Friday, December 26, 2008

ಭೈರಪ್ಪನವರ ಕಾದಂಬರಿಗಳಲ್ಲಿ ಸೂಪರ್ ಮೇಲ್ ಫ್ಯಾಂಟಸಿ

ಸಾಮಾನ್ಯವಾಗಿ ಇದುವರೆಗೆ ಕುವೆಂಪು, ಬೇಂದ್ರೆ, ಶಿಶುನಾಳ ಷರೀಫ, ಮುಂತಾದವರ ಕ್ಲಿಷ್ಟ ಕಾವ್ಯಗಳ ಕುರಿತ ವಿಮರ್ಶಾತ್ಮಕ ವಿವರಣೆಯನ್ನು ಅತ್ಯಂತ ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ಸರಳ ಶೈಲಿಯಲ್ಲಿ ಕೊಡುತ್ತಿದ್ದ ಕನ್ನಡದ ಹಿರಿಯ ಬ್ಲಾಗಿ, ಭಾಷಾ ತಜ್ಞ, ಎಲ್ಲರ ಪ್ರೀತಿಯ ಕಾಕಾ, ಧಾರವಾಡದ ಸುನಾಥರು, ಈ ಬಾರಿ ಭೈರಪ್ಪನವರ ಕಾದಂಬರಿಗಳಲ್ಲಿನ Super Male Fantasyಯ ಬಗ್ಗೆ ಅತ್ಯಂತ ಆಳವಾದ ಅಧ್ಯಯನವನ್ನು ಮಾಡಿ ಒಂದು ಲೇಖನವನ್ನು ಬರೆದಿದ್ದಾರೆ:

"...ಎಲ್ಲ ಗಂಡಸರು ತಾವು ಹೆಣ್ಣಿಗಿಂತ ಎಲ್ಲ ವಿಧದಲ್ಲಿಯೂ ಹೆಚ್ಚಿನವರು, ವಿಶೇಷತ: sexually ಹೆಚ್ಚು ಸಾಮರ್ಥ್ಯವುಳ್ಳವರು ಎಂದು ಕಲ್ಪಿಸಿಕೊಳ್ಳುತ್ತಾರೆ. ಆದರೆ, ನಿಸರ್ಗದ ಯೋಜನೆ ಅಥವಾ ವಿಧಾನ ಹಾಗಿಲ್ಲ.
ಮಾನವಕುಲದಲ್ಲಿ ಗಂಡು ಹಾಗೂ ಹೆಣ್ಣುಗಳ ಪ್ರಮಾಣ ಸುಮಾರಾಗಿ ಸರಿಸಮವಾಗಿದೆ. ಮಾನವಕುಲದಲ್ಲಿ ಹೆಚ್ಚಿಗೆ ಸಂತಾನವಾಗಬೇಕಾದರೆ, ರತಿಕ್ರಿಯೆಯಲ್ಲಿ ತೊಡಗಿದ ಗಂಡಸಿನ ಕ್ರಿಯೆ ಶೀಘ್ರಮುಕ್ತಾಯ ಕಾಣಬೇಕು ; ಹಾಗೂ ಹೆಣ್ಣಿನಲ್ಲಿ ರತಿಕ್ರಿಯೆ ಬಲಶಾಲಿ ಹಾಗೂ ನಿಧಾನವಾಗಿರಬೇಕು so that she can receive more & more males. ಇದು ನಿಸರ್ಗದ ಸಂವಿಧಾನ..

"ಆದರೆ ಮಾನವಕುಲದ ಅಹಂಕಾರಿ ಗಂಡುಜಾತಿಗೆ ಈ ನಿಸರ್ಗಯೋಜನೆ ಅಪಥ್ಯವಾಗಿದೆ. ಆದುದರಿಂದ ಆತ ಪ್ರಕೃತಿಯ ಈ ವಿಧಾನವನ್ನು ಮನಸಾ ಒಪ್ಪಿಕೊಳ್ಳಲಾರದೆ ತೊಳಲಾಡುತ್ತಾನೆ. ರತಿಕ್ರಿಯೆಯನ್ನು ದೀರ್ಘಗೊಳಿಸಲು ಕೃತ್ರಿಮ ವೈದ್ಯಕೀಯ ವಿಧಾನಗಳಿಗೆ ಶರಣಾಗುತ್ತಾನೆ. ಅದು ಸಾಧ್ಯವಾಗದಾಗ ತನ್ನ ಸಾಮರ್ಥ್ಯವನ್ನು fantasyಯಲ್ಲಿ ಕಾಣಬಯಸುತ್ತಾನೆ. ಈ fantasyಯು ಕೇವಲ ವೈಯಕ್ತಿಕ ಹಗಲುಗನಸುಗಳಿಗೆ ಸೀಮಿತವಾಗದೆ, ಸಾಹಿತ್ಯದಲ್ಲಿಯೂ ಸಹ ವ್ಯಕ್ತಗೊಳ್ಳುತ್ತಲೇ ಇದೆ. ಸಾಹಿತ್ಯದಲ್ಲಿ ವ್ಯಕ್ತವಾಗುವ ಇಂತಹ fantasyಯನ್ನು super- male- fantasy ಎಂದು ಕರೆಯಬಹುದು..."
ಪೂರ್ತಿ ಓದಿಗೆ ಭೇಟಿ ಕೊಡಿ: ಸಲ್ಲಾಪ

Tuesday, December 16, 2008

ಏನು ಫಲ? - ಈ ಫಲ?

ಬೇಕಾಗಿರುವುದು:

ಕಲ್ಲಂಗಡಿ ಹಣ್ಣು - ಒಂದು
ನಿಂಬೆ ಹಣ್ಣು - ಎರಡು
ಚಾಕು - ಒಂದು
ಮಿಕ್ಸರ್ - ಒಂದು
ಪಾತ್ರೆ/ ಸಾಸ್ ಪ್ಯಾನ್ - ಒಂದು
ಒಲೆ - ಒಂದು
ಬೆಂಕಿ ಪೊಟ್ಟಣ, ಕಡ್ಡಿಗಳ ಸಮೇತ ಅಥವಾ ಲೈಟರ್ - ನಿಮ್ಮ ಕೆಪಾಸಿಟಿಗೆ ತಕ್ಕ ಹಾಗೆ.

ಕೆಲಸ:

ಕಲ್ಲಂಗಡಿ ಹಣ್ಣನ್ನು ಚಾಕುವಿನಿಂದ ಹೆಚ್ಚಿ. ಮಿಕ್ಸರ್ ಒಳಗೆ ಹಾಕಿ. ಜ್ಯೂಸ್ ಮಾಡಿ. ನೀರು ಬೆರೆಸಬೇಡಿ. ಕಲ್ಲಂಗಡಿ ಹಣ್ಣಿನಲ್ಲಿರುವ ನೀರು ಸಾಕು. ಪಾತ್ರೆಯೊಳಗೆ ಈ ಜ್ಯೂಸನ್ನು ಸುರಿದು ನಿಂಬೆ ಹಣ್ಣನ್ನು ಚಾಕುವಿನಿಂದ ಹೆಚ್ಚಿ ಕಲ್ಲಂಗಡಿ ರಸವಿರುವ ಪಾತ್ರೆಯೊಳಗೆ ಹಿಂಡಿರಿ. ಒಲೆಯ ಮೇಲೆ ಪಾತ್ರೆಯನ್ನಿಟ್ಟು, ಒಲೆಯನ್ನು ಹಚ್ಚಿ ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿರಿ. ಎಲ್ಲಿಯವರೆಗೂ ಕುದಿಯಬೇಕೆಂದರೆ - ತೀರಾ ನೀರಾಗಿರುವ ಈ ದ್ರವವು ಸ್ವಲ್ಪ ಗಟ್ಟಿಯಾಗಿ ಪಾಕದಂತಾಗುವವರೆಗೂ. ಆರಿದ ಮೇಲೆ ಒಂದು ಸಣ್ಣ ಬಾಟಲಿಯಲ್ಲಿ ಶೇಖರಿಸಿಡಿ. ಯಾವಾಗ ಕುಡಿಯಬೇಕೋ ಆಗ ಕುಡಿಯಿರಿ. ಯಾವಾಗ ಕುಡಿಯಬೇಕೆಂಬ ಪ್ರಶ್ನೆಯಿದೆಯೆಂದಾರೆ ಮುಂದೋದಿ.

ಏನು ಫಲ? - ಈ ಫಲ?

ರಾತ್ರಿಯ ಯಶಸ್ವಿ ಪ್ರಣಯಕ್ಕೆ ಪ್ರಕೃತಿ ಚಿಕಿತ್ಸಕರು ಸಲಹೆ ಮಾಡುವ ಒಂದು ಪಥ್ಯ ಇದು. ಇದನ್ನು ನೈಸರ್ಗಿಕ ವಯಾಗ್ರ ಎಂದೂ ಹಲವರು ಹೇಳುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಔಷಧಿಗಳನ್ನು ತೆಗೆದುಕೊಂಡು ದೇಹವನ್ನು ಕೆಮಿಕಲ್ ಗುಡಾಣ ಮಾಡಿಕೊಳ್ಳುವುದಕ್ಕಿಂತ ಇದು ಸಾವಿರಪಾಲು ಮೇಲು.

ರಹಸ್ಯ?

ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲೀನ್ ಮತ್ತು ಲೈಸೊಪೀನ್ ಎಂಬ ಎರಡು ರಾಸಾಯನಿಕ ವಸ್ತುಗಳಿವೆ. ಇವುಗಳು ದೇಹದ ಎನ್‍ಜೈಮುಗಳ ಜೊತೆ ಬೆರತು ಹಿಂದೆ ಹೇಳಿದ್ದೆನಲ್ಲಾ, FSH ಮತ್ತು LH, ಇವುಗಳ ಉತ್ಪತ್ತಿಯನ್ನು ಸಾರಾಸಗಟಾಗಿ ಮಾಡುತ್ತವೆ. ಮೆಡಿಕಲ್ ಶಾಪಿನ ಕೆಮಿಕಲ್ ಭರಿತ ಔಷಧಿಗಳೂ ಮಾಡುವುದು ಇದನ್ನೇ - ಜೊತೆಗೆ ಇನ್ನಷ್ಟು ಕಾಯಿಲೆಗಳನ್ನೂ ತರಿಸಿ!!

ಹೆಚ್ಚನ ಮಾಹಿತಿಗಳಿಗೆ ಈ ತಾಣವನ್ನು ನೋಡಬಹುದು.

ನಿಮ್ಮ ವಯಸ್ಸೆಷ್ಟೇ ಇರಲಿ, ಆದರೆ ರಾತ್ರಿಯು ಸುಂದರಮಯವಾಗಿರಲಿ.

-ಅ
16.11.2008
6.45PM

Thursday, December 11, 2008

ಹೊಸ ಕಾಮಸೂತ್ರ ಚಿಹ್ನೆಗಳು

’ಪುಸ್ತಕದ ಹುಳು’ಗಳಿಗೆ:

ಸಂಗೀತ ಪ್ರೇಮಿಗಳಿಗೆ:



21ನೇ ಶತಮಾನದ ಮಂದಿಗೆ:


ಇವು ’ಕಾಮಾ’ಸೂತ್ರ ಚಿಹ್ನೆಗಳು:


ಮತ್ತಿದು, ಕವಾ(ಸಕಿ)ಸೂತ್ರಗಳು:

Friday, November 21, 2008

ಇವರದು ಜಗದ ಅತಿಚಂದದಂಡು!

ಈ ದುನಿಯಾದಲ್ಲಿ ಎಂಥೆಂಥೆಲ್ಲಾ ನಡೆಯೊತ್ತಪ್ಪಾ ಅಂದ್ರೆ ಅಂಥಂಥದ್ದೆಲ್ಲಾ ನಡೆಯೊತ್ತೆ. ಸ್ಲಾಗಿ (Sloggi) ಎನ್ನುವ ಒಳ ಉಡುಪುಗಳ ತಯಾರಿಕಾ ಕಂಪನಿಯೊಂದು ಇತ್ತೀಚೆಗೆ ಒಂದು ಸ್ಪರ್ಧೆ ನಡೆಸಿತ್ತು. ಅದೇನು ಸ್ಪರ್ಧೆಯಪ್ಪಾಂದ್ರೆ, 'ಪ್ರಪಂಚದ ಅತಿ ಸುಂದರ ನಿತಂಬ' ಸ್ಪರ್ಧೆ!

www.sloggi.comನಲ್ಲಿ ತಮ್ಮ ಫೋಟೋ ಕಳುಹಿಸುವುದರೊಂದಿಗೆ ಈ ಸ್ಪರ್ಧೆಗೆ ಹೆಸರನ್ನು ನೊಂದಾಯಿಸಿಕೊಂಡವರ ಸಂಖ್ಯೆ 11,200. ಸುಮಾರು 31 ಮಿಲಿಯನ್ ಮಂದಿ ಈ ಸ್ಪರ್ಧೆಯಲ್ಲಿ ಮತ ಚಲಾಯಿಸಿದರು. ಈ ಸ್ಪರ್ಧೆಯ ಕೊನೆಯ ಸುತ್ತು ಮೊನ್ನೆ ನವೆಂಬರ್ 12ರಂದು ಪ್ಯಾರಿಸ್ಸಿನಲ್ಲಿ ನಡೆಯಿತು. 26 ದೇಶಗಳ 45 ಸ್ಪರ್ಧಿಗಳು ಈ ಸುತ್ತಿನಲ್ಲಿದ್ದರು. ಕೊನೆಯಲ್ಲಿ ಬ್ರೆಜಿಲ್ಲಿನ ಮೆಲನಿ ನ್ಯೂನ್ಸ್ ಫ್ರಾಂಕೋವೇಕ್ ಮತ್ತು ಫ್ರಾನ್ಸಿನ ಸಾಯ್ಬಾ ಬೊಂಬೋಟ್ ವಿಜೇತರಾಗಿ 15,000 ಡಾಲರ್ ಹಣ, ಒಳ ಉಡುಪು ಪ್ರದರ್ಶನದ ಗುತ್ತಿಗೆ ಪರವಾನಗಿ ಮತ್ತು ತಮ್ಮ ಸುಂದರ ನಿತಂಬಗಳಿಗೆ ವಿಮಾ ಸೌಲಭ್ಯ ಸಹ ಪಡೆದರು.



ಯಾರಿಗಾದರೂ ಕಾವ್ಯರಚನೆಗಾದರೂ ಸ್ಪೂರ್ತಿಯಾದೀತೇನೋ ಎಂಬ ದೃಷ್ಟಿಯಿಂದ ಆ ಸ್ಪರ್ಧೆಯ ಕೆಲ ಫೋಟೋ ಮತ್ತು ವೀಡಿಯೋಗಳ ಲಿಂಕು ಕೊಡುತ್ತಿದ್ದೇವೆ, ನೋಡಿಕೊಳ್ಳಿ:

http://ibnlive.in.com/photogallery/1099-0.html#view_start

http://www.stuff.co.nz/thepress/4759749a19749.html

http://blogofhilarity.com/2008/11/13/a-competition-for-best-ass-in-the-world-you-say

ಮಾಹಿತಿದಾರ: ರೋಹಿತ್ ಕೆ.ಜಿ.

Thursday, November 13, 2008

ಅಪಭ್ರಂಶ

ಇಂದಿಗೂ ಕೆಲವರಿಗೆ ಕೆಲವು ಹೆಸರುಗಳು ಏಕೆ ಬಂತೆಂದು ಗೊತ್ತೇ ಇರುವುದಿಲ್ಲ.

"ಬಾಯ್ಲರ್ ಕೋಳಿ ಹಾಕಿದ ಮೇಲೆ ಚೆನ್ನಾಗಿ ದುಡ್ಡು ಮಾಡ್ತಿದ್ದೀನಿ ಸಾರ್. ನಾಟಿ ಕೋಳಿ ಏನೂ ಪ್ರಯೋಜನ ಇಲ್ಲ" ಎಂದು ಒಬ್ಬ ಕೋಳಿ ಸಾಕುವವನು ಹೇಳಿದ. ನಾನು ಇದೆಂಥದು ಬಾಯ್ಲರ್ ಕೋಳಿ ಎಂದು ಚಕಿತನಾಗದೇ ಇರಲು ಸಾಧ್ಯವೇ ಇಲ್ಲ. ಕೋಳಿಯನ್ನು ಬಾಯ್ಲರಿನಲ್ಲಿ ಹಾಕಿ ಬೇಯಿಸಿ ನಂತರ ಬೆಂದ ಕೋಳಿಯನ್ನು ಮಾರುವುದೇ ಎಂಬುವಷ್ಟರ ಮಟ್ಟಿಗೆ ಯೋಚಿಸಿದೆ. ಆದರೆ ನಂತರ ಪಿ.ಯು.ಸಿ. ಪಠ್ಯಪುಸ್ತಕವನ್ನು ತಿರುವಿಹಾಕಿದಾಗ ಗೊತ್ತಾಯಿತು ಆತ ಹೇಳ ಬಯಸುತ್ತಿದ್ದುದು "ಬ್ರಾಯ್ಲರ್ ಕೋಳಿ" ಎಂಬ ಜಾತಿಯ ಕೋಳಿಯ ಬಗ್ಗೆ ಎಂದು.

ದೊಡ್ಡಬಳ್ಳಾಪುರದವರು ದನಗಳು "ಫಲಕ್ಕೆ" ಬಂದಾಗ (ಹೀಟ್‍ಗೆ ಬಂದಾಗ) "ಏಳು ಹಾಕಿಸಬೇಕು ಇದಕ್ಕೆ" ಎನ್ನುತ್ತಾರೆ. ಹಾಗಂದರೆ ಏನೆಂದು ಕಲ್ಪನೆ ಸಹ ಮಾಡಿಕೊಳ್ಳಲಾಗುವುದಿಲ್ಲ. ಇರಲಿ, ಇದರ ಬಗ್ಗೆ ಒಂದಷ್ಟು ರಿಸರ್ಚ್ ಮಾಡಿದ ನಾನು ವಿವರಿಸುತ್ತೇನೆ. ಹೀಟ್‍ಗೆ ಬಂದ ಹಸುವನ್ನು ಹೋರಿಯೆಡೆ ಕರೆದೊಯ್ಯುವುದು ಒಬ್ಬ ವರ್ತಕನಿಗೆ ನಷ್ಟವೇ ಸರಿ. ಯಾಕೆಂದರೆ ಒಂದು ಹೋರಿಯು ಹತ್ತು ಹಸುವಿಗಾಗುವಷ್ಟು ವೀರ್ಯವನ್ನು ಉತ್ಪತ್ತಿ ಮಾಡುತ್ತೆ. ಎಷ್ಟೊಂದು ವ್ಯರ್ಥ. ಅದಕ್ಕಾಗಿಯೇ ವಿಜ್ಞಾನವು "Artificial Insemination" ಅನ್ನು ಕೊಟ್ಟಿದೆ. ಹೋರಿಯ ವೀರ್ಯವನ್ನು ಶೇಕರಿಸಿ, ಹಸುವಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ artificial ಆಗಿ ಹಸುವಿಗೆ ಕೊಡುತ್ತಾರೆ. ಇದರಿಂದ ವೀರ್ಯ ವ್ಯರ್ಥವಾಗುವುದಿಲ್ಲ. ಹೋರಿ ಸಾಕಿದವನಿಗೆ ಒಳ್ಳೇ ಲಾಭ!

ಈಗ ವಿಷಯಕ್ಕೆ ಬರೋಣ. ಇದಕ್ಕೂ "ಏಳು" ಹಾಕಿಸುವುದಕ್ಕೂ ಏನು ಸಂಬಂಧ?

ವೀರ್ಯ ಅನ್ನುವುದಕ್ಕೆ ಇಂಗ್ಲೀಷಿನಲ್ಲಿ "semen" ಎಂದು ಹೆಸರು. ಯಾವುದೋ ದನದ ಡಾಕ್ಟರು "semen ಹಾಕ್ತೀವಿ" ಅನ್ನೋದು ಇನ್ಯಾವುದೋ ದನದ ಮಾಲೀಕನಿಗೆ "seven ಹಾಕ್ತೀವಿ" ಎಂದು ಕೇಳಿಸಿರಬಹುದು. ಅದು ಹಾಗೇ ಮುಂದುವರೆದಿದೆ. ಅದೂ ಕನ್ನಡಕ್ಕೂ ಅನುವಾದವಾಗಿರುವುದು ಭಾಷಾ ಬೆಳವಣಿಗೆಗೆ ಉದಾಹರಣೆಯೆನ್ನಬಹುದೇನೋ!!

ವೀರ್ಯದ ಬಗ್ಗೆಯೇ ಇನ್ನೊಂದು ಪ್ರಸಂಗ ನಡೆದಿತ್ತು.

ಕನಕಪುರದ ಬಳಿ ಚಾರಣವೊಂದಕ್ಕೆ ಹೋಗಿದ್ದಾಗ, ಅಲ್ಲಿನ ಸ್ಥಳೀಯ ರೈತನೊಬ್ಬನನ್ನು ನನ್ನ ಗೈಡಾಗಿ ಕರೆದುಕೊಂಡೆ. ಅವನು ಒಂದೇ ಮಾತು ಹೇಳಿದ್ದು ನನಗೆ, ನಾನು ದಿಗ್ಭ್ರಾಂತನಾಗಿ ಹೋದೆ! "ಅರುಣ್, ನೀವು ಹೋಗ್ತಾ ಇರಿ, ನಾನು ಹೊಲಕ್ಕೆ ವೀರ್ಯ ಹಾಕ್ಬಿಟ್ ಬರ್ತೀನಿ!!" ಅಂದ. ಇದೆಂಥಾ ದೇಶ? ಇದೆಂಥಾ ಊರು? ಹೊಲಕ್ಕೆಲ್ಲಾ ವೀರ್ಯ ಹಾಕೋದು ಅಂದ್ರೆ ಏನು ಅರ್ಥ?? ಅದು ಹೇಗೆ ಸಾಧ್ಯ????
"ನೀನ್ ಏನ್ ಹಾಕ್ತೀಯೋ ನಾನೂ ನೋಡ್ಬೇಕಲ್ಲಾ, ನಾನೂ ಬರ್ಲಾ?" ಎಂದು ಕೇಳೋಣ ಎನ್ನಿಸಿತು, ಆದರೆ ಮುಜುಗರ ಆಗಿ ಸುಮ್ಮನಾದೆ. ಅವನೇ ಹೇಳಿದ "ನೀವೂ ಬನ್ನಿ, ನಮ್ ಹೊಲಾನೂ ನೋಡ್ದಂಗ್ ಆಯ್ತದೆ." ಅಂದ. ಅಲ್ಲಿ ಹೋಗಿ ನೋಡಿದರೆ, ಅವನ ಹೊಲಕ್ಕೆ ಅವನು ಹಾಕುತ್ತಿದ್ದುದು "Urea" - ಯೂರಿಯಾ! ಗೊಬ್ಬರ!!

-ಅ
13.11.2008
11AM

Thursday, October 16, 2008

ಪ್ರಕೃತಿಯ ಶಾಪ - ೧

ಎರಡನೆಯ ಪಾಠಕ್ಕೆ ಸಿದ್ಧರಾಗಿಪ್ಪಾ.. ಇವತ್ತು ಒಂದು ಕಾಯಿಲೆಯ ಬಗ್ಗೆ ತಿಳಿದುಕೊಳ್ಳೋಣ. (ಇದನ್ನು ಕಾಯಿಲೆಯೆಂದು ಕರೆಯುವುದೋ ಇಲ್ಲವೋ ಎಂಬುದೇ ಇನ್ನೂ ವೈದ್ಯಲೋಕ ತೀರ್ಮಾನಿಸಿಲ್ಲ.)

ಕ್ರಿಸ್ತವರ್ಷ 1600ರ ಆಸುಪಾಸಿನಲ್ಲಿ ವೆಕರ್ ಎಂಬಾತ ಆ ಕಾಲದ ವೈದ್ಯರನ್ನು ಬೆರಗುಗೊಳಿಸಿದ್ದು ತನ್ನ ದೇಹಾಂಗದ ಸ್ಥಿತಿಯ ವರದಿಯಿಂದ. ಆತನಿಗೆ ಎರಡು ಶಿಶ್ನವಿತ್ತು!! ಅಲ್ಲಿಯವರೆಗೂ ವೈದ್ಯಜಗತ್ತು ಮನುಷ್ಯರಲ್ಲಿ ಎರಡು ಶಿಶ್ನವಿದ್ದ ವ್ಯಕ್ತಿಯನ್ನು ಕಂಡರಿತಿರಲಿಲ್ಲ.

ಆತನ ಕೆಲಸ ಕಾರ್ಯಗಳಾದರೂ ಹೇಗೆ? ಬೇರೆ ಅಂಗಗಳ ಕೆಲಸಗಳು, ವಿನ್ಯಾಸಗಳು ಹೇಗೆ, ಏನು ಎತ್ತ ಎಂಬುದನ್ನು ಯೋಚಿಸಿ, ಸಂಶೋಧಿಸಿದಾಗ ಅವರಿಗೆ ಅನೇಕ ಹೊಸ ವಿಷಯಗಳು ತಿಳಿದವು. ಮೂತ್ರಪಿಂಡವಾಗಲೀ, ಗುದದ ಅಂಗಗಳಾಗಲೀ ಎಲ್ಲದರ ಕೆಲಸವೂ ನಕಲಾಗಬೇಕಾಗಿತ್ತು. ಮತ್ತೊಂದು ಸಮಸ್ಯೆಯೆಂದರೆ ಆತನ ಬೆನ್ನುಹುರಿಯು (spinal cord) ಒಡೆದಿತ್ತು. ಸ್ಪೈನಾ ಬಿಫಿಡಾ ಎಂಬುದು ಈ ಸ್ಥಿತಿಯ ಹೆಸರು.

ಮೂತ್ರವಿಸರ್ಜನೆಯನ್ನು ಎರಡು ಶಿಶ್ನದಿಂದಲೂ ಮಾಡಬಹುದಾಗಿತ್ತು. ಆದರೆ ಲೈಂಗಿಕ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಗರ್ಭದಲ್ಲಿದ್ದಾಗಲೇ ಏನಾದರೂ ಏಟು ಬಿದ್ದೋ, ಹಾರ್ಮೋನುಗಳ ವ್ಯತ್ಯಾಸವಾಗೋ, ಅಥವಾ ಜೀನ್‍ಗಳಿಂದಲೋ ಇಂಥಾ ಸ್ಥಿತಿಯನ್ನು ತಲುಪಿದ ಎಂದು ಹೇಳಲಾಗಲಿಲ್ಲ. ಯಾಕೆಂದರೆ ವೆಕರ್ ಈ ವರದಿ ನೀಡಿದ ಮೊದಲ ವ್ಯಕ್ತಿ!

ವಿಶ್ವದಾದ್ಯಂತ ಇಂತಹ ಕೆಲವೇ ಕೇಸುಗಳು ವರದಿಯಾಗಿದ್ದು, ಐವತ್ತು ಲಕ್ಷ ಜನರಿಗೆ ಒಬ್ಬರಿಗೆ ಈ ದೇಹ ಲಕ್ಷಣವು ಒದಗುವುದೆನ್ನಲಾಗಿದೆ.

ವಿಶೇಷವೆಂದರೆ, ಅನೇಕ ಹಾವುಗಳು, ಕ್ರಸ್ಟೇಶಿಯಾಗಳು, ಮತ್ತು ಎಲ್ಲಾ ಕೊಆಲಾ ಕರಡಿಗಳಿಗೆ ಈ ಎರಡು ಶಿಶ್ನವುಳ್ಳ ಸ್ಥಿತಿಯು ಕಂಡುಬರುತ್ತೆ. ಮನುಷ್ಯನಲ್ಲಿ ಮಾತ್ರ ಇದು ಒಂದು ಕಾಯಿಲೆಯೇ ಸರಿ. ಈ ಕಾಯಿಲೆಗೆ ಡೈಫಾಲಿಯಾ ಟೆರಾಟಾ ಎನ್ನುತ್ತಾರೆ.

ಇದು ಎಂಥಾ ಶಾಪವಲ್ಲವೇ?

ಮುಂದಿನ ಪಾಠದಲ್ಲಿ ಬೇರೊಂದು ಶಾಪದ ಬಗ್ಗೆ ತಿಳಿದುಕೊಳ್ಳೋಣ.

-ಅ
16.10.2008
2.20PM

Thursday, October 2, 2008

ಹೆಡ್ ಫೋನು ಸಮಸ್ಯೆ

ಆವತ್ತೊಂದು ದಿನ, ಊರಿಗೆ ಹೊರಟಿದ್ದೆ. ಕೆ.ಎಸ್.ಆರ್.ಟಿ.ಸಿಯ ರಾಜಹಿಂಸೆಯ ಕೊನೆಯ ಸೀಟು. ನನ್ನ ಮುಂದಿನ ಸೀಟಿನಲ್ಲಿ ಒಂದು ಜೋಡಿ. ಹುಡುಗ, ಸ್ವಲ್ಪ ಜೋಶ್ ನಲ್ಲೇ ಇದ್ದ. ಬಸ್ಸಿನ ನಾಗಂದಿಗೆ ಮೇಲೆ ಹೊಸ ಲ್ಯಾಪ್ ಟಾಪಿನ ಟ್ಯಾಗು ಇನ್ನೂ ಹಾಗೇ ತೂಗುತ್ತಿತ್ತು. ಅವನಿಗೆ ತನ್ನ ಲ್ಯಾಪ್ ಟಾಪನ್ನು ಹುಡುಗಿಗೆ ತೋರಿಸಬೇಕು ಅನ್ನುವ ಹುಚ್ಚು. ಅವಳೋ, "ಬಸ್ಸಲ್ಲೆಲ್ಲ ಬ್ಯಾಡ, ಎಂತಕಾ ಸುಮ್ನೆ, ಸಮಾ ಕಾಣೂದಿಲ್ಲ" ಅನ್ನುವವಳು.

ಇವನ ಬಳಿ ಹೊಸ ನೋಕಿಯಾ ಮೊಬೈಲು, ಅದಕ್ಕೊಂದು ಚಂದದ ಹೆಡ್ ಫೋನು. ಯಾವುದಾದರೂ ಹಾಡು ಹಚ್ಚಿದರೆ, ಕಿವಿ ತಮಟೆ ಕಿತ್ತು ಹೋಗುವಷ್ಟು ದೊಡ್ಡ ಸೌಂಡು. ಅವಳಿಗೆ ಹೇಗೆ ಆ ಮೊಬೈಲನ್ನು ಆಪರೇಟ್ ಮಾಡಬೇಕು, ಹೇಗೆ ಹಾಡು ಕೇಳಬೇಕು ಅನ್ನುವುದನ್ನೆಲ್ಲ ಹೇಳಿಕೊಟ್ಟ ಇವ, ಸುಮಾರು ಹೊತ್ತು.

ಬಸ್ ಎಲ್ಲೋ ಕೆಟ್ಟು ನಿಂತಿತು. ಲೈಟ್ ಹಾಕಿರಲಿಲ್ಲ. ಕಂಡಕ್ಟರ್ ಏನೋ ಜೋರಾಗಿ ಗೊಣಗುತ್ತಿದ್ದ.
ಅವಳ ಕಿವಿಯೊಳಗಿಂದ ಸಿಂಗ್ ಇಸ್ ಕಿಂಗ್ ಮೊಳಗುವುದು ಹಿಂದಿನ ಸೀಟಿನಲ್ಲಿದ್ದ ನಂಗೂ ಕೇಳಿಸುತ್ತಿತ್ತು.

ಸ್ವಲ್ಪ ಹೊತ್ತು ಕಳೆದಿರಬಹುದು, ಅವಳು, "ಹಗೂರಕ್ ಒತ್ತಾ" ಅಂದಿದ್ದು, ಅರ್ಧ ಬಸ್ಸಿಗಂತೂ ಕೇಳಿಸಿತು!

ಅರೆಕ್ಷಣ ಮೌನ, ನಂತರ ನಗುವಿನ ಸ್ಫೋಟ. ಆಮೇಲೆ ಆ ರಾತ್ರಿ ಅವಳು ಹಾಡು ಕೇಳಲಿಲ್ಲ.

( ಇದು ನಡೆದ ಘಟನೆ)

Tuesday, September 30, 2008

ಎರಡು ಚಿತ್ರಗಳು

ಚಿತ್ರ: ಹರ್ಷ,
ಸ್ಥಳ: ಸಂಭಲ್ ಪುರ, ಒರಿಸ್ಸಾ


ಚಿತ್ರ:ಶ್ರೀನಿಧಿ
ಸ್ಥಳ: ಮುನ್ನಾರ್- ಕೊಚ್ಚಿ ರಸ್ತೆ, ಯಾವುದೋ ಜಲಪಾತದ ಬಳಿ.

ಎಂದಿನಂತೆ, ಯಾವುದೇ ವಿವರಣೆಗಳ ಅಗತ್ಯವಿಲ್ಲ ಅಂದುಕೊಂಡಿದ್ದೇನೆ.

Sunday, September 21, 2008

ಇಳಿಯಬೇಕು ನಿನ್ನೊಳಗೆ ನಾನು..

ಇಳಿಯಬೇಕು ನಿನ್ನೊಳಗೆ ನಾನು
ಸುರಿದಂತೆ, ಸೋನೆ ಇಳೆಗೆ
ಒಳಗೊಳಗಿನಾಳ ಶೋಧಿಸುವ ಬಯಕೆ
ಮರಬೇರು ಬಸಿದಂತೆ ಭುವಿಗೆ

ಮುತ್ತಿಕ್ಕಬೇಕು ಉನ್ಮತ್ತ ತುಟಿಗೆ
ಪರಾಗವನು ಹೀರ್ದಂತೆ ದುಂಬಿ
ಬಂಗಾರ ದೇಹ ಮುದ್ದಾಡಬೇಕು
ಹಾಲುಕ್ಕಿದಂತೆ, ತುಂಬಿ

ನಿನ್ನೇರುತಗ್ಗು ಹತ್ತಿಳಿಯಬೇಕು
ಹೊಕ್ಕಂತೆ ಸಲಗ ವನಕೆ
ಎರಡಿದ್ದ ಜೀವ ಒಂದಾಗಬೇಕು
ಒರಳೊಳಗೆ ಇದ್ದಂತೆ, ಒನಕೆ

ನಿನ್ನೊಳಗನುತ್ತು ಚಿತ್ತಾಗಬೇಕು
ಹಲ ಸೀಳಿದಂತೆ ಹೊಲವ
ಅರಳಬೇಕು ನೀ ನನ್ನ ಒಳಗೆ
ಹೂವರಳಿ ಬಿರಿದಂತೆ ಒಲವ

Saturday, September 13, 2008

ವಯಾಗ್ರ - ಟಾಪ್ - 3 ಜಾಹೀರಾತುಗಳು

ಮೋಟುಗೋಡೆ ಬಹುಮಾನ ವಿಜೇತ ಜಾಹೀರಾತುಗಳು ಇಂತಿವೆ.

3. ವ್ಯಾಯಾಮ ಮಾಡುವುದು ಹೇಗೆ?




2. ಅಂಗರಕ್ಷಣೆ



1. ಸೈಕಲ್ ಸವಾರಿ

Wednesday, September 10, 2008

ಕುಂಟಿನಿಯ ಬ್ಲಾಗಲ್ಲೊಂದು ಕತೆ

"ಈ ಭೂಮಿಯ ಮೇಲಣ ಮೋಸ್ಟ್ ಹ್ಯಾಂಡ್‍ಸಮ್ ಮ್ಯಾನ್ ಯಾರು?" ಅಂತ ಕನ್ನಡ ಬ್ಲಾಗ್‍ಲೋಕದ ಪರಿಚಿತರಿಗೆ ಕೇಳಿದರೆ ತಕ್ಷಣ ಬರುವ ಉತ್ತರ 'ಕುಂಟಿನಿ' ಎಂಬುದು! ತಮ್ಮನ್ನು ತಾವೇ ತುಂಬಾ ಸ್ಮಾರ್ಟಾಗಿ ಹೊಗಳಿಕೊಂಡಿರೋ ಈ ವ್ಯಕ್ತಿ ಹಾಗೆ ಹೊಗಳಿಕೊಳ್ಳುವುದರ ಮೂಲಕವೇ ಬ್ಲಾಗೋದುಗರಿಗೆ ಇಷ್ಟವಾಗುತ್ತಾರೆ. ತಮ್ಮ ಬ್ಲಾಗನ್ನು 'ನಾಲ್ಕು ಸಾಲು', ಪುಟ್ಟ-ಚಂದ ಕತೆಗಳ ಮೂಲಕ ಅಲಂಕರಿಸುವ ಇವರು ಕೆಲವೊಮ್ಮೆ ಅನಾಹುತಕಾರೀ ಫೋಟೋಗಳನ್ನೂ ಹಾಕಿ ಓದುಗರನ್ನು ಸಂಕಷ್ಟಕ್ಕೆ ನೂಕುತ್ತಾರೆ.

'ಗೋಪಾಲಕೃಷ್ಣ' ಎಂಬ ತಮ್ಮ ಹೆಸರಿಗೆ ತಕ್ಕಂತೆ ರಸಿಕತೆಯನ್ನು ಮೈತುಂಬಿಕೊಂಡಿರುವ ಇವರ ಇತ್ತೀಚಿನ ಕತೆ 'ಅವಳ ಇವನ ಬಳಿಕ ಕತೆಗಾರ ಹೇಳುವ ಕತೆ' ಮೋಟುಗೋಡೆ ಓದುಗರಿಗೆ ಇಷ್ಟವಾಗಬಹುದು ಎಂಬ ನಂಬಿಕೆಯಿಂದ ಇಲ್ಲಿ ಲಿಂಕಿಸಲಾಗಿದೆ. ಒಂದಷ್ಟು ಹೊಸ ಹೊಳಹುಗಳು ಈ ಕತೆಯಲ್ಲಿದ್ದಂತಿವೆ.

ಥ್ಯಾಂಕ್ಸ್ ಕುಂಟಿನಿ ಸಾರ್... :-)

Thursday, September 4, 2008

Some stats..

ಇಷ್ಟು ದಿನಗಳಿಂದ ನೀವು ನೋಡುತ್ತಿರುವ ಮೋಟುಗೋಡೆ, ನೆಟ್ಟಿನಲ್ಲಿ ಯಾವ್ಯಾವ ಶಬ್ದಗಳನ್ನು ಹುಡುಕುವಾಗ ಸಿಕ್ಕೀತು ಎಂಬ ಕುತೂಹಲ ನಿಮಗೂ ಇರಬಹುದು.

ಇಲ್ಲಿಯವರೆಗೆ ಯಾವ ಯಾವ ಶಬ್ದಗಳನ್ನು ಅರಸಿ ಎಷ್ಟು% ಜನ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ ಹಾಗು ಇನ್ನಿತರ ಮಾಹಿತಿಗಳು ಕೆಳಗಿನ ಚಿತ್ರದಲ್ಲಿ ಅಡಕವಾಗಿದೆ.

ವಿ. ಸೂ: ದೊಡ್ಡ (ಹಾಗು ಸ್ಪಷ್ಟ) ಚಿತ್ರಕ್ಕಾಗಿ ಅದರ ಮೇಲೆ ಕ್ಲಿಕ್ಕಿಸಿ.

Tuesday, August 26, 2008

ಅವನು v/s ಅವಳು

ದೃಶ್ಯ - 1

ಜೀವಹೋದ ನೆಪ ಅಷ್ಟೇ, ಅವನು ಸತ್ತೇ ಹೋದ. ಅವಳು ಅವನ ಹೆಂಡತಿ, ಅವನ ಜೀವ ಹೋದ್ದು ನೋಡಿಯೇ ಸತ್ತಳು. ಜೀವ ಹೋಗಿದೆ ಅ೦ದಮೇಲೆ ಇದೆಯಲ್ಲ, ಮೊದಲು ಅವನ ಆತ್ಮಕ್ಕೆ ಯಮಲೋಕದ ಪಯಣ. ಲೆಕ್ಕದ ಪುಸ್ತಕ ತೆಗೆದ ಚಿತ್ರಗುಪ್ತ. ಯಮನ ವಿಚಾರಣೆ ಆರ೦ಭವಾಯಿತು. ಅವತ್ಯಾಕೋ ರಸಿಕತೆಯಲ್ಲಿದ್ದ ಯಮರಾಜ. "ಚಿತ್ರಗುಪ್ತಾ, ಇವನ ಲೈ೦ಗಿಕ ಜೀವನದ ಬಗ್ಗೆ ವಿಚಾರಣೆ ಆರ೦ಭವಾಗಲಿ. ಏನೇನು ಮಾಡಿರುವನು ಈ ನರ ಮಾನವನು? ಈತನ "ಅದರ " ಆಧಾರದ ಮೇಲೆ ಶಿಕ್ಷೆ ಘೋಷಣೆಯಾಗಲಿ" ಎಂದು ಮೀಸೆಯಮೇಲೆ ಆಡುತ್ತಿದ್ದ ಕೈ ಸ೦ದಿಯಿ೦ದಲೇ ಯಮರಾಜ ಹೇಳಿದ.


ಯಮರಾಜಾ, ಜೀವನದಲ್ಲಿ ಐದು ಅಥವಾ ಐದಕ್ಕೂ ಮಿಕ್ಕವರೊ೦ದಿಗೆ "ಅದನ್ನು" ಮಾಡಿದ್ದರೆ ಅವರಿಗೆ ಬ್ರೇಕ್ ಇಲ್ಲದ ಸೈಕಲ್ ಕೊಟ್ಟು ಸ್ವಗ೯ಕ್ಕೆ ಒ೦ದು ಸುತ್ತು ಹೋಗಿಬರಲು ಹೇಳುವದು. ನಾಲ್ಕು ಜನರೊ೦ದಿಗಾದರೆ ಒ೦ದು ಲಟ್ಟು ಲೂನಾದಲ್ಲಿ ಸ್ವಗ೯ಕ್ಕೆ ಪ್ರಯಾಣ, ಮೂವರಾದರೆ ಯಾವುದಾದರೂ ಬೈಕ್ ನಲ್ಲಿ, ಇಬ್ಬರಾದರೆ ಮಾರುತಿ 800 ಕಾರಿನಲ್ಲಿ. ಆದರೆ ಈ ಮನುಶ್ ಏಕಪತ್ನಿ ವೃತಸ್ಥ, ಇವನನ್ನು ಮಸಿ೯ಡೀಸ್ ಕಾರಿನಲ್ಲೇ ಕಳಿಸಬೇಕು. ಚಿತ್ರಗುಪ್ತನ ಶಿಕ್ಷೆ ಘೋಷಣೆ ಆಯಿತು.


ಹೂ೦, ಸೆಕ್ಸನ್ನೇ ಸ್ವಗ೯ ಎ೦ದು ತಿಳಿದು ಅದರಲ್ಲೇ ಮುಳುಗಿಹೋದವರಿಗೆ ನಮ್ಮ ಸ್ವಗ೯ ಹೇಗಿದೆ ಎ೦ಬುದನ್ನ ತೋರಿಸುವ ನಮ್ಮ ಈ ರಿವೈಸ್ಡ್ ಶಿಕ್ಷೆ ಇವನಿ೦ದಲೇ ಜಾರಿಯಾಗಲಿ. ಜನಕ್ಕೆ ಸತ್ಯದ ಅರಿವಾಗಿ ಸ್ವಗ೯ದ ಹೆಸರು ಹಾಳಾಗುವದು ನಿಲ್ಲಲಿ. ಕಳಿಸಿ ಇವನನ್ನು ಸ್ವಗ೯ಕ್ಕೆ ಅ೦ದನು ಯಮರಾಜ,


ದೃಶ್ಯ - 2

ಎಸ್.ಎಚ್(ಸ್ವಗ೯ ಹೈವೆ) 69 ರಲ್ಲಿ ಸಾಗಿ ಬೃಹದಾಕಾರದ ಕಮಾನಿನ ಟೋಲ್ ಗೇಟ್ ದಾಟಿ ಅವನು ಸ್ವಗ೯ಕ್ಕೆ ಪ್ರವೇಶಿಸಿದ. ರಸ್ತೆಯ ಮಧ್ಯದಲ್ಲಿ ನೆಟ್ಟು ಬೆಳೆಸಲಾಗದ ಕಾರಣಕ್ಕೆ ರಸ್ತೆಯ ಪಕ್ಕದಲ್ಲಿ ಬೆಳೆಸಿದ ಸಾಲು ಮರಗಳು, ಹುಲ್ಲಿದ್ದಲ್ಲೇ ಮೇಯಬೇಕೆನ್ನುವ ತತ್ವಕ್ಕೆ ಬದ್ದವಾಗಿ ರಸ್ತೆ ಪಕ್ಕದ ಹಸಿರು ಹುಲ್ಲುಗಾವಲಲ್ಲಿ ಮೇಯುತ್ತಿರುವ ಸ್ವಗ೯ದ ಗೋಸ೦ಪತ್ತು, ಎಲ್ಲೂ ಡೊ೦ಕಿಲ್ಲದ ನೇರ ಅಗಲವಾದ ವಿಶಾಲ ರಸ್ತೆಗಳು, ರಸ್ತೆಯ ಪಕ್ಕದ ಕೊಳದ ನೀರಿನಲ್ಲಿ ಜಲಕ್ರೀಡೆ ಆಡುತ್ತಿದ್ದ ನೀರೆಯರು, ಮತ್ತು ಅವರ ಸು೦ದರ ಸೌಷ್ಠವ, ಹೀಗೆ ಸ್ವಗ೯ದ ಸೌ೦ದಯ೯ ಸವಿಯುತ್ತ ಅವ ಸಾಗತೊಡಗಿದ. ದಾರಿಯಲ್ಲೆಲ್ಲ. ಇ೦ದ್ರನ ಅರಮನೆಗೆ ಬ೦ದು ತಲುಪಿದರೆ ಅವನಿಗೆ ಅದನ್ನು ನೋಡಲು ಎರಡು ಕಣ್ಣು ಸಾಲದು, ಅ೦ಥಾ ಅಗಾಧ ಅದ್ಭುತ ಸೌ೦ದಯ೯ದ ಅರಮನೆಯನ್ನು ಬಾಯಿಬಿಟ್ಟು ನೋಡ ತೊಡಗಿದ್ದ. ಜೀವನದ ಮೊದಲ ನೀಲ ಚಿತ್ರ ನೋಡುತ್ತಿರುವವನ೦ತೆ. ಎಲ್ಲೆಲ್ಲೂ ಕುಲುಕುತ್ತ ಬಳುಕುತ್ತ ಕಿಲಕಿಲ ನಗುತ್ತ ಅತ್ತಿತ್ತ ಸಾಗುತ್ತಿರುವ ಸ್ವಗ೯ ಸಖಿಯರನ್ನು ನೋಡಿ ರೋಮಾ೦ಚಿತನಾದ. ಆಗತಾನೇ ಆರ೦ಭವಾದ ಮೇನಕೆಯ ನೃತ್ಯವನು ಪೂರಾ ಮುಗಿಯುವ ವರೆಗೂ ನೋಡಿ ಅವಳ ಮೈಕಟ್ಟು , ನೃತ್ಯದ ಭ೦ಗಿಗಳು, ಇನ್ನೂ ಏನೇನೋ, ಒಟ್ಟಿನಲ್ಲಿ ಕ೦ಡಿದ್ದನ್ನೆಲ್ಲ ನೋಡಿ ಪುಳಕ ಗೊ೦ಡ. ಸುಮ್ಮನೆ ಅವನ ಮಸಸ್ಸು ಒ೦ದುಸತಿ೯ ಪ್ಲ್ಯಾಶ್ ಬ್ಯಾಕ್ ಗೆ ಹೋಯಿತು. ಛೇ..! ಯಾವದನ್ನೋ ಸ್ವಗ೯ ಅ೦ದ್ಕೊ೦ಡು, ಯಾವಯವಗ್ಲೋ "ಆಹಾ೦... ಸ್ವಗ೯ದಲ್ಲಿ ತೇಲಿದ೦ತಾಗುತ್ತೆ " ಅ೦ತೆಲ್ಲ ಹೇಳಿದ್ದು ನೆನಪಾಯಿತು.

ಸ್ವಗ೯ದಲ್ಲಿ ನೋಡುವದಿದ್ದಿದ್ದನ್ನೆಲ್ಲ ನೋಡಿ, ಮಾಡುವದನ್ನೆಲ್ಲ ಮಾಡಿದ ಅವನು ನರಕಾಭಿಮುಖನಾಗಿ ಹೊರಟ. ಹೋಗಲು ಮನಸಿಲ್ಲ, ಮನಸ್ಸಿಲ್ಲ ಅನ್ನುವ ಕಾರಣಕ್ಕೆ ಇರುವ೦ತಿಲ್ಲ, ಒಟ್ಟಾರೆಯಾಗಿ ಹೊರಟ. ಕಾರು ಒ೦ದು ಹದವಾದ ವೇಗದಲ್ಲಿ ಹೋಗುತ್ತಿದ್ದರೆ ಡಿವಿಡಿ ಪ್ಲೇಯರ್ ನಿ೦ದ ಗ೦ಧವ೯ಗಾನ ಬರುತ್ತಿತ್ತು. ದಾರಿ ಸಾಗಿತ್ತು, ಸಮರಸ್ತೆ ಕಳೆದು ಘಾಟ್ ರಸ್ತೆ ಆರ೦ಭವಾಗಿತ್ತು. ಕಾರು ಏರುತ್ತ ಏರುತ್ತ ಸಾಗುತ್ತಿದ್ದರೆ ಎದುರಿ೦ದ ರಣವೇಗದಲ್ಲಿ ಸದ್ದುಮಾಡುತ್ತ ಬ್ರೇಕ್ ಇಲ್ಲದ ಸೈಕಲ್ಲೊ೦ದು ಬ೦ದು ಧಡಾರ್ ಎನ್ನುವ ಶಬ್ದದೊ೦ದಿಗೆ ಅವನ ಕಾರಿಗೆ ನೋಡನೋಡುತ್ತಲೇ ಗುದ್ದಿತು. ಅಯ್ಯೋ, ಯಾರಪ್ಪಾ ಅದು ಸೈಕಲ್ ನಲ್ಲಿ ಬ೦ದು ಈರೀತಿ ಗುದ್ದಿ ಬಿದ್ದವರು ಎನ್ನುತ್ತಲೇ ಅವನು ಕಾರು ನಿಲ್ಲಿಸಿ ಹೊರಗೆ ಬ೦ದ. ಇನ್ನು ಕಾರಿನ ಮು೦ದಿನ ಚಕ್ರದ ಮು೦ದೆ ಮಲಗಿಯೇ ಬಿದ್ದಿದ್ದವರನ್ನು ನಿಧಾನವಾಗಿ ಎತ್ತಿದಾಗ ಅವನಿಗೆ ಕಂಡಿದ್ದು ಅವಳ ಮುಖ.




Monday, August 18, 2008

FSH ಮತ್ತು LH

ಹೇಳಿ ಕೇಳಿ ನಾನೊಬ್ಬ ಸ್ಕೂಲ್ ಮೇಷ್ಟ್ರು. ಇಲ್ಲಿ ಬರೆಯುವಂಥಾ ವಿಷಯಗಳನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡಿದ್ದಾನಾ, ಮೇಷ್ಟ್ರಾಗಿ ನಾಚಿಕೆಯಾಗಲ್ವಾ? ಅಂತ ಬೈಯ್ಯುವವರಿದ್ದಾರೆ. ಮೇಷ್ಟ್ರಾಗಿ ಇಷ್ಟೂ ಹಿಂಜರಿಕೆಯಿರುವವನಾ ಅಂತ ಬೈಯ್ಯುವವರೂ ಇದ್ದಾರೆ. ಬೈಯ್ಯೋರು ಬೈಯ್ಯುತ್ತಲೇ ಇರುತ್ತಾರೆ - ಹೇಗಿದ್ದರೂ..

ಮೋಟುಗೋಡೆಯ ಮೇಲೆ ನಿಂತು ಮೊದಲ ಪಾಠ ಶುರು ಮಾಡೇ ಬಿಡೋಣ ಅಂತ ಬಂದಿದ್ದೀನಿ.

ಶ್ರೀನಿವಾಸನೊಡನೆ ದೇಹ ಎಂಥ ವಿಸ್ಮಯ ಅಂತ ಮಾತನಾಡಿಕೊಳ್ಳುತ್ತಾ ಇರುವಾಗ ಮಾತಿಗೆ ಮಾತು ಬಂದು ಹಾರ್ಮೋನುಗಳಿಗೆ ತಿರುಗಿತು. ಅವನೋ ಯೋಗಾಸನದ ಮೇಷ್ಟ್ರು. ನಾನೋ ಬಯಾಲಜಿ ಹವ್ಯಾಸೀ ಮೇಷ್ಟ್ರು. ಸರಿ, ಮಾತು FSH ಮತ್ತು LH ಕಡೆ ಹೋಗದೇ ಇರಲು ಸಾಧ್ಯವೇ ಇರಲಿಲ್ಲ. ಪುರಾಣ ಕಥೆಗಳೆಲ್ಲವೂ ನಮ್ಮ ಚರ್ಚೆಯ ಪರಿಧಿಯೊಳಗೆ ಬಂದುಬಿಟ್ಟವು.

FSH ಮತ್ತು LH ಕಥೆ ಕೊನೆಗೆ ಹೇಳ್ತೀನಿ. ಮೊದಲು ಒಂದಷ್ಟು ನಿದರ್ಶನಗಳನ್ನು ನೋಡೋಣ.

ಮಹಾಭಾರತದ ಕಾಲ.

ಸತ್ಯವತಿ ಎಂಬಾಕೆಯನ್ನು ನೋಡಿ ಮೋಹಿತನಾಗುತ್ತಾನೆ ಪರಾಶರ ಮುನಿ. ಮುನಿಗಳೂ ಮೋಹಿತರಾಗುವುದುಂಟು. ಮುನಿಗಳು ಸನ್ಯಾಸಿಗಳೇನಲ್ಲ. ಸಾಮಾನ್ಯ ಮನುಷ್ಯರಿಗಿಂತ ಸ್ವಲ್ಪ ಜಾಸ್ತಿಯೇ ಅಂತ ಹೇಳಬೇಕು. ತಪ: ಎಂದರೆ ಉಷ್ಣ ಎಂದೂ ಅರ್ಥ ಇದೆ. ಹಾಗಾಗಿ ತಪಸ್ಸನ್ನಾಚರಿಸಿ ದೇಹದ ಉಷ್ಣವನ್ನು ಹೆಚ್ಚು ಮಾಡಿಕೊಂಡಿರುತ್ತಿದ್ದರು. ಸತ್ಯವತಿಯನ್ನು ಸ್ಪರ್ಶಮಾತ್ರವೂ ಇಲ್ಲದೆ ಗರ್ಭವತಿಯನ್ನಾಗಿಸಿದರು ಪರಾಶರ ಮುನಿಗಳು. ಅವರಿಗೆ ಹುಟ್ಟಿದ ಮಗುವೇ ವ್ಯಾಸ ಮಹರ್ಷಿಗಳು ಎಂಬುದು ಬೇರೆಯದೇ ಕಥೆ. ಇಲ್ಲಿ ಪರಾಶರರ ಕಥೆಯಿಂದ ನಾವು FSH ಮತ್ತು LH ಬಗ್ಗೆ ಕಲಿಯುವುದಿದೆ. ಇದನ್ನು ಬದಿಗಿಡೋಣ.

ಇನ್ನೂ ಸ್ವಲ್ಪ ನೂರುವರ್ಷಗಳ ಕಾಲ ಸವೆಸೋಣ.

ವ್ಯಾಸರ ತಂದೆಯ ಕಥೆಯಾಯಿತು. ಈಗ ಮಗನ ಕಥೆ. ವ್ಯಾಸರು ಹಣ್ಣು ಹಣ್ಣು ಮುದುಕರು. ಅವರ ಮಗ ಶುಕ ಮುನಿ. ವಿಹಾರಕ್ಕೆಂದು ಹೊರಟಿದ್ದ ವ್ಯಾಸರು ಕೊಳವೊಂದರಲ್ಲಿ ನಗ್ನರಾಗಿ ಜಲಕ್ರೀಡೆಯಾಡುತ್ತಿದ್ದ ಹೆಂಗಳೆಯರನ್ನು ನೋಡುತ್ತಾರೆ. ತತ್‍ಕ್ಷಣವೇ ಆ ಹೆಂಗಳೆಯರೆಲ್ಲರೂ ತಮ್ಮ 'ಮಾನ' ಮುಚ್ಚಿಕೊಂಡು ಓಡಿ ಹೋಗುತ್ತಾರೆ. ಇನ್ನೊಮ್ಮೆ ಅದೇ ಸ್ಥಳಕ್ಕೆ ವ್ಯಾಸರ ಮಗ ಶುಕ ಮುನಿ ಬರುತ್ತಾರೆ. ನವತರುಣ ಶುಕ. ಆದರೂ ಆ ಹೆಂಗಳೆಯರೂ ಎಳ್ಳಷ್ಟೂ ನಾಚಿಕೆಯನ್ನು ತೋರದೆ ಸ್ನಾನ ಮಾಡುತ್ತಲೇ ಇರುತ್ತಾರೆ. ಇದೇನು ಮರ್ಮ? ಅದಕ್ಕೆ ಆ ಹೆಂಗಳೆಯರು ಕೊಡುವ ತಾರ್ಕಿಕ ಉತ್ತರಗಳದು ಬೇರೆಯದೇ ಕಥೆ ಇದೆ.. ಆದರೆ ಇಲ್ಲಿ ಆ ಹೆಂಗಸರ FSH ಮತ್ತು LH ಬಗ್ಗೆ ಅರಿಯುವುದಿದೆ.

ಕಥೆಗಳು ಸಾಕೆನಿಸುತ್ತೆ. ಮೊನ್ನೆ ಟ್ರೆಕ್ ಒಂದರಲ್ಲಿ ಗೆಳೆಯರೊಬ್ಬರು ಹೇಳುತ್ತಿದ್ದರು. "ಇಂಗ್ಲೆಂಡಿನಲ್ಲಿ ನಮ್ಮ ಮಗನನ್ನು ಶಾಲೆಗೆ ಸೇರಿಸಲು ಭಯವಾಗಿಹೋಗಿದೆ. ಟಾಯ್ಲೆಟ್ಟಿನಲ್ಲಿ ಕಾಂಡೋಮ್ ಇಟ್ಟು ಬೇಕಿದ್ದರೆ ಉಪಯೋಗಿಸಿ ಎಂದು ಬೋರ್ಡು ಬೇರೆ ಹಾಕಿದ್ದಾರೆ. ತೀರಾ ಪ್ರೈಮರಿ ಶಾಲೆಯಲ್ಲೇ!" ಎಂದು ನಿಟ್ಟುಸಿರು ಬಿಟ್ಟರು. ಆ ದೇಶದ ಸಮಸ್ಯೆ ಇನ್ನೆಷ್ಟಿರಬೇಕು ಯೋಚಿಸಲೇ ಬೇಕು. ಪ್ರೈಮರಿ ಶಾಲೆಯಲ್ಲಿ ಇದರ ಅಗತ್ಯವಿದೆಯೇ? Of course, ನಮ್ಮ ದೇಶದಲ್ಲಿ ಸೆಕ್ಸ್ ಎಜುಕೇಷನ್ ಅನ್ನು ಶಾಲೆಯ ಮಟ್ಟದಲ್ಲಿ ಇಡಬೇಕೋ ಬೇಡವೋ ಎಂಬ ಚರ್ಚೆಯೇ ಇನ್ನೂ ಬಗೆಹರಿದಿಲ್ಲ. ಆದರೆ ಅಷ್ಟೊಂದು ದೊಡ್ಡ ಸಮಸ್ಯೆ ನಮ್ಮ ದೇಶದಲ್ಲಿಲ್ಲ ಎಂಬುದು ನಮ್ಮ ಪುಣ್ಯವಷ್ಟೆ.

ಹುಡುಗ (ಅಥವಾ ಹುಡುಗಿ) ಬೆಳೆಯುವುದು ಎಂದರೆ ವಾಸ್ತವವಾಗಿ FSH ಮತ್ತು LH ಉತ್ಪತ್ತಿ ಆಗಲು ಆರಂಭವಾಗಿದೆ ಎಂದರ್ಥ. Follicle Stimulating Hormone ಮತ್ತು Luteinizing Hormone. ಯಾರಲ್ಲಿ ಈ ಹಾರ್ಮೋನುಗಳೆರಡು ಅಧಿಕವಾಗಿ ಉತ್ಪತ್ತಿಯಾಗುತ್ತೋ ಅವರು ಪರಾಶರರಂತೆ ವೀರರೂ (ಶೌರ್ಯವುಳ್ಳವನು ಶೂರ, ವೀರ್ಯವುಳ್ಳವನು ವೀರ) ಆಗಬಹುದು, ಶುಕಮುನಿಗಳನ್ನು ಕಂಡ ಬಾಲೆಯರಂತೆ "open hearted" ಕೂಡ ಆಗಬಹುದು. ಬರಬರುತ್ತಾ ಈ ಹಾರ್ಮೋನುಗಳು ಅತಿ ಸಣ್ಣ ವಯಸ್ಸಿನಲ್ಲೇ ಉತ್ಪತ್ತಿಯಾಗಲಾರಂಭಸಿದೆ. ಪ್ರೈಮರಿ ಶಾಲೆಯ ಮಕ್ಕಳೂ ಗರ್ಭಿಣಿಯರಾದ ಕೇಸುಗಳು ದಾಖಲಾಗಿವೆ.

ಈ FSH ಮತ್ತು LH ಗಳು progesterone ಮತ್ತು estrogen ಎಂಬ ಇನ್ನೆರಡು ಹಾರ್ಮೋನುಗಳನ್ನು ಉತ್ಪತ್ತಿ ಮಾಡಲು ಅವಕಾಶ ಮಾಡಿಕೊಡುತ್ತೆ. ಮನಸ್ಸಿನೊಳಗಿನ 'ಅನುರಾಗ'ದ ಭಾವನೆಗಳಿಗೂ ಇದೇ ಕಾರಣ ಎಂದು ಮನಸ್‍ಶಾಸ್ತ್ರಜ್ಞರು ಹೇಳುವುದು ಕವಿಗಳಿಗೆ ಕಿರಿಕಿರಿಯಾದ ಮಾತುಗಳು. ಕವಿಗಳು ಏನನ್ನುತ್ತಾರೋ ಏನೋ..

ಇವತ್ತಿನ ಪಾಠ ಇಲ್ಲಿಗೆ ಮುಗಿಸೋಣ. ಏನಾದರೂ ಡೌಟ್ ಇದ್ರೆ ಮುಂದಿನ ತರಗತಿಯಲ್ಲಿ ವಿವರಿಸುತ್ತೇನೆ..

ಹೋಮ್‍ವರ್ಕ್‍ - FSH ಮತ್ತು LH ಉತ್ಪತ್ತಿ ಆಗದೇ ಇದ್ದರೆ ಬದುಕು ಏನಾಗುತ್ತೆ ಎಂಬುದನ್ನು ಯೋಚಿಸಿ.

Tuesday, August 12, 2008

ಒಲಿಂಪಿಕ್ ಸ್ಪೆಶಲ್!

ಬೀಜಿಂಗಿನಲ್ಲಿ ಒಲಿಂಪಿಕ್ ಸದ್ದು ಜೋರಾಗಿದೆ. ಅದರ ಉದ್ಘಾಟನೆಯ ಅದ್ಧೂರಿ ಸಮಾರಂಭವನ್ನು ನೋಡಿ ಇಡೀ ಜಗತ್ತು ಚೀನಾದೆಡೆಗೆ ನಿಬ್ಬೆರಗಾಗಿದೆ. ಭಾರತಕ್ಕೆ ಚಿನ್ನದ ಪದಕ ಬಂದಮೇಲಂತೂ ಇಲ್ಲೂ ಎಲ್ಲರ ಬಾಯಲ್ಲೂ ಒಲಿಂಪಿಕ್. ವೆಬ್‍ಸೈಟುಗಳು, ನ್ಯೂಸ್‍ಪೇಪರುಗಳು, ಟೀವಿ ಚಾನೆಲ್ಲುಗಳು -ಯಾವುದೇ ಮಾಧ್ಯಮವನ್ನು ಪಿಕ್ ಮಾಡಿಕೊಂಡರೂ ಅದರಲ್ಲಿ ಒಲಿಂಪಿಕ್ಕೇ.

ಒಲಿಂಪಿಕ್ಕಿನಿಂದಾಗಿ ಚೀನಾ ದೇಶದ ಚಿತ್ರಣವೇ ಬದಲಾಗಿಹೋಗಿದೆ. ಅದರ ಬಗ್ಗೆ ನಾಗರಾಜ ವಸ್ತಾರೆಯವರ ಒಂದು ಒಳ್ಳೆಯ ಲೇಖನ ಕೆಂಡಸಂಪಿಗೆಯಲ್ಲಿದೆ. ಡಾ| ಲೀಲಾ ಸಂಪಿಗೆಯವರು, ಒಲಿಂಪಿಕ್ಕಿನಿಂದಾಗಿ ಕಿಕ್ಕಿರಿದಂತಾಗಿರುವ ಚೀನಾದಲ್ಲಿ ಬಳಸಲ್ಪಡುತ್ತಿರುವ ಕಾಂಡೋಮುಗಳ ಬಗ್ಗೆ, ಅದನ್ನು ಎಲ್ಲೆಂದರಲ್ಲಿ ಎಸೆಯುವುದರಿಂದಾಗಿ ಉಂಟಾಗುವ ಪರಿಸರ ಮಾಲಿನ್ಯದ ಬಗ್ಗೆ, ಏಡ್ಸ್ ಜಾಗೃತಿ-ಲೈಂಗಿಕ ಕಾರ್ಯಕರ್ತೆಯರ ಬಗ್ಗೆ -ಇತ್ಯಾದಿ ವಿಷಯಗಳ ಬಗ್ಗೆ ಗಮನ ಹರಿಸಿ ಬರೆದ ಪುಸ್ತಕ 'ಒಲಿಂಪಿಕ್ಸ್ ಎಂಬ ಕೆಂಪು ದೀಪ' ಮೊನ್ನೆ ಮೊನ್ನೆ ಬಿಡುಗಡೆಯಾಗಿದೆ. ಏಡ್ಸ್ ಜಾಗೃತಿ ಮೂಡಿಸಲು, ಚೀನಾದಲ್ಲಿ ಕಾಂಡೋಮುಗಳ ಜಾಹೀರಾತನ್ನು ಆದಷ್ಟೂ ಪರಿಣಾಮಕಾರಿಯಾಗಿ - ಆಕರ್ಷಕವಾಗಿ ಪ್ರದರ್ಶಿಸಲು ಅಲ್ಲಿನ ಕಾಂಡೋಮ್ ತಯಾರಿಕಾ ಕಂಪನಿಗಳು ಹರಸಾಹಸ ಮಾಡುತ್ತಿರುವುದನ್ನು ಡಾ| ಲೀಲಾ ಸಂಪಿಗೆ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

ಹಾಗಾದರೆ ಅದೆಂತಹ ಜಾಹೀರಾತುಗಳು ಅಲ್ಲಿ ಪ್ರದರ್ಶಿಸಲ್ಪಡುತ್ತಿರುವುದು? ಹುಡುಕ ಹೊರಟಾಗ ಮೋಟುಗೋಡೆ ಟೀಮಿಗೆ ಸಿಕ್ಕ ಕೆಲವನ್ನು ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಕೊಡುತ್ತಿದ್ದೇವೆ. 'Elasun' ಎಂಬ ಕಂಪನಿಯ ಜಾಹೀರಾತುಗಳು ಇವು. ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಇನ್ನೂ ಹೆಚ್ಚಿನ ಪದಕಗಳು ಬರಲಿ; ಏಡ್ಸ್ ತಡೆಗಟ್ಟುವಲ್ಲಿ ಈ ಜಾಹೀರಾತುಗಳು ನೆರವಾಗಲಿ ಎಂದು ಆಶಿಸೋಣ.

ಸೈಕ್ಲಿಂಗ್


ಬಾಸ್ಕೆಟ್ ಬಾಲ್


ಸ್ವಿಮ್ಮಿಂಗ್


ಒಲಿಂಪಿಕ್ಸ್ ಚಿಹ್ನೆ


Monday, August 4, 2008

ಓಶೋ ಮತ್ತು "ಅದು".

ಓಶೋ ಮತ್ತು ಕಾಮದ ಬಗ್ಗೆ ನಾವು ಏನೂ ಹೇಳುವುದು ಉಳಿದಿಲ್ಲ. ಜಗತ್ತಿನ ಜನರೆಲ್ಲ ಇದರ ಬಗ್ಗೆ ಬೇಕಷ್ಟು ಚರ್ಚಿಸಿ ಚರ್ಚಿಸಿ... ಬೇಡ ಬಿಡಿ.

ಓಶೋ ರ ತುಂಟತನದ ಒಂದಿಷ್ಟು ಮಾತುಗಳು ಇಲ್ಲಿವೆ, ಕೇಳಿ:

ಹೆಡ್ ಫೋನಿದ್ದರೆ ಒಳಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವುದು ಬೇಡ ಅಲ್ಲವೇ?:)

Saturday, August 2, 2008

ಒಲಿಂಪಿಕ್ ನಲ್ಲಿ ನಡಿಯೋ "ಬೇರೆ" ಆಟದ ಬಗ್ಗೆ..

ಅವಧಿಯಿಂದ ಅಪ್ಪಣೆಯಿಲ್ಲದೆ ಕದ್ದಿದ್ದು:

ಕಾಂಡೂಮ್ ಮತ್ತು ಒಲಿಂಪಿಕ್ಸ್2000ದಲ್ಲಿ ಸಿಡ್ನಿಯಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ‘ಕಾಂಡೂಮ್ ವೀಕ್’, ‘ಸೆಕ್ಸ್ ಡೇ’ಗಳನ್ನು ಆಚರಿಸಲಾಗಿತ್ತು . ಸಿಡ್ನಿ ಒಲಂಪಿಕ್ಸ್ ನಲ್ಲಿ ಪ್ರತಿಯೊಬ್ಬ ಕ್ರೀಡಾಪಟುವೂ ಎರಡು ವಾರಗಳಲ್ಲಿ 51 ಕಾಂಡೋಮ್ ಗಳನ್ನು ಬಳಸಿದ್ದರು. ಸಿಡ್ನಿ ಒಲಂಪಿಕ್ಸ್ ನಲ್ಲಿ ಪೂರೈಸಿದ ಕಾಂಡೋಮ್ ಗಳು ಕೊರತೆಯಾದವು. ಇದನ್ನು ಗಮನಿಸಿದ ಅಧಿಕಾರಿಗಳು ಅಥೆನ್ಸ್ ಒಲಂಪಿಕ್ಸ್ ನಲ್ಲಿ ಇದರ ದುಪ್ಪಟ್ಟು ಕಾಂಡೋಮ್ ಗಳನ್ನು ಒದಗಿಸಿದರು..

ಮುಂದಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ..

Wednesday, July 23, 2008

ಕಾಮಸೂತ್ರ -೩

ಮೋಡ ಬಿತ್ತಿದ್ದಕ್ಕೋ ಅಲ್ಲವೋ, ಅಂತೂ ಮಳೆ ಶುರುವಾಗಿದೆ. ಹೊರಗೆ ನಭಕೂ ಭುವಿಗೂ ರಾತ್ರಿಯಿಡೀ ಪ್ರಣಯೋತ್ಸವ ನಡೆಯುತ್ತಿದ್ದರೆ, ಒಳಗೆ, ಅಂತಃಪುರದಲ್ಲಿ, ಚಂದ್ರಮಂಚದಲ್ಲಿ, ಹೊದಿಕೆಯಡಿಯಲ್ಲಿ... ನಿಮ್ಮ ದೇಹ ಬೆಚ್ಚಗಿರಲಿ ಅಂತ ಹಾರೈಸುತ್ತಾ, ಗಂಗಾಧರ ಚಿತ್ತಾಲರ 'ಕಾಮಸೂತ್ರ' ಕವನದ ಉಳಿದ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ.

*
ಕನಸು ತಲೆಯಲ್ಲಿ ತುಂಬಿದಂಥ ಹುಡುಗ
ಕಳ್ಳನೋಟವ ಕಸಿದುಕೊಳುವ ತುಡುಗ

ಕೊಬ್ಬೇರಿ ನಡೆದಿರುವೆ ಮಬ್ಬಿನಲಿ
ಬಾಳ ದಿಬ್ಬವನೇರ್ವ ಉಬ್ಬಿನಲ್ಲಿ.

ದನಿಯಲ್ಲಿ ಗಡುಸು, ಜಂಘೆಯಲೆಲ್ಲ ಬಿರುಸು
ಅಂಗಾಂಗದಲಿ ಗೂಳಿಮದ ಬಂತು ಉಗ್ಗಿ

ಗಂಡುಸಿನ ವಾರ್ತೆ ದಾಳಿಯೊಲು ನುಗ್ಗಿ
ಚೆಲ್ಲಾಡಿಸುತ ಮನವನಲ್ಲಾಡಿಸುತ ಬಂತು

ಬಡಿದೆಬ್ಬಿಸುತ ಬಂತು ಅಲಲ ಕೀಹಾ ಎಂದು
ಕೊರಳುಬ್ಬಿಸುತ ಬಂತು ಕಹಳೆಯೂದಿ.

ಹಾಲಿನೊಲು ಉಂಡ ನಿನ್ನೆಯ ಹಸುಳೆ- ಜಗವಿಂದು
ಕದಡಿ ಕವಲೊಡೆಯುತ್ತಿದೆ
ಬೇರೊಂದು ಹದಕೆ ಧುಮ್ಮಿಕ್ಕಿ ದುಂದುಮಿಸಿ ಬೆದೆ
ಗೊಳಲು ತುಡಿಯುತಿದೆ

ಒಮ್ಮೆಯ ತೊರೆದು ಇಮ್ಮೆಯ ಪಡೆಯುತಿದೆ
ಯೋನಿಮುಖ ತೋರಿ ಒಳನೀರು ಕಡೆಯುತಿದೆ

ಹೆಣ ವಾಸನೆ ಬಂದು ಮೂಗಿನಲಿ ಹೊಡೆಯುತಿದೆ.
ಕಾಮೋನ್ಮುಖ ಆಹಾ ಯೋನಿಚಕಿತಾ!

ಗೆಲಲು ಎದ್ದವನಂತೆ,
ಲೋಕಕ್ಕು ಹೊಸತಾದ ಕಂಪ ಮೆದ್ದವನಂತೆ,
ಹೊಳ್ಳೆ ಹಿಗ್ಗಿಸಿ ನಡೆವೆ ಗಾಳಿಗುಂಟಾ
ಎಡೆಮೂಸಿ ಹುಡುಕುತ್ತ ಯುಗದ ನಂಟಾ.

ಕೆಚ್ಚೆನೆಯೇ ಬಿಚ್ಚುತಿದೆ ಎಲ್ಲೊ ನಿನಗೆ
ಬೆಚ್ಚನೆಯ ತೊಡೆಯ ಹೂ ಕಾದು ಗೊನೆಗೆ

ಆಕೆಗೋ ನೆಲ ಕಾಣ, ನಿನಗೆ ದೇಶವೆ ಕಾಣ
ಲೋಹಚುಂಬಿಸಿದೆ ಗುರಿ, ಹೆದೆಗೇರುತಿದೆ ಪ್ರಾಣ.

ಇನ್ನು ನಿಲಲಿಹ ನೆತ್ತಿಗೇರಿ ಭಾನು
ಒಂದೆ ಋತುಕಾಲ; ಆದರು ಅವನ ಸಿರಿಯೇನು!
ಹುಚ್ಚೆದ್ದು ಹೂತು ಹೂಗರೇರಿ ಹಣ್ಣುವವಯ್ಯ
ಶೃಂಗ - ಸಾನು

ಇನ್ನು ತೋಟಕೆ ನುಗ್ಗಿ ಬೇಟೆ ಬೇಟ
ಗುಟ್ಟಿನಲಿ ಕೂಡಿ ಮೈಯಣಿಸುವಾಟ
ಸುಳಿಯೊಡೆದು ಹೊಸ ಜೀವ ಬರುವ ಮಾಟ!

ಈಗಾಗಲೇ ಮೋಟುಗೋಡೆಯಲ್ಲಿ: ಕಾಮಸೂತ್ರ-೧
ಕಾಮಸೂತ್ರ-೨

[ಫ್ಲಾಶ್ ನ್ಯೂಸ್! ಪರಿಸರಪ್ರೇಮಿ ಅರುಣ್ ಈಗ ಮೋಟುಗೋಡೆ ಟೀಮ್ ಮೆಂಬರ್ ಆಗಿದ್ದಾರೆ. ಅವರಿಂದ ಬರಲಿರುವ ತರಹೇವಾರಿ ಪೋಸ್ಟುಗಳಿಗಾಗಿ ನಿರೀಕ್ಷಿಸಿ!]

Monday, June 30, 2008

ಸಖಿಯ ಸ್ವಗತ

ಕತ್ತಲೆತ್ತಲಡಗಿತೋ
ಗೊತ್ತೇ ಆಗಲಿಲ್ಲವಲ್ಲೋ ಸಖ,
ಬೆತ್ತಲಲ್ಲಿತ್ತೋ ಸುಖ, ಈಗ
ಮೆತ್ತ ಮರೆಯಾಯ್ತೋ ||೧||

ಸುತ್ತ ಕವಿದಿತ್ತೋ, ಮೈಗೆ
ಮೆತ್ತಿಕೊಂಡಿತ್ತೋ ಸಖ, ನೀ-
ನಿತ್ತ ಮುತ್ತಲಿತ್ತೋ
ಮತ್ತು, ಈಗಲೆತ್ತ ಕಳೆಧೋಯ್ತೋ? ||೨||

ಸುತ್ತಿಕೊಂಡಿತ್ತೋ ದೇಹ, ನಿನ-
ಗೊತ್ತಿಕೊಂಡಿತ್ತೋ ಸಖ
ಚಿತ್ತ ಸೂರೆಗೊಂಡಿತ್ತೋ, ಪ್ರೀತಿ
ಚಿತ್ತೆ ಮಳೆಹಾಂಗ ಸುರಿದಿತ್ತೋ ||೩||

ಗತ್ತಿನಿಂದೆಂಬಂತೆ ನೀ
ಒತ್ತರಿಸಿ ಬಂದ ಚಣ
ಬತ್ತಿದಾ ತಿತ್ತಿಯಲಿ ಉತ್ತಿದಂಗಿತ್ತೋ ಒಲವ
ಬಿತ್ತಿದಂಗಿತ್ತೋ ||೪||

ಸತ್ತ ರಾತ್ರಿಯ ಹೆಣ ಕಾಯ್ವ
ಗುತ್ತಿಗೆಯ ಪಡೆದ ರವಿ
ಅತ್ತ ಮೂಡಿರುವಾಗಲಿತ್ತ ಕಾಲ
ಕತ್ತಿ ಮಸೆದಿತ್ತೋ, ಹೊಂಚು ಹಾಕಿ ಕಾದಿತ್ತೋ ||೫||

ಜತ್ತುಕವು ಈ ಸುಖವು,
ಮುತ್ತುಗದ ಹೂವಂತೆ ಬಾಡುವುದು ಬಲುಬೇಗ
ಮತ್ತೆ ಉಳಿಯುವುದು ಬರಿ ಹಾಸಿಗೆಯ ಸುಕ್ಕು;
ಗೊತ್ತಿನಂದದಿ ಇರುಳ ಸುಖದ ಕುರುಹಾಗಿ. ||೬||

Saturday, May 17, 2008

ಪೂಜಾಸಮಯ

ಎಸ್.ಎಲ್. ಭೈರಪ್ಪನವರ 'ಸಾರ್ಥ' ಕಾದಂಬರಿಯಲ್ಲಿ 'ಯೋನಿಪೂಜೆ'ಯ ಕುರಿತಾದ ವಿವರಗಳಿವೆ. ಸನ್ಯಾಸಿ (ಭೈರಾಗಿ)ಯಾಗಲು ಹೊರಟ ಕಾದಂಬರಿಯ ನಾಯಕ ಈ ವಿಶಿಷ್ಠ ಪೂಜೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಆ ದೃಶ್ಯವನ್ನು ಭೈರಪ್ಪ ಎಲ್ಲೂ ಅಶ್ಲೀಲ ಎನಿಸದಂತೆ, ಮನೋಜ್ಞವಾಗಿ ಚಿತ್ರಿಸಿದ್ದಾರೆ. ಎಂಟನೇ ಶತಮಾನದಲ್ಲಿ ಭಾರತದಲ್ಲಿದ್ದ ಧರ್ಮಗಳ ತಿಕ್ಕಾಟದ ಕುರಿತಾದ ಕಾದಂಬರಿ 'ಸಾರ್ಥ', ಒಂದು ಓದಲೇಬೇಕಾದ ಗ್ರಂಥ.

ಈಗ ಇಲ್ಲಿ ರೋಹಿತ್ ನಮಗೊಂದು ವರದಿ ಕಳುಹಿಸಿದ್ದಾರೆ. ಇದು ವಿಶ್ವದ ಕೆಲ ಭಾಗಗಳಲ್ಲಿ, ಕೆಲ ಜನಾಂಗಗಳಲ್ಲಿ ಆಚರಣೆಯಲ್ಲಿರುವ 'ಶಿಶ್ನಪೂಜೆ'ಯ ಬಗೆಗಿನ ಆಸಕ್ತಿಕರ ಲೇಖನ! ಇದನ್ನು ಕನ್ನಡಕ್ಕೆ ಭಾಷಾಂತರಿಸುವ ಗೋಜಿಗೆ ಹೋಗದೇ, ಅದರ ಲಿಂಕನ್ನು ಹಾಗೇ ಕೊಡುತ್ತಿದ್ದೇವೆ; ಓದಿಕೊಳ್ಳಿ:

ಶಿಶ್ನವನ್ನು ಪೂಜಿಸುವ ಐದು ಧರ್ಮಗಳು

Saturday, April 26, 2008

Wednesday, April 9, 2008

ಮರಳಿಬ೦ದ ಯೌವನಕ್ಕೀಗ ಹತ್ತು ವರುಷ

ಲೈ೦ಗಿಕತೆಯನ್ನು ಸ೦ತೋಷಕ್ಕೆ, ಮನೋರ೦ಜನೆಗಾಗಿ ಬಳಸಿ, ಅನುಭವಿಸುವ ಏಕೈಕ ಜೀವಿ ಮನುಷ್ಯ. ಉಳಿದವುಗಳಿಗೆಲ್ಲ ಈ ಕ್ರಿಯೆಗೆ ಒ೦ದುಕಾಲ, ವೇಳೆ ,ಸ್ಥಳ ಅನ್ನುವದೆಲ್ಲಾ ಇದೆ, ಮನುಷ್ಯನಿಗೆ ಹಾಗಲ್ಲ. ಯಾವಾಗ ಇದು ಮನೋರ೦ಜನೆಯ ಸಾಧನವಾಯಿತೋ ಅಲ್ಲಿ೦ದ ಮನುಷ್ಯ ಸಹಜವಾಗಿ ಗುಣಮಟ್ಟ ಮತ್ತು ಪ್ರಮಾಣ (quality and quantity)ದತ್ತ ಗಮನ ಹರಿಸಿದ. ಇದಕ್ಕೋಸುಗವೇ ಹಲವು ಪ್ರಯೋಗಗಳಾದವು, ಆಯುರ್ವೇದದ ಯುನಾನಿಯ ಪುಸ್ತಕಗಳು ಮಗುಚಿಹಾಕಲ್ಪಟ್ಟವು . ಇನ್ನುಕೆಲವುಮ೦ದಿ ವಾತ್ಸಾಯನ ಎ೦ಬ ಬ್ರಹ್ಮಚಾರಿಯ ಸಲಹೆ ಪಡೆದರು. ಬಹುತೇಕ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ.

ಪುಳಿಚಾರು ಮ೦ದಿ ಈರುಳ್ಳಿ ಮತ್ತು ನುಗ್ಗೇಕಾಯಿಗಳು ಕಾಮಪ್ರಚೋದಕ ಅ೦ದರು. ಆದರೆ ಇವುಗಳನ್ನು ತಿನ್ನುವುದರಿ೦ದ ಪ್ರಚೋದನೆ ಹೆಚ್ಚಾಗಲಿಲ್ಲ, ಹಾಗೆ೦ದು ತಿನ್ನಲಿಲ್ಲ ಅನ್ನುವ ಕಾರಣಕ್ಕೆ ಕಮ್ಮಿಯಾಗಲೂ ಇಲ್ಲ. ಅದರ ಪಾಡಿಗದು ಕಾಟಕೊಡುತ್ತಲೇ ಇತ್ತು, ಹೊತ್ತಲ್ಲದ ಹೊತ್ತಿನಲ್ಲಿ. ಇನ್ನು ಮಾ೦ಸಾಹಾರಿಗಳು ಘೆ೦ಡಾಮೃಗದ ಮಾ೦ಸ ಈ ಕೆಲಸಮಾಡುತ್ತದೆ ಅ೦ದರು, ಜಗತ್ತಿನಲ್ಲಿ ಘೆ೦ಡಾಗಳ ಸ೦ಖ್ಯೆ ಕಮ್ಮಿಯಾಯಿತು ಅಷ್ಟೆ.

ವಿಜ್ಞಾನ ಬೆಳೆಯಿತು, ಲೋಕಲ್ ಅನಸ್ತೇಶಿಯಾದ೦ತೆ ಕೆಲಸಮಾಡುವ ಸ್ಪ್ರೇಗಳು ಕ೦ಡುಹಿಡಿಯಲ್ಪಟ್ಟವು, ಆದರೆ ಅದರ ಅನುಭವ ಮನುಷ್ಯನಿಗೆ ರುಚಿಸಲಿಲ್ಲ, ಸುವಣ೯ ಭಸ್ಮದ ಗುಳಿಗೆಗಳು ನು೦ಗಲ್ಪಟ್ಟವು. ಬಹುತೇಕ ಸ೦ಶೋಧನೆಗಳು ಫಲಕಾರಿಯಾಗದ ಕಾರಣ ಮತ್ತೆ ಮತ್ತೆ ಮನುಷ್ಯ ಹೊಸದಕ್ಕೆ ತಡಕಾಡುತ್ತಲೇಇದ್ದ. ಶಿಶುಕಾಮದ೦ಥ ಸಮಾಜ ಸ್ವಾಸ್ಥ್ಯ ಹಾಳುಮಾಡುವ ಅಮಾನವೀಯ ಘಟನೆಗಳಾದವು. ಆದರೆ ಈ ಎಲ್ಲವನ್ನು ತಡಕಾಡಿದರೂ, ಏನು ಕೈಗೆ ಬರಬೇಕಿತ್ತೋ ಅದು ಬರಲೇ ಇಲ್ಲ. ಹುಡುಕಾಟ ಸಾಗುತ್ತಲೇಇತ್ತು. ಫ್ಯಾಮಿಲಿ ಕೌನ್ಸೆಲಿ೦ಗ್, ಸೆಕ್ಸಾಲಜಿ, ಸೆಕ್ಸ್ ಥೆರಫಿಗಳ೦ಥಹಾ ವಿಜ್ಞಾನದ ಶಾಖೆ ಉಗಮಕ್ಕೆ ಇದು ನಾ೦ದಿಯಾಯಿತು.

1998ರ ಮಾಚ೯ ತಿ೦ಗಳು 28ರ೦ದು ಫೈಜರ್ ಅನ್ನುವ ಫಾರ್ಮಾ ಕ೦ಪನಿ ಜಗತ್ತಿಗೊ೦ದು ಮಾತ್ರೆಯನ್ನು ಪರಿಚಯಿಸಿತು, ವಯಾಗ್ರಾ ಅನ್ನುವ ಹೆಸರಿ೦ದ. ಔಷಧೀಯ ವಿಜ್ಞಾನದ ಕೌತುಕವೆ೦ಬ೦ತೆ ಮಾರುಕಟ್ಟೆಗೆ ಬ೦ದ ಈ ಗುಳಿಗೆ ಬೆನ್ನಿಗೆ ವಿವಾದದ ಹೊರೆಯನ್ನೇ ಹೊತ್ತು ಬ೦ದಿತು. ಹಲವು ಊಹಾಪೋಹಗಳು ಹುಟ್ಟಿಕೊ೦ಡವು, ಅ೦ತೆ ಕ೦ತೆಗಳ ಪ್ರವಾಹ ಹರಿಯಿತು. ಜನ ಕೊಳ್ಳಲು ಒ೦ದೆಡೆ ಮುಗಿಬಿದ್ದರೆ, ಅ೦ತಜಾ೯ಲದಲ್ಲಿ ಮಾರುವವರ ದ೦ಡೇ ಹುಟ್ಟಿಕೊ೦ಡಿತು. ಸ್ಪ್ಯಾಮ್ ಮೇಲ್ ಗಳಲ್ಲೆಲ್ಲ ವಯಾಗ್ರಾ ಜಾಹೀರಾತುಗಳೇ ತು೦ಬಿದವು. ವಿವಾದಗಳು ವಯಾಗ್ರಾದ ಕೀತಿ೯ಯನ್ನು ಮಸುಕು ಮಾಡಲು ಸಾಧ್ಯವಾಗಲಿಲ್ಲ, ವಿವಾದದ ಬಲದಿ೦ದಲೇ ಅದು ಜಗತ್ತಿನ ಔಷಧಿ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲವಾಗಿ ನಿಮಿರಿ ನಿ೦ತಿತು. ಹಳೆಯ ನೆನಪುಗಳೊ೦ದಿಗೆ ಮಾತ್ರ ಆಟವಾಡುತ್ತಿದ್ದ ಅಜ್ಜ೦ದಿರನ್ನು ಮತ್ತೆ "ಮೈ"ದಾನಕ್ಕೆ ಬರುವ೦ತೆ ಮಾಡಿದ್ದು ಇದರ ಕೀತಿ೯. ಇವತ್ತು ಪ್ರತೀವಷ೯ ಎರಡು ಮಿಲಿಯನ್ ವಯಾಗ್ರಾ ಸ್ಟ್ರಿಪ್ ಗಳು ಅಮೇರಿಕಾದಲ್ಲಿ ಮಾರಾಟವಾಗುತ್ತಿದೆ. ಜಗತ್ತಿನಾದ್ಯ೦ತ ಇದರ ಪ್ರಮಾಣ ಮೂವತ್ತು ಮಿಲಿಯನ್ ಸ್ಟ್ರಿಪ್.

ವಯಾಗ್ರಾದ ವಿವಾದಗಳನ್ನು ಸೋಸಿನೋಡಿದರೆ ಮೊಟ್ಟಮೊದಲು ಅದಕ್ಕಿದ್ದ ಆಪಾದನೆ ಹೃದಯಾಘಾತಕ್ಕೆ ಕಾರಣವಾಗುತ್ತದೆ ಅನ್ನುವುದು. ಆದರೆ ಫೈಜರ್ ಕ೦ಪನಿ ಇದನ್ನು ಸಾರಾಸಗಟಾಗಿ ತನ್ನ ವೆಬ್ ಸೈಟ್ ನಲ್ಲಿ ತಿರಸ್ಕರಿಸಿದೆ. ಇದಕ್ಕಿರುವ ಇನ್ನೊ೦ದು ಆಪಾದನೆ ಶ್ರವಣದೋಷಕ್ಕೆ ಕಾರಣವಾಗುತ್ತದೆ ಅನ್ನುವದು. ಇಲ್ಲಿಯವರೆಗೆ ಇ೦ಥ 29 ಘಟನೆಗಳು ವರದಿಯಾಗಿದೆ. ಜೊತೆಗೆ ಫೈಜರ್ ಕಂಪನಿ ಬರಬಹುದಾದ ಇನ್ನು ಕೆಲವು ಸೈಡ್ ಇಫೆಕ್ಟ್ ಗಳನ್ನು ತಾನಾಗಿಯೇ ಒಪ್ಪಿಕೊ೦ಡಿದೆ. ಅವುಗಳಲ್ಲಿ ಮುಖ್ಯವಾದುದ್ದು ಅ೦ದರೆ ತಲೆನೋವು, ಮುಖದ ಚಮ೯ ಸುಕ್ಕಾಗುವದು ಮತ್ತು ಅಜೀಣ೯ತೆ. ಅಲ್ಲಾ ಸ್ವಾಮಿ, ಸಕಲ ಸಿದ್ದತೆಗಳೊ೦ದಿಗೆ ವಯಾಗ್ರಾ ತಿ೦ದು ಅಜೀಣ೯ವಾದರೆ, ಪಾಯಖಾನೇಲಿ ಕೂರಬೇಕಾದವನ ಗತಿ ಹೇಗಿರಬಹುದು ಯೋಚಿಸಿ ನೋಡಿ. ರಕ್ತದೊತ್ತಡ, ಮಧುಮೇಹ, ಹೃದಯ ಸ೦ಬಂಧೀ ಖಾಯಿಲೆಗಳು, ಡಿಪ್ರೆಶನ್ ನ೦ಥಹ ಯಾವುದೇ ಖಾಯಿಲೆ ಇರುವವರು ಈ ಗುಳಿಗೆಯನ್ನು ತಿನ್ನಬಹುದು ಮತ್ತು ಇದರಿಂದ ಯಾವ ತೊ೦ದರೆಯೂ ಆಗದು ಅನ್ನುವದು ಈ ಗುಳಿಗೆ ತಯಾರಕರ ಅ೦ಬೋಣ. ಅದರೆ ನೈಟ್ರೇಟುಗಳಿರುವ ಗುಳಿಗೆ ಸೇವಿಸಿದಾಗ ಅದರಲ್ಲೂ ವಿಶೇಷವಾಗಿ ಎದೆನೋವಿಗೆ ಮಾತ್ರೆ ತೆಗೆದುಕೊ೦ಡಾಗ ವಯಾಗ್ರಾ ಸೇವಿಸುವದು ಸೂಕ್ತವಲ್ಲವ೦ತೆ. 25, 50 ಮತ್ತು 100 ಮಿಲಿಗ್ರಾ೦ ನ ಮೂರು ವಿಧದ ತೂಕದಲ್ಲಿ ದೊರೆಯುವ ಈ ನೀಲಿ ಮಾತ್ರೆಯನ್ನು ಸೇವಿಸಿದ ಒ೦ದು ಘ೦ಟೆಯ ಬಳಿಕ ಅದು ತನ್ನ ಕೆಲಸ ಆರ೦ಭಿಸುತ್ತದೆ. ವೈದ್ಯರ ಸಲಹೆ ಮೇರೆಗೆ ಸೇವಿಸುವದು ಸೂಕ್ತ.

ಹೀಗೆ ಮರಳಿಬ೦ದ ಯೌವನಕ್ಕೀಗ ಹತ್ತುವರುಷ ತು೦ಬಿದೆ. ಲಕ್ಷಾ೦ತರ ಮ೦ದಿ ಈ ಗುಳಿಗೆಯಿ೦ದ ಮತ್ತೆ ಪುರುಷತ್ವ ಪಡೆದುಕೊ೦ಡರು. ಸಾವಿರ ಸಾವಿರ ಸ೦ಖ್ಯೆಯ ವಯಾಗ್ರಾ ಜೋಕುಗಳು ಹುಟ್ಟಿಕೊ೦ಡವು. ವಯಾಗ್ರಾದ೦ತೆಯೇ ಕೆಲಸಮಾಡುತ್ತದೆ ಎ೦ದು ಹೇಳಿಕೊ೦ಡು ಹಲವಾರು ಟ್ಯಾಬ್ಲೆಟ್ ಮಾರುಕಟ್ಟೆಗೆ ಬ೦ತು, ಬ೦ದದ್ದಕ್ಕಿ೦ದ ವೇಗವಾಗಿ ಮರೆಯಾಯಿತು. ಹಲವು ಹೊಸ ಹುಟ್ಟಿಗೆ ಮುನ್ನುಡಿಯಾಗಬಲ್ಲ ಈ ಮಾತ್ರೆಗೆ ಈಗ ಹತ್ತನೇ ಹುಟ್ಟುಹಬ್ಬದ ಸ೦ಭ್ರಮ. ಅದಕ್ಕಾಗಿ ಈ ಶುಭಾಷಯದ ಬರಹ.

Thursday, March 13, 2008

ಬರೀ ಏಳ್ನಿಮ್ಷ ಸಾಕಂತೆ!!

'ತಮಾಷೆಯಾದರೂ ಸತ್ಯ' ತರಹದ ಈ ವಾಕ್ಯಗಳನ್ನ ನೀವೂ ಓದಿರುತ್ತೀರಿ:

  • ಹಂದಿಯೊಂದರ ಕಾಮೋದ್ರೇಕ (orgasm) ಮೂವತ್ತು ನಿಮಿಷಗಳಷ್ಟಿರುತ್ತದೆ. (ಮುಂದಿನ ಜನ್ಮದಲ್ಲಿ ನಾನು ಹಂದಿಯೇ ಆಗಬಯಸುವೆ!)
  • ಕೆಲವು ಸಿಂಹಗಳು ದಿನಕ್ಕೆ 50 ಬಾರಿ ಸಂಭೋಗ ಪ್ರಕ್ರಿಯೆಯಲ್ಲಿ ತೊಡಗುತ್ತವೆ. (ಇಲ್ಲ, ನಾನು ಹಂದಿಯೇ ಆಗಬಯಸುವೆ. ನನಗೆ 'ಕ್ವಾಲಿಟಿ'ಗಿಂತ 'ಕ್ವಾಂಟಿಟಿ' ಮುಖ್ಯ!)

* *
ಆದರೆ ನೀವು ಈ ಮನುಷ್ಯ ಜನ್ಮ ಏನೇನೂ ಉಪಯೋಗವಿಲ್ಲ ಎಂದು ಆತುರದ ತೀರ್ಮಾನ ಕೈಗೊಂಡು, ಮುಂದಿನ ಜನ್ಮದಲ್ಲಿ ಹಂದಿಯೋ ಸಿಂಹವೋ ಆಗಲಿಕ್ಕೆಂದು ಈಗಲೇ ತಪಸ್ಸಿಗೆ ಕೂರುವ ಅಗತ್ಯವಿಲ್ಲ! ಏಕೆಂದರೆ, ಸಂಶೋಧನೆಯೊಂದರ ವರದಿಯ ಪ್ರಕಾರ ಅತ್ಯುತ್ತಮ ಮಿಲನ ಮಹೋತ್ಸವ ಆಚರಿಸಲು ಕೇವಲ 7 (ಏಳು) ನಿಮಿಷ ಸಾಕಂತೆ! ನಾನೇನು ಸುಳ್ಳು ಹೇಳ್ತಿಲ್ಲ, ಬೇಕಾದ್ರೆ ನೀವೇ ನೋಡಿ ಈ ವರದಿ!!

ಕನ್ನಡ ಪ್ರಭದಲ್ಲಿ
ದಟ್ಸ್ ಕನ್ನಡದಲ್ಲಿ

Sunday, February 24, 2008

ಒಂದು ನೀತಿ ಕಥೆ.

ಭರತ ಖಂಡದ ಸಂಪತ್ತಷ್ಟೂ ಅಲ್ಲೇ ಕಾಲ್ಮುರಿದು ಬಿದ್ದಂತೆ ಕಾಣುತ್ತಿದ್ದ ಅರಮನೆ. ರಾಜಾಸ್ಥಾನ ತುಂಬಿ ತುಳುಕುತ್ತಿತ್ತು. ಚಕ್ರವರ್ತಿಯ ವಿಶೇಷ ಸಭೆ. ಅಂದು ನ್ಯಾಯಾದಾನ ನಡೆಯುವ ದಿನ.ರಾಜ್ಯದ ಯಾರೇ ಬೇಕಾದರೂ ರಾಜನೆದುರಿಗೆ ಬಂದು ತಮ್ಮ ಅಹವಾಲು ತೋಡಿಕೊಳ್ಳಬಹುದಿತ್ತು, ತಮಗಾದ ಮಿಸ್ಟೀಕಿಗೆ ನ್ಯಾಯ ಪಡೆಯಬಹುದಿತ್ತು. ಭಟರು ಹಿಡಿದು ತಂದವರು ತಪ್ಪಿತಸ್ಥರೆಂದು ಸಾಬೀತಾದಲ್ಲಿ, ಅವರಿಗೆ ಶಿಕ್ಷೆಯೂ ಗ್ಯಾರೆಂಟಿ.

ಈ ಬಾರಿಯೂ ಎಂದಿನಂತೆ ಜನಸಾಗರ ಹರಿದು ಬಂದಿತ್ತು. ವಂದಿಮಾಘದರು ರಾಜನ ಬಿರುದುಬಾವಲಿಗಳನ್ನು ಹಾಡಿ ಹೊಗಳುತ್ತ ಆಸ್ಥಾನಕ್ಕೆ ಬರಮಾಡಿಕೊಳ್ಳುತ್ತಿದ್ದರೆ, ಜನರ ಉಘೇ ಉಘೇ ಎನ್ನುವ ಘೋಷ ಸುತ್ತೆಲ್ಲ ಮೊಳಗುತ್ತಿತ್ತು. ಕಾನೂನು ತಜ್ಞರು ರಾಜ ಸಿಂಹಾಸನದ ಇಕ್ಕೆಲಗಳಲ್ಲೂ ಸಾಲಾಗಿ ಆಸೀನರಾಗಿದ್ದರು. ರಾಜನು ತನ್ನ ಶ್ವೇತಛತ್ರದಡಿಯಲ್ಲಿನ ಐವರಿ ಸಿಂಹಾಸನದಲ್ಲಿ ಆಸೀನನಾಗುತ್ತಿದ್ದಂತೆ ಜನರೆಲ್ಲ ಆತನಿಗೆ ನಮಸ್ಕರಿಸಿ ತಾವೂ ಸೆಟ್ಲಾದರು.

ರಾಜ ತನ್ನ ಬುದ್ಧಿಮತ್ತೆಯಿಂದ ಫಾಸ್ಟಾಗಿ ನ್ಯಾಯ ತೀರ್ಮಾನ ಮಾಡುತ್ತಿದ್ದರೆ, ನೆರೆದವರೆಲ್ಲ ಮೂಗಿನ ಮೇಲೆ ಬೆರಳಿಟ್ಟು,ಆತನ ಪಾಂಡಿತ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದರು. ಅಲ್ಲಿ, ನ್ಯಾಯ ಪಡೆಯಲು ಬರುತ್ತಿದ್ದವರಿಗಿಂತ, ಚಕ್ರವರ್ತಿಯ ಜಾಣ್ಮೆಯನ್ನು ನೋಡಲು ಬರುತ್ತಿದ್ದವರೇ ಹೆಚ್ಚು.

ಅಂದು ಮಧ್ಯಾಹ್ನದ ಸಮಯ, ಆಗಲೇ ನೂರಾರು ತೀರ್ಮಾನಗಳನ್ನು ಚಕ್ರವರ್ತಿ ನೀಡಿಯಾಗಿತ್ತು. ಆತ ಲಂಚಿಗೆ ತೆರಳಬೇಕು ಅನ್ನುವಷ್ಟರಲ್ಲಿ ರಾಜ ಭಟರು ಮಧ್ಯ ಏಜಿನ ಹೆಣ್ಣುಮಗಳೊಬ್ಬಳನ್ನು ಆತನ ಮುಂದೆ ತಂದು ನಿಲ್ಲಿಸಿದರು. ರಾಜ, "ಏನೀಕೆಯ ಸಮಸ್ಯೆ" ಎಂದು ಕೇಳಲು ಆಕೆಯ ಹಿಂದಿದ್ದ ಹಿರಿಯರೊಬ್ಬರು ಮುಂದೆ ಬಂದು ನಿಂತು, "ಈಕೆ ನಮ್ಮ ಹಳ್ಳಿಯಲ್ಲಿ ಪ್ರಾಸ್ಟಿಟ್ಯೂಷನ್ ನಡೆಸುತ್ತಿದ್ದಾಳೆ ಮಹಾರಾಜ. ನಮ್ಮ ಊರಿನ ಮದುವೆಯಾದ ಗಂಡಸರನ್ನೂ ತನ್ನತ್ತ ಸೆಳೆದುಕೊಂಡು ಸಂಸಾರಗಳಲ್ಲಿ ಒಡಕುಂಟು ಮಾಡುತ್ತಿದ್ದಾಳೆ, ಇವಳಿಂದಾಗೆ ಹಳ್ಳಿಯ ನೆಮ್ಮದಿಯೇ ಹಾಳಾಗಿ ಹೋಗಿದೆ" ಎಂದು ಅಲವತ್ತುಕೊಂಡರು.

ಚಕ್ರವರ್ತಿಯು ಆಕೆಯತ್ತ ಕೆಂಗಣ್ಣ ಬೀರಲು, ಅವಳು ತಲೆ ತಗ್ಗಿಸಿ ನಿಂತಳು. ಆಕೆಯ ಚರ್ಯೆಯಿಂದಲೇ ರಾಜನಿಗೆ ಆಕೆ ತಪ್ಪು ಮಾಡಿರುವುದು ಹೌದು ಎಂದು ಅರಿವಾಯಿತು. ಆದರೂ ಆಕೆಯನ್ನೇ ಕೇಳೋಣ ಎಂದು, "ಎಲೈ ಸ್ತ್ತ್ರೀಯೇ, ನಿನ್ನ ಬಗ್ಗೆ ಈ ಮಹನೀಯರು ಮಾಡುತ್ತಿರುವ ಆಪಾದನೆಗಳ ಬಗ್ಗೆ ನಿನ್ನ ಒಪೀನಿಯನ್ ಏನು" ಎಂದನು. ಆಕೆ , ಮರು ಮಾತಿಲ್ಲದೇ ತಲೆ ಮತ್ತೂ ತಗ್ಗಿಸಿದಳು. ವೇಶ್ಯಾವಾಟಿಕೆ ಆ ರಾಜ್ಯದಲ್ಲಿ ಈ ಚಕ್ರವರ್ತಿಯ ಅಪ್ಪನ ಕಾಲದಲ್ಲೇ ನಿಷೇಧಿತವಾಗಿತ್ತು. ಆನಂತರ ಇಲ್ಲಿಯ ತನಕ ಒಂದೇ ಒಂದು ಅಂತಹ ಘಟನೆ ನಡೆದ ವರದಿಯೂ ಆಗಿರಲಿಲ್ಲ. ಇವನ ಕಾಲದಲ್ಲಿ ಮೊದಲ ಬಾರಿಗೆ ಇಂತಹ ಕೇಸೊಂದು ಬಂದಿತ್ತು. ಅದಕ್ಕಾಗಿಯೇ, ಒಮ್ಮೆಗೇ ಏನನ್ನೂ ಹೇಳಲು ಆತನಿಗೆ ಸಾಧ್ಯವಾಗಲಿಲ್ಲ. ಯಾವ ತರಹದ ಶಿಕ್ಷೆ ನೀಡಬೇಕು ಅನ್ನುವುದೂ ಹೊಳೆಯಲಿಲ್ಲ. ನ್ಯಾಯದಾನ ನೀಡುವಲ್ಲಿ ತೊಡಕುಂಟಾಗುವ ಪರಿಸ್ಥಿತಿ ಬಂತು.

ಆತ ಅರ್ಥಗರ್ಭಿತವಾಗಿ ನ್ಯಾಯಾಂಗ ಪಂಡಿತರುಗಳನ್ನು ನೋಡಿದ. ಅವರಿಗೂ ವಿಷಯದ ಬಿಸಿ ತಟ್ಟಿತು. ಚಕ್ರವರ್ತಿ ನ್ಯಾಯಾಂಗ ಸಂಬಂಧೀ ಗ್ರಂಥ ತನ್ನಿ ಎಂದು ಅವರುಗಳಿಗೆ ಸನ್ನೆ ಮಾಡಿದ .ಭಟನೊಬ್ಬನನ್ನು ಕೂಡಲೇ ಅರಮನೆಯ ಹಿಂದಿರುವ ವಿಶಾಲ ಗ್ರಂಥಾಲಯಕ್ಕೆ ಕಳುಹಿಸಲಾಯಿತು.ಸಬೆಯ ತುಂಬ ಗೌಜಿ ಗದ್ದಲ. ಎಲ್ಲರೂ ಗುಸು ಗುಸು ಮಾತಾಡಿಕೊಳ್ಳಲಾರಂಭಿಸಿದರು. ಆಕೆಗೆ ಏನು ಶಿಕ್ಷೆ ಸಿಗಬಹುದೆಂಬ ಕುತೂಹಲ ಎಲ್ಲರಿಗೂ. ಚಕ್ರವರ್ತಿ ಒಮ್ಮೆ ಸುತ್ತಲೂ ನೋಡಿದ.. ಎಲ್ಲರೂ ಸುಮ್ಮನಾದರು. ಅದೇ ಹೊತ್ತಿಗೆ ಚಕ್ರವರ್ತಿಗೆ ಕಿವಿ ತುರಿಸಿದಂತಾಯಿತು. ಪಕ್ಕದಲ್ಲಿದ್ದ ಸೇವಕನಿಗೆ ಕಿವಿಯ ಕೊಳಕು ತೆಗೆಯೋ ತಾಮ್ರದ ಕಡ್ಡಿ ತರಲು ಹೇಳಿದ ಆತ. ಅವನು ಅತ್ತ ತೆರಳಿ ನಿಮಿಷವೂ ಆಗಿಲ್ಲ, ತುರಿಕೆ ತಡೆಯಲಾರದೇ ಸಿಂಹಾಸನದ ಮೂಲೆಯಿಂದ ಮರದ ಸಣ್ಣ ಚಕ್ಕೆಯೊಂದನ್ನು ಎತ್ತಿ ಕಿವಿಗೆ ಹಾಕಿದ.

ಅದೇ ಹೊತ್ತಿಗೆ ಕೆಳಗೆ ಮೌನವಾಗಿ ನಿಂತಿದ್ದ ಆ ಮಹಿಳೆ , "ಮಹಾರಾಜಾ, ನಾನು ನಿಮ್ಮೊಡನೆ ಎರಡು ಮಾತಾಡಬಹುದೇ " ಎಂದು ಮೆಲ್ಲನೆ ವಿನಂತಿಸಿದಳು. ಚಕ್ರವರ್ತಿಗೆ ಸರ್ಪ್ರೈಸ್ ಅನಿಸಿದರೂ, "ಹುಂ, ಹೇಳುವಂತಳಾಗು" ಅಂದನು. ಆಕೆ ನಿಧಾನವಾಗಿ,
"ರಾಜಾ, ನಿಮಗೆ ಕಿವಿ ತುರಿಕೆಯಾಗಿ, ತುರುಸಿಕೊಳ್ಳಲು ಏನನ್ನೋ ತರಿಸಿಕೊಳ್ಳುವುದರೊಳಗಾಗಿ ಸಿಂಹಾಸನದ ಮರದ ಚೂರನ್ನು ಕಿತ್ತು ಕಿವಿಗಿಟ್ಟುಕೊಂಡಿರಿ. ನನ್ನ ಗಂಡ ಸೈನ್ಯದಲ್ಲಿದ್ದ.. ಯುದ್ಧವೊಂದರಲ್ಲಿ ಸತ್ತು ಒಂಬತ್ತು ವರುಷಗಳಾದವು, ನನ್ನ ಪರಿಸ್ಥಿತಿಯನ್ನೊಮ್ಮೆ ನೀವು ಥಿಂಕ್ ಮಾಡಿ ನೋಡಿ" ಎಂದಳು. ಚಕ್ರವರ್ತಿ, ಮಾತೇ ಬರದೇ ಆಕೆಯನ್ನು ನೋಡುತ್ತ ಕುಳಿತ.

Tuesday, February 5, 2008

ಚಂದ್ರ ಮಂಚಕೆ....

ಚಂದ್ರಮಂಚಕೆ ಬಾ, ಚಕೋರಿ!
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ!
ಚಂದ್ರಿಕಾ ಮಧುಪಾನ ಮತ್ತ
ಪೀನ ಕುಂಭ ಪಯೋದವಿತ್ತ
ವಕ್ಷ ಪರಿರಂಭನ ನಿಮಿತ್ತ
ನಿರಾವಲಂಬನ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ಚರಣನೂಪುರ ಕಿಂಕಿಣೀ ಕ್ವಣ
ಮದನ ಸಿಂಜಿನೀ ಜನಿತ ನಿಕ್ವಣ:
ಚಿತ್ತ ರಂಜನಿ, ತಳುವದೀ ಕ್ಷಣ
ಚಂದ್ರಮಂಚಕೆ ಬಾ, ಚಕೋರಿ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ತೆರೆಯ ಚಿಮ್ಮಿಸಿ, ನೊರೆಯ ಹೊಮ್ಮಿಸಿ,
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ, ಚಕೋರಿ! ಬಾ, ಚಕೋರಿ!
ಎದೆ ಹಾರಿದೆ ಬಾಯಾರಿದೆ
ಚಕೋರ ಚುಂಬನ!

ನಿಕುಂಜ ರತಿವನ ಮದನಯಾಗಕೆ
ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ
ಅಂಚಂಚು ಚುಂಬನ!
ಬಾ, ಚಕೋರಿ! ಬಾ, ಚಕೋರಿ!
ಚಂದ್ರಮಂಚಕೆ ಬಾ, ಚಕೋರಿ!

ಅದ್ಭುತ ಸಾಲುಗಳಲ್ಲವೇ? ಕುವೆಂಪು ಎಂಬ ರಸಋಷಿಯ ಅಕ್ಷರ ಮಾಯಾಜಾಲಕ್ಕೆಮೋಹಗೊಳ್ಳದ ಮನಸ್ಸೇ ಇಲ್ಲವೇನೋ.. ಆದರೆ, ಕಂಗ್ಲೀಷು ಯುಗದ ಈಗಿನ ಕಾಲದಲ್ಲಿ ಹೀಗೆಲ್ಲ ಚಂದ್ರಮಂಚಕ್ಕೆ ಕರೆದರೆ ಚಕೋರಿಗೆ ಡಿಕ್ಷನರಿಯೇ ತಲೆದಿಂಬಾಗಬೇಕೇನೋ.!
ಈ ಮಧುರ ಗೀತೆಯನ್ನು ಕಳಿಸಿದ್ದು ಗೆಳೆಯ ಅರುಣ. ಥ್ಯಾಂಕ್ಸ್!

Wednesday, January 23, 2008

ಇದು ಕುವೆಂಪು ಶೈಲಿ!

ಕುವೆಂಪು 'ಅದರ' ಬಗ್ಗೆ ಬರೆದರೆ ಹೇಗಿರುತ್ತೆ? ಇಲ್ಲಿದೆ ಒಂದು ಉದಾಹರಣೆ!

ಸುಮಾರು ಎರಡು ಶತಮಾನಗಳಷ್ಟು ಹಳೆಯ ಕಾಲದ (೧೮೯೩) ಕತೆಯನ್ನೊಳಗೊಂಡಿರುವ, ಸಹ್ಯಾದ್ರಿಯ ದಟ್ಟ ಕಾನನದ ನಡುವೆ ಜರುಗುವ 'ಮಲೆಗಳಲ್ಲಿ ಮದುಮಗಳು' ಎಂಬೀ ಬೃಹತ್ ಕಾದಂಬರಿ, ಆ ಕಾಲದ ಜನರ ಮುಗ್ಧ ಜೀವನಕ್ಕೆ, ಅದರಲ್ಲಿದ್ದ ಸ್ನಿಗ್ಧ ಸೌಂದರ್ಯಕ್ಕೆ ಹಿಡಿದ ಕನ್ನಡಿ. "ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ.. ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕೂ ಕೊನೆಯಿಲ್ಲ.. ಇಲ್ಲಿ ವೇಗವೂ ಸಾವಧಾನದ ಬೆನ್ನೇರಿದೆ.." ಎಂದೆಲ್ಲ ಕುವೆಂಪು ಕಾದಂಬರಿಯ ಮೊದಲಿಗೇ ಬರೆದುಕೊಂಡಿದ್ದಾರೆ. ಕನ್ನಡದ 'ಕ್ಲಾಸಿಕ್'ಗಳಲ್ಲೇ ಕ್ಲಾಸಿಕ್ ಕಾದಂಬರಿ ಇದು.

'ಮಲೆಗಳಲ್ಲಿ..' ಕಾದಂಬರಿಯಲ್ಲಿ, ಯಾವ ರೋಮಿಯೋ-ಜ್ಯೂಲಿಯಟ್ ಜೋಡಿಗೂ ಕಮ್ಮಿಯಿಲ್ಲದಂತಹ ಜೋಡಿಯೊಂದಿದೆ. ಅದೇ ಐತ-ಪೀಂಚಲು ಜೋಡಿ! ಆಗಿನ ಕಾಲದ ಗೌಡರ ಜೀತದಾಳುಗಳಾಗಿದ್ದ, ಕಡು ಬಡತನದಲ್ಲೇ ಅತ್ಯಂತ ಸುಖ-ಸಂತಸದ ಬಾಳನ್ನು ಸಾಗಿಸುತ್ತಿದ್ದ ಈ ಆದರ್ಶ ಜೋಡಿ, ತಮ್ಮ ಬಿಡಾರದಲ್ಲಿ ಸಮಾಗಮಗೊಂಡದ್ದನ್ನು ಕುವೆಂಪು ಅದೆಷ್ಟು ಚೆನ್ನಾಗಿ ಬರೆದಿದ್ದಾರೋ ನೀವೇ ಓದಿ ನೋಡಿ:

*
ಪೀಂಚಲು ದೀಪ ಆರಿಸಿ, ಕತ್ತಲೆಯಲ್ಲಿಯೇ ತನ್ನ ಸೀರೆಯನ್ನು ಬಿಚ್ಚಿಟ್ಟು, ಐತನು ಹೊದೆದಿದ್ದ ಕಂಬಳಿಯಡಿ ನುಸುಳಿ, ತನ್ನ ಬತ್ತಲೆ ಮೈಯನ್ನು ಅವನ ಬತ್ತಲೆ ಮೈಗೆ ಒತ್ತಿ, ಚಾಪೆಯ ಮೇಲೆ ಹಾಸಿದ್ದ ಕಂಬಳಿಯ ಮೇಲೆ ಹಾಸಿದ್ದ ತನ್ನದೊಂದು ಹರಕಲು ಸೀರೆಯನ್ನೇ ಮಗ್ಗಲು ಹಾಸಿಗೆಯನ್ನಾಗಿ ಮಾಡಿದ್ದ ಶಯ್ಯೆಯಲ್ಲಿ ಪವಡಿಸಿದಾಗ ಐತನಿಗೆ ಅದು ಹಂಸತೂಲಿಕಾತಲ್ಪವಾಗಿಬಿಟ್ಟಿತ್ತು! ತನ್ನ ಸರ್ವಸ್ವದಿಂದಲೂ ಅವಳ ಸರ್ವಸ್ವವೂ ತಬ್ಬುವಂತೆ ತನ್ನೆರಡು ತೋಳುಗಳಲ್ಲಿ ಅವಳನ್ನು ಬಿಗಿದಪ್ಪಿ, ಕೆನ್ನೆಯ ಮೇಲೆ ಕೆನ್ನೆಯಿಟ್ಟು ಸಮಾಧಿಸ್ತನಾಗಿ ಕರಗಿಯೇ ಹೋದಂತೆ ಸ್ವಲ್ಪ ಹೊತ್ತು ನಿಶ್ಚಲನಾಗಿದ್ದುಬಿಟ್ಟನು. ಆದರೆ ಅವನ ಅಳ್ಳೆ ಹೊಡೆದುಕೊಳ್ಳುತ್ತಾ ಇದ್ದುದು ಅವಳ ಹೊಡೆದುಕೊಳ್ಳುತ್ತಿದ್ದ ಅಳ್ಳೆಗೆ ಆಪ್ಯಾಯಮಾನವಾಗಿ ಅರಿವಾಗುತ್ತಿತ್ತು. ನಾಲ್ಕು ತೊಡೆಗಳೂ ನಾಲ್ಕು ಕೈಗಳೂ ಒಂದನ್ನೊಂದು ಬಿಗಿಯುವುದರಲ್ಲಿ ಸೆಣಸುವಂತಿದ್ದವು. ಅವಳ ಮೆತ್ತನೆಯ ಕುಚಗಳು ತನ್ನ ವಕ್ಷಕ್ಕೆ ಒತ್ತಿದಂತೆಲ್ಲ ಐತನ ಎಡದ ಕೈ ಅವಳ ಬೆನ್ನ ಮೇಲೆ ಆಡುತ್ತಾ ಆಡುತ್ತಾ ಕೆಳಕೆಳಗಿಳಿದು ಅವಳ ಮೃದುಕಠಿಣ ನಿತಂಬಗಳನ್ನು ಸೋಂಕಿ, ಒತ್ತಿ, ಕೈಮುತ್ತನೊತ್ತಿ ಸೊಗಸಿದಾಗ ಅವನ ಪ್ರಜ್ಞೆ, ಜೇನುತುಪ್ಪದ ಕೆರೆಯಲ್ಲಿ ನಾಲಗೆಯಾಗಿ ಮುಳುಗಿ ಲಯವಾಗಿಬಿಟ್ಟಿತು. ಆ ಆನಂದಕ್ಕೆ ಆ ರೋಮಾಂಚನಕ್ಕೆ ಪೀಂಚಲು ಅವಶಳಾಗಿ, ತನ್ನ ಮಾನಸಮಸ್ತದ್ವಾರದ ರತಿಕವಾಟಗಳನ್ನು ಸಂಪೂರ್ಣವಾಗಿ ಅಗಲಿಸಿ ತೆರೆದು, ತನ್ನ ಇನಿಯನ ಮನ್ಮಥಾವಿಷ್ಟ ಪೌರುಷ ಪ್ರವೇಶಕ್ಕೆ ಸುಗಮ ಮಾರ್ಗ ಮಾಡಿಕೊಟ್ಟು, ಆತನ ಸಮಸ್ತ ಪುರುಷಾಕಾರವೂ ತನ್ನೊಳಗೆ ಸಂಮಗ್ನಲಗ್ನವಾಗುವಂತೆ ಸ್ವೀಕರಿಸಿದಳು.

*
ಇನ್ನೇನು ಹೇಳಲಿದೆ? 'ಮಲೆಗಳಲ್ಲಿ..' ಕಾದಂಬರಿಯನ್ನು ಇನ್ನೂ ಓದದವರು ದಯವಿಟ್ಟು ಓದಿ. ಓದಿದವರು ಮತ್ತೊಮ್ಮೆ ಓದಿ!

[ಕುವೆಂಪುರವರ 'ಚಂದ್ರಮಂಚಕೆ ಬಾ ಚಕೋರಿ..' ಹಾಡನ್ನು ಸಧ್ಯದಲ್ಲೇ ನಿರೀಕ್ಷಿಸಿ!]

Friday, January 4, 2008

ಮೊಳೆ


ಬಸ್ಯಾನ್ ದನ, ಹೀಟಿಗ್ ಬಂದಿತ್ತು. ಹಿ೦ದೆ ಕಲ್ಲೇಶಿ ಮನಿ ಹೋರಿ ತಾವ ಮೂರ್ ಬಾರಿ ದನ ಹೊಡ್ಕಂಡ್ ಹೋಗ್ ಬಂದಿದ್ರೂ ಕಟ್ಟಿರಲಿಲ್ಲ. ಈ ಸತಿ೯ ಪಶುವೈದ್ಯ ಶಾಲಿಗೆ ಹೊಸಾ ಡಾಕ್ಟ್ರು ಬ೦ದಾರೆ, ಅವರ ಕೈ ಗುಣ ಚೊಲೋ ಐತಿ ಅ೦ತ ಊರಾಗೆ ಮಾತಿತ್ತು. ಹಾ೦ಗ೦ತ ಬೇರೆಯುವ್ರು ಮಾತಾಡತಿದ್ರೇ ಶಿವಾಯ್ ಬಸ್ಯ೦ಗೆ ಅವರ ಬಗ್ಗೆ ಏನ್ ಏನೂ ತಿಳಿವಲ್ದು. ತ೦ಗೇ ಹುಶಾರಿಲ್ದೇ ಹೋದ್ರೆ ನಾಟೀ ವೈದ್ಯನ ತಾವಾ ಹೋಗ್ತಿದ್ನೇ ಶಿವಾಯ್ ಇ೦ಗ್ಲೀಸ್ ಮದ್ದು ತಕ೦ಡವ ಅಲ್ಲ. ಇನ್ನು ದನಕ್ಕೆ ಇ೦ಗ್ಲೀಸ್ ಮದ್ದು ಮಾಡ್ಯಾನೇ? ಆದ್ರೂ ಈಗ ಬೇರೆ ದಾರಿ ಇಲ್ಲದ್ರಿ೦ದ ಜೊತೀಗೆ ಮನೆಯವ್ರ ವರಾತ ಬೇರೆ ಇದ್ದಿದ್ರಿ೦ದ ದನ ಹೊಡ್ಕ೦ಡು ಹೊಸಾ ಡಾಕ್ಟರ್ ಮನಿಗೆ ಹೋಗೂ ಪ್ರಸ೦ಗ ಬ೦ತು.

ಆಸ್ಪತ್ರೆ ಬಾಗಲ ಬುಡದಾಗ ಆಕಳಾ ಕಟ್ಯಾಕಿ ಒಳಗಡೆ ಹೋದ್ರೆ ಡಾಕ್ಟ್ರಪ್ಪ ಪೇಪರಿನ್ಯಾಗ ಮಗ್ನಾಗಿದ್ರು.

"ನಮಸ್ಕಾರ್ರೀ ಡಾಕ್ಟ್ರ, ನನ್ನ ಹೆಸ್ರು ಬಸ್ಯಾ ಅ೦ತ್ರಿ, ನಮ್ಮನಿ ಆಕ್ಳಾ ಹೀಟಿಗೆ ಬ೦ದೈತ್ರಿ. ಹಾ೦ಗಾಗ್ ನಿಮ್ಮ ಕೂಡೆ ಹೊಡ್ಕೊ೦ಡು ತ೦ದೇನಿ. ಹೊರಗೇ ಐತಿ..."

ಪೇಪರಿನಿ೦ದ ಮುಖ ಹಗೂರ ಎತ್ತಿದ ಡಾಕ್ಟ್ರಪ್ಪ, ಬಸ್ಯಾನಕಡಿ ನೋಡಿ ತೆಳ್ಳಗೊಮ್ಮೆ ನೆಗ್ಯಾಡಿದ್ರು.
ನೋಡಿ ಬಸ್ಯಾ ಅವರೆ, ನೀವು ದನವನ್ನು ಪಶು ಚಿಕಿತ್ಸಾ ಕೇ೦ದ್ರಕ್ಕೆ ಕರೆದು ತರುವದೆಲ್ಲ ಬೇಡವಾಗಿತ್ತು. ಹೋರಿ ಹಾರಿಸುವದೆಲ್ಲ ಹಳೆಯದಾಯ್ತು ಇವರೆ. ಈಗೆಲ್ಲ ಇನ್ಸಮೇಶನ್ ಅ೦ತ ಹೊಸವಿಧಾನ ಬ೦ದಿದೆ. ನಾವು ಮನೆಗೇ ಬ೦ದು ಮಾಡಿ ಹೋಗುತ್ತೇವೆ. ಅಂದರು.

ಬಸ್ಯ ಸ್ವಲ್ಪ ದ೦ಗಾದ. ಒಂದೂ ಬಸ್ಯಾನ್ನ ಬಹುವಚನದಾಗೆ ಯಾರಾದ್ರೂ ಕರ್ದಿದ್ದಿದ್ರೆ ಇದೇ ಮೊದಲು. ಅಲ್ಲದೇ ಡಾಕ್ಟ್ರೇ ಮನೀಕಡಿ ಬರೂದು ಇನ್ನೂ ಹೊಸಾತ್ನಾಗಿ ಅನ್ನಸ್ತು. ಹಾ೦ಗೇ ನಿ೦ತಲ್ಲೇ ಗೋಣು ಆಡ್ಸದಾ. ಡಾಕ್ಟು ಮಾತು ಮು೦ದುವರ್ಸಿದ್ರು.

ಇನ್ನೊ೦ದು ಅಧ೯ಗ೦ಟೆಯಲ್ಲಿ ನಿಮ್ಮ ಮನೆಯಲ್ಲಿ ಇರುತ್ತೇನೆ. ಸ್ವಲ್ಪ ಬಿಸಿನೀರು ಸೋಪು ಒ೦ದು ಟವೆಲ್ ರೆಡಿ ಮಾಡಿ ಇಟ್ಟರೆ ಸಾಕು ಅ೦ದರು. ಬಸ್ಯ ವಾದ್ಯದೋನ ಎತ್ನಾ೦ಗೆ ತಲಿ ಅಳ್ಳಾಡ್ಶಿ ಹೊರಕ್ಕ ಹೊ೦ಟ.
ಹೊ೦ಡೂಮು೦ದ ಡಾಕ್ಟ್ರು ನಿಮ್ಮ ಮನೆ ದಾರಿಯನ್ನು ಕ೦ಪೌ೦ಡರನಿಗೆ ಹೇಳಿಹೋಗಿ ಮಾರಾಯ್ರೇ ಅ೦ದ್ರು.
ಕ೦ಪೌ೦ಡರ್ ನಾಗ್ಯಾ ದೇಶಾವರಿ ನಗಿ ನಕ್ಕು, "ಇದೇನೋ ಬಸ್ಯಾ ಇತ್ ಕಡಿ ಮುಖಾ ಹಾಕೀದಿ.. ಏನು ಕತೀ ನಿ೦ದು? ಬಾಗ್ಲಾಗ್ ಬೇರೆ ನಿನ್ನ ದನಾನೂ ಐತಿ? ಈ ದನ ಇಲ್ಲಿಗೆ ಹೊಡ್ಕ೦ಡುಬರೂ ಅವಶ್ಯಕತೀನೆ ಇಲ್ಲಾ ಅನ್ನೂದು ಇನ್ನೂ ಗೊತ್ತಿಲ್ಲೆನು ನಿ೦ಗೆ? ಇಲಿ೯, ಆಗಿದ್ದು ಆಗ್ಯೋತು, ನಾನಾ ಡಾಕ್ಟ್ರಸಾಹೇಬ್ರನ್ನ ನಿಮ್ಮನಿತಾವಾ ಕರ್ಕೋ೦ಡ್ ಬತೀನಿ, ನೀ ಬಿರ್ನಹೋಗಿ ಎಲ್ಲ ತಯಾರಿಟ್ಕ" ಅ೦ದ.

ಬಸ್ಯಾ ದನಾ ಹೊಡ್ಕ೦ಡು ದಾಡ್ ಬೀಡ್ನೆ ಮನಿಕಡಿ ಹೊ೦ಟ್ರ ಅವನ ತಲೀಲಿ ಏನೇನೋ ವಿಚಾರ, ಒಬ್ನೇ ನಗ್ತಾ ನಗ್ತಾ ಮನೀಗೆ ಬ೦ದವನೇ "ಡಾಕಟ್ರು ಬತಾ ಅದಾರು, ನೀರು ಕಾಯಾಕ್ ಇಡು, ಮಡಕಿಮಾಡಿಟ್ಟ ಹೊಸಾ ಟವೆಲ್ ತಗಿ, ಮೈಗ್ ಹಚ್ಚು ಹೊಸಾ ಶಾಬೂ ಎಲ್ಲೈತಿ ನೋಡು " ಅ೦ತೆಲ್ಲ ಹೆ೦ಡತೀಗೆ ಕೆಲ್ಸಾ ಹಚ್ಚದಾ. ಆಕಿಗೆ ಬಸ್ಯಾನ ಗಡಬಡೀ ನೋಡಿ ಡಾಕ್ಟ್ರು ಆಕಳಾ ನೋಡಾಕ್ ಬರ್ತಿದಾರೋ ಅಥ್ವಾ ಮಗಳ್ನೇ ನೋಡಾಕೆ ಬರ್ತಿದಾರೋ ತಿಳೀದಾತು. ಕೇಳಾಕೆ ಹೋದ್ರೆ ಅಶ್ಟೊತ್ಗೆ ಅವ ಕೊಟ್ಗ್ಯಾಗಿದ್ದ.
*******************
ವ೦ದೇಸಮ ವದ್ರತಿದ್ದ ದನೀನ ಕುಳ್ಳು ಬಾಚಿಹಾಕೂವಷ್ಟರಾಗೆ ಡಾಕ್ಟ್ರ ಕ೦ಪೌ೦ಡರನ ಹೊತ್ತ ಚೇತಕ್ ಸ್ಕೂಟ್ರ ಸವಾರಿ ಮನೀಮು೦ದೆ ಬ೦ದಿತ್ತು. ಸ್ಕೂಟ್ರ ಇಳಿದ ಮ೦ಗ್ಳೂರ ಡಾಕ್ಟ್ರು ಎಲ್ಲಾ ತಯಾರಾಗಿದೆಯಾ ಬಸ್ಯಾಅವರೇ ಅನ್ತಾನೇ ಸೀದಾ ಬಸ್ಯಾನ ಮನಿ ಬೇಲಿ ದಾಟುದ್ರು. ಬಸ್ಯಾ ಸಣ್ಣಗೆ ಹಲ್ಕಿರಿತಾ, ಕೊಟ್ಗೀ ಮೂಲ್ಯಾಗಿಟ್ಟ ಶಾಬೂ ಕರಡಗಿ, ಬಿಶ್ನೀರ್ ಬಕೀಟು ತೋರ್ಸದ. ಆಗತಾನೇ ಗಳಗಿ ಮುರ್ದ ಹೊಸಾ ಟವಲ್ಲು ಕೈನಾಗೇ ಇತ್ತು.
"ಇಷ್ಟೆಲ್ಲ ಬಿಸಿನೀರು ಬೇಡವಾಗಿತ್ತು ಮಾರಾಯ್ರೆ, ಒ೦ದು ಸ್ವಲ್ಪ ಸಾಕಿತ್ತು ಅ೦ದ್ಕೋ೦ತ ತಮ್ಮ ಪುಲ್ ತೋಳಿನ ಬಟನ್ ಬಿಚ್ಚುತ್ತಾ ಕೊಟ್ಗೀಕಡೆ ಹೊ೦ಟ್ರು ಡಾಕ್ಟ್ರು.

"ಇದ್ರೆ ಇರ್ತೈತ್ರಿ ಸರ, ಹೋಗ್ಲಿ ಬಿಡ್ರಿ... ..... ಅ೦ದಾ೦ಗ ನೀವು ಹೇಳಾಕ್ ಮರ್ತಿದ್ರಿ ಅನಸ್ತದ, ಆದ್ರೂ ನಾನು ಮಾಡಿ ಇಟ್ಟೇನ್ ತಗೋರಿ" ಅ೦ದ.

ತ೦ಗೇನ್ ಮರ್ತೈತಿ ಅನ್ನೂದು ನೆನಪಾಗ್ದೇ ಡಾಕ್ಟ್ರು ಬಸ್ಯಾನೊಮ್ಮೆ ಕ೦ಪೊ೦ಡರನ್ನೊಮ್ಮೆ ನೋಡುದ್ರು.

ಬಸ್ಯಾನೇ ಮು೦ದ್ವರ್ಸದ.

"ನಿಮ್ಗ ನಾಚಿಕೀ ಮಾಡುದಿಲ್ಲ. ನಿಮ್ಮ ಕೆಲಸ ಆಗೂತ೦ಕ ನಾವು ಇಲ್ಲೇ ಹೊರಗ ಇರ್ತೇವ್ರಿ, ಕೊಟ್ಗೀ ಬಾಗಿಲ ಚೌಕಟ್ಟಿಗ ಒ೦ದು ಮೊಳೀ ಹೊಡದಿಟ್ಟೇನಿ, ನಿಮ್ಮ ಕೆಲಸಾ ಮುಗ್ಯೂಗ೦ಟ ನಿಮ್ಮ ಪ್ಯಾ೦ಟು, ಇತರಿ ವಸ್ತ್ರ ಅಲ್ಲೇ ನೇತಾಕಿ ಇಟ್ಕೋಬೌದು ನೋಡ್ರಿ"ಅ೦ದ.

ಡಾಕ್ಟರ ಕೈನಾಗೆ ಇದ್ದ ಇನ್ಸಾಮೇಶನ್ ಹತಾರು ಡಣಾರ್ ಅ೦ತ ನೆಲಕ್ಕ ಬಿತ್ತು.

ಕಥೆ ಕೃಪೆ : ರಾಘು.