಿದೆ. ನಾನಾ ದೇಶದ ಅರಸುಗಳು ನೆರೆದಿದ್ದಾರೆ. ಕಿಕ್ಕಿರಿದ ಅರಮನೆಯ ಸಭಾಂಗಣದಲ್ಲಿ ನಡೆದು ಬರುವ ಕೃಷ್ಣೆಯ ರೂಪನ್ನು ಕುಮಾರವ್ಯಾಸ ಬಣ್ಣಿಸುವ ಬಗೆ ಹೀಗಿದೆ:
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ
ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡಿರೆಂದ
ದ್ರೌಪದಿಯೊಂದಿಗಿರುವ ಸಖಿಯರಾದರೂ ಅಲ್ಪಸುಂದರಿಯರೇ? ಊಹುಂ!
ತೋರ ಮೊಲೆಗಳ ನಲಿವನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ
ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಗಳ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲುವಸನದ
ಸಾರಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ
ಇಂತಹ ಸುಂದರಿಯನ್ನು ಅರ್ಜುನ ಗೆಲ್ಲುತ್ತಾನೆ. ದ್ರೌಪದಿ ವೀರ ಪಾಂಡವರ ಸತಿಯಾಗುತ್ತಾಳಾದರೂ ಜೀವಿತದುದ್ದಕ್ಕೂ ಕೊರಗುಗಳನ್ನನುಭವಿಸುತ್ತಿರುತ್ತಾಳೆ. ಮೊದಲೇ ಐವರು ಪತಿಯರನ್ನು ಸಂಭಾಳಿಸಬೇಕಾದ ಕಷ್ಟ. ಅರ್ಜುನನ ಮೇಲೆ ಅವಳಿಗೆ ಹೆಚ್ಚಿನ ಅನುರಕ್ತಿಯಿದ್ದರೂ ಅರ್ಜುನನ ಪ್ರೀತಿ ಮತ್ತೀರ್ವರು ಸತಿಯರಿಗೆ ಹಂಚಿಹೋಗಿದೆ. ಭೀಮನಿಗೂ ಸಾಲಕಟಂಕಟಿಯೆಂಬ ಮತ್ತೊಬ್ಬ ಹೆಂಡತಿ. ದ್ಯೂತದಲ್ಲಿ ಸೋತ ಗಂಡನಿಂದಾಗಿ ದ್ರೌಪದಿ ಕುರುಸಭಾಮಧ್ಯದಲ್ಲಿ ಬೆತ್ತಲಾಗಬೇಕಾಗುತ್ತದೆ. "ಐವರಿಗೆ ಹೆಂಡತಿಯಾದವಳು ನಮಗೂ ಆಗಲಾರೆಯಾ?" ಎಂಬಂತಹ ಕೌರವರ ಕುಹಕದ ಮಾತುಗಳಿಗೆ ಕಿವಿಯಾಗಬೇಕಾಗುತ್ತದೆ. ನಂತರ ಗಂಡಂದಿರೊಂದಿಗೆ ವನವಾಸ-ಅಜ್ಞಾತವಾಸಗಳನ್ನನುಭವಿಸಬೇಕಾಗಿ ಬರುತ್ತದೆ.
ಈ ಮಧ್ಯೆ ಅರ್ಜುನನಿಗೆ ಇಂದ್ರಪುರಿಗೆ ಹೋಗುವ ಅವಕಾಶ ದೊರೆಯುತ್ತದೆ. ಅಲ್ಲಿ ಊರ್ವಶಿ ಅರ್ಜುನನಿಗೆ ಮನಸೋಲುತ್ತಾಳೆ. ಅರ್ಜುನನ್ನು ಸೇರಬಯಸುತ್ತಾಳೆ. "ಮನಸಿಜನ ಮಾರಾಂಕ ಕಾಮುಕ ಜನದ ಜೀವಾರ್ಥಕೆ ವಿಭುವೆಂದೆನಿಸಿದೂರ್ವಶಿ" ಅಂತಃಪುರದಲ್ಲಿ ನಡೆದು ಬರುವುದನ್ನು ವರ್ಣಿಸುವಾಗ ಕುಮಾರವ್ಯಾಸನಂಥ ಕುಮಾರವ್ಯಾಸನೇ "ಶಬ್ದಬ್ರಹ್ಮ ಸೋತುದು ಸೊರಹಲೇನೆಂದ" ಎನ್ನುತ್ತಾನೆ! ಹಾಗಾದರೆ ಅವಳ ರೂಪು-ಅಲಂಕಾರಗಳಾದರೂ ಹೇಗಿದ್ದಿರಬಹುದು?
ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆಂದ
ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪು ಸುರಸತಿಯ
ಆದರೆ ಪಾಂಡವರೈವರಲ್ಲೇ ಅತಿರಸಿಕನೆಂದು ಚಿತ್ರಿಸಲ್ಪಡುವ ಪಾರ್ಥ ಇಲ್ಲಿ ಊರ್ವಶಿಯ ಎದುರು ಸೋಲುತ್ತಾನೆ. ತನ್ನ ವಂಶವೃಕ್ಷದ ಪ್ರಕಾರ ನೀನು ತಾಯಿಯ ಸಮಾನ ಎಂದು ಗೋಗರೆಯುತ್ತಾನೆ. ಅವಮಾನಿತನಾಗಿ ವಾಪಸಾಗುತ್ತಾನೆ.
ಪಾಂಡವರು ವಿರಾಟನ ಆಸ್ಥಾನದಲ್ಲಿ ಅಜ್ಞಾತವಾಸದಲ್ಲಿದ್ದಾಗ ದ್ರೌಪದಿಯನ್ನು ಕಂಡಾಗ ಕೀಚಕನಿಗೆ ಅವಳ ಮೇಲೆ ಆಸೆಯುಂಟಾಗುತ್ತದೆ.
ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ
ತಿಳಿಯಿವಳು ಮೂಜಗದ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು
ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ
ನಂತರ ವಿರಾಟನನ್ನು ಭೀಮ ಕೊಲ್ಲುವುದು, ಪಾಂಡವರು ಅಜ್ಞಾತವಾಸ ಮುಗಿಸಿ ಬರುವುದು, ದುರ್ಯೋಧನ ರಾಜ್ಯವನ್ನು ಬಿಟ್ಟುಕೊಡದೆ ಯುದ್ಧಕ್ಕೆ ಆಹ್ವಾನಿಸುವುದು, ಕುರುಕ್ಷೇತ್ರದಲ್ಲಿ ಪಾಂಡವರು ವಿಜಯಿಗಳಾಗುವುದು..... ಯುದ್ಧದಲ್ಲಿ ಸೋಲೆಂತು ಗೆಲುವೆಂತು? ಪುತ್ರರು-ಬಂಧು-ಬಾಂಧವ-ಪ್ರಜೆ-ಸೈನ್ಯವನ್ನೆಲ್ಲ ಕಳೆದುಕೊಂಡ ಪಾಂಡವರು ಗೆದ್ದರೂ ಸೋತವರಂತೆ ಕಾಣುತ್ತಾರೆ. ಮಹಾಭಾರತ, ಧರ್ಮರಾಯನ ಪಟ್ಟಾಭಿಷೇಕದೊಂದಿಗೆ ಒಂದು ದುರಂತ ಕತೆಯಂತೆ ಮುಗಿತಾಯವಾಗುತ್ತದೆ.
ಆದರೆ ಕುಮಾರವ್ಯಾಸನ ಬಣ್ಣನೆಯಲ್ಲಿ ಭಾರತ ದೇಶದ ಈ ಮಹಾಕಾವ್ಯ ಮನೋಹರವಾಗಿ ಚಿತ್ರಿಸಲ್ಪಟ್ಟಿದೆ. ಅದನ್ನು ಓದುವ, ಅರ್ಥೈಸಿಕೊಳ್ಳುವ, ಖುಶಿಪಡುವ ಅದೃಷ್ಟ ನಮ್ಮದಾಗಲಿ.
Labels:
ಕರ್ಣಾಟ ಭಾರತ ಕಥಾಮಂಜರಿ,
ಕುಮಾರವ್ಯಾಸ,
ಭಾಮಿನಿ ಷಟ್ಪದಿ
Monday, December 13, 2010
ಜಾಹೀರಾ'ಥೂ'!
ಒಂದಷ್ಟು ಜಾಣ ಜಾಹೀರಾತುಗಳು..
| "Sex sells; unfortunately we sell Jeans" |
| "Really Big.." (Durex Ad) |
| "Wide Angle Lens" |
| "Axe Effect" |
| "Skin Color Underwear" |
| "smoking can affect your sex life" |
| "The Nikon: Detcts up to 12 faces" |
| "for sxier knees" |
ಸೋರ್ಸು: http://www.boredpanda.com/sexy-ads/; ಥ್ಯಾಂಕ್ಸು: ಮಡಿವಾಳಯ್ಯ ಪಾಟೀಲ್
Monday, November 15, 2010
ಗೌತಮನ ಕ್ಷಮಾಯಾಚನೆ!
- ಗೌತಮ್ ಹೆಗಡೆ
ನಿದಿರೆ ಬಾರದ ಇರುಳಿಗೆ
ನಟ್ಟ ನಡುರಾತ್ರಿ ಎಬ್ಬಿಸಿ
ಕಾಡುವ ಹಾಳು ಚೆಂದದ ಕನಸಿಗೆ
ಅರ್ಥವೇನೆಂದು ಪರಧ್ಯಾನದಿ
ಅಲ್ಲಿ, ಮನೆಯೆದುರ ದಾರಿ ತಿರುವಲ್ಲಿ
ಒಂದು ಹಳದಿ ಮಧ್ಯಾಹ್ನದಿ
ಕಣ್ಣ ನೆಟ್ಟು ಕುಳಿತಾಗ ಬಂದವಳು ನೀನು..
ತುಂತುರು ಹನಿ ಸಿಂಚನವಾಗಿ
ಏನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ,
ಅನರ್ಥದರ್ಥ ಹರೆಯಕ್ಕೆ ಅರ್ಥವಾಗಿ..
ಹಾಗೆ ಕಂಡವಳು ಹಾಗೇ ಹೋಗದೆ ಎನ್ನ ಕಂಡು-
ಒರೆನೋಟದಿ ಕಳ್ಳ ಮಂದಹಾಸವಾಗಿಬಿಟ್ಟೆ.
ನಾ ನಿಂತ ನಿಲುವಲ್ಲಿ ಎನ್ನ ಕಳೆದುಕೊಂಡು,
ನಿನ್ನ ಆ ಮಂದಹಾಸ, ಓರೆನೋಟ
ಎನಗೆ ಸಿಕ್ಕ ರಹದಾರಿಯೆಂದುಕೊಂಡು
ಗಡಿ ದಾಟಿಬಿಟ್ಟೆ.
ನಿದಿರೆ ಬಾರದ ರಾತ್ರಿಯೊಳು,
ಹಿಡಿದು ಕನಸಿನ ಜಾಡು,
ತಿರುಗಿ ಬಾರದಷ್ಟು ದೂರ ದೂರ
ಅಡಿಯಿಂದ ಮುಡಿವರೆಗೆ
ಕಡು ಕಷ್ಟ - ಸುಖದ ದಾರಿಯಲಿ
ದಾರಿ ಮುಗಿಯುವನಕ,
ಕನಸು ಕರಗಿ ನೀರಾಗಿ ನನಸಾಗುವನಕ
ಬೆದೆಗೆ ಬಂದ ಹರೆಯಕೆ ಈಡಾಗಿಬಿಟ್ಟೆ.
ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..
ಪರವಾನಿಗೆಯ ಹಂಗಿರದೆ
ಎನ್ನ ಮಾನಸದೊಳು ನಿನ್ನಲಿ ಅಲೆದುಬಿಟ್ಟೆ..
ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..
Subscribe to:
Posts (Atom)
