Sunday, February 24, 2008

ಒಂದು ನೀತಿ ಕಥೆ.

ಭರತ ಖಂಡದ ಸಂಪತ್ತಷ್ಟೂ ಅಲ್ಲೇ ಕಾಲ್ಮುರಿದು ಬಿದ್ದಂತೆ ಕಾಣುತ್ತಿದ್ದ ಅರಮನೆ. ರಾಜಾಸ್ಥಾನ ತುಂಬಿ ತುಳುಕುತ್ತಿತ್ತು. ಚಕ್ರವರ್ತಿಯ ವಿಶೇಷ ಸಭೆ. ಅಂದು ನ್ಯಾಯಾದಾನ ನಡೆಯುವ ದಿನ.ರಾಜ್ಯದ ಯಾರೇ ಬೇಕಾದರೂ ರಾಜನೆದುರಿಗೆ ಬಂದು ತಮ್ಮ ಅಹವಾಲು ತೋಡಿಕೊಳ್ಳಬಹುದಿತ್ತು, ತಮಗಾದ ಮಿಸ್ಟೀಕಿಗೆ ನ್ಯಾಯ ಪಡೆಯಬಹುದಿತ್ತು. ಭಟರು ಹಿಡಿದು ತಂದವರು ತಪ್ಪಿತಸ್ಥರೆಂದು ಸಾಬೀತಾದಲ್ಲಿ, ಅವರಿಗೆ ಶಿಕ್ಷೆಯೂ ಗ್ಯಾರೆಂಟಿ.

ಈ ಬಾರಿಯೂ ಎಂದಿನಂತೆ ಜನಸಾಗರ ಹರಿದು ಬಂದಿತ್ತು. ವಂದಿಮಾಘದರು ರಾಜನ ಬಿರುದುಬಾವಲಿಗಳನ್ನು ಹಾಡಿ ಹೊಗಳುತ್ತ ಆಸ್ಥಾನಕ್ಕೆ ಬರಮಾಡಿಕೊಳ್ಳುತ್ತಿದ್ದರೆ, ಜನರ ಉಘೇ ಉಘೇ ಎನ್ನುವ ಘೋಷ ಸುತ್ತೆಲ್ಲ ಮೊಳಗುತ್ತಿತ್ತು. ಕಾನೂನು ತಜ್ಞರು ರಾಜ ಸಿಂಹಾಸನದ ಇಕ್ಕೆಲಗಳಲ್ಲೂ ಸಾಲಾಗಿ ಆಸೀನರಾಗಿದ್ದರು. ರಾಜನು ತನ್ನ ಶ್ವೇತಛತ್ರದಡಿಯಲ್ಲಿನ ಐವರಿ ಸಿಂಹಾಸನದಲ್ಲಿ ಆಸೀನನಾಗುತ್ತಿದ್ದಂತೆ ಜನರೆಲ್ಲ ಆತನಿಗೆ ನಮಸ್ಕರಿಸಿ ತಾವೂ ಸೆಟ್ಲಾದರು.

ರಾಜ ತನ್ನ ಬುದ್ಧಿಮತ್ತೆಯಿಂದ ಫಾಸ್ಟಾಗಿ ನ್ಯಾಯ ತೀರ್ಮಾನ ಮಾಡುತ್ತಿದ್ದರೆ, ನೆರೆದವರೆಲ್ಲ ಮೂಗಿನ ಮೇಲೆ ಬೆರಳಿಟ್ಟು,ಆತನ ಪಾಂಡಿತ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದರು. ಅಲ್ಲಿ, ನ್ಯಾಯ ಪಡೆಯಲು ಬರುತ್ತಿದ್ದವರಿಗಿಂತ, ಚಕ್ರವರ್ತಿಯ ಜಾಣ್ಮೆಯನ್ನು ನೋಡಲು ಬರುತ್ತಿದ್ದವರೇ ಹೆಚ್ಚು.

ಅಂದು ಮಧ್ಯಾಹ್ನದ ಸಮಯ, ಆಗಲೇ ನೂರಾರು ತೀರ್ಮಾನಗಳನ್ನು ಚಕ್ರವರ್ತಿ ನೀಡಿಯಾಗಿತ್ತು. ಆತ ಲಂಚಿಗೆ ತೆರಳಬೇಕು ಅನ್ನುವಷ್ಟರಲ್ಲಿ ರಾಜ ಭಟರು ಮಧ್ಯ ಏಜಿನ ಹೆಣ್ಣುಮಗಳೊಬ್ಬಳನ್ನು ಆತನ ಮುಂದೆ ತಂದು ನಿಲ್ಲಿಸಿದರು. ರಾಜ, "ಏನೀಕೆಯ ಸಮಸ್ಯೆ" ಎಂದು ಕೇಳಲು ಆಕೆಯ ಹಿಂದಿದ್ದ ಹಿರಿಯರೊಬ್ಬರು ಮುಂದೆ ಬಂದು ನಿಂತು, "ಈಕೆ ನಮ್ಮ ಹಳ್ಳಿಯಲ್ಲಿ ಪ್ರಾಸ್ಟಿಟ್ಯೂಷನ್ ನಡೆಸುತ್ತಿದ್ದಾಳೆ ಮಹಾರಾಜ. ನಮ್ಮ ಊರಿನ ಮದುವೆಯಾದ ಗಂಡಸರನ್ನೂ ತನ್ನತ್ತ ಸೆಳೆದುಕೊಂಡು ಸಂಸಾರಗಳಲ್ಲಿ ಒಡಕುಂಟು ಮಾಡುತ್ತಿದ್ದಾಳೆ, ಇವಳಿಂದಾಗೆ ಹಳ್ಳಿಯ ನೆಮ್ಮದಿಯೇ ಹಾಳಾಗಿ ಹೋಗಿದೆ" ಎಂದು ಅಲವತ್ತುಕೊಂಡರು.

ಚಕ್ರವರ್ತಿಯು ಆಕೆಯತ್ತ ಕೆಂಗಣ್ಣ ಬೀರಲು, ಅವಳು ತಲೆ ತಗ್ಗಿಸಿ ನಿಂತಳು. ಆಕೆಯ ಚರ್ಯೆಯಿಂದಲೇ ರಾಜನಿಗೆ ಆಕೆ ತಪ್ಪು ಮಾಡಿರುವುದು ಹೌದು ಎಂದು ಅರಿವಾಯಿತು. ಆದರೂ ಆಕೆಯನ್ನೇ ಕೇಳೋಣ ಎಂದು, "ಎಲೈ ಸ್ತ್ತ್ರೀಯೇ, ನಿನ್ನ ಬಗ್ಗೆ ಈ ಮಹನೀಯರು ಮಾಡುತ್ತಿರುವ ಆಪಾದನೆಗಳ ಬಗ್ಗೆ ನಿನ್ನ ಒಪೀನಿಯನ್ ಏನು" ಎಂದನು. ಆಕೆ , ಮರು ಮಾತಿಲ್ಲದೇ ತಲೆ ಮತ್ತೂ ತಗ್ಗಿಸಿದಳು. ವೇಶ್ಯಾವಾಟಿಕೆ ಆ ರಾಜ್ಯದಲ್ಲಿ ಈ ಚಕ್ರವರ್ತಿಯ ಅಪ್ಪನ ಕಾಲದಲ್ಲೇ ನಿಷೇಧಿತವಾಗಿತ್ತು. ಆನಂತರ ಇಲ್ಲಿಯ ತನಕ ಒಂದೇ ಒಂದು ಅಂತಹ ಘಟನೆ ನಡೆದ ವರದಿಯೂ ಆಗಿರಲಿಲ್ಲ. ಇವನ ಕಾಲದಲ್ಲಿ ಮೊದಲ ಬಾರಿಗೆ ಇಂತಹ ಕೇಸೊಂದು ಬಂದಿತ್ತು. ಅದಕ್ಕಾಗಿಯೇ, ಒಮ್ಮೆಗೇ ಏನನ್ನೂ ಹೇಳಲು ಆತನಿಗೆ ಸಾಧ್ಯವಾಗಲಿಲ್ಲ. ಯಾವ ತರಹದ ಶಿಕ್ಷೆ ನೀಡಬೇಕು ಅನ್ನುವುದೂ ಹೊಳೆಯಲಿಲ್ಲ. ನ್ಯಾಯದಾನ ನೀಡುವಲ್ಲಿ ತೊಡಕುಂಟಾಗುವ ಪರಿಸ್ಥಿತಿ ಬಂತು.

ಆತ ಅರ್ಥಗರ್ಭಿತವಾಗಿ ನ್ಯಾಯಾಂಗ ಪಂಡಿತರುಗಳನ್ನು ನೋಡಿದ. ಅವರಿಗೂ ವಿಷಯದ ಬಿಸಿ ತಟ್ಟಿತು. ಚಕ್ರವರ್ತಿ ನ್ಯಾಯಾಂಗ ಸಂಬಂಧೀ ಗ್ರಂಥ ತನ್ನಿ ಎಂದು ಅವರುಗಳಿಗೆ ಸನ್ನೆ ಮಾಡಿದ .ಭಟನೊಬ್ಬನನ್ನು ಕೂಡಲೇ ಅರಮನೆಯ ಹಿಂದಿರುವ ವಿಶಾಲ ಗ್ರಂಥಾಲಯಕ್ಕೆ ಕಳುಹಿಸಲಾಯಿತು.ಸಬೆಯ ತುಂಬ ಗೌಜಿ ಗದ್ದಲ. ಎಲ್ಲರೂ ಗುಸು ಗುಸು ಮಾತಾಡಿಕೊಳ್ಳಲಾರಂಭಿಸಿದರು. ಆಕೆಗೆ ಏನು ಶಿಕ್ಷೆ ಸಿಗಬಹುದೆಂಬ ಕುತೂಹಲ ಎಲ್ಲರಿಗೂ. ಚಕ್ರವರ್ತಿ ಒಮ್ಮೆ ಸುತ್ತಲೂ ನೋಡಿದ.. ಎಲ್ಲರೂ ಸುಮ್ಮನಾದರು. ಅದೇ ಹೊತ್ತಿಗೆ ಚಕ್ರವರ್ತಿಗೆ ಕಿವಿ ತುರಿಸಿದಂತಾಯಿತು. ಪಕ್ಕದಲ್ಲಿದ್ದ ಸೇವಕನಿಗೆ ಕಿವಿಯ ಕೊಳಕು ತೆಗೆಯೋ ತಾಮ್ರದ ಕಡ್ಡಿ ತರಲು ಹೇಳಿದ ಆತ. ಅವನು ಅತ್ತ ತೆರಳಿ ನಿಮಿಷವೂ ಆಗಿಲ್ಲ, ತುರಿಕೆ ತಡೆಯಲಾರದೇ ಸಿಂಹಾಸನದ ಮೂಲೆಯಿಂದ ಮರದ ಸಣ್ಣ ಚಕ್ಕೆಯೊಂದನ್ನು ಎತ್ತಿ ಕಿವಿಗೆ ಹಾಕಿದ.

ಅದೇ ಹೊತ್ತಿಗೆ ಕೆಳಗೆ ಮೌನವಾಗಿ ನಿಂತಿದ್ದ ಆ ಮಹಿಳೆ , "ಮಹಾರಾಜಾ, ನಾನು ನಿಮ್ಮೊಡನೆ ಎರಡು ಮಾತಾಡಬಹುದೇ " ಎಂದು ಮೆಲ್ಲನೆ ವಿನಂತಿಸಿದಳು. ಚಕ್ರವರ್ತಿಗೆ ಸರ್ಪ್ರೈಸ್ ಅನಿಸಿದರೂ, "ಹುಂ, ಹೇಳುವಂತಳಾಗು" ಅಂದನು. ಆಕೆ ನಿಧಾನವಾಗಿ,
"ರಾಜಾ, ನಿಮಗೆ ಕಿವಿ ತುರಿಕೆಯಾಗಿ, ತುರುಸಿಕೊಳ್ಳಲು ಏನನ್ನೋ ತರಿಸಿಕೊಳ್ಳುವುದರೊಳಗಾಗಿ ಸಿಂಹಾಸನದ ಮರದ ಚೂರನ್ನು ಕಿತ್ತು ಕಿವಿಗಿಟ್ಟುಕೊಂಡಿರಿ. ನನ್ನ ಗಂಡ ಸೈನ್ಯದಲ್ಲಿದ್ದ.. ಯುದ್ಧವೊಂದರಲ್ಲಿ ಸತ್ತು ಒಂಬತ್ತು ವರುಷಗಳಾದವು, ನನ್ನ ಪರಿಸ್ಥಿತಿಯನ್ನೊಮ್ಮೆ ನೀವು ಥಿಂಕ್ ಮಾಡಿ ನೋಡಿ" ಎಂದಳು. ಚಕ್ರವರ್ತಿ, ಮಾತೇ ಬರದೇ ಆಕೆಯನ್ನು ನೋಡುತ್ತ ಕುಳಿತ.

Tuesday, February 5, 2008

ಚಂದ್ರ ಮಂಚಕೆ....

ಚಂದ್ರಮಂಚಕೆ ಬಾ, ಚಕೋರಿ!
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ!
ಚಂದ್ರಿಕಾ ಮಧುಪಾನ ಮತ್ತ
ಪೀನ ಕುಂಭ ಪಯೋದವಿತ್ತ
ವಕ್ಷ ಪರಿರಂಭನ ನಿಮಿತ್ತ
ನಿರಾವಲಂಬನ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ಚರಣನೂಪುರ ಕಿಂಕಿಣೀ ಕ್ವಣ
ಮದನ ಸಿಂಜಿನೀ ಜನಿತ ನಿಕ್ವಣ:
ಚಿತ್ತ ರಂಜನಿ, ತಳುವದೀ ಕ್ಷಣ
ಚಂದ್ರಮಂಚಕೆ ಬಾ, ಚಕೋರಿ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ತೆರೆಯ ಚಿಮ್ಮಿಸಿ, ನೊರೆಯ ಹೊಮ್ಮಿಸಿ,
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ, ಚಕೋರಿ! ಬಾ, ಚಕೋರಿ!
ಎದೆ ಹಾರಿದೆ ಬಾಯಾರಿದೆ
ಚಕೋರ ಚುಂಬನ!

ನಿಕುಂಜ ರತಿವನ ಮದನಯಾಗಕೆ
ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ
ಅಂಚಂಚು ಚುಂಬನ!
ಬಾ, ಚಕೋರಿ! ಬಾ, ಚಕೋರಿ!
ಚಂದ್ರಮಂಚಕೆ ಬಾ, ಚಕೋರಿ!

ಅದ್ಭುತ ಸಾಲುಗಳಲ್ಲವೇ? ಕುವೆಂಪು ಎಂಬ ರಸಋಷಿಯ ಅಕ್ಷರ ಮಾಯಾಜಾಲಕ್ಕೆಮೋಹಗೊಳ್ಳದ ಮನಸ್ಸೇ ಇಲ್ಲವೇನೋ.. ಆದರೆ, ಕಂಗ್ಲೀಷು ಯುಗದ ಈಗಿನ ಕಾಲದಲ್ಲಿ ಹೀಗೆಲ್ಲ ಚಂದ್ರಮಂಚಕ್ಕೆ ಕರೆದರೆ ಚಕೋರಿಗೆ ಡಿಕ್ಷನರಿಯೇ ತಲೆದಿಂಬಾಗಬೇಕೇನೋ.!
ಈ ಮಧುರ ಗೀತೆಯನ್ನು ಕಳಿಸಿದ್ದು ಗೆಳೆಯ ಅರುಣ. ಥ್ಯಾಂಕ್ಸ್!

Wednesday, January 23, 2008

ಇದು ಕುವೆಂಪು ಶೈಲಿ!

ಕುವೆಂಪು 'ಅದರ' ಬಗ್ಗೆ ಬರೆದರೆ ಹೇಗಿರುತ್ತೆ? ಇಲ್ಲಿದೆ ಒಂದು ಉದಾಹರಣೆ!

ಸುಮಾರು ಎರಡು ಶತಮಾನಗಳಷ್ಟು ಹಳೆಯ ಕಾಲದ (೧೮೯೩) ಕತೆಯನ್ನೊಳಗೊಂಡಿರುವ, ಸಹ್ಯಾದ್ರಿಯ ದಟ್ಟ ಕಾನನದ ನಡುವೆ ಜರುಗುವ 'ಮಲೆಗಳಲ್ಲಿ ಮದುಮಗಳು' ಎಂಬೀ ಬೃಹತ್ ಕಾದಂಬರಿ, ಆ ಕಾಲದ ಜನರ ಮುಗ್ಧ ಜೀವನಕ್ಕೆ, ಅದರಲ್ಲಿದ್ದ ಸ್ನಿಗ್ಧ ಸೌಂದರ್ಯಕ್ಕೆ ಹಿಡಿದ ಕನ್ನಡಿ. "ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ.. ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕೂ ಕೊನೆಯಿಲ್ಲ.. ಇಲ್ಲಿ ವೇಗವೂ ಸಾವಧಾನದ ಬೆನ್ನೇರಿದೆ.." ಎಂದೆಲ್ಲ ಕುವೆಂಪು ಕಾದಂಬರಿಯ ಮೊದಲಿಗೇ ಬರೆದುಕೊಂಡಿದ್ದಾರೆ. ಕನ್ನಡದ 'ಕ್ಲಾಸಿಕ್'ಗಳಲ್ಲೇ ಕ್ಲಾಸಿಕ್ ಕಾದಂಬರಿ ಇದು.

'ಮಲೆಗಳಲ್ಲಿ..' ಕಾದಂಬರಿಯಲ್ಲಿ, ಯಾವ ರೋಮಿಯೋ-ಜ್ಯೂಲಿಯಟ್ ಜೋಡಿಗೂ ಕಮ್ಮಿಯಿಲ್ಲದಂತಹ ಜೋಡಿಯೊಂದಿದೆ. ಅದೇ ಐತ-ಪೀಂಚಲು ಜೋಡಿ! ಆಗಿನ ಕಾಲದ ಗೌಡರ ಜೀತದಾಳುಗಳಾಗಿದ್ದ, ಕಡು ಬಡತನದಲ್ಲೇ ಅತ್ಯಂತ ಸುಖ-ಸಂತಸದ ಬಾಳನ್ನು ಸಾಗಿಸುತ್ತಿದ್ದ ಈ ಆದರ್ಶ ಜೋಡಿ, ತಮ್ಮ ಬಿಡಾರದಲ್ಲಿ ಸಮಾಗಮಗೊಂಡದ್ದನ್ನು ಕುವೆಂಪು ಅದೆಷ್ಟು ಚೆನ್ನಾಗಿ ಬರೆದಿದ್ದಾರೋ ನೀವೇ ಓದಿ ನೋಡಿ:

*
ಪೀಂಚಲು ದೀಪ ಆರಿಸಿ, ಕತ್ತಲೆಯಲ್ಲಿಯೇ ತನ್ನ ಸೀರೆಯನ್ನು ಬಿಚ್ಚಿಟ್ಟು, ಐತನು ಹೊದೆದಿದ್ದ ಕಂಬಳಿಯಡಿ ನುಸುಳಿ, ತನ್ನ ಬತ್ತಲೆ ಮೈಯನ್ನು ಅವನ ಬತ್ತಲೆ ಮೈಗೆ ಒತ್ತಿ, ಚಾಪೆಯ ಮೇಲೆ ಹಾಸಿದ್ದ ಕಂಬಳಿಯ ಮೇಲೆ ಹಾಸಿದ್ದ ತನ್ನದೊಂದು ಹರಕಲು ಸೀರೆಯನ್ನೇ ಮಗ್ಗಲು ಹಾಸಿಗೆಯನ್ನಾಗಿ ಮಾಡಿದ್ದ ಶಯ್ಯೆಯಲ್ಲಿ ಪವಡಿಸಿದಾಗ ಐತನಿಗೆ ಅದು ಹಂಸತೂಲಿಕಾತಲ್ಪವಾಗಿಬಿಟ್ಟಿತ್ತು! ತನ್ನ ಸರ್ವಸ್ವದಿಂದಲೂ ಅವಳ ಸರ್ವಸ್ವವೂ ತಬ್ಬುವಂತೆ ತನ್ನೆರಡು ತೋಳುಗಳಲ್ಲಿ ಅವಳನ್ನು ಬಿಗಿದಪ್ಪಿ, ಕೆನ್ನೆಯ ಮೇಲೆ ಕೆನ್ನೆಯಿಟ್ಟು ಸಮಾಧಿಸ್ತನಾಗಿ ಕರಗಿಯೇ ಹೋದಂತೆ ಸ್ವಲ್ಪ ಹೊತ್ತು ನಿಶ್ಚಲನಾಗಿದ್ದುಬಿಟ್ಟನು. ಆದರೆ ಅವನ ಅಳ್ಳೆ ಹೊಡೆದುಕೊಳ್ಳುತ್ತಾ ಇದ್ದುದು ಅವಳ ಹೊಡೆದುಕೊಳ್ಳುತ್ತಿದ್ದ ಅಳ್ಳೆಗೆ ಆಪ್ಯಾಯಮಾನವಾಗಿ ಅರಿವಾಗುತ್ತಿತ್ತು. ನಾಲ್ಕು ತೊಡೆಗಳೂ ನಾಲ್ಕು ಕೈಗಳೂ ಒಂದನ್ನೊಂದು ಬಿಗಿಯುವುದರಲ್ಲಿ ಸೆಣಸುವಂತಿದ್ದವು. ಅವಳ ಮೆತ್ತನೆಯ ಕುಚಗಳು ತನ್ನ ವಕ್ಷಕ್ಕೆ ಒತ್ತಿದಂತೆಲ್ಲ ಐತನ ಎಡದ ಕೈ ಅವಳ ಬೆನ್ನ ಮೇಲೆ ಆಡುತ್ತಾ ಆಡುತ್ತಾ ಕೆಳಕೆಳಗಿಳಿದು ಅವಳ ಮೃದುಕಠಿಣ ನಿತಂಬಗಳನ್ನು ಸೋಂಕಿ, ಒತ್ತಿ, ಕೈಮುತ್ತನೊತ್ತಿ ಸೊಗಸಿದಾಗ ಅವನ ಪ್ರಜ್ಞೆ, ಜೇನುತುಪ್ಪದ ಕೆರೆಯಲ್ಲಿ ನಾಲಗೆಯಾಗಿ ಮುಳುಗಿ ಲಯವಾಗಿಬಿಟ್ಟಿತು. ಆ ಆನಂದಕ್ಕೆ ಆ ರೋಮಾಂಚನಕ್ಕೆ ಪೀಂಚಲು ಅವಶಳಾಗಿ, ತನ್ನ ಮಾನಸಮಸ್ತದ್ವಾರದ ರತಿಕವಾಟಗಳನ್ನು ಸಂಪೂರ್ಣವಾಗಿ ಅಗಲಿಸಿ ತೆರೆದು, ತನ್ನ ಇನಿಯನ ಮನ್ಮಥಾವಿಷ್ಟ ಪೌರುಷ ಪ್ರವೇಶಕ್ಕೆ ಸುಗಮ ಮಾರ್ಗ ಮಾಡಿಕೊಟ್ಟು, ಆತನ ಸಮಸ್ತ ಪುರುಷಾಕಾರವೂ ತನ್ನೊಳಗೆ ಸಂಮಗ್ನಲಗ್ನವಾಗುವಂತೆ ಸ್ವೀಕರಿಸಿದಳು.

*
ಇನ್ನೇನು ಹೇಳಲಿದೆ? 'ಮಲೆಗಳಲ್ಲಿ..' ಕಾದಂಬರಿಯನ್ನು ಇನ್ನೂ ಓದದವರು ದಯವಿಟ್ಟು ಓದಿ. ಓದಿದವರು ಮತ್ತೊಮ್ಮೆ ಓದಿ!

[ಕುವೆಂಪುರವರ 'ಚಂದ್ರಮಂಚಕೆ ಬಾ ಚಕೋರಿ..' ಹಾಡನ್ನು ಸಧ್ಯದಲ್ಲೇ ನಿರೀಕ್ಷಿಸಿ!]

Friday, January 4, 2008

ಮೊಳೆ


ಬಸ್ಯಾನ್ ದನ, ಹೀಟಿಗ್ ಬಂದಿತ್ತು. ಹಿ೦ದೆ ಕಲ್ಲೇಶಿ ಮನಿ ಹೋರಿ ತಾವ ಮೂರ್ ಬಾರಿ ದನ ಹೊಡ್ಕಂಡ್ ಹೋಗ್ ಬಂದಿದ್ರೂ ಕಟ್ಟಿರಲಿಲ್ಲ. ಈ ಸತಿ೯ ಪಶುವೈದ್ಯ ಶಾಲಿಗೆ ಹೊಸಾ ಡಾಕ್ಟ್ರು ಬ೦ದಾರೆ, ಅವರ ಕೈ ಗುಣ ಚೊಲೋ ಐತಿ ಅ೦ತ ಊರಾಗೆ ಮಾತಿತ್ತು. ಹಾ೦ಗ೦ತ ಬೇರೆಯುವ್ರು ಮಾತಾಡತಿದ್ರೇ ಶಿವಾಯ್ ಬಸ್ಯ೦ಗೆ ಅವರ ಬಗ್ಗೆ ಏನ್ ಏನೂ ತಿಳಿವಲ್ದು. ತ೦ಗೇ ಹುಶಾರಿಲ್ದೇ ಹೋದ್ರೆ ನಾಟೀ ವೈದ್ಯನ ತಾವಾ ಹೋಗ್ತಿದ್ನೇ ಶಿವಾಯ್ ಇ೦ಗ್ಲೀಸ್ ಮದ್ದು ತಕ೦ಡವ ಅಲ್ಲ. ಇನ್ನು ದನಕ್ಕೆ ಇ೦ಗ್ಲೀಸ್ ಮದ್ದು ಮಾಡ್ಯಾನೇ? ಆದ್ರೂ ಈಗ ಬೇರೆ ದಾರಿ ಇಲ್ಲದ್ರಿ೦ದ ಜೊತೀಗೆ ಮನೆಯವ್ರ ವರಾತ ಬೇರೆ ಇದ್ದಿದ್ರಿ೦ದ ದನ ಹೊಡ್ಕ೦ಡು ಹೊಸಾ ಡಾಕ್ಟರ್ ಮನಿಗೆ ಹೋಗೂ ಪ್ರಸ೦ಗ ಬ೦ತು.

ಆಸ್ಪತ್ರೆ ಬಾಗಲ ಬುಡದಾಗ ಆಕಳಾ ಕಟ್ಯಾಕಿ ಒಳಗಡೆ ಹೋದ್ರೆ ಡಾಕ್ಟ್ರಪ್ಪ ಪೇಪರಿನ್ಯಾಗ ಮಗ್ನಾಗಿದ್ರು.

"ನಮಸ್ಕಾರ್ರೀ ಡಾಕ್ಟ್ರ, ನನ್ನ ಹೆಸ್ರು ಬಸ್ಯಾ ಅ೦ತ್ರಿ, ನಮ್ಮನಿ ಆಕ್ಳಾ ಹೀಟಿಗೆ ಬ೦ದೈತ್ರಿ. ಹಾ೦ಗಾಗ್ ನಿಮ್ಮ ಕೂಡೆ ಹೊಡ್ಕೊ೦ಡು ತ೦ದೇನಿ. ಹೊರಗೇ ಐತಿ..."

ಪೇಪರಿನಿ೦ದ ಮುಖ ಹಗೂರ ಎತ್ತಿದ ಡಾಕ್ಟ್ರಪ್ಪ, ಬಸ್ಯಾನಕಡಿ ನೋಡಿ ತೆಳ್ಳಗೊಮ್ಮೆ ನೆಗ್ಯಾಡಿದ್ರು.
ನೋಡಿ ಬಸ್ಯಾ ಅವರೆ, ನೀವು ದನವನ್ನು ಪಶು ಚಿಕಿತ್ಸಾ ಕೇ೦ದ್ರಕ್ಕೆ ಕರೆದು ತರುವದೆಲ್ಲ ಬೇಡವಾಗಿತ್ತು. ಹೋರಿ ಹಾರಿಸುವದೆಲ್ಲ ಹಳೆಯದಾಯ್ತು ಇವರೆ. ಈಗೆಲ್ಲ ಇನ್ಸಮೇಶನ್ ಅ೦ತ ಹೊಸವಿಧಾನ ಬ೦ದಿದೆ. ನಾವು ಮನೆಗೇ ಬ೦ದು ಮಾಡಿ ಹೋಗುತ್ತೇವೆ. ಅಂದರು.

ಬಸ್ಯ ಸ್ವಲ್ಪ ದ೦ಗಾದ. ಒಂದೂ ಬಸ್ಯಾನ್ನ ಬಹುವಚನದಾಗೆ ಯಾರಾದ್ರೂ ಕರ್ದಿದ್ದಿದ್ರೆ ಇದೇ ಮೊದಲು. ಅಲ್ಲದೇ ಡಾಕ್ಟ್ರೇ ಮನೀಕಡಿ ಬರೂದು ಇನ್ನೂ ಹೊಸಾತ್ನಾಗಿ ಅನ್ನಸ್ತು. ಹಾ೦ಗೇ ನಿ೦ತಲ್ಲೇ ಗೋಣು ಆಡ್ಸದಾ. ಡಾಕ್ಟು ಮಾತು ಮು೦ದುವರ್ಸಿದ್ರು.

ಇನ್ನೊ೦ದು ಅಧ೯ಗ೦ಟೆಯಲ್ಲಿ ನಿಮ್ಮ ಮನೆಯಲ್ಲಿ ಇರುತ್ತೇನೆ. ಸ್ವಲ್ಪ ಬಿಸಿನೀರು ಸೋಪು ಒ೦ದು ಟವೆಲ್ ರೆಡಿ ಮಾಡಿ ಇಟ್ಟರೆ ಸಾಕು ಅ೦ದರು. ಬಸ್ಯ ವಾದ್ಯದೋನ ಎತ್ನಾ೦ಗೆ ತಲಿ ಅಳ್ಳಾಡ್ಶಿ ಹೊರಕ್ಕ ಹೊ೦ಟ.
ಹೊ೦ಡೂಮು೦ದ ಡಾಕ್ಟ್ರು ನಿಮ್ಮ ಮನೆ ದಾರಿಯನ್ನು ಕ೦ಪೌ೦ಡರನಿಗೆ ಹೇಳಿಹೋಗಿ ಮಾರಾಯ್ರೇ ಅ೦ದ್ರು.
ಕ೦ಪೌ೦ಡರ್ ನಾಗ್ಯಾ ದೇಶಾವರಿ ನಗಿ ನಕ್ಕು, "ಇದೇನೋ ಬಸ್ಯಾ ಇತ್ ಕಡಿ ಮುಖಾ ಹಾಕೀದಿ.. ಏನು ಕತೀ ನಿ೦ದು? ಬಾಗ್ಲಾಗ್ ಬೇರೆ ನಿನ್ನ ದನಾನೂ ಐತಿ? ಈ ದನ ಇಲ್ಲಿಗೆ ಹೊಡ್ಕ೦ಡುಬರೂ ಅವಶ್ಯಕತೀನೆ ಇಲ್ಲಾ ಅನ್ನೂದು ಇನ್ನೂ ಗೊತ್ತಿಲ್ಲೆನು ನಿ೦ಗೆ? ಇಲಿ೯, ಆಗಿದ್ದು ಆಗ್ಯೋತು, ನಾನಾ ಡಾಕ್ಟ್ರಸಾಹೇಬ್ರನ್ನ ನಿಮ್ಮನಿತಾವಾ ಕರ್ಕೋ೦ಡ್ ಬತೀನಿ, ನೀ ಬಿರ್ನಹೋಗಿ ಎಲ್ಲ ತಯಾರಿಟ್ಕ" ಅ೦ದ.

ಬಸ್ಯಾ ದನಾ ಹೊಡ್ಕ೦ಡು ದಾಡ್ ಬೀಡ್ನೆ ಮನಿಕಡಿ ಹೊ೦ಟ್ರ ಅವನ ತಲೀಲಿ ಏನೇನೋ ವಿಚಾರ, ಒಬ್ನೇ ನಗ್ತಾ ನಗ್ತಾ ಮನೀಗೆ ಬ೦ದವನೇ "ಡಾಕಟ್ರು ಬತಾ ಅದಾರು, ನೀರು ಕಾಯಾಕ್ ಇಡು, ಮಡಕಿಮಾಡಿಟ್ಟ ಹೊಸಾ ಟವೆಲ್ ತಗಿ, ಮೈಗ್ ಹಚ್ಚು ಹೊಸಾ ಶಾಬೂ ಎಲ್ಲೈತಿ ನೋಡು " ಅ೦ತೆಲ್ಲ ಹೆ೦ಡತೀಗೆ ಕೆಲ್ಸಾ ಹಚ್ಚದಾ. ಆಕಿಗೆ ಬಸ್ಯಾನ ಗಡಬಡೀ ನೋಡಿ ಡಾಕ್ಟ್ರು ಆಕಳಾ ನೋಡಾಕ್ ಬರ್ತಿದಾರೋ ಅಥ್ವಾ ಮಗಳ್ನೇ ನೋಡಾಕೆ ಬರ್ತಿದಾರೋ ತಿಳೀದಾತು. ಕೇಳಾಕೆ ಹೋದ್ರೆ ಅಶ್ಟೊತ್ಗೆ ಅವ ಕೊಟ್ಗ್ಯಾಗಿದ್ದ.
*******************
ವ೦ದೇಸಮ ವದ್ರತಿದ್ದ ದನೀನ ಕುಳ್ಳು ಬಾಚಿಹಾಕೂವಷ್ಟರಾಗೆ ಡಾಕ್ಟ್ರ ಕ೦ಪೌ೦ಡರನ ಹೊತ್ತ ಚೇತಕ್ ಸ್ಕೂಟ್ರ ಸವಾರಿ ಮನೀಮು೦ದೆ ಬ೦ದಿತ್ತು. ಸ್ಕೂಟ್ರ ಇಳಿದ ಮ೦ಗ್ಳೂರ ಡಾಕ್ಟ್ರು ಎಲ್ಲಾ ತಯಾರಾಗಿದೆಯಾ ಬಸ್ಯಾಅವರೇ ಅನ್ತಾನೇ ಸೀದಾ ಬಸ್ಯಾನ ಮನಿ ಬೇಲಿ ದಾಟುದ್ರು. ಬಸ್ಯಾ ಸಣ್ಣಗೆ ಹಲ್ಕಿರಿತಾ, ಕೊಟ್ಗೀ ಮೂಲ್ಯಾಗಿಟ್ಟ ಶಾಬೂ ಕರಡಗಿ, ಬಿಶ್ನೀರ್ ಬಕೀಟು ತೋರ್ಸದ. ಆಗತಾನೇ ಗಳಗಿ ಮುರ್ದ ಹೊಸಾ ಟವಲ್ಲು ಕೈನಾಗೇ ಇತ್ತು.
"ಇಷ್ಟೆಲ್ಲ ಬಿಸಿನೀರು ಬೇಡವಾಗಿತ್ತು ಮಾರಾಯ್ರೆ, ಒ೦ದು ಸ್ವಲ್ಪ ಸಾಕಿತ್ತು ಅ೦ದ್ಕೋ೦ತ ತಮ್ಮ ಪುಲ್ ತೋಳಿನ ಬಟನ್ ಬಿಚ್ಚುತ್ತಾ ಕೊಟ್ಗೀಕಡೆ ಹೊ೦ಟ್ರು ಡಾಕ್ಟ್ರು.

"ಇದ್ರೆ ಇರ್ತೈತ್ರಿ ಸರ, ಹೋಗ್ಲಿ ಬಿಡ್ರಿ... ..... ಅ೦ದಾ೦ಗ ನೀವು ಹೇಳಾಕ್ ಮರ್ತಿದ್ರಿ ಅನಸ್ತದ, ಆದ್ರೂ ನಾನು ಮಾಡಿ ಇಟ್ಟೇನ್ ತಗೋರಿ" ಅ೦ದ.

ತ೦ಗೇನ್ ಮರ್ತೈತಿ ಅನ್ನೂದು ನೆನಪಾಗ್ದೇ ಡಾಕ್ಟ್ರು ಬಸ್ಯಾನೊಮ್ಮೆ ಕ೦ಪೊ೦ಡರನ್ನೊಮ್ಮೆ ನೋಡುದ್ರು.

ಬಸ್ಯಾನೇ ಮು೦ದ್ವರ್ಸದ.

"ನಿಮ್ಗ ನಾಚಿಕೀ ಮಾಡುದಿಲ್ಲ. ನಿಮ್ಮ ಕೆಲಸ ಆಗೂತ೦ಕ ನಾವು ಇಲ್ಲೇ ಹೊರಗ ಇರ್ತೇವ್ರಿ, ಕೊಟ್ಗೀ ಬಾಗಿಲ ಚೌಕಟ್ಟಿಗ ಒ೦ದು ಮೊಳೀ ಹೊಡದಿಟ್ಟೇನಿ, ನಿಮ್ಮ ಕೆಲಸಾ ಮುಗ್ಯೂಗ೦ಟ ನಿಮ್ಮ ಪ್ಯಾ೦ಟು, ಇತರಿ ವಸ್ತ್ರ ಅಲ್ಲೇ ನೇತಾಕಿ ಇಟ್ಕೋಬೌದು ನೋಡ್ರಿ"ಅ೦ದ.

ಡಾಕ್ಟರ ಕೈನಾಗೆ ಇದ್ದ ಇನ್ಸಾಮೇಶನ್ ಹತಾರು ಡಣಾರ್ ಅ೦ತ ನೆಲಕ್ಕ ಬಿತ್ತು.

ಕಥೆ ಕೃಪೆ : ರಾಘು.


Wednesday, December 19, 2007

ಬ್ಯಾಳೆ

ಏಳೆಂಟು ವರ್ಷಗಳ ಹಿಂದಿನ ಕತೆ. ಬ್ಯಾಳೆ ಹುಳಿ ಉಣ್ಣುವಾಗ ಇದರ ನೆನಪಾಗದೆ ಇರುವುದಿಲ್ಲ. ಇಂದಿನಂತದೇ ಮಳೆ. ಹಿಂದಿನ ದಿನ ರಾತ್ರಿಯಿಂದಲೂ ಜಡಿಯುತ್ತಿತ್ತು. ಸಿರ್ಸಿ ಬದಿಯ ನೆಂಟರ ಮನೆಗೆ ಅಪರೂಪಕ್ಕೆ ಹೋಗಿದ್ದೆ. ನನಗಿಷ್ಟ ಎಂದು ಆ ದಿನ ಅವರ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಬ್ಯಾಳೆ ಹುಳಿ ಮಾಡಿದ್ದರು.

ಮನೆಯವರು ಮತ್ತು ನನ್ನನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ಯಜಮಾನರೂ ಪಂಕ್ತಿಯ ಬುಡದಲ್ಲಿ, ಅವರ ಪಕ್ಕ ಅತಿಥಿಯಾದ ನಾನು ನನ್ನ ಪಕ್ಕ ಅವರ ಮಗ, ಹೀಗೆ ಕುಳಿತು ಊಟ ಪ್ರಾರಂಭಿಸಿದೆವು. ಯಜಮಾನರ ಹೆಂಡತಿ ಸಾವಕಾಶವಾಗಿ ಸಮಾಧಾನದಿಂದ ಬಡಿಸುತ್ತಿದ್ದರು. ನನಗೆ ಹುಳಿ ಬಡಿಸಿದವರೇ ಏನೋ ನೆನಪಾದಂತೆ ಒಂದು ಕಡೆ ನಿಂತು ತಮ್ಮ ತವರು ಮನೆಯ ಸುದ್ದಿ ಹೇಳತೊಡಗಿದರು.

ಸಾರಂಶ ಇಷ್ಟೆ: ಅವರ ತವರು ಮನೆಯಲ್ಲಿ ಗಂಡಸರೆಲ್ಲಾ ಹುಳಿಯಲ್ಲಿನ ಬೇಳೆಯನ್ನೆಲ್ಲಾ ಆಸೆಪಟ್ಟು ಹಾಕಿಸಿಕೊಳ್ಳುತ್ತಿದ್ದರಿಂದ ಕೊನೆಯಲ್ಲಿ ಊಟಮಾಡುತ್ತಿದ್ದ ಹೆಂಗಸರಿಗೆ ಬರೀ ಸಾರು ಉಳಿದಿರುತ್ತಿತ್ತಂತೆ.

ಅವರ ಮಾತಿನ ಕೊನೆಯ ವಾಕ್ಯ ಹೀಗಿತ್ತು..
"ಎಲ್ಲಾ ಗಂಡಸ್ರೇ ಕಾಲಿ ಮಾಡ್ಬುಡ್ತಿದ್ವಲೀ.. ಹಂಗಾಗಿ ಹೆಂಗಸ್ರಿಗೆ ಬ್ಯಾಳ್ಯೇ ಇರ್ತಿತ್ತಿಲ್ಲೆ.."

ಅಲ್ಲಿಯವರೆಗೂ ಸಹನೆಯಿಂದ ಮೌನವನ್ನು ಉಳಿಸಿಕೊಂಡಿದ್ದ ಮನೆಯ ಯಜಮಾನರು ಈಗ ಗಂಭೀರ ಸ್ವರದಲ್ಲಿ ಹಳಿದರು:
"ನಿನ್ ಅಪ್ಪನ್ ಮನೆಲ್ಲಿ ಹೇಳಲ್ಲ, ತ್ಯಳತ್ತನೇ ಯಶೋದ.. ಪ್ರಪಂಚದಲ್ಲಿ ಎಲ್ಲೇ ಹೋದ್ರು, ಹೆಂಗಸ್ರಿಗೆ ಬ್ಯಾಳಿರ್ತಿಲ್ಲೆ.. "