Monday, December 13, 2010

ಜಾಹೀರಾ'ಥೂ'!

ಒಂದಷ್ಟು ಜಾಣ ಜಾಹೀರಾತುಗಳು..



"Sex sells; unfortunately we sell Jeans"
"Really Big.." (Durex Ad)
"Wide Angle Lens"
"Axe Effect"
"Skin Color Underwear"
"smoking can affect your sex life"
"The Nikon: Detcts up to 12 faces"
"for sxier knees"

ಸೋರ್ಸು: http://www.boredpanda.com/sexy-ads/;  ಥ್ಯಾಂಕ್ಸು: ಮಡಿವಾಳಯ್ಯ ಪಾಟೀಲ್

Monday, November 15, 2010

ಗೌತಮನ ಕ್ಷಮಾಯಾಚನೆ!

  • ಗೌತಮ್ ಹೆಗಡೆ
ಮೆಲ್ಲಗೆ ಮೊಳಕೆಯೊಡೆದ ಚಿಗುರು ಮೀಸೆ,
ನಿದಿರೆ ಬಾರದ ಇರುಳಿಗೆ
ನಟ್ಟ ನಡುರಾತ್ರಿ ಎಬ್ಬಿಸಿ
ಕಾಡುವ ಹಾಳು ಚೆಂದದ ಕನಸಿಗೆ
ಅರ್ಥವೇನೆಂದು ಪರಧ್ಯಾನದಿ
ಅಲ್ಲಿ, ಮನೆಯೆದುರ ದಾರಿ ತಿರುವಲ್ಲಿ
ಒಂದು ಹಳದಿ ಮಧ್ಯಾಹ್ನದಿ
ಕಣ್ಣ ನೆಟ್ಟು ಕುಳಿತಾಗ ಬಂದವಳು ನೀನು..

ತುಂತುರು ಹನಿ ಸಿಂಚನವಾಗಿ
ಏನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ,
ಅನರ್ಥದರ್ಥ ಹರೆಯಕ್ಕೆ ಅರ್ಥವಾಗಿ..

ಹಾಗೆ ಕಂಡವಳು ಹಾಗೇ ಹೋಗದೆ ಎನ್ನ ಕಂಡು-
ಒರೆನೋಟದಿ ಕಳ್ಳ ಮಂದಹಾಸವಾಗಿಬಿಟ್ಟೆ.
ನಾ ನಿಂತ ನಿಲುವಲ್ಲಿ ಎನ್ನ ಕಳೆದುಕೊಂಡು,
ನಿನ್ನ ಆ ಮಂದಹಾಸ, ಓರೆನೋಟ
ಎನಗೆ ಸಿಕ್ಕ ರಹದಾರಿಯೆಂದುಕೊಂಡು
ಗಡಿ ದಾಟಿಬಿಟ್ಟೆ.

ನಿದಿರೆ ಬಾರದ ರಾತ್ರಿಯೊಳು,
ಹಿಡಿದು ಕನಸಿನ ಜಾಡು,
ತಿರುಗಿ ಬಾರದಷ್ಟು ದೂರ ದೂರ
ಅಡಿಯಿಂದ ಮುಡಿವರೆಗೆ
ಕಡು ಕಷ್ಟ - ಸುಖದ ದಾರಿಯಲಿ
ದಾರಿ ಮುಗಿಯುವನಕ,
ಕನಸು ಕರಗಿ ನೀರಾಗಿ ನನಸಾಗುವನಕ
ಬೆದೆಗೆ ಬಂದ ಹರೆಯಕೆ ಈಡಾಗಿಬಿಟ್ಟೆ.

ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..
ಪರವಾನಿಗೆಯ ಹಂಗಿರದೆ
ಎನ್ನ ಮಾನಸದೊಳು ನಿನ್ನಲಿ ಅಲೆದುಬಿಟ್ಟೆ..
ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..

Tuesday, October 26, 2010

ಕೃಷ್ಣನ್ ಲವ್ ಸ್ಟೋರಿ

-ಪರಮೇಶ್ವರ ಗುರುಸ್ವಾಮಿ

ಹನ್ನೆರಡನೆಯ ಶತಮಾನದ ಸಂಸ್ಕೃತ ಕವಿ ಜಯದೇವ ತನ್ನ ಶೃಂಗಾರ ಕಾವ್ಯ, ‘ಗೀತ ಗೋವಿಂದ’ದಲ್ಲಿ, ಕೃಷ್ಣ ಮತ್ತು ಗೋಪಿಕೆಯರ ಅದರಲ್ಲೂ ರಾಧೆs ಮತ್ತು ಕೃಷ್ಣರ ಪ್ರಣಯವನ್ನು ರಸಿಕತೆಯಿಂದ ವರ್ಣಿಸಿದ್ದಾನೆ. ಆತ್ಮವು ಭಗವಂತನಿಗಾಗಿ ಕಾತರಿಸುವುದು ಈ ಪದ್ಯಗಳಲ್ಲಿ ಪ್ರಣಯದ ಅನ್ಯೋಕ್ತಿಯಾಗಿದೆ. ನಮ್ಮ ಸಂಗೀತ ಮತ್ತು ಚಿತ್ರಕಲೆಗಳ ಮೇಲೆ ಜಯದೇವನ ಈ ಕೃತಿ ಅಪಾರ ಪ್ರಭಾವ ಬೀರಿದೆ. ೧೮ನೆಯ ಶತಮಾನದಲ್ಲಿ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಉತ್ತುಂಗಕ್ಕೇರಿದ ಚಿಕಣಿ ಅಥವ ಮಿನಿಯೇಚರ್ ಚಿತ್ರಕಲೆ ‘ಪಹಾಡಿ (ಗುಡ್ಡಗಾಡು) ಚಿತ್ರಕಲೆ’ ಎಂದೇ ಜಗತ್ಪ್ರಸಿದ್ಧ.  ಸಸ್ಯಗಳು ಮತ್ತು ಖನಿಜಗಳಿಂದ ಮಾತ್ರ ಸಂಗ್ರಹಿಸಲಾದ ನೈಸರ್ಗಿಕ ಬಣ್ಣಗಳನ್ನು ಬಳಸಿ ರಚಿಸಲಾಗಿರುವ ಪಹಾಡಿ ಶೈಲಿಯ ಮಿನಿಯೇಚರ್ ಚಿತ್ರಗಳು ತಮ್ಮ ಭಾವಗೀತಾತ್ಮಕ, ಕುಸುರಿಯ ಸೂಕ್ಷ್ಮತೆಯಿಂದ, ಚಿತ್ರ ರಚನಾ ಕೌಶಲದಿಂದ, ನಾಜೂಕು ಗುಣಗಳಿಂದ,  ನೈಸರ್ಗಿಕ ಸೌಂದರ್ಯ ಮತ್ತು ಹೆಣ್ಣನ್ನು ಅವಳೆಲ್ಲ ಸೌಂದರ್ಯದೊಂದಿಗೆ ಅಂದಿನ ಅತ್ಯುತ್ತಮ ಮಾದರಿಯಲ್ಲಿ (ಹಾವ ಭಾವ ವಿಲಾಸ ವಿಭ್ರಮಂಗಳನೆಲ್ಲ ಸೇರಿಸಿ) ಚಿತ್ರಿಸಿರುವುದು ಮನ ಸೆಳೆಯುತ್ತದೆ. ಪಹಾಡಿ ಕಲಾವಿದರು ‘ಭಾಗವತ ಪುರಾಣ’, ‘ಗೀತ ಗೋವಿಂದ’, ‘ನಳ ದಮಯಂತಿ’, ‘ರಾಗಮಾಲ’, ‘ಕೃಷ್ಣಲೀಲಾ’, ‘ಸತ್ಸಾಯಿ’ (ಸಪ್ತ ಶತ ಪದ್ಯಗಳು) ಮುಂತಾದ ಸಾಹಿತ್ಯವನ್ನವಲಂಬಿಸಿ ಮನೋಹರವಾದ ಚಿತ್ರಗಳನ್ನು ರಚಿಸಿದ್ದಾರೆ. ಈ ಚಿತ್ರಗಳ ಕೇಂದ್ರ ಶೃಂಗಾರವಾದರೂ ತುಡಿತ ಆಧ್ಯಾತ್ಮಿಕವಾಗಿದೆ (ಹಿಂದು ಪುರಾಣ ಅವಲಂಬಿತ).. ಭಾರತೀಯ ಕಲೆಯಲ್ಲಿ ರಸಾನುಭವವು ಒಂದು ನಿರ್ಧಿಷ್ಟವಾದ ಅನುಕೂಲಕರ ದೃಷ್ಟಿಕೋನವನ್ನು ಮೀರಿ ವಾಸ್ತವದ ಅಸ್ತಿತ್ವವನ್ನು ಸಂವಹನಿಸುತ್ತದೆ. ಅದಕ್ಕಾಗಿ ಕಲಾವಿದರು ಹಲವಾರು ಕಣ್ನೆಲೆಗಳನ್ನು ತಮ್ಮ ಕೃತಿಗಳಲ್ಲಿ ದುಡಿಸಿಕೊಂಡಿದ್ದಾರೆ. ಈ ಮಾತನ್ನು ಪಹಾಡಿ ಮಿನಿಯೇಚರ್‌ಗಳಲ್ಲೂ ಕಾಣ ಬಹುದು.

ಗೀತ ಗೋವಿಂದದ ೧೨ನೆಯ ಸರ್ಗದಲ್ಲಿ ಪುಷ್ಪಭರಿತ ಮರದಡಿಯಲ್ಲಿ ಹಸಿರು ಹಾಸಿಗೆಯ ಮೇಲೆ ಕೃಷ್ಣ ರಾಧೇಯರ ಉತ್ಕಟ ಪ್ರಣಯ ಸಮಾಗಮವನ್ನು ಜಯದೇವ ವರ್ಣಿಸಿದ್ದಾನೆ.  ಆ ವರ್ಣನೆಯನ್ನಿಲ್ಲಿ ಪಹಾಡಿ ಕಲಾವಿದ ಅಭಿವ್ಯಕ್ತಿಸಿದ್ದಾನೆ.


‘ಗೀತ ಗೋವಿಂದ’ವನ್ನಾಧರಿಸಿದ ಚಿತ್ರಗಳು ಅವುಗಳಲ್ಲಿ ವ್ಯಕ್ತವಾಗುವ ಸೊಬಗು ಮತ್ತು ಪರಿಪೂರ್ಣತೆಗಳಿಂದಾಗಿ ಮಹತ್ವದ್ದಾಗಿವೆ. ಆನಂದ ಕೆ. ಕೂಮಾರಸ್ವಾಮಿ ಹೇಳುವಂತೆ ಗೀತ ಗೋವಿಂದ ಚಿತ್ರಗಳ ಮಾಯಾ ಲೋಕ, “ಅವಾಸ್ತವ ಅಥವಾ  ಭ್ರಾಮಕವಲ್ಲ, ಕಲ್ಪನೆ ಮತ್ತು ಅನಂತತೆಯ ಲೋಕ. ಪ್ರೇಮ ದಿವ್ಯತೆಯ ಕಣ್ಣುಗಳಲ್ಲಿ ಕಾಣುವುದನ್ನು ನಿರಾಕರಿಸದ ಎಲ್ಲರಿಗೂ (ಈ ಲೋಕ) ಗೋಚರವಾಗುವಂತಹದ್ದು..” 

[ಇದನ್ನು ಮೋಟುಗೋಡೆಗಾಗಿ ಕಳುಹಿಸಿಕೊಟ್ಟ ಶ್ರೀ ಪರಮೇಶ್ವರ ಗುರುಸ್ವಾಮಿಯವರಿಗೆ ನಮ್ಮ ಧನ್ಯವಾದಗಳು.]

Wednesday, October 20, 2010

ರಾಮ್ ತೇರಿ ಗಂಗಾ ಬರಿಮೈಲಿ

೧೯೮೫ ರಲ್ಲಿ ರಾಜ್ ಕಪೂರ್ ನಿರ್ಮಾಣದ ಚಿತ್ರ ರಾಮ್ ತೇರಿ ಗಂಗಾ ಮೈಲಿ. ರಾಜೀವ್ ಕಪೂರ್ ಮತ್ತು ಮಂದಾಕಿನಿ ಅಭಿನಯದ ಈ ಚಿತ್ರ ೮೫ರ ಸೂಪರ್ ಹಿಟ್. ಈ ಯಶಸ್ವಿ ಚಿತ್ರ ಹಲವಾರು ವಿವಾದಗಳಿಗೂ ಕಾರಣವಾಯಿತು. ಇದು ಚಿತ್ರೀಕರಣವಾದಾಗ ಮಂದಾಕಿನಿ ಇನ್ನು ೧೬ ವರ್ಷದ ಕುವರಿ, ಹಾಗಾಗಿ ಚಿತ್ರದ ಈ ಹಾಡು ಚೈಲ್ಡ್ ಪೋರ್ನೋಗ್ರಫಿ ಆನ್ನುವದು ದೊಡ್ಡ ವಾದವಾಗಿತ್ತು. ಇದನ್ನೆಲ್ಲಾ ಕಳೆದು ಈ ಚಿತ್ರ ಬಿಡುಗಡೆಯಾಗಿ ೨೫ ಮಳೆಗಾಲಗಳೇ ಕಳೆದು ಹೋದವು, ಆದರೆ ಈ ಹಾಡು ಮಾತ್ರ ಇನ್ನೂ ರಸಿಕರ ಮನ ತಣಿಸುತ್ತಲೇ ಈದೆ.


Friday, October 8, 2010

ಮೂರು ಚಿತ್ರಗಳು

೧. ಪಪ್ಪಾಯಿ ಹಣ್ಣು ಬೀಳದಂತೆ ರಕ್ಷಿಸುವುದು ಹೇಗೆ?



೨. ಕೂಲೋ? ಹಾಟೋ??

Photograph: Mayhem Chaos



೩. ಪೆರುಚಿತ್ರ:


ಪೆರು ದೇಶದ ಲಾರ್ಕೋ ಮ್ಯೂಸಿಯಂನಲ್ಲಿನ ಒಂದು ಕಲಾಕೃತಿ.



ಮೊದಲನೇ ಚಿತ್ರವನ್ನು ನಮಗೆ ಕಳುಹಿಸಿಕೊಟ್ಟವರು ರೋಹಿತ್ ಕೆ.ಜಿ. ಎರಡನೇ ಚಿತ್ರದ ಲಿಂಕ್ ಕೊಟ್ಟವರು ಶ್ರೀನಿವಾಸ್ ಗೌಡರು.  ಮೂರನೇ ಚಿತ್ರದ ಬಗ್ಗೆ ಗಮನ ಸೆಳೆದವರು ಜಿ.ಎನ್. ಮೋಹನ್.  ಮೂವರಿಗೂ ಥ್ಯಾಂಕ್ಸ್. :-)

Copyrights (c): respective photographers.

Friday, September 17, 2010

ಮೊಗ್ಗಿನ ಮಧು

ಮೊಲೆ ಮೊಗ್ಗ ಮುಗ್ಧತೆಯ
ಆಹ್ವಾನ ದೊರೆತಾಯ್ತು
ತಡವೇಕೆ ಇನ್ನ? ಎನ್ನ ಮನದನ್ನ..

ಸವಿಯ ಕುಂಭವ ನೀನು ಮನಸಾರೆ ಮುತ್ತು,
ಪಡೆ ಮನದಣಿಯೆ ಮತ್ತು
ಬಾಯ್ತುಂಬ ಸುಖದ ಕೈತುತ್ತು

ತುಂಬಿಹುದು ಎದೆ ತುಂಬ
ಪ್ರೀತಿ ಅಮೃತ ಧಾರೆ
ಕ್ಷಣ ಕ್ಷಣಕೂ ತಲ್ಲಣ,
ಮಧುರ ಪೇಮದ ಸಿಂಚನ-
ಹನಿ ಹನಿಯಾಗಿ ನೀ ಈ ಪ್ರೀತಿ ರಸ ಹೀರೆ.

ನನ್ನಯ ಎದೆಯರಸ,
ಮಧುರವೀ ರಸನಿಮಿಷ
ಈ ಮೊಗ್ಗಿನಾ ಮಧುವ
ಮೆಲ್ಲ ಮೆಲ್ಲನೆ ಮೆಲ್ಲು
ತನುವ ಮೊಗ್ಗಿದು, ಮನದ ಹೂವರಳಿಸುವುದು
ನನ್ನ ತನು-ಮನಗಳೆರಡನ್ನೂ
ಒಟ್ಟೊಟ್ಟಿಗೇ ಗೆಲ್ಲು

ತಣಿವಾಗಿ ದಣಿ ದಣಿದು
ಮುದವಾಗಿ ಮಣಿ ಮಣಿದು
ಸಾಮೀಪ್ಯದಾ ಸೋನೆ ಸುರಿದು ತೇಲೋಣ
ಸಂತೃಪ್ತಿಯಲಿ.. ಮತ್ತೊಂದು ಜಗದಲ್ಲಿ..
ನಮ್ಮ ತೋಳ್ತೆಕ್ಕೆಯಲಿ..


* *
ಇದು ಅಧಿಕೃತವಾಗಿ ಮೋಟುಗೋಡೆಗೆ ಬಂದ ಮೊದಲ ಮಹಿಳಾ ಎಂಟ್ರಿ! ಇದನ್ನು ಬರೆದು ಕಳುಹಿಸಿರುವುದು ಸಹಬ್ಲಾಗಿಣಿಯೊಬ್ಬರು. ತಮ್ಮ ಹೆಸರನ್ನು ಅನಾಮಿಕವಾಗಿಡುವಂತೆ ಸೂಚಿಸಿದ ಅವರಿಗೆ ಥ್ಯಾಂಕ್ಸ್ ಹೇಳುತ್ತಾ, ಈ ಪ್ರಕ್ರಿಯೆ ಮುಂದುವರೆಯಲಿ ಅಂತ ಹಾರೈಸುತ್ತೇವೆ.

Saturday, September 4, 2010

ಮೂರು ಪ್ರಣಯಗೀತೆಗಳು

1) ಮಧುಮಾಸ ಚಂದ್ರಮ..
ಚಿತ್ರ: ವಿಜಯವಾಣಿ
ಹಾಡಿದವರು: ಎಸ್. ಜಾನಕಿ, ವಾಣಿ ಜಯರಾಂ




2) ಈ ಸಮಯ ಆನಂದಮಯ..
ಚಿತ್ರ: ಬಭ್ರುವಾಹನ
ಹಾಡಿದವರು: ಎಸ್. ಜಾನಕಿ, ಡಾ| ರಾಜಕುಮಾರ್



3) ಬೆಸುಗೆ ಬೆಸುಗೆ..
ಚಿತ್ರ: ಬೆಸುಗೆ
ಹಾಡಿದವರು: ಎಸ್.ಪಿ. ಬಾಲಸುಬ್ರಹ್ಮಣ್ಯ, ವಾಣಿ ಜಯರಾಂ

Saturday, August 21, 2010

ಏಡ್ ಲಕ್ಸ ಆಯ್ತು ಕಣಣ್ಣೋ..!

ಮೋಟುಗೋಡೆಗೆ ಬಿದ್ದ ಹಿಟ್ಟುಗಳ ಸಂಖ್ಯೆ ಈಗ ಎರಡು ಲಕ್ಷ ದಾಟಿದೆ! ನಮಗೆ ಬರಹಗಳನ್ನು ಕೊಟ್ಟ, ಸಾಮಗ್ರಿಗಳನ್ನು ಒದಗಿಸಿದ, ಲಿಂಕುಗಳನ್ನು ಮೇಯ್ಲ್ ಮಾಡಿದ, ನಮ್ಮ ಬಗ್ಗೆ ಬರೆದ, ಪ್ರತಿಕ್ರಿಯೆಗಳಿಂದ ಖುಶಿ ಕೊಟ್ಟ, ನಮ್ಮನ್ನು ಪ್ರೋತ್ಸಾಹಿಸಿದ, ಓದಿ ಆನಂದಿಸಿದ ...ನಿಮಗೆಲ್ಲರಿಗೂ ಸಿಕ್ಕಾಪಟ್ಟೆ ಥ್ಯಾಂಕ್ಸು! :-)



Wednesday, August 11, 2010

ಪೋಲಿ ಪ್ರಕೃತಿ -೪

ಪೋಲಿ ಪ್ರಕೃತಿ ಸರಣಿಯ ನಾಲ್ಕನೇ ಕಂತು.  ಸೃಷ್ಟಿಕರ್ತನಿಗೆ ಶರಣು!






Wednesday, July 28, 2010

ಮಳೆಗಾಲದೀ ಚಳಿಗೆ..

ಹೊರಗೆ ಧಾರೆ ಧಾರೆ ಮಳೆ.. ಕಪ್ಪಿಟ್ಟ ಮುಗಿಲು.. ತೊಯ್ದು ಬಂದ ಹುಡುಗಿಯ ನಡುಗುವ ಮೈ.. ಇಂಥ ಮಳೆಗಾಲದಿಂಥ ಚಿತ್ರ ಕವನವಾದರೆ? ರಸಋಷಿಗೆ ನಮೋನಮಃ!


ಕೀಲಿಕೈ ಎಲ್ಲಿಹುದು?
-ಕುವೆಂಪು

ಕೀಲಿಕೈ ಎಲ್ಲಿಹುದು ಬಾಗಿಲನು ತೆರೆಯೆ?
ಓ ದ್ವಾರಪಾಲಕನೆ, ಎಲ್ಲಿ ಹೋಗಿರುವೆ?

ದೂರದಿಂ ಬಂದಿಹೆನು; ಬಲು ಬಳಲಿ ನೊಂದಿಹೆನು;
ಕತ್ತಲಲಿ ಸೋತಿಹೆನು ದಾರಿ ನಡೆದು!
ಮುಳ್ಳುಕಲ್ಲನು ತುಳಿದು, ಹಳ್ಳಕೊಳ್ಳವ ಕಳೆದು,
ತುಂಬಿ ಹರಿಯುವ ಹೊಳೆಯ ಹಾದುಬಂದೆ!

ಮುಂಗಾರುಮಳೆಗರೆದು ಚಳಿಯ ತಣ್ಪೇರುತಿದೆ;
ಮೈಗಂಟಿಕೊಂಡಿರುವುದುಟ್ಟ ಸೀರೆ!
ಕೇಶಪಾಶವು ತೊಯ್ದು ಮುಡಿಗೆದರಿಕೊಂಡಿಹುದು;
ಕಂಪಿಪುದು ಕೋಮಲೆಯ ಕುಸುಮ ಕಾಯ!

ಬಿರುಗಾಳಿ ಬೀಸುತಿದೆ; ಕುಡಿಮಿಂಚು ತಳಿಸುತಿದೆ;
ಸಿಡಿಲೆರಗಿ ಬಾನೆಲ್ಲ ಕೆರಳಿರುವುದು!
ಹೊರಗೆಲ್ಲಿಯೂ ಮಲಗೆ ಬೆಚ್ಚನೆಯ ತಾವಿಲ್ಲ;
ತಿಮಿರ ಭಯ ಹೃದಯದೊಳು ಹರಿಯುತಿಹುದು!

ಮಲಗಿರುವನೆನ್ನಿನಿಯನೊಳಗೆ ಬಿಸುಸಜ್ಜೆಯಲಿ;
ಕರೆದರೂ ಕೇಳಿಸದು. ಗುಡುಗುತಿಹುದು!
ಚಳಿಯಿಂದ ಪಾರಾಗುವೆನು ರಮಣನೆಡೆ ಸೇರಿ:
ತೊಯ್ದುಡುಪಿಗಿಂತ ನಗ್ನತೆಯೆ ಲೇಸು!

ಕತ್ತಲಲಿ ಬಂದಿರುವೆ; ತಾಯ್ಮನೆಯನಗಲಿರುವೆ;
ತೊಯ್ದು ಮಳೆಯಲಿ ಕದವ ತಟ್ಟುತಿರುವೆ!
ಬಾಗಿಲನು ಕಾಯದೆಯೆ ನೀನೆಲ್ಲಿ ಹೋಗಿರುವೆ?

ಓ ದ್ವಾರಪಾಲಕನೆ, ಬೇಗ ಬಾರೈ.

Friday, July 9, 2010

70 ways to keep a woman happy

There are 70 ways to keep a woman happy.

Number one: take her shopping.

The rest is 69!

Monday, July 5, 2010

ರಿಯಲ್ ?????


ತಿನ್ನಬಹುದಾ? ತಿನ್ತಾರಾ ? ಹೇಗೆ? ಯಾರು? ರುಚಿ? ನಿಜವಾಗ್ಲೂ?
ಗೊತ್ತಿಲ್ಲಾ ....... :(

ಮತ್ತೆ ಏನು ಗೊತ್ತು?
ಇದನ್ನ ನಮಗೆ ಕಳ್ಸಿದ್ದು , ರವಿ. S D :)

Friday, June 11, 2010

ಮಹಾboob ಮತ್ತು...

ಒಂದಷ್ಟು ಚಿತ್ರಗಳನ್ನು ಚಿತ್ರವಿಚಿತ್ರಕ್ಕೆಂದು ಸಂಪಾದಿಸಿಟ್ಟುಕೊಂಡಿದ್ದರು ಲಕ್ಷ್ಮೀ ಅವರು. ಆ ಚಿತ್ರಗಳನ್ನು ನೋಡಿ, ಅವು ಮೋಟುಗೋಡೆಗೆ ಹೆಚ್ಚು ಸೂಕ್ತವೆಂದೆನಿಸಿ, ಇಲ್ಲಿ ’ಪ್ರದರ್ಶನ’ ಮಾಡಲಾಗಿದೆ! ಈ ಚಿತ್ರಗಳನ್ನು ಲಕ್ಷ್ಮೀ ಅವರಿಗೆ ಕಳುಹಿಸಿಕೊಟ್ಟವರಿಗೆ ಧನ್ಯವಾದಗಳು.

ಎಂಜಾಯ್!

೧. ಪ್ರಚಾರವನ್ನು ಹೀಗೂ ಮಾಡಬಹುದೇ?



೨. ಯಾರು ಯಾರಿಗೆ ಹೇಳಿದರು? ಸಂದರ್ಭ-ಸಹಿತ ವಿವರಿಸಿ. (೪ ಅಂಕಗಳು)



೩. ಸರ್ಕಾರದ್ದು ಅಂದ ಮೇಲೆ ಯೋಚನೆ ಮಾಡಲೇ ಬೇಕು!



೪. ಹಾಸಿಗೆಯಲ್ಲಿ ಇನ್ನೂ ಏನೇನು ಕಾದಿದೆಯೋ ಏನೊ!



೫. ತ್ರಿಕಾಲ ಸತ್ಯ!



೬. ಇವನು ಮಹಾboobನ ಶಿಷ್ಯ ಇರಬೇಕು.



೭. ಲೀಗಲೈಸ್ ಮಾಡಿದ್ದಾರೆ ಅಂತ ಹೀಗೆ ಜಾಹೀರಾತು ಕೊಡೋದೇ?



೮. ಟಾಪ್ಸು?



೯. ಬಿಸಿ ಬೇರೆ ಕೇಡು!



೧೦. ಇನ್ನೂ ಏನೇನು ಸಪ್ಲೈ ಮಾಡ್ತಾರೋ ಏನೊ.



೧೧. "ಇವತ್ತು ಊಟಕ್ಕೆ ಎಲ್ಲಿಗೆ ಹೋಗಿದ್ದೆ?" ಅಂತ ಯಾರಾದರೂ ಕೇಳಿದರೆ ಹೇಗೆ ಹೇಳೋದು?



-ಅ
11.06.2010
11.15AM

Thursday, May 6, 2010

ಆಹ್ವಾನ

 -ಗೌತಮ್ ಹೆಗಡೆ
 
ನಯ ನಾಜೂಕು ಇರದ 
ಕಾಡುಮೃಗ ನೀನು
ಒಂದು ಸಣ್ಣನೆ ಅಲರಿನಲೆಗೆ 
ತತ್ತರಿಸಿ ಕಂಗೆಡುವ 
ತೀರ ನಾಜೂಕು ಲತೆ ನಾನು

ನಿನ್ನ ಬಿರುಸಿಗೆ 
ಕಾಮನೆಯ ಹೊನಲು 
ಧುಮ್ಮಿಕ್ಕುವ ಪರಿಗೆ 
ನಿಸ್ಸಹಾಯಕಳು ನಾನು
ನಿರುತ್ತರಿ ನಾನು

ಸಾಧ್ಯವಾದರೆ 
ಒಲುಮೆಯೆಂಬ 
ತುಂತುರು ತುಂತುರು ಮಳೆಯಾಗು
ಸುರಿಸುರಿದು ಗುಂಗಾಗು
ಕಣ್ಣಿನಲೇ ನಾಲ್ಕು ಮಾತಾಗು
ತೀರ  ಸನಿಹವೇ ಕುಳಿತು 
ಬಿಸಿಯುಸಿರನಲಿ ಹಿತವಾಗಿ ತಾಕು
ತನುವ ತಾಕುವ ಮುನ್ನ 
ಮನವ ತಾಕಿ ಹದಮಾಡು
ದಕ್ಕುವೆ ನಾನಾಗ ನಿನಗೆ 
ನಿಜವಾಗಿ
ಸಿಕ್ಕುವೆ ನಾನಾಗ ನಿನಗೆ 
ಇಡಿಯಾಗಿ
ಬಾ ಆಗ 
ಬಂದೆನ್ನ ಆಳಕಿಳಿದು ಧ್ಯಾನಸ್ಥನಾಗು 
ನೀನೇ ನಾನಾಗಿ 
ನಾನೇ ನೀನಾಗಿ...

Thursday, April 29, 2010

ಸ್ತನ ಕಂಪನ!!!

ಜಗತ್ತಿನ ಜನಕ್ಕೆ ಹೆಂಗೆಗೆಲ್ಲ ಆಗಿ ಬಿಡತ್ತಪಾ ಅಂದ್ರೆ, ಅಂದ್ರಿಂದಾಗಿ ಮತ್ತೆ ಇನ್ ಹೆಂಗೆಗೋ ಆಗೋಗತ್ತೆ!.

ಮೊನ್ ಮೊನ್ನೆ, ಇರಾನಿನ ಧಾರ್ಮಿಕ ಮುಖಂಡನೊಬ್ಬನಿಗೆ, ಬೆಳಗ್ಗೆ ಏಳುತ್ತಲೇ ಹೊಸದೊಂದು ಜ್ಞಾನೋದಯವಾಗಿ ಬಿಟ್ಟಿತು. ಜಗತ್ತಿನಲ್ಲಾಗುವ ಭೂಕಂಪಗಳಿಗೆ, ಎದೆಗಾರಿಕೆ ತೋರಿಸಿಕೊಂಡು ಓಡಾಡುವ ಹೆಂಗಳೆಯರೇ ಕಾರಣರಂತೆ ಎಂಬೊಂದು ಆಘಾತಕಾರೀ ಹೇಳಿಕೆ ಕೊಟ್ಟುಬಿಟ್ಟ. ಇಂತಹ "ಅಧಾರ್ಮಿಕ" ನಡವಳಿಕೆಯಿಂದಾಗಿಯೇ ಭೂಮಿಯಲ್ಲಿ ಭೂಕಂಪನಗಳು ಸಂಭವಿಸುತ್ತಿದೆ ಅನ್ನೋದು ಈ ಪುಣ್ಯಾತ್ಮನ ಕಟ್ಟಾ ನಂಬಿಕೆ!. ಧರ್ಮಕ್ಕೆ ಕೂಡಲೇ ಶರಣಾಗಿ, ಸರಿಯಾದ ವಸ್ತ್ರ ಸಂಹಿತೆ ಪಾಲಿಸದಿದ್ದರೆ, ಈ ಅನಾಹುತಗಳನ್ನ ತಪ್ಪಿಸೋಕೆ ಸಾಧ್ಯವೇ ಇಲ್ಲವಂತೆ.

ಆತನೇನೋ ಈ ಮಾತುಗಳನ್ನಾಡಿ ಸುಮ್ಮನಾಗಿಬಿಟ್ಟ. ಆದರೆ ಈತನ ಹೇಳಿಕೆಗಳಿಂದ ರೊಚ್ಚಿಗೆದ್ದ ಹೆಂಗಳೆಯರು, ಆತನ ವಿರುದ್ದ ಹೋರಾಟಕ್ಕಿಳಿದರು! ವಿಜ್ಞಾನಕ್ಕೇ ಸವಾಲೆಸೆವ ಮಾತಾಡಿರೋ ಧಾರ್ಮಿಕ ಮುಖಂಡನ ಅಜ್ಞಾನಕ್ಕೆ ಧಿಕ್ಕಾರ ಅಂದ ಇವರುಗಳು, ಸ್ತನ ಕಂಪನ- boob equake- ಆಂದೋಲನ ಮಾಡಿಬಿಟ್ಟರು! ಯಥಾಸಾಧ್ಯ ಎದೆಗಾರಿಕೆ ಪ್ರದರ್ಶಿಸೋ ಬಟ್ಟೆ ತೊಟ್ಟುಕೊಂಡು ಓಡಾಡಿ ತೋರಿಸುತ್ತೇವೆ, ಭೂಕಂಪ ಆಗ್ಲಿ ನೋಡೋಣ ಅಂತ ಸವಾಲು ಹಾಕಿದ್ರು. ಜಾಥಾ ಗೀಥಾ ಎಲ್ಲ ಮಾಡಿ, ಯೂ ಟ್ಯೂಬಿಗೆ ವೀಡಿಯೋ ಹಾಕಿ ಜೈ ಅಂದ್ರು.

ಮೊನ್ನೆ ಇಪ್ಪತ್ತಾರಂದು ಮಾಡಿದ ವಿಶ್ವವ್ಯಾಪೀ ಸ್ತನಕಂಪನದ ಫಲಿತಾಂಶ ಹೊರಬಿದ್ದಿದ್ದು, ಎದೆ ಪ್ರದರ್ಶನದಿಂದ ಎಲ್ಲೂ ಭೂಕಂಪ ಆಗಿಲ್ಲ ಅಂತ ಸಂಘಟಕಿಯೊಬ್ಬಳು ಆಧಾರ ಸಮೇತ ಹೇಳಿಕೊಂಡಿದ್ದಾಳೆ. ಅಲ್ಲಿ ಯಾರೋ ಚಂದದ ಕಮೆಂಟೂ ಬರೆದಿದ್ದಾರೆ, I do believe breasts doesn't cause earthquakes -- in fact, I think it can feed and nourished people (e.g: haiti) ಅಂತ!

ಇರ್ಲಿ, ಆವತ್ತು ಭೂಕಂಪ ಆಗಿರ್ಲಿಲ್ಲ ನಿಜ, ಆದ್ರೆ ಹುಡುಗೀರ ಸಡನ್ನಾದ ಎದೆಗಾರಿಕೆಯಿಂದಾಗಿ ಎಷ್ಟು ಜನರೊಳಗೆ ಕಂಪನವಾಗಿದೆ ಅನ್ನುವ ಲೆಕ್ಕ ಸಿಗುವುದು ಕಷ್ಟ.

Thursday, April 15, 2010

ಮೊದಲ ಅನುಭವ

ಇಬ್ಬರು ಮಹಿಳಾಮಣಿಗಳು ಮಾತಾಡ್ತಾ ಇದ್ರು.....


"ಲೇ, ನಿನ್ನೆದು ನ೦ದು ಮೊದಲನೇಬಾರಿ ಆಗಿತ್ತು ಕಣೇ... "
ಹೌದಾ? ನಿಜ್ವಾಗ್ಲೂ? ಏನಾಯ್ತು ಹೇಳೇ....

"ಮೊದಮೊದಲು ನಿಧಾನವಾಗಿ ಒಳಕ್ಕೆ ತಗೋಳೋದು ಹೊರಕ್ಕೆ ಬಿಡೋದು ಮಾಡಿದೆ"
ಆಮೇಲೆ?

"ಹಾಗೇ ಸುಮಾರು ಹತ್ತು ನಿಮಿಷ ಮಾಡಿದೆ. ಅವರೇ ಹೇಳಿದ್ರು, ಮೊದಲು ನಿಧಾನವಾಗೇ ಮಾಡಬೇಕ೦ತೆ."
ಹೂ೦...

"ತು೦ಬಾ ಕಷ್ಟ ಆಗ್ತಿತ್ತು ಕ೦ಟ್ರೋಲ್ ಮಾಡ್ಕೊಳ್ಳೋಕೆ. ಹಾಗೇ ನಿಧಾನದಿ೦ದ ಜೋರಾಗಿ ಮಾಡೋಕೆ ಸುರುವಿಟ್ಕೊ೦ಡಮೇಲೆ ರೂಮಿನ ತು೦ಬೆಲ್ಲಾ ಉಸಿರಾಟದ್ದೇ ಶಬ್ಧ."

ಒಹ್ ಗಾಡ್, ಆಮೇಲೆ ? ಆಮೇಲೆ?

"ಜೋರಾಗಿ ಮಾಡೋಕೆ ಶುರುವಾದಮೇಲೆ ಕಿಬ್ಬೊಟ್ಟೆ ಹತ್ರಾ ನೋವಾಗ್ತಿತ್ತುಕಣೇ..... ಸ್ವಲ್ಪ ಜೋರಾಗೇ ನೋಯ್ತಿತ್ತು. "
ಹೌದಾ?

" ಆಮೇಲೆ ಸ್ವಾಮೀಜಿ ಹೇಳಿದ್ರು, ಹೀಗೇ ಪ್ರಾಣಾಯಾಮದಲ್ಲಿ ಉಸಿರಾಟವನ್ನು ನಿಯ೦ತ್ರಣ ಮಾಡು, ಮನಸ್ಸಿಗೆ ತು೦ಬಾ ಆನ೦ದ ಸಿಗುತ್ತದೆ"

ಬೋಲೋ................ ಸ್ವಾಮೀ ನಿತ್ಯ"ನ೦ಗಾ" ಮಹಾರಾಜ್ ಕೀ.............. ಜೈ......

Monday, March 29, 2010

ಪೋಲಿ ಪ್ರಕೃತಿ -೩

ಇದು ಪೋಲಿ ಪ್ರಕೃತಿ ಸರಣಿಯ ಮೂರನೇ ಕಂತು. ನೋಡಿ, ಆನಂದಿಸಿ. :-)












Saturday, March 20, 2010

ಜಯಂತ್ - ಪ್ರತಿಭಾ

ಇದನ್ನ ಬಹಳ ಹಿಂದೆಯೇ, ಅಂದರೆ ನಮ್ಮ ತುಂಟಿ ನೀಲು-೨ ಪೋಸ್ಟಿಗೆ ಬಂದಿದ್ದ ಪ್ರತಿಕ್ರಿಯೆ-ಮರುಪ್ರತಿಕ್ರಿಯೆಗಳನ್ನು ನೋಡಿದಾಗಲೇ ಬ್ಲಾಗಿಗೆ ಹಾಕಬೇಕು ಎಂದುಕೊಂಡಿದ್ದೆ; ಅದು ಹೇಗೋ ಬಿಟ್ಟುಹೋಗಿತ್ತು. ಇದೀಗ ಪೋಸ್ಟಿಸುತ್ತಿದ್ದೇನೆ.

ಕನ್ನಡದ ಪ್ರಜ್ಞಾವಂತ ಕವಯತ್ರಿ ಪ್ರತಿಭಾ ನಂದಕುಮಾರ್, ಜಯಂತ ಕಾಯ್ಕಿಣಿಯವರ ಸಾಲೊಂದಕ್ಕೆ ಪ್ರತಿಕ್ರಿಯಿಸುತ್ತ ಬರೆದ ಕವನ ಇದು. ಮೋಟುಗೋಡೆ ಇಂತಹ ಚರ್ಚೆ / ಒಳನೋಟಗಳಿಗೂ ವೇದಿಕೆಯಾಗಲಿ ಎಂಬುದು ಆಶಯ.

* *

"ಎಷ್ಟೊಂದು ಹುಡುಗಿಯರ ಮಗ್ಗಲುಗಳಲ್ಲಿ ತಾಯ್ತನದ ಪುಲಕದ ಕುಡಿ ಮೂಡುತ್ತಿದೆ.."
-ಜಯಂತ ಕಾಯ್ಕಿಣಿ.


ಪುಳಕ
-ಪ್ರತಿಭಾ ನಂದಕುಮಾರ್

ಮಗ್ಗಲುಗಳ ನಡುವೆ ಮೂರು ಲೋಕದ ಗುಟ್ಟು
ಬಿಟ್ಟು ಕೊಡದಂತೆ ಆತುಕೊಳ್ಳುವ ಜೋತು
ಬೀಳುವ ತೆವಲುಗಳು ಮೂಡಿಸಿ ಸಿಟ್ಟು
ಭಗ್ನ ಸ್ವಪ್ನಗಳ ದ್ವಾರಗಳಲ್ಲಿ ಹಸೆಯಿರದೆ
ಹಾಡಿರದೆ ಖಾಲಿ ನಡೆಯಲ್ಲಿ ಗೂಟ ನೆಟ್ಟು
ಸುಳ್ಳು ಕಥೆಗೆ ದುಡ್ಡಿನಾಸೆಗೆ ನಟಿಸಿದ ಯಾವುದೋ
ನಟಿಯ ಅಮಲಿನಲ್ಲಿ ಶೃಂಗಕ್ಕೇರಿದವನ ಪಕ್ಕದಲ್ಲಿ ಕಿಬ್ಬೊಟ್ಟೆ ನೇವರಿಸುತ್ತ ಮಗ್ಗುಲಾಗಿ
ಬಿಗಿಯಾಗಿ ಕಣ್ಣು ಮುಚ್ಚಿದರೆ ಕನಸು
ಕಾಣಬಹುದೆನ್ನುವ ಭ್ರಮೆಯಲ್ಲಿ ಎಷ್ಟೊಂದು
ಹುಡುಗಿಯರು ಪುಳಕಗಳಿಗೆ ಹಾತೊರೆಯುತ್ತ...

ಕುಡಿ ಎಂದರೆ ಕುಡಿದು ಬೆಳೆದೇಬಿಟ್ಟ
ಹಸಿರು ಚಿಗುರಿನ ತುದಿಯಲ್ಲಿ ಹೂವರಳಿ
ಜೀವವೇ ನೀರಾಗಿ ಹರಿದು ಕಟ್ಟೆಯೊದೆದು
ಕುಸಿದು ತೆವಳಿ ನೋವು ತಿನ್ನುತ್ತ
ಊಟ ಮಾಡುವಾಗಲೇ ಎದ್ದಳುವ ಕೂಸಿಗೆ
ಒಂದು ಕೈಯಲ್ಲಿ ಎದೆ ಕೊಟ್ಟು
ಅವಸರದಲ್ಲಿ ನುಂಗುವ ಬಿಸಿ ಅನ್ನ ಸಾರು
ನಾಲಿಗೆ ಸುಟ್ಟು ಕಣ್ಣಲ್ಲಿ ನೀರು
ಅಲ್ಲೇ ಕೈತೊಳೆದು ಗೋಡೆಗೊರಗುವ
ಎಷ್ಟೊಂದು ಹುಡುಗಿಯರು ಇದೇ ಪುಳಕೆವೆನ್ನುತ್ತ...

ಪುಟ್ಟ ಕೈಗಳ ಬಡಿತಕ್ಕೆ ತಪ್ಪು ಹೆಜ್ಜೆಯ ಹಾದಿ
ಹಗಲಿರುಳು ಅಳೆದು ಕಾಲನ ಕಾಲಡಿಯಲ್ಲಿ
ಹಿಂದೆ ಒತ್ತಿ ಜಗತ್ತು ಎಲ್ಲ ದೃಶ್ಯಗಳು
ಕಣ್ಮರೆಯಾಗಿ ನೇಪಥ್ಯದಲ್ಲಿ ಇಲ್ಲವಾದ
ಕೃಷ್ಣ ಯಶೋಧೆಯರಾಟ ನೋಡುವಾಗ
ಬಳೆ ತುಂಬಿದ ಕೈಗಳು ಮೆಲ್ಲನೆ ಆಧರಿಸಿ
ಒಡಲು ಪುಳಕದ ಕುಡಿ ಚಿಗುರೊಡೆಯುತ್ತಿತ್ತು.

Monday, February 22, 2010

ಬ್ಲಾ೦ಡ್ ಗರ್ಲ್ ಡೈರಿ

ಎಲ್ಲೋ ಸಿಕ್ಕಿದ ಬ್ಲಾ೦ಡ್ ಗರ್ಲ್ ಒಬ್ಬಳ ಡೈರಿಯ ಕೆಲ ಪುಟಗಳು..

೨೨/೪/೨೦೦೯: ಇದು ನನ್ನ ಮೊದಲ ಕ್ರೂಸ್ ಪ್ರಯಾಣ, ಬೆಳಿಗ್ಗೆ ನನ್ನ ಲಗೇಜ್ ಮತ್ತು ಮೇಕಪ್ ಕಿಟ್ ನೊ೦ದಿಗೆ ಪ್ರಯಾಣ ಆರ೦ಭಿಸಿದೆ. ಸೆಕ್ಸಿಯಾಗಿ ಕಾಣುವ ಎಲ್ಲಾ ಉಡುಪು ತೆಗೆದುಕೊ0ಡಿದ್ದೆ. ತು೦ಬಾ ಎಕ್ಸೈಟ್ಮೆ೦ಟ್ ಇತ್ತು.

೨೩/೪/೨೦೦೯: ತು೦ಬಾ ಸು೦ದರ ಸಮುದ್ರ. ಡಾಲ್ಫಿನ್ ಮತ್ತು ವೇಲ್ ಗಳನ್ನು ನೋಡಿದೆ. ನಮ್ಮ ಕ್ರೂಸ್ ನ ಕ್ಯಾಪ್ಟನ್ ಸಿಕ್ಕಿದ್ದ. ತು೦ಬಾ ಒಳ್ಳೆಯವನ೦ತೆ ಅನ್ನಿಸಿದ, ಮೊದಲ ಭೇಟಿಯಲ್ಲಿ.

೨೪/೪/೨೦೦೯: ಗಾಲ್ಫ್ ಆಡಿದೆ. ನಾಲ್ಕಾರು ಬಾಲ್ ಸಮುದ್ರಕ್ಕೆ ಹೊಡೆದಮೇಲೆ, ಈಜುಕೊಳಕ್ಕೆ ಬ೦ದು ಈಜಾಡಿ ಉಲ್ಲಸಿತನಾದೆ. ಕ್ಯಾಪ್ಟನ್ ರಾತ್ರಿಯ ಊಟಕ್ಕೆ ಆಮ೦ತ್ರಿಸಿದ. ಅವನೊ೦ದಿಗೆ ಘ೦ಟೆಗಳು ನಿಮಿಷದ೦ತೆ ಸರಿದು ಹೋದವು. ತು೦ಬಾ ಆಕರ್ಷಕ ವ್ಯಕ್ತಿತ್ವ ಅವನದು.

೨೫/೪/೨೦೦೯: ಕ್ರೂಸ್ ನ ಕ್ಯಾಸಿನೋದಲ್ಲಿ ಇವತ್ತು ಎ೦ಟುನೂರು ಡಾಲರ್ ಗೆದ್ದೆ. ಕ್ಯಾಪ್ಟನ್ ಅವನ ಕ್ಯಾಬಿನ್ ನಲ್ಲಿ ರಾತ್ರಿಯ ಊಟಕ್ಕೆ ಆಮ೦ತ್ರಿಸಿದ. ಅದೊ೦ದು ವೈಭವಯುತವಾದ ಊಟ. ಪಾಸ್ತಾ ಮತ್ತು ಶಾ೦ಪೇನ್ ನೊ೦ದಿ೦ದಿಗೆ ನನ್ನ ಊಟ ಮುಗಿಸಿದೆ. ರಾತ್ರಿ ಅವನ ಕ್ಯಾಬಿನ್ ನಲ್ಲೇ ಮಲಗುವ೦ತೆ ಕೇಳಿಕೊ೦ಡ, ಪತಿಗೆ ಮೋಸಮಾಡಲಾರೆ ಎ೦ದು ಅವನಿಗೆ ಹೇಳಿಬ೦ದೆ.

೨೬/೪/೨೦೦೯: ಬಿಸಿಲಿನ ಝಳ ಜೋರಾಗಿದ್ದರಿ೦ದ ಪೂಲ್ ನಲ್ಲಿ ಜಾಸ್ತಿ ಹೊತ್ತು ಇರಲಾಗಲಿಲ್ಲ. ಬಾರ್ ಗೆ ಬ೦ದು ಶಾ೦ಪೇನ್ ಹೀರತೊಡಗಿದೆ. ಕ್ಯಾಪ್ಟನ್ ನನ್ನ ನೋಡಿದ. ನನ್ನೊ೦ದಿಗೆ ಒ೦ದಿಷ್ಟು ಲಾರ್ಜ್ ಡ್ರಿ೦ಕ್ಸ್ ಹೀರಿದ ನ೦ತರ ಮತ್ತೆ ರಾತ್ರಿ ತನ್ನ ಕ್ಯಾಬಿನ್ಗೆ ಮಲಗಲು ಬರಲು ಆಮಂತ್ರಿಸಿದ . ನಾನು ನಿರಾಕರಿಸಿದೆ. ನೀನು ಬರದಿದ್ದರೆ ಕ್ರೂಸ್ ಮುಳುಗಿಸಿಬಿಡುತ್ತೇನೆ ಅ೦ದ. ನಾನು ತು೦ಬಾ ಆಘಾತಗೊ೦ಡಿದ್ದೆ.

೨೭/೪/೨೦೦೯:
ಇ೦ದು ನಾನು ಸಾವಿರದ ಆರುನೂರು ಜನರ ಜೀವ ಉಳಿಸಿದೆ.
ಎರಡು ಬಾರಿ.

Tuesday, February 16, 2010

ಕಪ್ಪೆ ಕಥೆ

ಅಮೆರಿಕದ ಯಾವುದೋ ನಗರ. ಸಂಜೆ ಹೊತ್ತು. ಬಿಳಿಗೂದಲ ಸುಂದರಿಯೊಬ್ಬಳು ಸುಮ್ಮನೇ ನಡೆದು ಹೋಗುತ್ತಿರುವಾಗ ಆಕರ್ಷಕ ಜಾಹಿರಾತೊಂದು ಕಣ್ಣಿಗೆ ಬಿತ್ತು.

"ಸೆಕ್ಸ್ ಕಪ್ಪೆಗಳು"- ಕೇವಲ ಇಪ್ಪತ್ತು ಡಾಲರ್
ಮನೀ ಬ್ಯಾಕ್ ಗ್ಯಾರೆಂಟಿ ಇದೆ.
ಸಲಹೆಗಳನ್ನು ಓದಿಕೊಳ್ಳಿ

ಯಾಕೋ ಹೊಸ ತರಹದ ಸಾಹಸಕ್ಕೆ ಮನ ಮಾಡಿದ ಹುಡುಗಿ, ಇಪ್ಪತ್ತು ಡಾಲರ್ ಗಳನ್ನು ಕೊಟ್ಟು, ಮನೆಗೆ ಬಂದಳು. ಬಂದವಳೇ, ಕಪ್ಪೆ ಇರೋ ಬಾಕ್ಸಿನ ಮೇಲಿದ್ದ ವಿವರಣೆಗಳನ್ನು ಓದಿಕೊಂಡಳು.

೧. ಚೆನ್ನಾಗಿ ಸ್ನಾನ ಮಾಡಿ
೨.ಒಳ್ಳೇ ಘಮ ಘಮಿಸೋ ಸುಗಂಧ ಹಾಕಿಕೊಳ್ಳಿ
೩. ಒಳ್ಳೇ ಆಕರ್ಷಕ ಬಟ್ಟೆ ತೊಟ್ಟುಕೊಳ್ಳಿ.
೪. ಕಪ್ಪೆ ಜೊತೆ ಮಂಚಕ್ಕೆ ತೆರಳಿ.

ಉದ್ವೇಗದಿಂದಲೇ ಅಲ್ಲಿದ್ದಂತೆಯೇ ಮಾಡಿದ ಸುಂದರಿ, ಕಪ್ಪೆಯೊಡನೆ ಮಂಚಕ್ಕೆ ತೆರಳಿದಳು. ನಿಮಿಷ ಕಳೆದರೂ ಏನೂ ಆಗಲಿಲ್ಲ. ಐದು ನಿಮಿಷ ಕಳೆದರೂ ಏನೂ ಆಗಲಿಲ್ಲ. ಹತ್ತಾದರೂ.ತಲೆ ಕೆಟ್ಟ ಹುಡುಗಿ, ಮತ್ತೊಮ್ಮೆ ಕಪ್ಪೆ ತಂದ ಬಾಕ್ಸು ನೋಡಿದಳು. ಅಡಿ ಭಾಗದಲ್ಲೊಂದು ಒಕ್ಕಣೆ ಇತ್ತು.

ಏನಾದರೂ ಸಮಸ್ಯೆಗಳಿದ್ದರೆ ಅಥವಾ ಪ್ರಶ್ನೆಗಳಿದ್ದರೆ ದಯವಿಟ್ಟು ನೀವು ಕಪ್ಪೆ ಕೊಂಡ ಶಾಪ್ ಗೆ ಫೋನ್ ಮಾಡಿ, ನಂ...

ಪಟಪಟನೆ ನಂಬರೊತ್ತಿದ ಆಕೆ ಅತ್ತಕಡೆಯಿಂದ ಧ್ವನಿ ಕೇಳಿದೊಡನೇ ತನ್ನ ಸಮಸ್ಯೆಯನ್ನ ಬಡಬಡ ಅಂತ ಹೇಳಿದಳು. ಆ ಕಡೆಯ ವ್ಯಕ್ತಿ ಮೆತ್ತಗೆ - ಹೌದಾ, ಇಲ್ಲಿ ಇನ್ನೊಂದು ನಿಮ್ಮದೇ ತರದ ಸಮಸ್ಯೆ ಅಟೆಂಡ್ ಮಾಡ್ತಾ ಇದೀನಿ ಮೇಡಂ, ಅಡ್ರೆಸ್ ಹೇಳಿ ಅಂದವನೇ, ಕಾಲು ಗಂಟೆಲಿ ಬರುವುದಾಗಿ ತಿಳಿಸಿದ.

ಸರಿಯಾಗಿ ೧೫ ನಿಮಿಷಗಳ ನಂತರ ಮನೆಯ ಬೆಲ್ ರಿಂಗಾಯಿತು. ಸಮಸ್ಯೆಗೆ ಅರ್ಧ ಪರಿಹಾರ ಸಿಕ್ಕ ಖುಷಿಯಲ್ಲಿ ಬೆಡಗಿ ಬಾಗಿಲು ತೆರೆದಳು. ಮತ್ತೊಮ್ಮೆ ಕೂತು ಅಂಗಡಿಯಾತ ತಾಳ್ಮೆಯಿಂದ ಇವಳ ಕಥೆಯೆಲ್ಲ ಕೇಳಿದ. ಬನ್ನಿ ಮೇಡಮ್, ಬೆಡ್ ರೂಮ್ ಗೆ ಹೋಗೋಣ ಅಂದವನೇ, ಕಪ್ಪೆ ಕೈಯಲ್ಲಿ ಹಿಡಿದುಕೊಂಡ.

ಆಕೆಯನ್ನ ಮಂಚಕ್ಕೆ ಹೋಗಲು ಹೇಳಿ, ಅತ್ಯಂತ ಕಾಳಜಿಯ ಧ್ವನಿಯಲ್ಲಿ ಕಪ್ಪೆಯನ್ನು ನೋಡುತ್ತ ಅಂದ-

"ನೋಡು ಮರೀ, ಇದೊಂದೇ ಬಾರಿ -ಕೊನೇ ಸಲ ನಾನು ನಿನಗೆ ಏನು ಮಾಡಬೇಕು ಅಂತ ಹೇಳಿ ಕೊಡ್ತಿರೋದು. ಸರಿಯಾಗಿ ನೋಡ್ಕೋ..ಪ್ಲೀಸ್, ಮರಿಬೇಡ"

Monday, February 1, 2010

ಮಿದುವ ಹದ ಮಾಡಿದ ಮುತ್ತು..

-ಗೌತಮ್ ಹೆಗಡೆ


ಚುಕ್ಕಿ ಲೆಕ್ಕ ಕಲಿಸುವೆನೆಂದು
ಆಕಾಶ ನೋಡುವ ಕಲೆಯ
ಹೇಳಿಕೊಡುವೆ ಬಾ ಎಂದು
ಹೊಳೆಯ ದಂಡೆಯ ಹುಣಿಸೆ ಮರದ ಕೆಳಗೆ
ಎದೆಯ ತಾಳದ ಲೆಕ್ಕ ತಪ್ಪಿಸಿ
ಗೋವಿಂದ ಕಲೆ ಕಲಿಸಿದವನು ನೀನು... ...

ಅಂದು ಆ ರಾತ್ರಿ
ನನ್ನೇ ಮರೆತ ನಾನಿದ್ದೆ;
ಎನ್ನೊಡನೆ ನೀನಿದ್ದೆ.
ಹೊಳೆ ನೀರ ಸವರಿ ತೇಲಿ ಬರುತಲಿದ್ದ
ತಂಗಾಳಿಯಿತ್ತು
ಏರಿಳಿವ ಎದೆಯ ಗೂಡಿನ ತುಂಬಾ
ಉಸಿರು ಬೆಚ್ಚಗಾಗಿತ್ತು
ತನುವೆಲ್ಲ ಉಪ್ಪು ಹುಳಿ ಖಾರದ
ಹದವಾದ ಪಾಕವಾಗಿತ್ತು
ನಮ್ಮ ನಡುವೆ ಅರ್ಥವಿಲ್ಲದ ಒಂದಡಿಯ ಅಂತರ
ತೀರ ಸಪ್ಪೆಯಾಗಿತ್ತು..
ಮೌನ ಸಾಕಾಗಿತ್ತು
ಮಾತೂ ಬೇಡವಾಗಿತ್ತು

ಸಾಕಾದ ಮೌನ
ಬೇಡವಾದ ಮಾತಿನ ನಡುವೆ
ಕೈಗೆ ಕೈ ಸೋಕಿ ಅಪ್ಪುಗೆ ಹುಟ್ಟಿತ್ತು,
ಜೊತೆ ಜೊತೆಗೆ ಅಸಂಖ್ಯ ಮುತ್ತು..
ಹಣೆಗೊಂದು
ಕಣ್ಣ ಮೇಲೊಂದು
ತುಟಿಗೊಂದು
ನೀಳ ಕೊರಳ ಮೇಲೊಂದು
ನಾಜೂಕಿನ ಮುತ್ತು..
ಮತ್ತೆ ಎದೆಯ ಮಿದುವಿನಲ್ಲೊಂದು
ಅತಿ ಮಧುರ ಮುತ್ತು
ಮಿದುವನ್ನೊಮ್ಮೆ ಹದ ಮಾಡಿ
ಮುತ್ತು ಮುಂದೆ ಹೊರಟಿತ್ತು
ಇಳಿಜಾರ ಹಾದಿಯಲಿ ಜಾರಿ ಜಾರಿ
ಹೊಕ್ಕಳ ಸರಹದ್ದು ದಾಟಿ
ಮುತ್ತು ಇನ್ನೆಲ್ಲೋ ಸೇರಿತ್ತು..

ನಾನರಳಿ ಸುಖದಲ್ಲಿ ನರಳಿ
ಹೂವಾದೆ
ನೀ ತೃಪ್ತ ದುಂಬಿಯಾದೆ
ನಾ ಬಟ್ಟಬಯಲಾದೆ
ನೀ ಖಾಲಿ ಮುಗಿಲಾದೆ...

Sunday, January 24, 2010

ಬುಡಕ್ಕೇ ಕೈ ಹಾಕಿದ ಸಮೀಕ್ಷೆ...

ತುಂಟ ಕುಂಟಿನಿ ಸಾರ್ ಗೆ, ಎಲ್ಲಿಂದ ಏನಾದರೂ ಹುಡುಕೋ ಚಟ.
ನನ್ನ ಬರಹಗಳನ್ನ ಕದ್ದು ಹಾಕ್ಕೋತೀರಿ ನೀವು ಅಂತ ಪ್ರೀತಿಯಿಂದಲೇ ಬೈಯುವ ಕುಂಟಿನಿಯವರು, ಮತ್ತೆ ಅವರ ಬರಹ ಕದಿಯೋ ಹಾಗೆ ಮಾಡಿದ್ದಾರೆ.

ಕ್ಷಮಿಸಿ,ನಿಮ್ಮ ಬಳಿಗೆ ಯಾರಾದರೂ ಆ ವಿಚಾರ ಕೇಳಿ ಬಂದಿದ್ದಾರೋ..?
ನನ್ನ ಸ್ಟೈಲೇ ಬೇರೆ ಅಂತ ನೀವು ವಾದಿಸಿದರೆ ನಾನೇನೂ ಮಾಡುವ ಹಾಗಿಲ್ಲ.
ಆದರೆ ಇದು ನಮ್ಮ ಬುಡಕ್ಕೇ ಅವರು ಕೈ ಹಾಕಿದ ಸಮೀಕ್ಷೆ.ಯಾರು ಯಾವಾಗ ಮಾಡಿದರು ಅಂತ ಕೇಳಬೇಡಿ..ಒಂದು ಲೆಕ್ಕ ಅಂತ ಕೊಟ್ಟಿದ್ದಾರೆ,ಜಸ್ಟ್ ಎಂಜಾಯ್.
ಯಾರೋ ಕಾಂಡೋಮ್ ಕಂಪನಿಯವರಂತೆ ಈ ಸಮೀಕ್ಷೆ ಮಾಡಿದವರು.
ಬಾಪ್ರೇ..ಕಾಂಡೋಮ್ ಕಂಪನಿಯವರು ಆ ವಿಚಾರ ಅಲ್ಲದೇ ಬೇರೇನು ಸಮೀಕ್ಷೆ ಮಾಡಿಯಾರು?ಅವರೇನು ನೀವು ಎಷ್ಟು ಬಾರಿ ಸೂರ್ಯನಮಸ್ಕಾರ ಮಾಡ್ತೀರಿ ಅಂತ ಕೇಳ್ತಾರಾ?
ಹೌದು,
ಅವರು ನಿಮ್ಮ ಅಥವಾ ನಮ್ಮ ಆ ಕೆಲಸದ ಬಗ್ಗೆ ಒಂದು ಅಕೌಂಟ್ ಕೊಟ್ಟಿದ್ದಾರೆ..ಓದಿಕೊಳ್ಳಿ.
ಆವರೇಜು ಭಾರತೀಯರು ಸೆಕ್ಸ್ ಮಾಡೋದರಲ್ಲಿ ಭಾರೀ ಅರ್ಜೆಂಟಿನವರಂತೆ.
ಮುಂದೆ ಓದಿ..

Tuesday, January 12, 2010

ಪೋಲಿ ಪ್ರಕೃತಿ- ೨

ಇದು ಪೋಲಿ ಪ್ರಕೃತಿ ಸರಣಿಯ ಎರಡನೇ ಕಂತು. ಮೋಟುಗೋಡೆಗೆ ಮೊನ್ನೆ ಜನವರಿ 8ನೇ ತಾರೀಖಿಗೆ ಎರಡು ವರ್ಷ ತುಂಬಿತು. ಮತ್ತೆ, ಬೋನಸ್ ಸಂಭ್ರಮ ಏನಪ್ಪಾ ಅಂದ್ರೆ, ಇದು ಮೋಟುಗೋಡೆಯ 100ನೇ ಪೋಸ್ಟು. ;)

ನಿಮ್ಮ ಇಣುಕುವಿಕೆಯ ಪ್ರೋತ್ಸಾಹ ಹೀಗೇ ಇರಲಿ, ಧನ್ಯವಾದ.







Tuesday, January 5, 2010

ತೂಕ ಇಳಿಸಿಕೊಳ್ಳಿ .....

ತೂಕ ಇಳಿಸಿಕೊಳ್ಳಿ .....

ಒ೦ದುಘ೦ಟೆಯಲ್ಲಿ ಎರಡೂವರೆಯಿ೦ದ ಮೂರು ಕಿಲೋ ತೂಕ ಇಳಿಸಿಕೊಳ್ಳಿ .......

ಇ೦ಥ ಜಾಹೀರಾತು ಕ೦ಡಮೇಲೆ ಯಾವ ಧಡೂತಿಗೆ ತಾನೇ ಆಸೆಯಾಗದು ಹೇಳಿ? ನುಗ್ಗಿಯೇಬಿಟ್ಟ ನಮ್ಮ ಹಾತೀರಾಯ ಸ್ಲಿಮ್ಮಿ೦ಗ್ ಸೆ೦ಟರ್ ಗೆ. "ನೋಡಿ, ನಿಮ್ಮ ತೂಕ ಖ೦ಡಿತ ಇಳಿಸಿಕೊಡಲಾಗುತ್ತೆ ಇಲ್ಲಿ, ನಮ್ಮ ವಿಶೇಷ ವಿಧಾನದಲ್ಲಿ ಒ೦ದು ಘ೦ಟೆಯಲ್ಲಿ ಮೂರು ಕಿಲೋ ವರೆಗೆ ತೂಕ ಇಳಿಸಿಕೊಳ್ಳಬಹುದು ನಿಮಗೆ ಐದುಸಾವಿರ ಖರ್ಚಾಗುತ್ತೆ" ಮತ್ತದನ್ನೇ ತಿರಗಾಮುರಗಾ ಹೇಳಿ ಒ೦ದು ತಾಸಿನ ಕೋರ್ಸ್ ಗೆ ಒಪ್ಪಿಸಿಯೇ ಬಿಟ್ಟರು. ದುಡ್ಡು ಕಿತ್ತುಕೊ೦ಡು ರೂ೦ ನ೦. 01ಕ್ಕೆ ಕಳಿಸಲಾಯಿತು.

ಅ೦ದವಾದ ವಿಶಾಲವಾದ ರೂಮು, ಅದಕ್ಕೊಪ್ಪುವ ಇ೦ಟೀರಿಯರು, ಅದರ ಪಕ್ಕದಲ್ಲೊ೦ದು ಹೂದಾನಿ- ಅದರ ಪಕ್ಕದಲ್ಲೇ ಒ೦ದು ಕಾಟ್ ವಿತ್ ಡಬ್ಬಲ್ ಬೆಡ್ ಇತ್ತು. ಅದರ ಮೇಲೊಬ್ಬಳು ಮಾಯಾ೦ಗನೆ ಪವಡಿಸಿದ್ದಳು.ಧರಿಸಿದ ವಸ್ತ್ರ ಸಮೇತ ಸಾಕ್ಷಾತ್ ಶಿಲಾಬಾಲಿಕೆಗೆ ಜೀವ ಬ೦ದ೦ತೆ ಇದ್ದಳು. ಅವಳು "ನೀನು ನನ್ನನ್ನು ಹಿಡಿದರೆ ನನ್ನನ್ನು ಅನುಭವಿಸ ಬಹುದು"- ಹೀಗೆಂದು ಒಳಕ್ಕೆ ಬ೦ದ ಹಾತೀರಾಯನಿಗೆ ಹೇಳಿದಳು ಮತ್ತು ಬೇಟೆಗಾರನ ಬಾಣದ ಮೊನಚು ಕ೦ಡ ಹರಿಣಿಯ೦ತೆ ಟ೦ಗನೆ ನೆಗೆದಳು- ಮ೦ಚದಿ೦ದ. ಗಡಿಯಾರದ ನಿಮಿಷದ ಮುಳ್ಳು ಅರವತ್ತು ಸುತ್ತು ತಿರುಗುವದರೊಳಗಾಗಿ ಅವಳ ಹಿ೦ದೆ ಹಾತೀರಾಯ ರೂಮನ್ನು ಏನಿಲ್ಲವ೦ದರೂ ಮುನ್ನೂರುಬಾರಿ ಸುತ್ತಿದ್ದ, ಅವಳು ಸೋಲಲಿಲ್ಲ, ಇವನಿಗೆ ಗೆಲ್ಲಲಾಗಲಿಲ್ಲ. ಆದರೂ ಐದು ಸಾವಿರದ ಜೂಟಾಟ ಭಾರೀ ಮಜಾ ಬ೦ದಿತ್ತು.

ಹೊರಗೆ ಬರುತ್ತಿದ್ದ೦ತೆ ರಿಸೆಪ್ಶನ್ ನಲ್ಲಿ ಕೇಳಿದ, ನಿಮ್ಮಲ್ಲಿ ಮತ್ತೆ ಯಾವ ಕೋರ್ಸಿದೆ? "ನಮ್ಮಲ್ಲಿ ಇನ್ನೊ೦ದು ಕೋರ್ಸಿದೆ, ಎರಡು ತಾಸಿನಲ್ಲಿ ಐದು ಕಿಲೋ ಇಳಿಸಿಕೊಳ್ಳುವ ಕೋರ್ಸು. ಸೇರಲು ಬಯಸುತ್ತೀರಾ?" ಕೌನ್ಸಿಲರ್ ಕೇಳಿ ಮುಗಿಸುವಷ್ಟರಲ್ಲಿ ಕ್ರೆಡಿಟ್ ಕಾರ್ಡು ಟೇಬಲ್ಲಿನ ಮೇಲಿತ್ತು. ಈ ಬಾರಿ ನಮ್ಮ ಹಾತೀರಾಯರನ್ನು ರೂಂ ನ೦. ಎರಡಕ್ಕೆ ಕಳಿಸಲಾಯಿತು. ಮೊದಲಿನ ರೂ೦ನ ಪಡಿಯಚ್ಚು, ಆದರೆ ಈ ಬಾರಿ ಇಬ್ಬರು ಜೀವ೦ತ ಶಿಲಾಬಾಲಿಕೆಯರಿದ್ದರು ರೂಮಿನಲ್ಲಿ. ಮತ್ತದೇ ಮಾತನ್ನೂ ಹೇಳಿದರು. "ನೀನು ನಮ್ಮನ್ನು ಹಿಡಿದರೆ ನಮ್ಮನ್ನು ಅನುಭವಿಸ ಬಹುದು" ಮತ್ತೆ ಶುರುವಾಯಿತು ಅದೃಷ್ಟದ ಬೆನ್ನುಹತ್ತಿ ಓಡುವ ಆಟ, ಓಡಿದ್ದೂ ಓಡಿದ್ದೇ, ಸುತ್ತಿದ್ದೂ ಸುತ್ತಿದ್ದೇ, ಪ್ರಯೋಜನವಿಲ್ಲ. ಎರಡು ತಾಸಿನ ಆಟ ಮುಕ್ತಾಯವಾಗಿತ್ತು, ಡ್ರಾನಲ್ಲಿ ಕೊನೆಗೊ೦ಡ ನೀರಸ ಟೆಸ್ಟ್ ಮ್ಯಾಚಿನ೦ತೆ.

ಆದರೆ ತೂಕ ಇಳಿಸುವ ಉಮೇದು ಮಾತ್ರ ದ್ವಿಗುಣ ಗೊ೦ಡಿತ್ತು. ನಾಕುತಾಸಿನಲ್ಲಿ ಹತ್ತುಕಿಲೋ ಇಳಿಸುವ ಕೋರ್ಸಿಗೆ ಸೇರಿಬಿಟ್ಟರು ನಮ್ಮ ಹಾತೀರಾಯರು. ಈ ಬಾರಿಯ ಕೋರ್ಸು, ಮೂರನೇ ರೂಮಿನಲ್ಲಿ. ಒಳಗೆ ಹೋದರೆ ರೂಮು ಸ್ವಲ್ಪ ಬೇರೆಯದಾಗಿಯೇ ಇತ್ತು. ಮೊದಲಿನ ಎರಡರಷ್ಟು ಒಪ್ಪ ಓರಣವಾಗಿರಲಿಲ್ಲ, ಸ್ವಲ್ಪ ಕತ್ತಲೆ ಬೇರೆ ಮತ್ತು ಸ್ವಲ್ಪ ಚಿಕ್ಕದೂ ಸಹ. ಒಳಕ್ಕೆ ಬರುತ್ತಿದ್ದ೦ತೆ ದುತ್ತನೆ ಹೊತ್ತಿಕೊ೦ಡ ಪ್ಲೋರೋಸೆ೦ಟ್ ಲೈಟ್ ನ ಅಡಿಯಲ್ಲಿ ಮಿರಮಿರ ಮಿ೦ಚುತ್ತ ನಿ೦ತಿದ್ದ ಗನಘೋರ ದೈತ್ಯ ನಿಗ್ರೋ. ಮೂವತ್ತು ಸೆಕೆ೦ಡು ಗಳ ವಿಶಾಲ ಮೌನದ ನ೦ತರ ಆತ ಹೇಳಿದ

"ನಾನೆಲ್ಲಾದರೂ ನಿನ್ನನ್ನು ಹಿಡಿದರೆ, ನಾನು ನಿನ್ನನ್ನು ಅನುಭವಿಸುತ್ತೇನೆ".




ಮೂಲ ಕೃಪೆ: ವಿನಾಯಕ, ನವದೆಹಲಿ.

Friday, January 1, 2010

ಸಣ್ಣ ಟೆಸ್ಟ್ ..

ಭಾರತೀಯರು ರಸಿಕರು, ಕಾಮಶಾಸ್ತ್ರ ಪ್ರವರ್ತಕರು ಇತ್ಯಾದಿಯೆಲ್ಲ ಹಳೇ ಸುದ್ದಿಯಾಯಿತು. ಆದರೆ ಜಗತ್ತಿಗೇ ಪ್ರಣಯ ಹೇಳಿಕೊಟ್ಟ ಭಾರತದ ಜನಕ್ಕೆ, ಇನ್ನೂ ಈ ಬಗ್ಗೆ ಪೂರ್ತಾ ವಿಶ್ಯ ಬಗೆ ಹರಿದಿಲ್ಲ. ಗೂಗಲ್ ದೇವರೇ ಇದಕ್ಕೆ ಸಾಕ್ಷಿ.

ಗೂಗಲ್ ನಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ, Suggestion ಅನ್ನುವ ಸೌಲಭ್ಯ ಇದೆ. ನೀವೇನಾದರೂ ಹುಡುಕ ಹೊರಟಾಗ- ನಿಮಗೆಬೇಕಿರೋದು ಇದಾ ಅಂತ ಗೂಗಲೇ ಕೇಳುತ್ತದೆ.

ಈಗೊಂದು ಸಣ್ಣ ಟೆಸ್ಟ್ ಮಾಡಿ ನೋಡಿ-

ಗೂಗಲ್ ನ ಹೋಮ್ ಪೇಜ್, www.google.com ಗೆ ಹೋಗಿ, removing ಅಂತ ಸರ್ಚ್ ಕೊಟ್ಟು ನೋಡಿ-



ಅದೇ, ಭಾರತೀಯ ಗೂಗಲ್ ನ ಹೋಮ್ ಪೇಜ್, www.google.co.in ಗೆ ಹೋಗಿ ಅದೇ ಸರ್ಚ್ ಕೊಟ್ಟು ನೋಡಿ,


ಇನ್ನೂ ಹೆಚ್ಚಿನ ನಿವರಣೆ ಬೇಡ ಅಂದುಕೊಂಡಿದ್ದೇನೆ:)

( ಕೆಲ ಬಾರಿ google.com ಗೆ ಹೋದರೂ, ಅದು ತಾನಾಗೇ google.co.in ಗೆ ರಿ-ಡೈರೆಕ್ಟ್ ಆಗುತ್ತದೆ, ಅಂತಹ ಸಂದರ್ಭದಲ್ಲಿ google.com/ncr ಅಂತ ಟೈಪಿಸಿ)